Advertisement

Tag: ಎಸ್. ಸಿರಾಜ್ ಅಹಮದ್

“ಕಾಬೂಲಿವಾಲ” ಎಂಬ ಕಳೆದುಹೋದ ನಂದನದ ಕತೆ: ಎಸ್.‌ ಸಿರಾಜ್‌ ಅಹಮದ್‌ ಅಂಕಣ

“ಕತೆಯ ಒಳವಿವರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆರಂಭದಲ್ಲಿ ಅವನ ಆಕಾರ ಭಾಷೆ ವೇಷ ಭೂಷಣಗಳ ಕಾರಣದಿಂದ ಕೇವಲ ಕಾಬೂಲಿವಾಲನಾಗಿದ್ದ ವ್ಯಕ್ತಿ ನಿಧಾನವಾಗಿ ರಹಮತಖಾನನಾಗಿದ್ದಾನೆ. ಕಾಬೂಲಿವಾಲ ಹಾಗೂ ಮಿನಿಯ ನಡುವೆ ನಿಧಾನವಾಗಿ ಗಟ್ಟಿಗೊಳ್ಳುತ್ತಿರುವ ಸ್ನೇಹಕ್ಕೆ ಅವಳ ತಂದೆಯ ಸಮ್ಮತಿ ಇಲ್ಲದಿದ್ದರೂ ಮಿನಿಯ ತಾಯಿಯಂತೆ ಬಲವಾದ ವಿರೋಧವಿಲ್ಲ. ನಿತ್ಯವೂ ಕಾಬೂಲಿವಾಲ ಬಂದು ಮಿನಿಯ ಜೊತೆ ಆಟವಾಡುತ್ತ ಅವಳಿಗೆ..”

Read More

ವ್ಯಕ್ತಿಗಳ ತಲ್ಲಣಗಳ ಮೂಲಕ ರಾಜಕೀಯ ಸಾಮಾಜಿಕ ಪ್ರಶ್ನೆಗಳನ್ನು ಕೇಳುವ ಇಷಿಗುರೊ: ಎಸ್. ಸಿರಾಜ್ ಅಹಮದ್ ಅಂಕಣ

“ಸ್ಟೀವನ್ಸ್ ತನ್ನ ವೃತ್ತಿಯ ಹುಸಿ ಘನತೆ ಮತ್ತು ಹೊಣೆಗಾರಿಕೆಗಳಲ್ಲಿ ಅವನ ಒಳ ಬದುಕು ಎಷ್ಟು ಮುರುಟಿಹೋಗಿದೆ ಎಂದರೆ ಅವನು ಅಪರೂಪಕ್ಕೆ ಎಂಬಂತೆ ರೊಮ್ಯಾಂಟಿಕ್ ಕಾದಂಬರಿಯನ್ನು ಓದುವುದು ತನ್ನ ವೃತ್ತಿಗೆ ಅಗತ್ಯವಾಗಿ ಬೇಕಾದ ಇಂಗ್ಲೀಷನ್ನು ಸರಿಪಡಿಸಿಕೊಳ್ಳಲು ಮಾತ್ರ! ಸ್ಟೀವನ್ಸ್ ಏನು ಓದುತ್ತಾನೆ, ಅವನ ಕತ್ತಲಗೂಡಿನಂತಹ ಕೋಣೆಯಲ್ಲಿ ಯಾಕೆ ಒಂದು ಹೂಗುಚ್ಛವನ್ನೂ ಇಡಲು ಜಾಗವಿಲ್ಲ ಎಂದೆಲ್ಲ ಯೋಚಿಸುತ್ತ, ಅವನ ಅಂತರಂಗವನ್ನು ತಡವಿ, ಒಳಗನ್ನು ಅರಿತುಕೊಳ್ಳುವ ಆಸೆಯಿಂದ ಹೊರಡುವ ಮಿಸ್ ಕೆಂಟನ್‍ ಗೆ ಅಲ್ಲಿ ಕಾಣುವುದು ಇಂಥ ಒಣ ಶಿಷ್ಟಾಚಾರ, ವೃತ್ತಿಯ ಬಗೆಗಿನ ಕುರುಡು ನಿಷ್ಠೆ. ಮಾತ್ರ.”
ಎಸ್. ಸಿರಾಜ್ ಅಹಮದ್ ಬರೆಯುವ ಅಂಕಣ

Read More

ಕುಶಲದರ್ಜಿ ಗೋಪಾಲಿಯ ವ್ಯಾಕುಲಗಳು: ಎಸ್.‌ ಸಿರಾಜ್‌ ಅಹಮದ್‌ ಅಂಕಣ

“ಹೀಗಿರುವಾಗ ಎಲ್ಲೋ ಏನೋ ತಪ್ಪಿದಂತೆ ಕಾಣುತ್ತಿತ್ತು. ಅವನ ಸಣ್ಣಪ್ರಾಯದ ಎರಡನೆಯ ಹೆಂಡತಿ ಅವನಿಗಿಂತ ಹೆಚ್ಚು ಸಮಯವನ್ನು ಅವನ ಪುಟ್ಟ ಅಂಗಡಿಯಲ್ಲಿ ಕಳೆಯಲು ಶುರು ಮಾಡಿದಳು. ಅವಳು ಯಾರು ಬಂದು ಏನು ಮಾತಾಡಿದರೂ ಗಂಡನನ್ನೇ ದಿಟ್ಟಿಸಿ ನೋಡುವಾಗ ಏನೋ ಕಸಿವಿಸಿಯಾಗುತ್ತಿತ್ತು. ಊದುಗೆನ್ನೆಯ, ಉರುಬಿದ ಹೊಟ್ಟೆಯ ಈ ಆಸಾಮಿಯ ಮೇಲೆ ಅವನ ಹೆಂಡತಿ ಯಾಕಿಷ್ಟು ನಿಗಾ ಇಡುತ್ತಿದ್ದಾಳೆಂದು ನಮಗೆ ಮೋಜೆನಿಸುತ್ತಿತ್ತು.”

Read More

ನೀಲು ಸಾಲುಗಳಲ್ಲಿ ಅರಳುವ ಜೀವಜ್ಞಾನ: ಎಸ್. ಸಿರಾಜ್ ಅಹಮದ್ ಅಂಕಣ ಇಂದಿನಿಂದ ಶುರು

“ನೀಲು ಸಾಲುಗಳನ್ನು ನೋಡುತ್ತಾ ಹೋದರೆ ಅವು ಮೂಲಭೂತವಾಗಿ ಕವಿತೆ ಇರುವುದು ವಿವರಣೆ ವ್ಯಾಖ್ಯಾನಗಳಿಗೆ ಒಳಗಾಗುವುದಕ್ಕೆ ಎಂಬ ಹಳೆಯ ಶೈಕ್ಷಣಿಕ ನಂಬಿಕೆಯನ್ನು ಇಲ್ಲವಾಗಿಸುತ್ತವೆ. ಸಾಹಿತ್ಯವೆಂಬುದು ಸಾಮೂಹಿಕ ಸೃಜನಶೀಲ ಸಂತೋಷದ ಭಾಗವಾಗಿ ಉಳಿಯದೆ ಶೈಕ್ಷಣಿಕ ಶಿಸ್ತಿನ ಭಾಗವಾದ ಪರಿಣಾಮವಾಗಿ ಕಾವ್ಯಕ್ಕೆ..”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ