Advertisement

Tag: ಮಾರುತಿ ಗೋಪಿಕುಂಟೆ

ಬಾಯಿಗೆ ಸಿಗದ ಗೆಣಸು ಮತ್ತು ಮೇಷ್ಟ್ರು ಎಸೆದ ನೋಟ್ಬುಕ್

ಎಲ್ಲರಿಗಿಂತ ಚೆನ್ನಾಗಿಯೇ ಬರೆದಿದ್ದ ನನಗೆ, ಹಾಗೆ ಮೇಷ್ಟ್ರು ಹೊಡೆದದ್ದರಿಂದ ದಿಗ್ಬ್ರಾಂತನಾಗಿ ನೋಡುತ್ತಿದ್ದೆ. ನಾನು ಸಾವರಿಸಿಕೊಳ್ಳಲು ಬಹಳ ಸಮಯ ಬೇಕಾಯಿತು. ಕಣ್ಣಿನಿಂದ ನೀರು ಸುರಿಯುತ್ತಿತ್ತು. ನೋಟ್ ಬುಕ್ ನನ್ನಿಂದ ಇಪ್ಪತ್ತೈದು ಮೀಟರ್‌ನಷ್ಟು ದೂರ ಬಿದ್ದಿತ್ತು. ಹಾಳೆಗಳು ಗಾಳಿಗೆ ಹಾರುತ್ತಿದ್ದವು. ಅವರ ತರಗತಿ ಮುಗಿದ ಮೇಲೆ ಈ ಹಿಂದೆ ನಮಗೂ ಹೀಗೆ ಮಾಡಿದ್ದರು ಎಂದು ನನ್ನ ಗೆಳೆಯರು ನನ್ನನ್ನು ಸಮಾಧಾನ ಮಾಡಿದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಶಾಲಾ ಕಲಿಕೆಯ ಆರಂಭದ ದಿನಗಳು…..

ಎದುರು ಮನೆಯಾದ್ದರಿಂದ ಗೃಹ ಕೆಲಸಗಳನ್ನು ಮಾಡುವಾಗ ಬರುತ್ತಿದ್ದರು. ಪ್ರತಿದಿನವು ಪಕ್ಕದಲ್ಲೆ ಕೂರಿಸಿಕೊಂಡು ಅಕ್ಷರಾಭ್ಯಾಸ ಮಾಡಿಸಿದರು. ನಾನು ಹಠಕ್ಕೆ ಬಿದ್ದವನಂತೆ ಕಲಿತೆ. ಅದೊಂದು ತಪಸ್ಸು ಎನ್ನುವಂತೆ ಕಲಿತುಕೊಂಡೆ. ಅಲ್ಲಿಂದ ನನ್ನಲ್ಲಿ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿತು. ಓದುವುದನ್ನು ಬಹಳ ಬೇಗನೆ ಕಲಿತಿದ್ದೆ. ಅಷ್ಟರಲ್ಲಾಗಲೇ ಒಂದನೆ ತರಗತಿಯ ಪುಸ್ತಕದ ಆರು ಪಾಠಗಳು ಮುಗಿದು ಹೋಗಿದ್ದವು. ಏಳನೆಯ ಪಾಠವೆ ‘ಚರಕ’ ಗಾಂಧೀಜಿಯವರ ಆದರ್ಶದ ಪ್ರತಿಬಿಂಬದಂತಿದ್ದ ನಮ್ಮ ಉಡುಪುಗಳನ್ನು ನಾವೆ ತಯಾರಿಸಿಕೊಳ್ಳಬೇಕು ಎನ್ನುವ ಸೂಚಕವಾಗಿ ನೂಲು ನೇಯುತಿದ್ದ ಚರಕದ ಮುಂದೆ ಕುಳಿತಿದ್ದ ಚಿತ್ರ ನಮ್ಮನ್ನು ಆಕರ್ಷಿಸಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಮಾರುತಿ ಗೋಪಿಕುಂಟೆ ಹೊಸ ಸರಣಿ “ಬಾಲ್ಯದೊಂದಿಗೆ ಪಿಸುಮಾತು” ಆರಂಭ

ಮನೆಯಲ್ಲಿ ಬಹಳ ತುಂಟನಾಗಿದ್ದ ನನ್ನ ಕಾಟಕ್ಕೆ ನಮ್ಮಜ್ಜಿ ಇವನ್ನ ‘ಇಸ್ಕೂಲಿಗೆ ‘ಸೇರುಸ್ಬೇಕು ಮನೇಗಿದ್ರೆ ಯಾವಾಗಲೂ ಜಗಳ ಮಾಡ್ತಿರ್ತಾನೆ” ಎಂದು ದೂರು ಹೇಳುತ್ತಿದ್ದಳು. ನಮ್ಮಪ್ಪ ”ಆರು” ವರ್ಷದವರೆಗೂ ಇಸ್ಕೂಲಿಗೆ ಸೇರುಸ್ಕಮಲ್ಲ ಸುಮ್ನೆ ಯಾಕ್ ಬಡ್ಕೋಮ್ತೀಯ” ಎಂದು ಆಗಾಗ ಅಜ್ಜಿಯನ್ನೆ ಗದರಿಸುತ್ತಿದ್ದ. ಇವನ ವಾರಗೆಯವರೆಲ್ಲಾ ಇಸ್ಕೂಲಿಗೆ ಹೋಗ್ತಾರೆ ಇವನ ಕಾಟ ನಮ್ಗೆ ತಡೆಯೋಕಾಗಲ್ಲ ಎಂದು ಮನೆಯವರೆಲ್ಲರೂ ಹೇಳಿದಾಗ ಅಪ್ಪನಿಗೆ ಇದೆ ಸರಿ ಅನ್ನಿಸಿ ಇಸ್ಕೂಲಿಗೆ ಸೇರ್ಸೆಬಿಡೋಣ ಎಂದು ಶಾಲೆಗೆ ಕರೆದುಕೊಂಡು ಹೋಗೆಬಿಟ್ರು.
ಮಾರುತಿ ಗೋಪಿಕುಂಟೆ ಬರೆಯುವ ಹೊಸ ಸರಣಿ

Read More

ಅಜ್ಜಿ ಮತ್ತು ಹರಿದ ಹೋಳಿಗೆಯ ತುಂಡುಗಳು…

ಅಜ್ಜಿ ಹೋಳಿಗೆಯ ಮೇಲಿನ ಆಸೆ ಎಂದೂ ಬಿಟ್ಟಿರಲೆ ಇಲ್ಲ. ಯುಗಾದಿ ಹಬ್ಬದ ದಿನಗಳಲ್ಲಿ ಹೋಳಿಗೆ ಸಿಹಿ ಮಾಡುವುದು ವಾಡಿಕೆ. ಬಹುಃಶ ನಾವೆಲ್ಲಾ ಬಾಲ್ಯದ ದಿನಗಳಲ್ಲಿ ಸಿಹಿಯೂಟ ಸವಿಯುತ್ತಿದ್ದುದೆ ವರ್ಷಕ್ಕೊಮ್ಮೆ. ಮನೆಯಲ್ಲಿ ಸಿಹಿ ಮಾಡುವಷ್ಟು ಆರ್ಥಿಕ ಅನುಕೂಲತೆಯ ಕೊರತೆಯಿಂದಾಗಿ ಪಾಯಸವನ್ನಷ್ಟೇ ಮಾಡುತ್ತಿದ್ದರು. ಅಜ್ಜಿ ಎಂಬತ್ತರ ಆಸು ಪಾಸಿನಲ್ಲಿದ್ದರೂ ಇನ್ನೂ ಗಟ್ಟಿಯಾಗಿದ್ದರು ನಡಿಗೆಯಲ್ಲಿ ಸ್ವಲ್ಪ ನಿಧಾನವಿತ್ತು ಅಷ್ಟೇ.
ಮಾರುತಿ ಗೋಪಿಕುಂಟೆ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ನೆನಪಿನ ಮಳೆ ಹನಿಗಳು…

ಬದುಕು ಎಲ್ಲವನ್ನು ಮರೆಸುತ್ತದೆ ನೆನಪಿಸುತ್ತದೆ ಕೂಡ. ಭೂಮಿ ಗುಂಡಾಗಿದೆ ಅಲ್ಲವೇ. ತಿರುಗುವ ಭೂಮಿಯಲ್ಲಿ ಒಬ್ಬರಿಗೊಬ್ಬರು ಸಂದಿಸಲೇಬೇಕು. ನಮ್ಮಿಬ್ಬರ ಬೇಟಿಯಾಗಿ ಎರಡು ವರ್ಷಗಳು ಕಳೆದಿರಬೇಕು ಆಕಸ್ಮಿಕವಾಗಿ ಬಸ್ಸಿನಲ್ಲಿ ಸಿಕ್ಕಾಗ ಇಬ್ಬರು ಒಬ್ಬರಿಗೊಬ್ಬರು ನೋಡಿದರೂ ನೋಡಿಲ್ಲವೆಂಬಂತೆ ದೃಷ್ಟಿ ಬದಲಿಸಿದ್ದು ಬದುಕಿನಲ್ಲಿ ಹೀಗೂ ನಡೆಯಬಹುದು ಅನ್ನಿಸಿದ್ದು ನಿಜ. ನನ್ನೊಳಗಿನ ಮನಸ್ಸು ಯೋಚನೆಯಲ್ಲಿ ಮುಳುಗಿತ್ತು ಇಬ್ಬರಲ್ಲೂ ಗುರುತು ಸಿಗಲಾರದಷ್ಟು ಬದಲಾವಣೆಗಳೇನು ಆಗಿರಲಿಲ್ಲ.
ಮಾರುತಿ ಗೋಪಿಕುಂಟೆ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ