Advertisement

Tag: ರಂಜಾನ್ ದರ್ಗಾ

ಅಲ್ಲೀಬಾದಿಯ ಋಣ ತೀರಿತು

ಹಳ್ಳಿಯ ಹೆಣ್ಣುಮಕ್ಕಳು ಗಂಡಸರಿಗಿಂತ ಹೆಚ್ಚಿಗೆ ದುಡಿಯುತ್ತಿದ್ದರು. ಅವರು ಹೊಲದ ಕೆಲಸದ ಜೊತೆ ಮನೆಯ ಕೆಲಸವನ್ನೂ ಮಾಡಬೇಕಾಗಿತ್ತು. ತುರಿಸಿಕೊಳ್ಳಲೂ ಸಮಯವಿಲ್ಲದ ಬದುಕು ಅವರದು. ರಾತ್ರಿಯಲ್ಲಿ ಅವರು ಬೇರೆ ಹೆಂಗಸರ ಜೊತೆಗೂಡಿ ಬಯಲುಕಡೆಗೆ ಹೊರಟಾಗ ಮಾತ್ರ ಊರ ಸುದ್ದಿ ಮಾಡನಾಡಲು ಅವಕಾಶ ಸಿಗುತ್ತಿತ್ತು! ಜೊತೆಗೂಡಿ ಗುಡಿಗೆ ಇಲ್ಲವೆ ದರ್ಗಾಕ್ಕೆ ಹೋಗುವುದು ಅವರ ಖಾಸಗಿತನಕ್ಕೆ ಪೂರಕವಾಗಿತ್ತು. ಮನೆಗೆ‘ಅರಿಷಿಣ ಕುಂಕುಮ’ ಕೊಡಲು ಹೋಗುವ ಸಂದರ್ಭದಲಿ ಅವರು ತಮ್ಮ ಓರಿಗೆಯ ಹೆಣ್ಣುಮಕ್ಕಳನ್ನು ಭೇಟಿಯಾಗುತ್ತಿದ್ದರು.
ರಂಜಾನ್ ದರ್ಗಾ ಬರೆಯುವ ಸರಣಿಯ ಎಂಟನೆಯ ಕಂತು.

Read More

‘ದೇವರು ಹೆಚ್ಚಿಗೆ ಕೊಟ್ಟದ್ದು ನನ್ನದಲ್ಲ’

ಹೊಸಬರು ಹಳ್ಳಿಗೆ ಬಂದರೆ ಕಟ್ಟೆಯ ಮೇಲೆ ಕುಳಿತ ಹಿರಿಯರು ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಎಲ್ಲಿಂದ ಬಂದಿದ್ದಾರೆ, ಯಾರ ಮನೆಗೆ ಹೋಗುತ್ತಿದ್ದಾರೆ. ಬಂದ ಕಾರಣವೇನು, ಅವರ ಕುಲಗೋತ್ರ ಯಾವುದು, ಆ ಆಗಂತುಕರ ಊರಿನಲ್ಲಿ ತಮಗೆ ಪರಿಚಯವಿದ್ದವರ ಕುರಿತು ತಿಳಿದುಕೊಳ್ಳುವುದು, ಆ ಊರಿನ ಜೊತೆಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಳ್ಳುವುದು ಮುಂತಾದವು ನಡೆದೇ ಇರುತ್ತಿದ್ದವು.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಏಳನೆಯ ಕಂತು.

Read More

ಅಲ್ಲೀಬಾದಿಯ ಮೃಗಶಿರ ಮಳೆಹಾಡ ನೆನಪು

ಮಣ್ಣೆತ್ತಿನ ಅಮಾವಾಸೆ ದಿನ ಗುಳ್ಳವ್ವ ಕೂಡುತ್ತಾಳೆ. ಇವಳು ಐದು ವಾರ ಇರುತ್ತಾಳೆ. ಹದಿಹರೆಯದ ಹುಡುಗಿಯರು ಇದರಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವರು. ಅವರ ಜೊತೆ ಗುಳ್ಳವ್ವ ಐದು ವಾರ ಇರುವುದರಿಂದ ಭಾವನಾತ್ಮಕ ಸಂಬಂಧ ಬೆಳೆದಿರುತ್ತದೆ. ವಾರದ ಕೊನೆಯ ದಿನ ಹೊಲದಲ್ಲಿ ಹುಗಿಯುವಾಗ ಇಲ್ಲವೇ, ಗಿಡದ ಮೇಲೆ ಕೂಡಿಸಿ ಬರುವಾಗ ಬಿಕ್ಕಿಬಿಕ್ಕಿ ಅಳುತ್ತಾರೆ. ಗುಳ್ಳವ್ವ ಕೂಡ ಮಳೆಗೆ ಸಂಬಂಧಿಸಿದ ದೇವತೆಯಾಗಿದ್ದಾಳೆ.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿ

Read More

ಜಾತಿಯೆಂಬ ತಡೆರೇಖೆಗಳನ್ನು ದಾಟಿಕೊಂಡು..

ಬಾಬು ಮಾಮಾನ ಗೆಳೆಯನೊಬ್ಬ ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದ. ಎತ್ತಿ ಆಡಿಸುತ್ತಿದ್ದ. ಆತನೊಮ್ಮೆ ಬಾವಿಯಿಂದ ನೀರು ತುಂಬಿಕೊಂಡು ಹೋಗುತ್ತಿದ್ದುದು ಕಾಣಿಸಿತು. ಅವನನ್ನು ಕಂಡೊಡನೆ ಖುಷಿಯಿಂದ ಅವನ ಹಿಂದೆ ಓಡಿದೆ. ಅವನ ಹಳದಿ ರುಮಾಲಿನ ಚುಂಗವನ್ನು ಹಿಡಿದು ‘ಮಾಮಾ’ ಎಂದು ಕೂಗಿದೆ. ಆತನಿಗೆ ಬಹಳ ಸಿಟ್ಟು ಬಂದಿತು. ನನ್ನ ಕಪಾಳಿಗೆ ಹೊಡೆದು ರಸ್ತೆ ಮೇಲೆ ನೀರು ಚೆಲ್ಲಿ ಮತ್ತೆ ಕೊಡ ತುಂಬಲು ಬಾವಿಯ ಮೆಟ್ಟಿಲುಗಳನ್ನು ಇಳಿಯ ತೊಡಗಿದ.”

Read More

ಜಾತಿಗಿಂತ ನೀತಿಗೇ ಹೆಚ್ಚಿನ ಬೆಲೆಯಿದ್ದ ಕಾಲ

ಬಯಲಾಟದಲ್ಲಿ ದ್ರೌಪದಿ ಪಾತ್ರದ ಗಣಪು ಬಂದು ಒಂದಿಷ್ಟು ಕುಣಿದು ಮಾತನಾಡುವಾಗ ಆತನ ಧ್ವನಿ ಒಡೆದದ್ದು ಗೊತ್ತಾಯಿತು. ರಂಗತಾಲೀಮದಲ್ಲಿ ಮಾತಾಡಿ ಮಾತಾಡಿ ಆತ ಧ್ವನಿ ಕಳೆದುಕೊಂಡಿದ್ದಾನೆಂದು ಅಜ್ಜಿ ನನಗೆ ಹೇಳಿದಳು. ಅಜ್ಜಿಯ ಲಕ್ಷ್ಯ ಹೆಚ್ಚಾಗಿ ಅವನಿಗೆ ಹಾರ ಹಾಕಿ ಒಂದು ರೂಪಾಯಿ ಬಹುಮಾನ ಕೊಡುವುದರ ಕಡೆಗೆ ಇತ್ತು. ಎರಡನೇ ಸಲ ರಂಗದ ಮೇಲೆ ಬಂದಾಗ ಹಾರ ಹಾಕಿ ಬಹುಮಾನ ಕೊಡುವುದಕ್ಕಾಗಿ..”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ