Advertisement

Tag: ಕಾವ್ಯಾ ಕಡಮೆ

ಯೂಲಿಸಿಸ್ ಕಾದಂಬರಿಗೆ ಶತಮಾನದ ಮೆರುಗು

ಇಂಗ್ಲೀಷ್ ಭಾಷೆಯ ಅತಿ ಕ್ಲಿಷ್ಟ ಕಾದಂಬರಿ ಎಂದೇ ಹೆಸರುವಾಸಿಯಾಗಿರುವ ಜೇಮ್ಸ್ ಜಾಯ್ಸ್‌ರ ಯೂಲಿಸಿಸ್ ಬಗ್ಗೆ ಎಷ್ಟು ಬರೆದರೂ ಸಾಕಾಗದೇನೋ. ಹದಿನೆಂಟು ಖಂಡಗಳಲ್ಲಿ ಒಂದೊಂದು ಅಧ್ಯಾಯವನ್ನೂ ಒಂದೊಂದು ಶೈಲಿಯಲ್ಲಿ ಬರೆಯಲಾಗಿದೆ. ಒಂದು ಚಾಪ್ಟರ್ ಸ್ವಗತದ ಶೈಲಿಯಲ್ಲಿದ್ದರೆ ಇನ್ನೊಂದು ಪ್ರಶ್ನೋತ್ತರದ ಮಾದರಿಯಲ್ಲಿದೆ. ಮತ್ತೊಂದು ನಾಟಕದ ಶೈಲಿಯಲ್ಲಿದೆ ಎನ್ನುವ  ಕಾವ್ಯಾ ಕಡಮೆ , ಈ ಓದು ಸುಲಭಕ್ಕೆ ದಕ್ಕುವಂತಹುದಲ್ಲ ಎನ್ನುತ್ತಾರೆ.  1922ನೇ ಇಸವಿಯಲ್ಲಿ ಪ್ಯಾರಿಸ್ಸಿನ ಶೇಕ್ಸ್‌ಪಿಯರ್…

Read More

ಚೆಕೊವ್‌ರ ಏಳು ಅಪರೂಪದ ಕತೆಗಳು

ಮಗಳೊಂದಿಗೆ ಒಂದು ದಿನ ಕಳೆಯುವ ಸುಖ ಈ ಎಲ್ಲ ವೈಭವಕ್ಕಿಂತ ಮಿಗಿಲಾದುದು ಎಂದು ಕನಸು ಕಾಣುತ್ತ ದಿನ ಮುಗಿಸುತ್ತಿರುತ್ತಾಳೆ ನತಾಲ್ಯಾ. ಅಷ್ಟರಲ್ಲಿ ಅವಳ ಮರಿ ದೆಲ್, ಅಂದರೆ ಪತಿ ದೇವರ ಆಗಮನವಾಗುತ್ತದೆ. ಸಣ್ಣದೊಂದು ಕೆಲಸದಲ್ಲಿದ್ದ ಆಕೆಯ ಗಂಡ ನಿಕಿಟಿನ್ ಹೆಂಡತಿ ಪ್ರಸಿದ್ಧಳಾಗುತ್ತಲೇ ಕೆಲಸ ಬಿಟ್ಟು ಅವಳ ಹಣದಲ್ಲೇ ಐಶಾರಾಮಿ ಜೀವನ ನಡೆಸುತ್ತಿದ್ದಾನೆ. ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದಾನೆ. ನತಾಲ್ಯಾ ಎಷ್ಟು ಬಿಡಿಸಿಕೊಳ್ಳಲು ಯತ್ನಿಸಿದರೂ…

Read More

ವಚನ ನೀಡಿ ಮರೆತವರ ಕತೆ

ಎರಡನೆಯ ಅಧ್ಯಾಯ ಶುರುವಾಗುವುದು ರೇಚಲ್ ತೀರಿಕೊಂಡ ಹತ್ತು ವರ್ಷಗಳ ನಂತರ. ಮಣಿ ಹಾವು ಕಚ್ಚಿ ಮೃತನಾದಾಗ ಅವನ ಮಕ್ಕಳೆಲ್ಲ ಅಂತ್ಯಕ್ರಿಯೆಗಾಗಿ ಸೇರಿದಾಗ ಮತ್ತೆ ಸಲೋಮಿಯ ಹೆಸರಿಗೆ ಮನೆ ವರ್ಗಾಯಿಸುವ ಮಾತು ಬರುತ್ತದೆ. ಆಂಟನ್ ಆಮೋರಳ ಸಾಥ್ ನೀಡಿದರೂ ಹಿರಿಯಕ್ಕ ಆಸ್ಟ್ರಿಡ್ ಅಸಮ್ಮತಿ ಸೂಚಿಸುತ್ತಾಳೆ. ಅಷ್ಟಕ್ಕೂ ಸಲೋಮಿಯ ಹೆಸರಿನಲ್ಲಿಯೇ ಇರಬೇಕು ಎಂಬ ಹಠ ಏಕೆ?
‘ಕಾವ್ಯಾ ಓದಿದ ಹೊತ್ತಿಗೆ’ ಅಂಕಣದಲ್ಲಿ ‘ದ ಪ್ರಾಮಿಸ್’ ಕಾದಂಬರಿಯ ಬಗ್ಗೆ ಬರೆದಿದ್ದಾರೆ ಕಾವ್ಯಾ ಕಡಮೆ

Read More

ಇದೆಲ್ಲದಕ್ಕೂ ಒಂದು ಅರ್ಥ ಬೇಕಲ್ಲ!

ಮನುಕುಲ ಕಂಡ ಘೋರ ದುರಂತಗಳ ಹಸಿ ಹಸಿ ವಿವರಗಳು ಓದುಗರ ಗಂಟಲು ಕಟ್ಟಿಸುತ್ತವೆ. ಅಧಿಕಾರ ಮಾತ್ರದಿಂದ ಒಂದು ಜನಾಂಗಕ್ಕೆ ಸೇರಿದ ಜನರೆಲ್ಲರ ಹೆಸರು, ವಿದ್ಯೆ, ಊರುಗಳನ್ನೆಲ್ಲ ತೊಡೆದು ಹಾಕಿ ಸಂಖ್ಯೆಯೊಂದರಿಂದ ಮಾತ್ರ ಅವರನ್ನೆಲ್ಲ ಸಾಮೂಹಿಕವಾಗಿ ಗುರುತಿಸುವ ಈ ಜಾಗದಲ್ಲಿ ಇರಬೇಕಾಗಿ ಬಂದವರು ಬದುಕನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದರು ಎಂಬ ಬಗ್ಗೆ ಜ್ವಲಂತ ವಿವರಣೆಗಳಿವೆ. ಈ ಪುಸ್ತಕದ ಮೊದಲ ಭಾಗದಲ್ಲಿ ಆಸ್ವಿಚ್ ಎಂಬ ಕುಖ್ಯಾತ ನಾಜಿ ಕ್ಯಾಂಪಿನಲ್ಲಿ ಲೇಖಕರನ್ನು ಬಂಧಿಸಿಟ್ಟಾಗ ಅವರು ಅವರ ಸಹಚರರೊಂದಿಗೆ…

Read More

ಸೂರ್ಯನ ಕೃಪೆ ಧರಿಸುವ ಕ್ಲಾರಾ

ಚೇತರಿಸಿಕೊಳ್ಳಲೇ ಸಾಧ್ಯವಾಗದಷ್ಟು ಬಲಹೀನಳಾಗಿದ್ದ ಜೋಸಿ ಒಮ್ಮೆ ಸೂರ್ಯನ ಕಿರಣ ತಾಕಿದ್ದೇ ಚೈತನ್ಯಶೀಲಳಾಗಿದ್ದು ಹೇಗೆ? ಅವಳು ನಿಜದ ಜೋಸಿಯೇ ಅಥವಾ ರೋಬೋ ಜೋಸಿಯೇ? ಮನುಷ್ಯ ಚೈತನ್ಯವನ್ನು ಎಷ್ಟರ ಮಟ್ಟಿಗೆ ಅನುಕರಿಸಬಹುದು? ವ್ಯಕ್ತಿಯೊಬ್ಬಳ ಇರುವು ಆಕೆಗೆ ಮಾತ್ರ ಸಂಬಂಧಿಸಿದ್ದೋ ಅಥವಾ ಅದು ಆಕೆಯ ಸುತ್ತಲಿರುವ, ಆಕೆಯನ್ನು ಬಹುವಾಗಿ ಪ್ರೀತಿಸುವ ಸಮುದಾಯಕ್ಕೆ ಸಂಬಂಧಿಸಿದ್ದೋ? ಮುಂತಾದ ಸಂಕೀರ್ಣ ಪ್ರಶ್ನೆಗಳಿಗೆ ಈ ಕಾದಂಬರಿ ಒಡ್ಡಿಕೊಳ್ಳುತ್ತದೆ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ