ಸೀತಾಲಕ್ಷ್ಮಿಯ ಬದುಕಿನ ಸುತ್ತ…: ವಸುಮತಿ ಉಡುಪ ಕಾದಂಬರಿಯ ಪುಟಗಳು..

ತಂಬುಳಿಗೆ ಕಲೆಸಿದ್ದ ಅಷ್ಟೂ ಅನ್ನವನ್ನು ಬದಿಗೆ ದೂಡಿ ಹುಳಿಗೆ ಅನ್ನ ಕಲೆಸಲು ಸನ್ನದ್ಧನಾದ ಶಿವರಾಮ. ಹುಳಿ ಬಡಿಸಲು ಬಂದ ಸೀತಾಲಕ್ಷ್ಮಿಯ ಕೈಗಳು ಅಕ್ಷರಶಃ ನಡುಗುತ್ತಿದ್ದುವು. ತನ್ನ ತೌರಿನಲ್ಲಿ ಇಂತಾದ್ದೆಲ್ಲಾ ಕಂಡು ಗೊತ್ತಿಲ್ಲದ ಹುಡುಗಿಗೆ ದಿಗಿಲು, ದುಃಖ. ವಾಸ್ತವವಾಗಿ ಇದು ತನ್ನ ತಲೆಕೂದಲು ಎಂದು ಅವಳಿಗೆ ಅನುಮಾನ. ಮಂಗಳವಾರ ಅವತ್ತು. ಸೀತಾಲಕ್ಷ್ಮಿ ಅತ್ತೆ ಹೇಳಿದಂತೆ ತಲೆಗೆ ಎರೆದುಕೊಂಡಿದ್ದಳು. ಒದ್ದೆ ತಲೆಕೂದಲನ್ನು ಪಾಣಿಪಂಚೆಯಿಂದ ವರೆಸಿಕೊಂಡು ತುದಿಗಂಟು ಹಾಕಿಕೊಂಡಿದ್ದರೂ ಉಟ್ಟ ಸೀರೆಯ ಮೇಲೆ ಕೂದಲು ಉದುರಿ ಬಿದ್ದಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ವಸುಮತಿ ಉಡುಪ ಬರೆದ ಕಾದಂಬರಿ “ಅಂತಃಪುರ”ದ ಕೆಲವು ಪುಟಗಳು ನಿಮ್ಮ ಓದಿಗೆ

Read More