Advertisement

ನಾರಾಯಣ ಯಾಜಿ

ಯುದ್ಧಕಾಲದಲ್ಲಿ ಸಂಜಿತ್ ಸಂಗೀತ ಸಂಜೆ: ಯೋಗೀಂದ್ರ ಮರವಂತೆ ಬರಹ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಲಿಕೆ, ಜಾನಪದ ಮತ್ತು ಭಾವಗೀತೆಗಳ ಪ್ರಭಾವ ಎಲ್ಲವೂ ಸೇರಿ ತಾನೇ ಮೈಗೂಡಿಸಿಕೊಂಡ ಉಲ್ಲಾಸಭರಿತ ತಾಜಾ ಶೈಲಿ, ಯಾರಂತೆಯೂ ಅಲ್ಲದ ಆದರೆ ಮತ್ತೆ ಮತ್ತೆ ಕೇಳಬೇಕೆನಿಸುವ ಆಕರ್ಷಕ ಧ್ವನಿ ಮತ್ತು ಸ್ವರಸಂಚಾರ, ಸಿನಿಮಾ ಹಾಡುಗಾರಿಕೆಗೆ ಅತಿ ಅಗತ್ಯವಾದ ವಿಶಿಷ್ಟ ಭಾವ ರಸ ಸ್ಪುರಣೆ, ಎಲ್ಲದಕ್ಕಿಂತ ಮುಖ್ಯವಾಗಿ ಚಲನಚಿತ್ರ ಹಿನ್ನೆಲೆ ಗಾಯನದ ಸಾಂಪ್ರದಾಯಿಕ ಜಾಡಿನ ಜೊತೆಗೆ, ತನ್ನದೇ ನಿರ್ಮಾಣದ ಹಾಡುಗಳಲ್ಲಿ ಕಥನ ಮಾದರಿಯ ಸೃಜನಶೀಲ ನಿರೂಪಣೆಯ ಬಗೆಗಿನ ಕಾಳಜಿ ಮತ್ತು ಜಗತ್ತಿನ ಬೇರೆಬೇರೆ ಸಂಗೀತ ಪ್ರಕಾರಗಳ ಸೂಕ್ಷ್ಮ ಗಮನಿಸುವಿಕೆಯಿಂದ ಹುಟ್ಟಿದ ಪ್ರಯೋಗಗಳು ಸಮ್ಮಿಳಿತವಾಗಿ ಸಂಜಿತ್ ಹೆಗ್ಡೆ ಸಂಗೀತವನ್ನು ವೈಶಿಷ್ಟ್ಯಪೂರ್ಣ ನೆಲೆಯಲ್ಲಿ ನಿಲ್ಲಿಸುತ್ತದೆ.
ಯೋಗೀಂದ್ರ ಮರವಂತೆ ಬರಹ ನಿಮ್ಮ ಓದಿಗೆ

Read More

ಒಂದು ಆಕಾಶ, ಹಲವು ಏಣಿಗಳು: ಯೋಗೀಂದ್ರ ಮರವಂತೆ ಬರಹ

ವಿಮಾನಗಳ ಚರಿತ್ರೆಯನ್ನು ಬರೆದವರು ಬೇರೆಬೇರೆ ಕಾಲಘಟ್ಟದಿಂದ ಸ್ಥಳದಿಂದ ಘಟನೆಗಳಿಂದ ತಮ್ಮ ಅಧ್ಯಯನ, ಪುರಾವೆ ಹಾಗು ಅಂದಾಜುಗಳನ್ನು ವಿಶದೀಕರಿಸುವುದಿದೆ. ಆಕಾಶಕ್ಕೆ ನೆಗೆಯಬೇಕು ಎನ್ನುವ ಉತ್ಕಟ ಆಸೆ ಮನುಷ್ಯರಿಗೆ ಎಂದು ಬಂತೋ ಕರಾರುವಕ್ಕಾಗಿ ಹೇಳಿದವರಿಲ್ಲವಾದರೂ ಬಾನಿನಲ್ಲಿ ಸ್ವಚ್ಛಂದವಾಗಿ ಹಾರಿ ಇಳಿಯುವ ಹಕ್ಕಿಗಳನ್ನು ನೋಡಿ ನಮಗೂ ಹಾರುವ ಕನಸು ಹುಟ್ಟಿತು. ಮತ್ತೆ ಆ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿ ಸಾಗಿದವು ಎನ್ನುವ ಉಲ್ಲೇಖಗಳು ಓದಿನಲ್ಲಿ ಸಿಗುತ್ತವೆ.
ಯೋಗೀಂದ್ರ ಮರವಂತೆ ಬರೆದ ವಿಮಾನ ಲೋಕದ ಅಚ್ಚರಿ, ಅನುಭವಗಳ ಕುರಿತ ಹೊಸ ಕೃತಿ “ಏರೋ ಪುರಾಣ”ದ ಒಂದು ಬರಹ ನಿಮ್ಮ ಓದಿಗೆ

Read More

ಲಂಡನ್ನಿನ ಸ್ಮರಣೆಯಲ್ಲಿ ದೇಶಭಕ್ತ ತಾತ್ವಿಕರು…

ನ್ಯಾಯಾಂಗ ಹೋರಾಟದ ಸೋಲು ತಿಲಕರ ಖ್ಯಾತಿಯನ್ನು ವರ್ಚಸ್ಸನ್ನು ಹೆಚ್ಚಿಸಿತ್ತು. ದಂತಕತೆಯಾಗಿದ್ದ ಪ್ರಸಿದ್ಧ ಪತ್ರಿಕೋದ್ಯಮಿ ಬೆಂಜಮಿನ್ ಹಾರ್ನಿಮನ್ ಸಂಪಾದಕತ್ವದ “ಬಾಂಬೆ ಕ್ರೋನಿಕಲ್” ಪತ್ರಿಕೆ “ಬ್ರಿಟಿಷ್ ಜ್ಯೂರಿ ಮತ್ತು ನ್ಯಾಯಾಧೀಶರು ಲೋಕಮಾನ್ಯ ತಿಲಕರ ಬಗ್ಗೆ ಹೇಳಿದುದನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ? ಜನರ ಪ್ರೀತಿಯ ಹೃದಯಸಿಂಹಾಸನದಿಂದ ತಿಲಕರನ್ನು ಕೆಳಗಿಳಿಸುವಲ್ಲಿ ಕೋರ್ಟಿನ ನಿರ್ಣಯಗಳೆಲ್ಲ ನಿರರ್ಥಕ” ಎಂದು ಬರೆದಿತ್ತು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯ ಕೊನೆಯ ಕಂತಿನಲ್ಲಿ ಯೋಗೀಂದ್ರ ಮರವಂತೆ ಬರಹ

Read More

ಬಾರ್ಡೋಲಿಯ ಸರ್ದಾರರ ಬ್ಯಾರಿಸ್ಟರ್ ದಿನಗಳು

ಹೈಸ್ಕೂಲಿನಲ್ಲಿ ಕೋಲಿನಿಂದ ಯಾವಾಗಲೂ ಮಕ್ಕಳನ್ನು ವಿಪರೀತ ಹೊಡೆಯುತ್ತಿದ್ದ, ವಿದ್ಯಾರ್ಥಿಗಳಿಗೆ ದೊಡ್ಡ ದಂಡ ವಿಧಿಸುತ್ತಿದ್ದ ಶಿಕ್ಷಕರೊಬ್ಬರ ವರ್ತನೆಯನ್ನು ಪ್ರತಿಭಟಿಸಿ ಗಲಾಟೆ ಮಾಡಿದ್ದರು. ಸಹವಿದ್ಯಾರ್ಥಿಗಳನ್ನು ಸಂಘಟಿಸಿ ತರಗತಿ ಬಹಿಷ್ಕರಿಸಿದ್ದರು. ಪಟೇಲರು ಸಂಘಟಿಸಿದ ಶಾಲಾದಿನಗಳ ಮೊದಲ ಮುಷ್ಕರ ಮೂರನೆಯ ದಿನಕ್ಕೆ ಕಾಲಿಟ್ಟಾಗ, ಹುಡುಗನ ನಾಯಕತ್ವ ಮತ್ತು ಸಂಘಟನೆಯನ್ನು ಗುರುತಿಸಿದ ಪ್ರಾಂಶುಪಾಲರು ಮಧ್ಯ ಪ್ರವೇಶಿಸಿ, ವಿದ್ಯಾರ್ಥಿಗಳನ್ನು ಮುಂದೆಂದೂ ಆ ಅಧ್ಯಾಪಕರು ಕಟುವಾಗಿ ಶಿಕ್ಷಿಸದಿರುವ ಆಶ್ವಾಸನೆ ನೀಡಿದರು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಯೋಗೀಂದ್ರ ಮರವಂತೆ ಬರಹ

Read More

ಇಲ್ಲಿದ್ದಾನೆ… ನೀರಿನಲ್ಲಿ ಹೆಸರು ಕೆತ್ತಲಾದವನು

ಸಹೋದರನನ್ನು ಕಳೆದುಕೊಂಡ ಶೋಕ ದುಮ್ಮಾನ ಒಂದು ಕಡೆ, ಹೊಸ ಸ್ನೇಹ ಪ್ರೇಮಾಂಕುರಗಳ ಜೀವಸೆಲೆ ಇನ್ನೊಂದೆಡೆ, ಅವನ ಕವಿತೆಗಳು ಆ ಇಡೀ ವರ್ಷ ನೋವು ನಲಿವುಗಳ, ಖಿನ್ನತೆ ಉತ್ಸಾಹಗಳ ಉಯ್ಯಾಲೆಯಲ್ಲಿ ತೂಗಿ ತೇಲಿದವು. ವಾಸ್ತವದಲ್ಲಿ ಹರುಷ ಹಾಗು ವ್ಯಥೆಗಳು ಜೊತೆಜೊತೆಗೆ ಬದುಕಿ ಸಾಗುವುದನ್ನು ಪ್ರದರ್ಶಿಸಿದವು. ಬೇರೆಬೇರೆ ವಸ್ತುಗಳ ಪದ್ಯಗಳನ್ನು ಬೇರೆಬೇರೆ ಛಂಧಸ್ಸಿನಲ್ಲಿ ಬರೆಯುವ ಕೌಶಲ ಆತನಿಗಿತ್ತು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಕವಿ ಜಾನ್‌ ಕೀಟ್ಸ್‌ ಕುರಿತ ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ