Advertisement

Category: ಸರಣಿ

ಅಜ್ಜಿಯೀಗ ಅಗಸಿ ಬಾಗಿಲ ದಾಟಿರಬಹುದೆ?

ಮೊದಲ ಸಲ ನನ್ನ ಅಜ್ಜಿಯ ಜೊತೆ ರವಿವಾರ ಸಂತೆ ದಿನ ನಡೆಯುತ್ತ ವಿಜಾಪುರಕ್ಕೆ ಹೋಗುವಾಗ ಬಹಳ ದೂರದಿಂದಲೆ ಬೃಹತ್ತಾದ ಗೋಲಗುಂಬಜವನ್ನು ನೋಡಿ ಆಶ್ಚರ್ಯಚಕಿತನಾಗಿದ್ದೆ. ಆಗೊಮ್ಮೆ ಈಗೊಮ್ಮೆ ಕಾಣಿಸುವ ಕಾರುಗಳು, ಲಾರಿಗಳು ಮುಂತಾದವುಗಳ ಜೊತೆ ನಮೂನೆ ನಮೂನೆ ವೇಷಭೂಷಣದ ಜನರು ಮಜವಾಗಿ ಕಾಣುತ್ತಿದ್ದರು. ನಮ್ಮ ಹಳ್ಳಿಯಲ್ಲಾದರೆ ಬಹುಪಾಲು ಜನರು ಧೋತರ ಮತ್ತು ಮಾಂಜರಪಾಟ್ ಬಟ್ಟೆಯಿಂದ ಹೊಲಿದ ಕುಂಬಳಛಾಟಿ…”

Read More

ಮುನವ್ವರ್ ಬರೆಯುವ ʼಡರ್ಬನ್ ಇದಿನಬ್ಬʼ ಕಾದಂಬರಿ ಇಂದಿನಿಂದ…

ನೇತ್ರಾವತಿ ದಂಡೆಯ ಅಜಿಲಮೊಗರು ಎಂಬ ಊರಿನ ಇದಿನಬ್ಬನಿಗೆ, ಆಫ್ರಿಕಾದ ಡರ್ಬನ್ ನಂಟು ಅಂಟಿದ ಕತೆಯಿದು. ನದಿಯ ಹರಿವಿನಂತೆ ಸಾಗುವ ಈ ಕಥೆಯಲ್ಲಿ ಅನಿರೀಕ್ಷಿತ ತಿರುವುಗಳು ಓದಿನ ಕುತೂಹಲವನ್ನು ಹೆಚ್ಚಿಸುತ್ತವೆ. ಕಥೆ ಹೇಳುತ್ತ ಗುಲಾಮ ಪದ್ಧತಿಯಲ್ಲಿರುವ ಕ್ರೌರ್ಯದ ಅನಾವರಣ ಮಾಡಿರುವ ಕಾದಂಬರಿಕಾರ ಮುನವ್ವರ್ ಜೋಗಿಬೆಟ್ಟು, ಬರವಣಿಗೆಯನ್ನು ಬಹಳ ಪ್ರೀತಿಸುತ್ತಾರೆ.”

Read More

ಭಕ್ತಿ-ವಿರಕ್ತಿ–ಅನುರಕ್ತಿಗಳ ಸಂಗಮ ಹರಿದಾಸ ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ

ಹರಿದಾಸರು ಹೀಗೆ ಅಲೆದದ್ದು ಸುಮಾರು ಎಂಟು ವರ್ಷಗಳ ಕಾಲ. ಆ ದುರ್ದಿನಗಳು ಕಳೆದ ಮೇಲೆ ಹರಿದಾಸರು ಸುಮಾರು 1905 ರಲ್ಲಿ ಊರಿಗೆ ಮರಳಿದರು. ಬಂದವರು ಮತ್ತೆ ಕಾರ್ಕಳ ವೆಂಕಟರಮಣನ ಸನ್ನಿಧಿಯಲ್ಲಿ ಎಂಟು ತಿಂಗಳುಗಳ ಕಾಲ ಇದ್ದರು. ಹಿಂದೆ ಅವರು ತಾನೇ ಶನಿವಾರ ಶನಿವಾರ ತಿರುಪತಿಗೆಂದು ಕಾಣಿಕೆ ಹಾಕುತ್ತ ಕಟ್ಟಿಟ್ಟ ಮುಡಿಪನ್ನೇ ಬಡತನದ ಕಾರಣ ತೆಗೆದು ಖರ್ಚು ಮಾಡುವ ಪ್ರಸಂಗವೂ…”

Read More

ಆಕೆ ಹಗಲ್ಹೊತ್ತು ಬಯಲಿಗೆ ಹೋದದ್ದೇ ತಪ್ಪಾಯ್ತು!

ಹೈನುಳ್ಳವರು ದೊಡ್ಡ ಪಾತ್ರೆಯಲ್ಲಿ ಮೊಸರು ಕಡೆಯುತ್ತ ಬೆಣ್ಣೆ ತೆಗೆಯುವುದನ್ನು ನೋಡುವುದೇ ನನಗೆ ಸೋಜಿಗವಾಗಿತ್ತು. ಮೊಸರು ಮಜ್ಜಿಗೆಯಾಗಿ ಅದರೊಳಗಿಂದ ಬೆಣ್ಣೆ ಬರುವುದನ್ನು ನೋಡಲಿಕ್ಕೆ ಮಜಾ ಅನಿಸುತ್ತಿತ್ತು. ದೊಡ್ಡ ಕಡೆಗೋಲನ್ನು ಕಂಬದ ಆಧಾರದ ಮೇಲೆ ದೊಡ್ಡ ಪಾತ್ರೆಯಲ್ಲಿ ಇಳಿಬಿಟ್ಟು ಅದಕ್ಕೆ ಸಣ್ಣ ಹಗ್ಗ ಸುತ್ತಿ ಎರಡೂ ಕೈಯಿಂದ ಮಥಿಸುತ್ತಿದ್ದರು. ಮಜ್ಜಿಗೆಯನ್ನು ಎಂದೂ ಮಾರುತ್ತಿರಲಿಲ್ಲ..”

Read More

ಅಪರಾಧ ಮತ್ತು ಶಿಕ್ಷೆ: ತಪ್ಪಿಹೋದುದನ್ನು ನೆನೆಯುತ್ತಾ…

ಮನೆಗೆ ಮರಳುವ ಹೊತ್ತಿಗೆ ಈ ತೀರ್ಮಾನ ಅವನ ಕೋಪವನ್ನೂ ಕಹಿಯನ್ನೂ ಮನೆ ಬಿಡುವಾಗ ಇದ್ದುದಕ್ಕಿಂತ ಎರಡು ಪಟ್ಟು ಹೆಚ್ಚಿಸಿತು. ಕ್ಯಾತರೀನ ಇವಾನೋವ್ನಾ ಮನೆಯಲ್ಲಿ ನಡೆಯುತ್ತಿದ್ದ ಅಂತ್ಯ ಸಂಸ್ಕಾರದ ಊಟದ ಏರ್ಪಾಟು ಅವನ ಕುತೂಹಲವನ್ನು ಕೆರಳಿಸಿತು.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ