Advertisement

Tag: ಡಾ. ಎಲ್.ಜಿ. ಮೀರಾ

ಹಿರಿಯರಿಗೂ ಇಂದಿನ ಪೀಳಿಗೆಗೂ ಇರುವ ಅಂತರವನ್ನು ದಾಟುವುದು ಹೇಗೆ?: ಎಲ್.ಜಿ.ಮೀರಾ ಅಂಕಣ

ಹಿರಿಯುರ `ರಾತ್ರಿ ಎಷ್ಟು ಹೊತ್ತಾದರೂ ಮಲಗದ, ಬೆಳಿಗ್ಗೆ ಎಷ್ಟು ಹೊತ್ತಾದರೂ ಏಳದ’ ತಮ್ಮ ಸಂತಾನಗಳ ಮನಸ್ಸಿನ ಹಾಗೂ ಬದುಕಿನ ಮರ್ಮವೇನು ಎಂಬುದನ್ನು ಅರಿಯಲು ಮೊದಲು ತಾವೇ ಒಂದು ಹೆಜ್ಜೆ ಮುಂದೆ ಇಡಬೇಕಿದೆ. ಜಗತ್ತೇ ಒಂದು ಹಳ್ಳಿಯಾದ ಅಂತರ್ಜಾಲದ ಯುಗದಲ್ಲಿ, ಹಳ್ಳಿಯೇ ತಮ್ಮ ಜಗತ್ತಾಗಿದ್ದ ಪೀಳಿಗೆಗೆ ಮತ್ತು ಅವರ ಮಕ್ಕಳಿಗೆ ಈ ಹೆಜ್ಜೆಯು ಒಂದು ಸವಾಲು. ಆದರೆ, ವಿಧಿ ಇಲ್ಲ. ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ತಮ್ಮಿಂದ ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ದೂರ ಆಗಬಾರದು ಎಂದರೆ ಅವರ ಬದುಕಿನ ಲಯಗಳನ್ನು ಅರಿಯಲು ಹಿರಿಯ ಪೀಳಿಗೆಯವರು ಪ್ರಯತ್ನ ಮಾಡಲೇಬೇಕು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಇಂದಿನ ಕನ್ನಡ ಅಧ್ಯಾಪಕರು ಮತ್ತು ಇಂಗ್ಲಿಷ್ ಭಾಷೆ: ಎಲ್.ಜಿ.ಮೀರಾ ಅಂಕಣ

ಬರಬರುತ್ತಾ ಓದು, ವ್ಯುತ್ಪತ್ತಿ, ಭಾಷಾ ಪ್ರೌಢಿಮೆಗಳ ಬಗೆಗಿನ ಆಸ್ಥೆ ಕಡಿಮೆಯಾಗಿ `ಹಾಗೂ ಹೀಗೂ ಒಂದಿಷ್ಟು ಪಾಠ ಮಾಡೋದು, ಸಂತೆ ಹೊತ್ತಿಗೆ ಮೂರು ಮೊಳ ಆದ್ರೆ ಸಾಕು’ ಎಂಬ ಮನಃಸ್ಥಿತಿ ಮೂಡಿತು. ಇದೊಂದು ರೀತಿಯ ಸುಲಭೀಕರಣ. ಇದಕ್ಕೆ ಕನ್ನಡ ಅಧ್ಯಾಪಕರು ಮಾತ್ರ ಕಾರಣ ಅಲ್ಲ. ಜಾಗತೀಕರಣದ ನಂತರ, ಭಾರತ ದೇಶದ ಬದುಕು ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಬಹಳವಾಗಿ ಬದಲಾಯಿತು. ಉಪಗ್ರಹ ಪ್ರಸಾರದ ಅಂತಾರಾಷ್ಟ್ರೀಯ ಚಲನಚಿತ್ರ ವಾಹಿನಿಗಳು, ಅಂತರ್ಜಾಲ, ಮುಂದೆ ಸರ್ವವ್ಯಾಪಿಯಾದ ಚಲನವಾಣಿಗಳ ಬಳಕೆ ಇವುಗಳಿಂದಾಗಿ ಓದುಸಂಸ್ಕೃತಿ ಹಿಂದೆ ಸರಿದು ನೋಡುಸಂಸ್ಕೃತಿ ಮುನ್ನೆಲೆಗೆ ಬಂದಿತಲ್ಲವೆ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಶಾಶ್ವತ ಮತ್ತು ನಶ್ವರ – ಡಿಜಿಟಲ್ ಯುಗದಲ್ಲಿ ಬದಲಾಯಿತೇ ಇವುಗಳ ಅರ್ಥ?: ಎಲ್.ಜಿ. ಮೀರಾ ಅಂಕಣ

ಹುಟ್ಟು ಮತ್ತು ಸಾವು ಎಂಬ ಎರಡು ತುದಿಗಳ ಮಧ್ಯೆ ಕೆಲವು ದಿನ ಆಸೆ-ನಿರಾಸೆ, ಪ್ರೀತಿ-ದ್ವೇಷ, ಭಾವ-ಬುದ್ಧಿ, ಇಷ್ಟ-ಕಷ್ಟ, ಸಂಗ್ರಹ-ಅಸಂಗ್ರಹ, ಸಾಧನೆ-ಸವಾಲು… ಇವೆಲ್ಲವೂ ಸೇರಿದ ಬದುಕಿನ ಬೆಳಕು. ಈ ಬದುಕನ್ನೇ ಮಾಯೆ, ಕತ್ತಲು ಎಂದು ಹೇಳುವ ಒಂದು ಆಧ್ಯಾತ್ಮಿಕ ಚಿಂತನ ಧಾರೆಯೂ ಇದೆಯಲ್ಲವೆ? `ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ’. `ಯಾಕೆ ಬಡಿದಾಡ್ತಿ ತಮ್ಮ ಮಾಯ ಮೆಚ್ಚಿ ಸಂಸಾರ ನೆಚ್ಚಿ’, `ಒಳಿತು ಮಾಡು ಮನುಜ, ನೀನಿರೋದು ಮೂರು ದಿವಸ’ ಇಂತಹ ಅನೇಕ ಗೀತೆಗಳು, ದಾಸವಾಣಿಗಳು ಬದುಕಿನ ಕ್ಷಣಭಂಗುರತೆಯನ್ನೇ ಹೇಳುತ್ತವೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ತೈದನೆಯ ಬರಹ

Read More

ಕಾಡು, ಪುಸ್ತಕ, ಅಭಿಮಾನ ಹಾಗೂ ಅಂತರ್ಜಾಲ ಸಮುದಾಯಗಳ ಆಹ್ಲಾದಕರ ಲೋಕ: ಎಲ್.ಜಿ.ಮೀರಾ ಅಂಕಣ

ಮನುಷ್ಯ ಎಂಬ ಜೀವಿ ಈ ಭೂಮಿಯ ಮೇಲೆ ವಿಕಾಸಗೊಂಡಾಗಿನಿಂದ ಒಂದಲ್ಲ ಒಂದು ರೀತಿಯ ಸಮುದಾಯಗಳನ್ನು ಕಟ್ಟಿಕೊಂಡು ಬದುಕುತ್ತಿದ್ದಾನೆ. ಎಷ್ಟೇ ಜಗಳ, ಭಿನ್ನಾಭಿಪ್ರಾಯ, ಇರಿಸುಮುರಿಸು, ವೈಯಕ್ತಿಕ ಇಚ್ಛೆಗಳ ಬಲ್ಮೆ ಇದ್ದರೂ ನೆರೆಹೊರೆಯೋ, ವೃತ್ತಿ ಸಮುದಾಯವೋ, ಸ್ನೇಹಿತರ ಬಳಗವೋ, ನೆಂಟರಿಷ್ಟರ ಜೊತೆಗಾರಿಕೆಯೋ, ವಠಾರವೋ, ಅನೇಕ ಮನೆಘಟಕಗಳಿರುವ ಸಮುಚ್ಚಯಗಳೋ(ಅಪಾರ್ಟ್ಮೆಂಟ್)… ಒಟ್ಟಿನಲ್ಲಿ ಮನುಷ್ಯರಿಗೆ ಮನುಷ್ಯರ ಸಂಗ-ಸಹವಾಸ ಬೇಕು ಅಷ್ಟೆ. ಇದನ್ನು ಹೆಚ್ಚು ವಿವರಿಸುವ ಅಗತ್ಯ ಇಲ್ಲ ಅನ್ನಿಸುತ್ತೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ನಾಲ್ಕನೆಯ ಬರಹ

Read More

ವಸ್ತುಗಳ ಸರ್ವಾಧಿಕಾರದಿಂದ ಮುಕ್ತಿ ಪಡೆಯವುದು ಹೇಗೆ?: ಎಲ್.ಜಿ.ಮೀರಾ ಅಂಕಣ

ವಸ್ತುಗಳನ್ನು ವ್ಯವಸ್ಥಿತವಾಗಿ ಇರಿಸಿಕೊಳ್ಳುವ ವಿಷಯದ ಬಂದಾಗ, ಕೊನೆಗೂ ನಾವು ಮನುಷ್ಯರು ಅಭ್ಯಾಸಗಳ ದಾಸರು ಅನ್ನಿಸುತ್ತದೆ. ಚಿಕ್ಕದೋ ದೊಡ್ಡದೋ, ಮುಖ್ಯವೋ, ಅಮುಖ್ಯವೋ ಯಾವುದೇ ವಸ್ತುವನ್ನಾದರೂ ಯಾವಾಗಲೂ ಒಂದೇ ಜಾಗದಲ್ಲಿ ಇಡಲು ಕಲಿತೆವು ಅಂದರೆ ಅಲ್ಲೇ ಇಡುತ್ತೇವೆ, ಅಭ್ಯಾಸ ಆಗಿಬಿಟ್ಟಿತೆಂದರೆ, ಎಷ್ಟೋ ಸಲ ಅನ್ಯಮನಸ್ಕರಾಗಿಯೂ ವಸ್ತುಗಳನ್ನು ಸರಿಯಾದ ಜಾಗದಲ್ಲೇ ಇಟ್ಟುಬಿಡುತ್ತೇವೆ! ಹೀಗಾಗಿ ತುಂಬ ಮುಖ್ಯವಾದ ಸಲಕರಣೆಗಳನ್ನಾದರೂ ಒಂದೇ ಜಾಗದಲ್ಲಿ ಯಾವಾಗಲೂ ಇಡುವ ಅಭ್ಯಾಸವನ್ನು ಮಾಡಿಕೊಂಡೆವೆಂದರೆ ನಮಗೆ ನಾವೇ ದೊಡ್ಡ ಸಹಾಯ ಮಡಿಕೊಂಡೆವು ಎಂದರ್ಥ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ