Advertisement

Tag: ಆಶಾ ಜಗದೀಶ್

ಮೌನಕ್ಕೆ ಮೌನವೇ ಹೊರಬರುವ ಹಾದಿಯಾದಾಗ…: ಆಶಾಜಗದೀಶ್ ಅಂಕಣ

“ಒಬ್ಬ ಕವಿ ತಾನು ಪ್ರಪಂಚವನ್ನು ನೋಡಿ ಗ್ರಹಿಸಿದ್ದು ಒಂದು ಬಗೆಯ ಜ್ಞಾನವಾದರೆ ಪ್ರಪಂಚ ಅವನಿಗೆ ಅನಿವಾರ್ಯವಾಗಿ ಕಲಿಸಿದ ಅಥವಾ ನೀಡಿದ ಜ್ಞಾನ ಮತ್ತೊಂದೇ ಬಗೆಯದು. ಕವಿ ಇದೆರೆಡರ ಸಮಪಾಕದಲ್ಲಿ ಬೆಂದು ಬರೆದಾಗ ಕವಿತೆ ಯಾರನ್ನಾದರೂ ಮುಟ್ಟಿ ತಟ್ಟಬಲ್ಲದು. ಮತ್ತೆ ಗ್ರಹಿಕೆ ಯಾವ ಬಗೆಯದ್ದೇ ಇರಲಿ ನನ್ನ ಗ್ರಹಿಕೆ ಎನ್ನುವುದು ಬಹಳ ಸೀಮಿತ ಕ್ಷಿತಿಜ. ಅದನ್ನು ಸಾಮಾನ್ಯೀಕರಿಸುವ ಹೊತ್ತಿನಲ್ಲಿ ಒಂದು ಕಾಳಜಿ ಒಂದು ಜಾಗ್ರತೆ ಬೇಕೇಬೇಕಿರುತ್ತದೆ.”

Read More

ಕಪ್ಪೆಚಿಪ್ಪಿನೊಳಗೆ ಮುತ್ತಾದ ಸೋನೆಮಳೆ…: ಆಶಾ ಜಗದೀಶ್ ಅಂಕಣ

“ಇದ್ದಕ್ಕಿದ್ದಂತೆ ಅವನೆದುರು ಮತ್ತೊಂದು ಹುಡುಗ ಧುತ್ತೆಂದು ಪ್ರತ್ಯಕ್ಷನಾಗುತ್ತಾನೆ. ಅವನ ಕೈಲಿ ಅರಳಿದ ಛತ್ರಿಯಿದೆ. ಆದರವನು ಇವನ ಅಪ್ಪನಿಗೆ ಆಗದವರ ಮಗ. ಇವನು ಇನ್ನೇನು ಸುಮ್ಮನೇ ಅವನನ್ನು ಹಾದು ಹೋಗಬೇಕು… ಅಷ್ಟರೊಳಗೆ ಅವನು ಇವನ ಬಳಿ ಬರುತ್ತಾನೆ. ಇಬ್ಬರೂ ಒಂದೇ ಛತ್ರಿಯಡಿ ನಡೆಯತೊಡಗುತ್ತಾರೆ. ಇಬ್ಬರ ನಡುವೆಯೂ ಮಾತೊಂದಿಲ್ಲ. ಮಳೆ ಸುರಿಯುತ್ತಲೇ ಇದೆ. ನಾಯಿ ಮರಿಗೆ ಒರಗಿಸಿಕೊಳ್ಳುವ ಎದೆ ಸಿಕ್ಕ ಸಂಭ್ರಮ…”

Read More

ಕಥಾಲೋಕದ ‘ಹೊಸನೀರು…’. : ಆಶಾ ಜಗದೀಶ್ ಅಂಕಣ

“ಮನೆಯಲ್ಲಿ ಹಿಡಿ ಕೂದಲಿಲ್ಲ! ಸೌಕಾತಿ ಚವರಿ ಮಾಡಿ ಕೊಡಲು ಹೇಳಿದ್ದಾಳೆ ಬೇರೆ, ಅಂಥವಳಿಗೆ ಮಾಡಿಕೊಟ್ಟರೆ ನಾಲ್ಕು ಕಾಸು ಹೆಚ್ಚಿಗೆ ಸಿಕ್ಕಿತು ಎನ್ನುವ ಆಸೆ ಇವಳಿಗೆ. ಇಂತಹ ಸಂದಿಗ್ಧದಲ್ಲಿ ಅವಳಿಗೆ ಕಾಣಿಸುವ ಒಂದೇ ದಾರಿ ಎಂದರೆ ತನ್ನದೇ ಸೊಂಪು ಕೂದಲನ್ನು ಕತ್ತರಿಸಿ ಚವರಿ ಮಾಡಿಕೊಡುವುದು. ಹಸುವಿಗೆ ಹೆಸರುವಾಸಿ ದುಗ್ಗಿ ಕೊನೆಗೆ ಅದನ್ನೇ ಮಾಡುತ್ತಾಳೆ. ಇದು ತಿಳಿಯದ ಆ ಸೌಕಾತಿ ಚವರಿಯನ್ನು ಮೆಚ್ಚಿ ತಲೆಗೆ ಹಚ್ಚಿಕೊಂಡು…”

Read More

ರಾಧಾ ಮಾಧವನಿಗೊಲಿದ ಮುರಳಿಗಾನ…: ಆಶಾಜಗದೀಶ್ ಅಂಕಣ

“ಜಗತ್ತು ಅಪಾರ ಸತ್ಯಗಳನ್ನು ಒಳಗೊಂಡು ಮುಚ್ಚಿಟ್ಟುಕೊಂಡು ಹುಡುಕಿಕೊಳ್ಳಿ ಎಂದು ಮುಗುಮ್ಮಾಗಿ ಕೂತಿದೆ. ನಾವೇ ನಾವು ನಾವಾಗಿ ಬೊಗಸೆಯೊಡ್ಡಿಕೊಂಡು ಸತ್ಯವನ್ನು ಹುಡುಕಿ ಹೊರಡಬೇಕಿದೆ. ಇಲ್ಲಿನ ಒಂದೊಂದು ಜೀವ ಅಜೀವಗಳಿಗೂ ಅಂತರ್ ಸಂಬಂಧವಿದೆ. ಅದನ್ನು ಅರಿತು ಒಳಗೊಂಡು ಬದುಕಬೇಕಿದೆ. ಆದರೆ ಆ ಎಡೆಯಲ್ಲಿ ನಮ್ಮ ಪ್ರಯತ್ನವೆಷ್ಟಿದೆ?! ಕೆಲವೊಮ್ಮೆ ಶೂನ್ಯ! ಇದು ಕವಿಯನ್ನು ನೋಯಿಸಿದೆ.”

Read More

ಎಪ್ಪತೈದರ ಹೊಸ್ತಿಲಲಿ ನಿಂತು: ಆಶಾ ಜಗದೀಶ್ ಅಂಕಣ

“ಕಣ್ಣಿಗೆ ಕಾಣುವ ಪ್ರಪಂಚದ ವಿಸ್ತಾರದೊಂದಿಗೆ ಗುರುತಿಸಿಕೊಳ್ಳುತ್ತಾ ನನ್ನ ಪ್ರಪಂಚವೇ ದೊಡ್ಡದೆಂದುಕೊಳ್ಳುವ ಭ್ರಾಮಕ ಸಮೂಹದ ಮುಂದೆ ಮನೆ ಕುಟುಂಬ ಎನ್ನುವ ಪುಟ್ಟ ಜಗತ್ತಿನ ಅಗಾಧ ಆಳ ವಿಸ್ತಾರದೊಂದಿಗೆ ಮುಖಾಮುಖಿಯಾಗುತ್ತಾ ಅದನ್ನು ತಮ್ಮ ಬರಹದಲ್ಲಿ ತಂದವರು ವೈದೇಹಿಯವರು. ಅವರಿಗೆ ತಾವು ಎಂಥದ್ದೋ ಸಾಧನೆ ಮಾಡಿರುವೆ ಎನ್ನುವ ಭ್ರಮೆಯಿಲ್ಲ. ತನಗೆ ತಿಳಿಯದ್ದೂ ಇಲ್ಲಿದೆ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ