Advertisement

Tag: ಗಿರಿಧರ್ ಗುಂಜಗೋಡು

ಡಾರ್ಕ್ ಹ್ಯೂಮರ್ ಮತ್ತು ನಮ್ಮ ಗ್ರಹಿಕೆಗಳು

ನಾವು ಎಷ್ಟೋ ಬಾರಿ ಸೆಕ್ಸಿಸ್ಟ್, ಕ್ಯಾಸ್ಟಿಸ್ಟ್ ಜೋಕುಗಳನ್ನು ಮಾಡುತ್ತೇವೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿದ್ದರೆ ಇನ್ನೂ‌ ಕೆಲವೊಮ್ಮೆ ಅಪ್ರಯತ್ನಪೂರ್ವಕಾಗಿ ಬರುತ್ತದೆ. ಈಗಲೂ ಬರವಣಿಗೆಯಲ್ಲಿ ನಾನು ಇಂತಹ ಪದಗಳ ಬಳಸುವುದು ಕಮ್ಮಿಯಾದರೂ ಆತ್ಮೀಯ ಗೆಳೆಯರೊಟ್ಟಿಗೆ ಮಾತಾಡುವಾಗ ಕ್ಯಾಸ್ಟಿಸ್ಟ್ ಅಲ್ಲದಿದ್ದರೂ ಸೆಕ್ಸಿಸ್ಟ್ ಬೈಗಳುಗಳು ಅಪ್ರಯತ್ನಪೂರ್ವಕವಾಗಿ ಬರುತ್ತವೆ. ಮುಂದಾದರೂ ಅದನ್ನು ಕಮ್ಮಿ ಮಾಡಬೇಕು ಎಂದು ಇವರ ಬರಹಗಳ ಓದಿದಾಗ ಅನ್ನಿಸಿದೆ.
ಗಿರಿಧರ್‌ ಗುಂಜಗೋಡು ಅಂಕಣ

Read More

ಹಾಯ್‌ ಅಂಗೋಲಾ!

ಅಂಗೋಲಾದ ಜನರ ಬಗ್ಗೆ ಹೇಳುವುದು, ಅಲ್ಲಿನ ವ್ಯವಸ್ಥೆ ಬಗ್ಗೆ ಹೇಳುವುದು, ಅಲ್ಲಿನ ಊಟ ತಿಂಡಿ ಬಗ್ಗೆ ಹೇಳುವುದು ಇದೆಲ್ಲಾ ಸಹಜ. ನಿರೂಪಣೆ ಅದ್ಭುತವಾಗಿದೆ, ಹೊಸ ವಿಷಯ ತಿಳಿಯುತ್ತದೆ ಎಲ್ಲಾ ನಿಜವೇ. ಆದರೆ ಅತ್ಯಂತ ವಿಶಿಷ್ಟವಾದ ಅಧ್ಯಾಯವಿದೆ. ಮೊದಲ ಬಾರಿ ಓದಿದಾಗ ಬಹಳ ವಿಚಿತ್ರ ಅನ್ನಿಸಿತ್ತು‌. ಒಂದು ಕ್ಷೌರ ಮಾಡಿಸಿಕೊಳ್ಳಲು ಮುನ್ನೂರು ಕಿಲೋಮೀಟರ್ ಪ್ರಯಾಣಿಸಬೇಕಾಗಿದ್ದ ಪ್ರಸಾದರ ಅವಸ್ಥೆ ಬಗ್ಗೆ ಕೇಳಿದಾಗ ನಗುವುದೋ ಅಳುವುದೋ ಗೊತ್ತಾಗುವುದಿಲ್ಲ. ಆಫ್ರಿಕನ್ನರ ಕೂದಲ ರೀತಿಗೂ ಭಾರತೀಯರ ಕೂದಲ‌ ರೀತಿಗೂ ಅಜಗಜಾಂತರ ವ್ಯತ್ಯಾಸವಿರುವುದು ಗೊತ್ತಿರುವ ಸಂಗತಿ.
ಗಿರಿಧರ್‌ ಗುಂಜಗೋಡು ಬರೆಯುವ ಓದುವ ಸುಖ ಅಂಕಣ

Read More

ಜಿ.ಟಿ. ನಾರಾಯಣರಾವ್ ಹೇಳುವ ಎನ್‌ಸಿಸಿ ದಿನಗಳ ಕಥೆಗಳು

ಇಲ್ಲಿ ಬರುವ ವೈಜ್ಞಾನಿಕ ವಿವರಣೆಗಳು ಮಾತ್ರ ಎಲ್ಲರಿಗಲ್ಲ. ಅದು ವಿಜ್ಞಾನದಲ್ಲಿ ಆಸಕ್ತಿಯಿದ್ದು ಅರ್ಥಮಾಡಿಕೊಳ್ಳಲು ಶ್ರಮ ಹಾಕಲು ಸಿದ್ಧರಿರುವವರಿಗೆ ಮಾತ್ರ. ಕನ್ನಡದಲ್ಲಿ ಇರುವ ಕಾರಣ ಕೆಲ ಶಬ್ದಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಅದು ಈ‌ ಪುಸ್ತಕ ಅಂತಲ್ಲ. ಎಲ್ಲಾ ವೈಜ್ಞಾನಿಕ ಗ್ರಂಥಗಳನ್ನು ಕನ್ನಡೀಕರಿಸಬೇಕಾದರೆ ಆಗುವ ಸಾಮಾನ್ಯ ಸಮಸ್ಯೆ. ಪದಗಳನ್ನು ಕನ್ನಡದಕ್ಕೆ ತರುವುದು ಬಹಳ ಕಷ್ಟ. ನನ್ನ ಪ್ರಕಾರ ಅವುಗಳನ್ನು ಆಂಗ್ಲದಿಂದ ನೇರವಾಗಿ ಬಳಕೆ ಮಾಡುವುದೇ ಉತ್ತಮ‌. ಕನ್ನಡ ಸಂಸ್ಕೃತ, ಪರ್ಶಿಯನ್ ಮೊದಲಾದ ನುಡಿಗಳಿಂದ ಪದಗಳನ್ನು ಸ್ವೀಕರಿಸಿರುವ ಹಾಗೇ ಆಂಗ್ಲದಿಂದಲೂ ಸ್ವೀಕರಿಸುತ್ತದೆ.
ಗಿರಿಧರ್‌ ಗುಂಜಗೋಡು ಬರೆಯುವ ಓದುವ ಸುಖ ಅಂಕಣ

Read More

ಕಾಡುವ ಕತೆಗಳ ರೂವಾರಿ….

ಆ ಕಾಲಘಟ್ಟ ಬಂಗಾಳದ ಮಟ್ಟಿಗೆ ಅದೊಂಥರಾ ವಿಚಿತ್ರ ಪರಿಸ್ಥಿತಿ. ಅತ್ಯಂತ ವಿದ್ಯಾವಂತ, ಬುದ್ಧಿವಂತರಾದ ಜನಸಮುದಾಯ. ಆದರೆ ಅಷ್ಟೇ ಕರ್ಮಠ ಆಚರಣೆಗಳಿಂದ ಜರ್ಜರಿತವಾಗುತ್ತಾ ಇದ್ದ ಸಮುದಾಯ. ಅತ್ತ ಶ್ರೀಮಂತ ಜಮೀನುದಾರರು ಮತ್ತು ಬಡ ಕೂಲಿ ಕಾರ್ಮಿಕರು ಹಾಗೂ ಗೇಣಿದಾರರು. ಧನಾತ್ಮಕ ಮತ್ತು ಋಣಾತ್ಮಕ ಎರಡೂ ಅಂಶಗಳಲ್ಲಿ ಅತಿರೇಕದ ತುದಿಗಳಲ್ಲಿದ್ದ ಸಮಾಜ. ಇದನ್ನು ಸುಧಾರಿಸಲು ದೊಡ್ಡ ಸಂಖ್ಯೆಯಲ್ಲೇ ಹುಟ್ಟಿಬಂದ ಸುಧಾರಣಾವಾದಿಗಳು. ಆಂಗ್ಲ ಶಿಕ್ಷಣದಿಂದ ಬಹಳ ಕ್ಷಿಪ್ರವಾಗಿ ಪ್ರಸರಣಗೊಂಡ ಪಾಶ್ಚಾತ್ಯ ಜ್ಞಾನ. ಆಂಗ್ಲರು ಕೂಡಾ ಪ್ರಭಾವಿತಗೊಳ್ಳುವಷ್ಟರ ಮಟ್ಟಿಗಿನ ಬುದ್ಧಿಮತ್ತೆ.

Read More

ನವಿರು ಹಾಸ್ಯದ ನುಡಿತೋರಣ

ಈ ಪುಸ್ತಕದ ನಿಜವಾದ ಸತ್ವ ಇರುವುದು ಅಮೆರಿಕಾದ ಜಾಗಗಳ ವರ್ಣನೆಯಲ್ಲಲ್ಲ. ಅವರು ಅಮೆರಿಕಾ ಮತ್ತು ಕೆನಡಾ ಪ್ರವಾಸವನ್ನು ಹೇಗೆ ಅರ್ಥಪೂರ್ಣವಾಗಿ ಬಳಸಿಕೊಂಡರು ಅನ್ನುವುದರಲ್ಲಿ. ಅವರ ಪ್ರತಿ ನಡೆ ನುಡಿಯಲ್ಲೂ ಅವರ ವ್ಯಕ್ತಿತ್ವದ ದರ್ಶನವಾಗುತ್ತದೆ. ಹಾಗಂತ ಎಲ್ಲವೂ ಗಂಭೀರವಾಗಿಯೇ ಸಾಗುತ್ತದೆ ಅಂತ ಅಲ್ಲ, ತಪ್ಪಿ ಅವರು ಕೆಎಫ್‌ಸಿ ಚಿಕನ್ ತಿನ್ನಲು ಹೋದ ಪ್ರಸಂಗ, ಆಮೇಲೆ ಡೋನಟ್ ಪರಿಚಯವಿಲ್ಲದ ಅವರು ಅನುಮಾನವೇ ಬೇಡವೆಂದು ತಿನ್ನದಿರುವುದು .. ಹೀಗೆ ಅಲ್ಲಿನ ಅನೇಕ ಘಟನೆಗಳನ್ನು ನವಿರು ಹಾಸ್ಯದಿಂದ ವರ್ಣಿಸುತ್ತಾರೆ.

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಸಂರಚನೆಯಲ್ಲಿ ಹೊಸತನ ಹುಡುಕುವ ಕಥೆಗಳು: ಎನ್.ಎಸ್.ಶ್ರೀಧರ ಮೂರ್ತಿ ಬರಹ

‘ಅಂತರ್ಗತ’ ದಲ್ಲಿ ಕಥೆಯಲ್ಲಿದ್ದಾತ ಎದುರಿಗೂ ಬರುತ್ತಾನೆ, ಚಿತ್ತಾಲರ ಕಥೆಯಂತೆ ಸೃಜನಶೀಲತೆಯ ನೆಲೆಗಳನ್ನು ಪರಿವೀಕ್ಷಿಸುವ ಇದು ಆ ಮೂಲಕ ಬದುಕಿನ ಮೂಲ ಆತಂಕಗಳನ್ನೂ ಗುರುತಿಸುತ್ತದೆ. ‘ತಾರೆ’ಕತೆಯಲ್ಲಿ ಕೂಡ ಇಂತಹ…

Read More

ಬರಹ ಭಂಡಾರ