Advertisement

Tag: ಸುಮಾವೀಣಾ

ಸಾದೃಶಾಭಾಸ ಪದಗಳೊಂದಿಗೆ ಸೆಣಸಾಟ: ಸುಮಾವೀಣಾ ಸರಣಿ

ಮಕ್ಕಳಿಗೆ ಕನ್ನಡ ಪುಸ್ತಕವನ್ನು ಓದುವುದೆಂದರೆ ಬಹಳ ತ್ರಾಸಿನ ಕೆಲಸ. ಕಾರ್ಟೂನನ್ನು ನೋಡಿದ ಗುಂಗಿನಲ್ಲಿ ಇದ್ದ ಮಗುವೊಂದು ಸಭಾಸದ ಎಂದೋದಲು ಸಬಾಸ್ಟಿಯನ್ ಎಂದು ಓದಿದ್ದು ನೆನಪಾಗುತ್ತದೆ. ಎಲೆ ಅಡಿಕೆ ಮೆಲ್ಲುತ್ತಿದ್ದ ಎಂದು ಓದಬೇಕಾದ್ದನ್ನು ಎಲೆ ಅಡಿಕೆ ಮೇಯುತ್ತಿದ್ದ ಎಂದರೆ ಆಭಾಸವೇ ತಾನೆ! ರಂಗ ನಾಯಕಿ > ಲಂಗನಾಯಕಿ, ಆಸ್ಥಾನದ ದಾಸಿ ಹಾಸನದ ಆಶ ಆಂದರೆ ರಕ್ಷಿಸ ಬೇಕು ಎನ್ನಲು ಹೋಗಿ ರಸ್ಕ್ ಬೇಕು ಎಂದರೆ ಎಲ್ಲಿಕೊಡಕ್ಕಾಗುತ್ತೆ?
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಏಳನೆಯ ಬರಹ

Read More

ಊರುಗಳ ಹೆಸರಿನ ಸುತ್ತ: ಸುಮಾವೀಣಾ ಸರಣಿ

ವಾರದ ಸಂತೆ ಆಗುವ ಅದೇ ದಿನದ ಹೆಸರುಗಳು ಊರುಗಳಾಗಿವೆ. ಸೋಮವಾರಪೇಟೆ, ಶನಿವಾರಸಂತೆ, ಶುಕ್ರವಾರಸಂತೆ ಇತ್ಯಾದಿಗಳು. ‘ಅಂಗ’ಡಿ ಎಂಬ ಹೆಸರನ್ನು ಕಡೆಯಲ್ಲಿ ಹೊಂದಿರುವ ಬೆಳ್ತಂಗಡಿ, ಉಪ್ಪಿನಂಗಡಿ, ಹಳೆಯಂಗಡಿ, ಹಟ್ಟಿಯಂಗಡಿ ಎಂಬ ಊರುಗಳಿವೆ. ‘ಅಂಗಡಿ’ ಎನ್ನುವ ಹೆಸರಿಗೂ ಹೊಯ್ಸಳ ಸಾಮ್ರಾಜ್ಯಕ್ಕೂ ಅವಿನಾಭಾವ ನಂಟು. ಇದಕ್ಕೂ ಅನನ್ಯ ಹೆಸರಿನ ಊರುಗಳಿವೆ. ರಸ್ತೆಯಲ್ಲಿರುವ ಪಾಲವನ್ನು ಸೇರಿಸಿಕೊಂಡು ಜೋಡುಪಾಲವೆಂದೂ ಕರೆಯುತ್ತಾರೆ. ‘ಪಾಲ’ ಅಂದರೆ ಸಂಕ /ಕಾಲುಸಂಕ ಅರ್ಥಾತ್ ಚಿಕ್ಕ ಸೇತುವೆ ಎಂದರ್ಥ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಆರನೆಯ ಬರಹ

Read More

ಅಂಕಿಗಳ ಲೋಕದಲ್ಲಿ: ಸುಮಾವೀಣಾ ಸರಣಿ

‘420’ ಕೂಡ ಒಳ್ಳೆಯ ಸಂಖ್ಯೆ. ನಮ್ಮ ಇಂಡಿಯನ್ ಪಿನೆಲ್ ಕೋಡ್‌ನಲ್ಲಿ ಚೀಟಿಂಗ್ ಫೋರ್ಜರಿ ಕೇಸುಗಳು ದಾಖಲಾಗುವುದು ‘420’ ಸೆಕ್ಷನ್ನಿನ ಅಡಿಯಲ್ಲಿ. 1860 ಅಕ್ಟೋಬರ್‌ 6 ಇಂಡಿಯನ್ ಪಿನಲ್ ಕೋಡ್ ಬ್ರಿಟಿಷರಿಂದ ರಚಿಸಲ್ಪಟ್ಟದ್ದು. ಇದರಲ್ಲಿ ಎಲ್ಲಾ ರೀತಿಯ ಪ್ರಕರಣಗಳು ಬರುತ್ತವೆ. ಮೋಸ ಮಾಡಿದಾಗ ಹಣದ ವಿಚಾರದಲ್ಲಿ, ಆಸ್ತಿಗೆ ಸಂಬಂಧಿಸಿದಂತೆ ಮೋಸ ಮಾಡಲು ಪ್ರಚೋದನೆ ನೀಡಿದ ಪ್ರಕರಣಗಳಲ್ಲಿ ಸಿಲುಕಿದಾಗ ಆ ವ್ಯಕ್ತಿಗೆ ‘420’ ಕೇಸು ದಾಖಲಾಗುತ್ತದೆ. ಇದರಲ್ಲಿ 7 ವರ್ಷಗಳವರೆಗೂ ಶಿಕ್ಷೆ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ‘420’ ನಂಬರನ್ನು ಬಯ್ಯುತ್ತಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಐದನೆಯ ಬರಹ

Read More

ವಿವಿದಾರ್ಥದಿ ಪದನಾರಿ: ಸುಮಾವೀಣಾ ಸರಣಿ

ಏನೋ ಹುಷಾರಿಲ್ವೇನೋ ಎನ್ನುತ್ತಾ… ಟೈಂ ಆಗ್ತಾ ಇದೆ ಎಷ್ಟು ಸಾಧ್ಯನೋ ಅಷ್ಟು ಬರಿಯಮ್ಮ! ಬರಿ! ಎನ್ನುತ್ತಲೇ ಇದ್ದೆ ಅವಳು ‘ನೋ’ ‘ನೋ’ ಎನ್ನುವಂತೆ ತಲೆ ಆಡಿಸಿದಳು ಕಡೆಗೆ ಅವಳೆ “ಏನೂ ಪ್ರಿಪೇರ್ ಆಗಿಲ್ಲ ಮೇಡಮ್ ಹೇಗ್ ಬರೀಲಿ?” ಎಂದಾಗಂತೂ ಈಕೆ ಎಷ್ಟು ಸಾಧ್ಯನೋ ಅಷ್ಟು ಬರಿಯಮ್ಮ ಎಂದದ್ದಕ್ಕೆ ಸಾಧ್ಯ… ನೋ! ನೋ ಸಾಧ್ಯ …! ಎಂದು ತಲೆ ಆಡಿಸಿರುವಳಲ್ಲ… ನಿಜ!
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ನಾಲ್ಕನೆಯ ಬರಹ

Read More

ಕೀರು ಟೇಸ್ಟ್: ಸುಮಾವೀಣಾ ಸರಣಿ

ಇನ್ನು ದೊಡ್ಡವರು ತಪ್ಪು ಬರೆಯುವುದಿಲ್ಲವೆ… ಅವರೂ ಬರೆಯುವರು ಚನ್ನೇಗೌಡ ಬರೆಯಲು ಚೆನ್ನೈಗೌಡ ಎಂದೊಮ್ಮೆ ಕೈ ತಪ್ಪಿನಿಂದ ಬಂದಿತ್ತು. ಒಮ್ಮೆ ಹೀಗೆ…. ಹಿತೈಷಿಗಳೊಬ್ಬರು ಬಹಳ ಸಂತೋಷದಿಂದ ವಾಟ್ಸ್ಆಪ್‌ಲ್ಲಿ ಸಂದೇಶಿಸುತ್ತಿದ್ದರು ಕಡೆಗೆ ಆದಷ್ಟು ಬೇಗ ಆಗಲಿ ಎಂದು ಟೈಪಿಸುವುದರ ಬದಲು ಆದಷ್ಟು ಬೇಗ ಅಗಲಿ ಎಂದಿದ್ದನ್ನು ನೋಡಿ ಕಣ್ ಕಣ್ ಬಿಟ್ಟಹಾಗೆ ಇನ್ನೊಬ್ಬರು ನಿಮ್ಮ ಬರಹ ಸತ್ವಯುತವಾಗಿದೆ ಎನ್ನುವ ಬದಲು ಸತ್ತಂತಿದೆ ಎಂದಿದ್ದರು…
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಮೂರನೆಯ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ