Advertisement

Tag: ಸಿನಿಮಾ

ಬದುಕೇ ಒಂದು ಓಟದ ಸ್ಪರ್ಧೆ…

ಚಿತ್ರಕ್ಕೆ ನಮ್ಮ ಪ್ರವೇಶ, ಗಡಿಯಾರವನ್ನು ತಲೆಯ ಮೇಲಿಟ್ಟುಕೊಂಡಿದ್ದ ಮರದ ಮುಖದ ಅಷ್ಟಾವಕ್ರ ಪ್ರಾಣಿ ಬಾಯಿ ತೆರೆದು ಉಂಟಾದ ಕತ್ತಲೆಯಲ್ಲಿ ಕ್ಯಾಮೆರಾ ಜೂ಼ಮ್-ಇನ್ ಮಾಡುವ ಮೂಲಕ. ಆಗ ಎದುರಾಗುತ್ತದೆ ಒಂದಕ್ಕೊಂದು ಸಂಬಂಧ ಮತ್ತು ಸಾತತ್ಯವಿರದ ಪ್ರಶ್ನೆ ಮತ್ತು ಉತ್ತರಗಳನ್ನು ಹುಡುಕಾಡುವುದೇ ಮನುಷ್ಯನ ಬದುಕು ಎನ್ನುವುದನ್ನು ಟಿ. ಎಸ್. ಎಲಿಯಟ್ ಮತ್ತು ಹೆರ್‌ಬರ್ಗರ್ ಅವರಿಂದ ಉದ್ಧರಿಸಿದ ಸಾಲುಗಳು ಮೂಡಿ, ಅಡ್ಡಾದಿಡ್ಡಿ ಓಡೋಡುತ್ತಲಿರುವ ಜನಜಂಗುಳಿ ಮರೆಯಾಗುತ್ತಿದ್ದಂತೆ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ, ಟೆಲಿಫೋನ್ ಬೂತಿನಲ್ಲಿ ಮಾನಿ ಲೋಲಾಗೆ ಮಾತಾಡುವ ದೃಶ್ಯದಲ್ಲಿ ಘಟನೆಯ ಮೂಲಕ್ಕೆ ಪರಿಚಿತಗೊಳ್ಳುತ್ತೇವೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ ಸರಣಿ

Read More

ಭಾರತದ ಮೊದಲ ಮಕ್ಕಳ ಮೂಕಿ ಚಿತ್ರ ʻದಿ ಗಾರ್ಡ್‌ʼ

ಮಾತುಗಳು ಇರಬೇಕಾದ ಜಾಗದಲ್ಲಿ ಭಾವ ಸಂವೇದನೆ ಮತ್ತು ಸಂಜ್ಞೆಗಳನ್ನು ಪ್ರತಿಮಾತ್ಮಕವಾಗಿ ಸೃಷ್ಟಿಸಿ ಮೌನ ಪ್ರತಿಮೆ, ಭಾವರೂಪಕಗಳಲ್ಲೇ ಕತೆ ಹೇಳುವ ಪ್ರಯೋಗದಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಇದು ಹಿರಿಯರ ಚಿತ್ರವಾಗಿದ್ದರೂ ಅಷ್ಟೇನೂ ಮಹತ್ವ ಅಥವಾ ಹೊಸತನದ ವಿಶೇಷತೆ ಇದಕ್ಕೆ ಸಲ್ಲುತ್ತಿರಲಿಲ್ಲ. ಈ ರೀತಿಯ ಮಕ್ಕಳ ಚಿತ್ರವನ್ನು ನಿರ್ಮಿಸಿದ ದಾಖಲೆ ಭಾರತೀಯ ಚಲನಚಿತ್ರ ಇತಿಹಾಸದಲ್ಲೇ ಇಲ್ಲ. ಹಾಗಾಗಿ ʻದಿ ಗಾರ್ಡ್‌ʼ ಚಿತ್ರ ಆ ಸ್ಥಾನವನ್ನು ತುಂಬಿ ಕನ್ನಡದ ಹೆಚ್ಚುಗಾರಿಕೆ ಮೆರೆದಿದೆ.
ಉಮೇಶ್‌ ಬಡಿಗೇರ ನಿರ್ದೇಶನದ ಭಾತರದ ಮೊದಲ ಮಕ್ಕಳ ಮೂಕಿ ಚಿತ್ರ ʻದಿ ಗಾರ್ಡ್‌ʼ ಕುರಿತು ಕುಮಾರ ಬೇಂದ್ರೆ ಬರಹ

Read More

ಏಕಾಂಗಿಯ ಸ್ವಗತಗಳು…

ಪ್ರಕಾಶನ ಸಂಸ್ಥೆಯ ಸಹಾಯಕಿ ಅವನ ಬಗ್ಗೆ ಹಿತವಾದ ಭಾವನೆಯಿಂದ ಪ್ರತಿಕ್ರಿಯಿಸುತ್ತಾಳೆ. ಇಂಟವ್ಯೂ ಮುಗಿದ ಮೇಲೆ ಭೇಟಿಯಾಗಲು ಇಷ್ಟಪಡುತ್ತಾಳೆ. ಪ್ರಕಾಶನದ ಒಡೆಯನಿಗೆ ಮಾತು ಮುಂದುವರಿಸಲು ಇಷ್ಟವಿರುತ್ತದೆ. ಆದರೆ ಆಂಡರ್ಸ್‌ನ ಶಿಥಿಲವಾದ ಅಂತರಂಗ ಅವನನ್ನು ವಿಪರೀತವಾಗಿ ವರ್ತಿಸುವಂತೆ ಮಾಡುತ್ತದೆ. ಅವನಿಂದ ಸಿವಿಯನ್ನು ಕಸಿದುಕೊಂಡು ಹಠಾತ್ತನೆ ಹೊರಡುತ್ತಾನೆ.
ಎ.ಎನ್. ಪ್ರಸನ್ನ ಬರೆಯುವ ಸಿನಿಮಾದ ಸರಣಿ

Read More

ಸಿನೆಮಾ ಜಗತ್ತಿನ ಒಳಹೊರಗು…

ಗಾಸಿಪ್ ಗ್ಲಾಮರಗಳ ಹೊರತಾಗಿಯೂ ಆ ಕಲಾವಿದರೂ ಮನುಷ್ಯರು, ನಮ್ಮಂತಹುದೇ ಅಂತಃಕರಣ ಉಳ್ಳವರು ಎಂಬ ಕನಿಷ್ಠ ಪ್ರಜ್ಞೆಯಿಲ್ಲದೇ ಜನರು ಪ್ರತಿಕ್ರಿಯಿಸುತ್ತಾರೆ. ಸಿನೆಮಾದವರೆಂದರೆ ಕೇವಲ ಪರದೆಯ ಮೇಲಿನ ಪಾತ್ರಗಳು ಮಾತ್ರ ಎಂದು ಗ್ರಹಿಸುವ ಮನಸ್ಸುಗಳಿಂದ ಬೇರೆನನ್ನು ನಿರೀಕ್ಷಿಸಲು ಸಾಧ್ಯ? ಎಂಬುದನ್ನು “ಬ್ರೇಕಿಂಗ್ ನ್ಯೂಸ್‍ಗಿಂತ ಬದುಕು ದೊಡ್ಡದು” ಎಂಬ ಪ್ರಬಂಧದಲ್ಲಿ ಹೆಸರಾಂತ ಕಲಾವಿದರೇ ಅನುಭವಿಸಿದ ನೋವಿನ ಪ್ರಸಂಗಗಳನ್ನು ಕಟ್ಟಿಕೊಡುತ್ತಾರೆ ಲೇಖಕರು.
ಎನ್.ಎಸ್. ಶ್ರೀಧರ ಮೂರ್ತಿಯವರ ಪ್ರಬಂಧಗಳ ಸಂಕಲನ “ಅಂದದ ಹೆಣ್ಣಿನ ನಾಚಿಕೆ”ಯ ಕುರಿತು ನಾಗರೇಖಾ ಗಾಂವಕರ ಬರಹ

Read More

ಮಹಾಮರ್ಕಟ ಮನಸ್ಸಿನ ಸುತ್ತ…

ಮಾರ್ಟಿನ್‌ ಸಾಮಾನ್ಯರಂತಿರಲು ಮತ್ತು ಕಿರು ಪ್ರಮಾಣದ ಸಾವಧಾನದಿಂದಿರಲು ಬೇಕಾದ ಆಂತರಿಕ ಜೀವರಸವೇ ಇಲ್ಲದವನ ಹಾಗೆ ಕಾಣುತ್ತಾನೆ.. ಯಾವ ಬಗೆಯಲ್ಲಿ ಯೋಚಿಸಿದರೂ ಅವನ ಬುದ್ಧಿ, ಮನಸ್ಸಿನ ಎಳೆಗಳಲ್ಲಿ ಹಿಂಸಿಸುವುದಲ್ಲದೆ ಬೇರೆ ಬಣ್ಣಗಳ ಛಾಯೆಯೇ ಇರುವಂತೆ ಕಾಣುವುದಿಲ್ಲ. ಅವನು ಇತರ ಸಾಮಾನ್ಯರೊಂದಿಗೆ ಹೋಲಿಸಿಕೊಳ್ಳುವ ಮಾತಂತೂ ಹತ್ತಿರ ಸುಳಿಯುವ ಹಾಗೆಯೇ ಇರುವುದಿಲ್ಲ. ಅವನು ಸದಾಕಾಲ ಉಳಿದವರಿಗಿಂತ ಭಿನ್ನವಾಗಿ ರಚಿಸಿಕೊಂಡ ಮತ್ತು ಅದನ್ನೇ ಸಹಜವೆಂದು ನಂಬಿರುವ ಮನೋನೆಲೆಯಲ್ಲಿರುವ ವ್ಯಕ್ತಿ.
ಎ.ಎನ್. ಪ್ರಸನ್ನ ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ