Advertisement

Tag: ಡಾ.ವಿನತೆ ಶರ್ಮ

ಶ್ರೀಸಾಮಾನ್ಯರ ಹಸಿರು ಕ್ರಾಂತಿ ಕಥೆಗಳು: ವಿನತೆ ಶರ್ಮಾ ಅಂಕಣ

“ಆಕೆಯ ಮನೆಯಂಗಳದ ಕೈತೋಟದಲ್ಲಿದ್ದ ಗಿಡಮರಗಳು, ಸುಮಾರು ಹದಿನೈದು ಗೊಬ್ಬರ ಡಬ್ಬಗಳು, ಬಕೆಟ್ಟುಗಳು, ಮೂರು ಗೊಬ್ಬರ ಹುಳುಗಳ ಕೇಂದ್ರಗಳು, ಒಂದು ದೊಡ್ಡ ಇಡೀ ಬಾತ್ ಟಬ್ಬನ್ನು ಗೊಬ್ಬರ ಹುಳು ಸಾಕಾಣಿಕೆ ಕೇಂದ್ರವನ್ನಾಗಿರಿಸಿದ ಪ್ರಯತ್ನ, ಮೂಲೆಯಲ್ಲಿದ್ದ ಕೋಳಿಸಾಕಾಣಿಕೆ ಕೇಂದ್ರ ಎಲ್ಲವನ್ನೂ ನೋಡಿ ಅಬ್ಬಾಬ್ಬಾ ಎಂದೆ. ನನ್ನನ್ನು ಬೆರಗಾಗಿಸಿದ ವಿಷಯವೆಂದರೆ ಆಕೆಯ ಈ ಎಲ್ಲಾ ಪ್ರಯತ್ನಗಳಲ್ಲಿ ತೊಂಭತ್ತು ಭಾಗಕ್ಕೆ ಯಾವುದೇ ಹಣ ಹೂಡಿಕೆಯಿಲ್ಲದಿದ್ದದ್ದು….”

Read More

ದೇಸಿ ವಿದ್ಯಾರ್ಥಿಗಳ ಇನ್ನಷ್ಟು ಕಥೆಗಳು: ಡಾ. ವಿನತೆ ಶರ್ಮ ಅಂಕಣ

“ಭಾರತದಲ್ಲಿ ಸರ್ಜನ್ ಆಗಿದ್ದ ಗಂಡನಿಗೆ ಕೆಲಸವಿಲ್ಲದೇ ನಿರುದ್ಯೋಗಿ ಪಟ್ಟ ಸಿಕ್ಕು ತಲೆಕೆಟ್ಟಂತಾಗಿತ್ತು. ಇಲ್ಲಿನ ಕ್ರಮ, ಪದ್ಧತಿಯಂತೆ ದಂತವೈದ್ಯನಾಗಿ ನೋಂದಣಿ ಮಾಡಿಸಲು, ತನ್ನ ವೃತ್ತಿಯನ್ನು ಪ್ರಾಕ್ಟಿಸ್ ಮಾಡಲು ಪರವಾನಗಿ ಪಡೆಯಬೇಕಿತ್ತು. ಅದಕ್ಕಾಗಿ ಬಹುಕಷ್ಟದ ಪರೀಕ್ಷೆಗಳನ್ನು ಬರೆದು ಉತ್ತಮ ಅಂಕಗಳನ್ನು ಪಡೆಯಬೇಕಿತ್ತಂತೆ. ಅದಕ್ಕಾಗಿ ಆತ ಹೆಣಗಾಡುತ್ತಿದ್ದ. ಅವರಿಬ್ಬರ ಮಧ್ಯೆ ಆ ಐದು ವರ್ಷದ ಬಾಲಕ ಕಂಗೆಟ್ಟುಹೋಗಿದ್ದ.”

Read More

ಕತ್ತಲು ಮತ್ತು ಬೆಳಕಿನ ಹಬ್ಬಗಳ ಸಂಭ್ರಮದಲ್ಲಿ…: ವಿನತೆ ಶರ್ಮ ಅಂಕಣ

“ನಮ್ಮ ಆಸ್ಟ್ರೇಲಿಯಾದಲ್ಲಿ ದೀಪಾವಳಿ ಸಮಯವೆಂದರೆ ಕತ್ತಲು ಕಡಿಮೆಯಾಗುತ್ತಾ ಹೋಗುವ ತದ್ವಿರುದ್ಧ ಕಾಲ. ಎಷ್ಟಾದರೂ ನಾವಿರುವುದು ದಕ್ಷಿಣ ಭೂಗೋಳದಲ್ಲಿ. ತಲೆಮೇಲಿನ ಉತ್ತರ ಗೋಳದಲ್ಲಿ ನಡೆಯುವ ಪ್ರಾಪಂಚಿಕ ವಹಿವಾಟುಗಳ ವಿರುದ್ಧ ದಿಕ್ಕಿನಲ್ಲಿ ನಮ್ಮ ಕಾಲ ನಡೆಯುತ್ತದೆ. ಹಬ್ಬದ ದಿನಗಳ ಸಂಜೆ ಮನೆತುಂಬಾ, ಅಂಗಳದಲ್ಲಿ ದೀಪ ಹಚ್ಚಲು….”

Read More

ರಾಣಿರಾಜ್ಯದಲ್ಲಿ ಬೆಂಕಿ ವಿಕೋಪ, ಪ್ರವಾಹ ತಾಪ: ವಿನತೆ ಶರ್ಮ ಅಂಕಣ

“ಬೆಂಕಿ ಬಂದಾಗ ಮನೆ ತೊರೆಯುವುದಿಲ್ಲ, ಸತ್ತರೆ ಇಲ್ಲೇ ಎನ್ನುತ್ತಾ ಹಠಹಿಡಿದು ಕುರ್ಚಿ ಹಾಕಿಕೊಂಡು ಮನೆಮುಂದೆ ಕುಳಿತು ಬೆಂದುಹೋದ ಪತ್ನಿಯ ಬಗ್ಗೆ ರೋಧಿಸುತ್ತಿದ್ದ ವೃದ್ಧ, ತನ್ನ ಪುಟ್ಟ ನಾಯಿಯನ್ನ ಕಳೆದುಕೊಂಡ ಬಾಲಕಿಯ ಆಕ್ರಂದನ, ಮನೆ, ಆಸ್ತಿಪಾಸ್ತಿ, ಕುದುರೆಗಳನ್ನು ಕಳೆದುಕೊಂಡ ನಿರ್ಗತಿಕರಾದ ಆರು ಜನರಿದ್ದ ಕುಟುಂಬ, ಪ್ರವಾಹ ಬಂದಾಗ ತನ್ನ ಕಾರಿನ ಮೇಲೇರಿ ನಿಂತು ಫೋಟೋ ಹಿಡಿಯುತ್ತಾ ರೋಮಾಂಚಿತನಾದ ಯುವಕ, ಬೇರೆ ದೇಶದಿಂದ ಬಂದು ಇಲ್ಲಿ ಬದುಕುತ್ತಾ ಬಾಳುತ್ತಿದ್ದರೂ ಕೂಡ ನೆರೆ ಬಂದಾಗ ಸಹಾಯ ಮಾಡದೆ….”

Read More

ಸಾವು ಬದುಕೆಂಬ ಹಸಿರು ಹಳದಿ ಎಲೆಗಳು: ಡಾ.ವಿನತೆ ಶರ್ಮ ಅಂಕಣ

“ಸುದ್ದಿಮಾಧ್ಯಮಗಳಿಗೆ ಪೊಲೀಸರು ತಿಳಿಸಿದ್ದು ಏನೆಂದರೆ ಆ ವ್ಯಕ್ತಿ ತನ್ನ ಜೀವಹಾನಿಗೆ ಮುಂದಾಗಿದ್ದ. ಅವರು ಅವನು ತನ್ನ ಪ್ರಾಣ ತೆಗೆದುಕೊಳ್ಳದಂತೆ ಮಾತನಾಡಿಸುತ್ತಾ ಪುಸಲಾಯಿಸುತ್ತಾ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದರು. ರೇಡಿಯೋ ಡೀಜೆಗಳು ಪಟಪಟನೆ ಪರಿಸ್ಥಿತಿಯ ವಿಶ್ಲೇಷಣೆ ಶುರುಮಾಡಿದರು. ಅವನ್ಯಾರು, ಯಾತಕ್ಕೆ ಪ್ರಾಣ ತೆಗೆದುಕೊಳ್ಳಲು ಮುಂದಾದ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ