Advertisement

Tag: ಯೋಗೀಂದ್ರ ಮರವಂತೆ

ಜ್ಞಾನಜ್ಯೋತಿಯಲಿ ಜಗವ ಬೆಳಗಿದನೀತ

ಹೊಸ ಬದುಕಿನ ಹುಡುಕಾಟದಲ್ಲಿ ಲಂಡನ್ ಗೆ ಬಂದಮೇಲೆ, ಹಿಂದಿನ ಸೈದ್ಧಾಂತಿಕ ಅನ್ವೇಷಕ ವೃತ್ತಿಗಿಂತ ಸಂಪೂರ್ಣ ಭಿನ್ನವಾದ ವೃತ್ತಿ ಆರಂಭಿಸುವ ಅವಕಾಶ ಸಿಕ್ಕಿತು, “ರಾಯಲ್ ಮಿಂಟ್” ಎನ್ನುವ ಸರಕಾರಿ ಸ್ವಾಮ್ಯದ ನಾಣ್ಯ ತಯಾರಿ ಕಂಪೆನಿಯ ಉದ್ಯೋಗಿಯಾಗಿ. ಕ್ರಿಸ್ತಶಕ 886ರಲ್ಲಿ ಪ್ರಾರಂಭಗೊಂಡು ದೀರ್ಘ ಇತಿಹಾಸ ಇರುವ ಮಿಂಟ್ ಕಂಪೆನಿಯ ಮಾತ್ರವಲ್ಲದೇ ಬ್ರಿಟನ್ನಿನ ಆರ್ಥಿಕ ಸ್ಥಿತಿಯೂ ಆ ಸಮಯದಲ್ಲಿ ಹದಗೆಟ್ಟಿತ್ತು. ಕಳ್ಳನಾಣ್ಯಗಳು ಎಲ್ಲೆಲ್ಲೂ ಚಲಾವಣೆಯಲ್ಲಿದ್ದವು. ಬಳಕೆಯಲ್ಲಿದ್ದ ನಾಣ್ಯಗಳಲ್ಲಿ ಐದರಲ್ಲಿ ಒಂದು ನಕಲಿ ಆಗಿರುತ್ತಿತ್ತು. ಮಿಂಟ್ ನ ಮೇಲ್ವಿಚಾರಕನಾಗಿ ಖೋಟಾ ಹಣದ ಜಾಲವನ್ನು ನ್ಯೂಟನ್ ಸಮರ್ಥವಾಗಿ ಪ್ರತಿಬಂಧಿಸಿದ.
‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ಸರ್‌ ಐಸಾಕ್‌ ನ್ಯೂಟನ್‌ರ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ಗೀತಾಂಜಲಿಯ ವಿಶ್ವಕವಿ, ಬಹುಸಂಸ್ಕೃತಿಯ ವಕ್ತಾರ

ಹದಿನೇಳು ವರ್ಷದ ರವೀಂದ್ರನಾಥ, ಮತ್ತೆ ಮತ್ತೆ ಓದಿಸಿ ಬಾಯಿಪಾಠ ಮಾಡಿಸುವ ಇಂಗ್ಲೆಂಡ್ ನ ಶಿಕ್ಷಣದಿಂದ ಭ್ರಮನಿರಸನ ಹೊಂದಿ ಪದವಿ ಸರ್ಟಿಫಿಕೇಟ್ ದೊರೆಯುವ ಮೊದಲೇ ಓದು ನಿಲ್ಲಿಸಿ ಭಾರತಕ್ಕೆ ಮರಳಿದ್ದರು. ೧೯೦೧ರಲ್ಲಿ ಕೊಲ್ಕತ್ತಾದ ಗೌಜು ಗದ್ದಲಗಳಿಂದ ದೂರ, ನದಿ ತೊರೆಗಳ ಜುಳುಜುಳು ಕೇಳಿಸುವ, ನಿಬಿಡ ಮರಗಿಡಗಳ ಹಸಿರು ತುಂಬಿರುವ ನೈಸರ್ಗಿಕ ಮಡಿಲಿನ ಹಳ್ಳಿಯಲ್ಲಿ ಶಾಂತಿನಿಕೇತನ ವಿದ್ಯಾಲಯ ಆರಂಭಿಸಿದರು.
ಯೋಗೀಂದ್ರ ಮರವಂತೆ ಬರೆಯುವ…

Read More

ಆಧ್ಯಾತ್ಮಿಕ ಗುರುವಿನ ಕಾವ್ಯ ಮತ್ತು ಲಂಡನ್‌ನ ದಿನಗಳು

ಲಂಡನ್ನಿನ ಸೈಂಟ್ ಪೌಲ್ಸ್ ಎನ್ನುವ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿವೇತನ ಗಳಿಸಿಕೊಂಡ ಹನ್ನೆರಡು ವರ್ಷದ ಅರಬಿಂದೋವಿನ ಔಪಚಾರಿಕ ಶಿಕ್ಷಣ ಆರಂಭವಾಯಿತು. ಭಾಷೆಗಳನ್ನು ಆಸಕ್ತಿಯಿಂದ ಕಲಿಯುತ್ತಿದ್ದ ಭಾರತೀಯ ಬಾಲಕ ಆಂಗ್ಲ ಹೆಡ್ ಮಾಸ್ತರರ ಮೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬನಾದ. ಫ್ರೆಂಚ್, ಇಟಾಲಿಯನ್, ಸ್ಪ್ಯಾನಿಷ್, ಗ್ರೀಕ್ ಲ್ಯಾಟಿನ್ ಹೀಗೆ ಹಲವು ಭಾಷೆಗಳನ್ನು ಅಧ್ಯಯನ ಮಾಡುತ್ತಿದ್ದ ಅರಬಿಂದೋಗೆ ಲ್ಯಾಟಿನ್ ನಲ್ಲಿ ಇದ್ದ ಪ್ರಭುತ್ವವನ್ನು ಕಂಡ ಹೆಡ್ ಮಾಸ್ತರರು ತಾನೇ ಮುತುವರ್ಜಿಯಿಂದ ಲ್ಯಾಟಿನ್ ಹೇಳಿಕೊಡಲು ಶುರು ಮಾಡಿದರು.
ಯೋಗೀಂದ್ರ ಮರವಂತೆ…

Read More

‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಯೋಗೀಂದ್ರ ಮರವಂತೆ ಸರಣಿ ಶುರು

ಇಂದಿನ ಲಂಡನ್ನಿನ ವೈಶಿಷ್ಟ್ಯವನ್ನು ವಲಸಿಗರ ಕಣ್ಣಲ್ಲಿ ಸರಳವಾಗಿ ವ್ಯಾಖ್ಯಾನಿಸುವುದಾದರೆ, ಬ್ರಿಟಿಷರಲ್ಲದ ಬಿಳಿಯರಲ್ಲದ ಜನರು ಅತ್ಯಂತ ವೇಗವಾಗಿ,  ಹೆಚ್ಚೇನೂ ಅಡೆತಡೆ ಇಲ್ಲದೆ ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಸ್ವೀಕೃತರಾಗುವ ತಾಣ  ಎನ್ನಬಹುದು.  ಹೀಗೆ ಲಂಡನ್ ನಗರದ ಆದಿಪುರಾಣದೊಂದಿಗೆ ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಎಂಬ ಹೊಸ ಸರಣಿಯನ್ನು ಆರಂಭಿಸಿದ್ದಾರೆ ಲೇಖಕ ಯೋಗೀಂದ್ರ ಮರವಂತೆ.

Read More

ಖಾಲಿ ಕುರ್ಚಿಗಳ ಕ್ರಿಸ್ಮಸ್!: ಯೋಗೀಂದ್ರ ಮರವಂತೆ ಅಂಕಣ

“ಹಿಂದಿನ ಕ್ರಿಸ್ಮಸ್ ನಲ್ಲಿ ಭಾಗವಹಿಸಿದ್ದ ಅರವತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಈ ಸಲ ಪಾಲ್ಗೊಳ್ಳುತ್ತಿಲ್ಲ ಎನ್ನುವುದು ಯು.ಕೆ. ಕೋವಿಡ್ ಡೈರಿಯೊಳಗಿನ ಸರ್ವವಿಧಿತ ಕಠೋರ ಲೋಕಸತ್ಯ. ಈ ಇವರೆಲ್ಲರೂ ಕೊರೊನ ಕಾರಣಕ್ಕೆ ಇಲ್ಲವಾದವರು, ಇನ್ನೂ ಇಲ್ಲೇ ವ್ಯಾಪಕವಾಗಿ ಹಾಯಾಗಿ ಹಬ್ಬಿ ಹರಿದಾಡಿ ಹಾರಾಡಿಕೊಂಡಿರುವ ಅಸಾಧಾರಣ ವಿನಾಶ ಶಕ್ತಿಯ ಕ್ರಿಮಿ ಜಂತುವಿನ ಹಾವಳಿಯೊಂದಿಲ್ಲದಿದ್ದಿದ್ದರೆ ಬಹುಷಃ ಇನ್ನೂ ಕೆಲವು ಹಲವು ಕ್ರಿಸ್ಮಸ್ ಗಳನ್ನು…”

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಸಂರಚನೆಯಲ್ಲಿ ಹೊಸತನ ಹುಡುಕುವ ಕಥೆಗಳು: ಎನ್.ಎಸ್.ಶ್ರೀಧರ ಮೂರ್ತಿ ಬರಹ

‘ಅಂತರ್ಗತ’ ದಲ್ಲಿ ಕಥೆಯಲ್ಲಿದ್ದಾತ ಎದುರಿಗೂ ಬರುತ್ತಾನೆ, ಚಿತ್ತಾಲರ ಕಥೆಯಂತೆ ಸೃಜನಶೀಲತೆಯ ನೆಲೆಗಳನ್ನು ಪರಿವೀಕ್ಷಿಸುವ ಇದು ಆ ಮೂಲಕ ಬದುಕಿನ ಮೂಲ ಆತಂಕಗಳನ್ನೂ ಗುರುತಿಸುತ್ತದೆ. ‘ತಾರೆ’ಕತೆಯಲ್ಲಿ ಕೂಡ ಇಂತಹ…

Read More

ಬರಹ ಭಂಡಾರ