Advertisement

Tag: DR. Vinathe Sharma

ಕನ್ನಡತನ ಜ್ವಲಿಸುವ ವಿಶೇಷ ತಿಂಗಳು: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾದಲ್ಲಿ ಹುಟ್ಟಿ ಬೆಳೆಯುವ ಕನ್ನಡಿಗ ದಂಪತಿಗಳ ಮಕ್ಕಳು ಕನ್ನಡದಲ್ಲಿ ಮಾತನಾಡುವುದು ಕಡಿಮೆ. ಒಂದುವೇಳೆ ಅವರು ಕಷ್ಟಪಟ್ಟು ಪ್ರಯತ್ನಿಸಿದರೂ ಅವರುಗಳು ಪ್ರತಿದಿನವೂ ಮಾತನಾಡುವ ಆಸ್ಟ್ರೇಲಿಯನ್ ಇಂಗ್ಲಿಷ್ ಉಚ್ಚಾರದ ಪ್ರಭಾವದಲ್ಲಿ ತಮ್ಮ ಕನ್ನಡವನ್ನು ಹೊರಡಿಸಿದಾಗ ಮಿಶ್ರಿತ ಭಾವಗಳು ಏಳುತ್ತವೆ. ಕರ್ನಾಟಕದಲ್ಲಿಯೇ ಹುಟ್ಟಿ ಕೆಲವರ್ಷ ಅಪ್ಪಟ ಕನ್ನಡತನದಲ್ಲಿ ಅಲ್ಲಿಯೇ ಬೆಳೆದು ತಮ್ಮ ಬಾಲ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಬರುವ ಮಕ್ಕಳು ಕೆಲವೇ ವರ್ಷಗಳಲ್ಲಿ ಆಸ್ಟ್ರೇಲಿಯನ್ ಇಂಗ್ಲಿಷ್ – ಕನ್ನಡವನ್ನು ರೂಢಿಸಿಕೊಳ್ಳುತ್ತಾರೆ. ಅಪ್ಪ-ಅಮ್ಮ ಕನ್ನಡದಲ್ಲಿ ಮಾತನಾಡಿಸುವಾಗ ಈ ಮಕ್ಕಳು ಇಂಗ್ಲೀಷಿನಲ್ಲಿ ಉತ್ತರಿಸುವುದು ಸರ್ವೇಸಾಮಾನ್ಯ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಹಣದುಬ್ಬರ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಕಥೆಗಳು: ವಿನತೆ ಶರ್ಮ ಅಂಕಣ

ಒಂದು ರೀತಿಯಲ್ಲಿ ನೋಡುವುದಾದರೆ, ಈ ಶಿಕ್ಷಣ ಸಾಲವನ್ನು ನೇರವಾಗಿ ವಿದ್ಯಾರ್ಥಿಯೇ ಮುಂದೆ ಉದ್ಯೋಗಸ್ಥನಾದ ಮೇಲೆ ಕಟ್ಟುವುದರಿಂದ ಪೋಷಕರಿಗೆ ಅವನ ಶಿಕ್ಷಣದ ಶುಲ್ಕದ ಹೊರೆ ತಗುಲುವುದಿಲ್ಲ. ಇನ್ನೊಂದು ರೀತಿಯಲ್ಲಿ ನೋಡಿದರೆ, ಅಯ್ಯೋ ಪಾಪ ಕೇವಲ 18 ವರ್ಷ ವಯಸ್ಸಿನಿಂದಲೇ ಈ ಕಿರಿಯರು ಸಾಲಕ್ಕೆ ಸಿಲುಕುತ್ತಾರಲ್ಲಾ ಎಂದು ಬೇಸರವಾಗುತ್ತದೆ. ಹಾಗೆ ವ್ಯಥೆ ಪಡದೆ ಪೋಷಕರೇ ತಮ್ಮ ವಿದ್ಯಾರ್ಥಿಗಳ ಶಿಕ್ಷಣಶುಲ್ಕವನ್ನು ಕಟ್ಟಬಹುದು, ಆದರೆ ಸರಾಸರಿ ತಿಂಗಳ ಸಂಬಳಕ್ಕೆ ಹೋಲಿಸಿದರೆ ಶಿಕ್ಷಣದ ಫೀಸ್ ಬಲು ದುಬಾರಿ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಸಂಗೀತ-ನೃತ್ಯ ರೂಪಕದೊಳಗೆ ಎಲ್ಲರಿಗೂ ಸಲ್ಲುವ ಅಮೆರಿಕೆಯ

ಹೊಸ ದೇಶವನ್ನು ರೂಪಿಸಲು ಹೆಣಗಾಡುತ್ತಿದ್ದ ತನ್ನ ನಾಯಕ ಜಾರ್ಜ್ ವಾಷಿಂಗ್ಟನ್ ಅವರಿಗೆ ತೋಳ್ಬಲ ಕೊಟ್ಟು ರಾಜಕೀಯದಲ್ಲಿನ ಭುಜಬಲನಾದ. ಹೊಸ ಅಮೆರಿಕಾದ ಮೊಟ್ಟಮೊದಲ ಅಧ್ಯಕ್ಷರಾದ ವಾಷಿಂಗ್ಟನ್ ಅವರ ಸರಕಾರದಲ್ಲಿ ಪ್ರಮುಖ ಪದವಿಗಳನ್ನು ನಿರ್ವಹಿಸುತ್ತಾ ತನ್ನನ್ನು ತಾನೇ ದೇಶೀಯ ಮಟ್ಟದಲ್ಲಿ ಒಬ್ಬ ನಂಬಿಕೆಯ ರಾಜಕಾರಣಿ, ರಾಜನೀತಿ ತಜ್ಞನಾಗಿ ರೂಪಿಸಿಕೊಂಡ ಹ್ಯಾಮಿಲ್ಟನ್ ತನ್ನ ಅಲ್ಪಾಯಸ್ಸಿನ ಕಾಲದಲ್ಲಿ ಅಮೆರಿಕಾವನ್ನು ಒಂದು ಸುಸಂಸ್ಥಿತ ದೇಶವನ್ನಾಗಿ ರೂಪಿಸಲು ಅನೇಕ ಮೈಲಿಗಲ್ಲುಗಳನ್ನು ನೆಟ್ಟಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಮಳೆಬೆಳೆ, ಸಂತೋಷ, ನೆಮ್ಮದಿಗಳ ಕಣಜ

ಕಳೆದ ಇಡೀ ಬೇಸಿಗೆಯಲ್ಲಿ ನಮ್ಮ ರಾಣಿರಾಜ್ಯದಲ್ಲಿ ಮಳೆ ಎಂಬುದು ಮರೀಚಿಕೆಯಾಗಿತ್ತು. ಬೇಸಿಗೆ ಬರುವುದಕ್ಕೂ ಮುನ್ನ ಸರ್ಕಾರವು ಬರಲಿರುವ ಚಂಡಮಾರುತಗಳ ಬಗ್ಗೆ, ಮಳೆಪ್ರವಾಹಗಳ ಬಗ್ಗೆ ಅದೇನೆಲ್ಲಾ ಎಚ್ಚರಿಕೆ ಕೊಟ್ಟಿತ್ತು ಎಂದರೆ ದೂರಪ್ರವಾಸಕ್ಕೇನಾದರೂ ಹೋದರೆ ಮನೆಕಡೆ ಪರಿಸ್ಥಿತಿ ಏನಪ್ಪಾ ಎಂದೆಲ್ಲ ಚಿಂತೆಯಾಗಿತ್ತು. ಹಾಗೇನೂ ಆಗದೆ ಕಡೆಗೆ ನೆಟ್ಟಗೊಂದು ಸರಿಯಾದ ಮಳೆಯೂ ಬೀಳದೆ, ಬೇರೊಂದು ತರಹದ ಚಿಂತೆಯಾಗಿತ್ತು. ಬಿಸಿಲು ಹೆಚ್ಚಾಗಿ, ಮಳೆನೀರು ಕೊಯ್ಲಿನ ಟ್ಯಾಂಕ್ ಪೂರಾ ಖಾಲಿಯಾಗಿ, ಏನೊಂದೂ ತರಕಾರಿ ಬೆಳೆಯಲಿಲ್ಲ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ

Read More

‘ಇಂಡೀಜಿನಸ್ ವಾಯ್ಸ್’ – ಸಮತೆಯತ್ತ ಆಸ್ಟ್ರೇಲಿಯಾ

ದೇಶದ ಮೂಲಜನರಿಗೆ ಸಂಬಂಧಿಸಿದ್ದರೂ 55 ವರ್ಷಗಳ ನಂತರ ಪ್ರತಿಯೊಬ್ಬ ಆಸ್ಟ್ರೇಲಿಯನ್ ವಯಸ್ಕ ಪ್ರಜೆಯೂ ಕಡ್ಡಾಯವಾಗಿ ಮತ ಚಲಾಯಿಸಬೇಕಾದ, ದೇಶದ ಸಂವಿಧಾನಕ್ಕೆ ತಿದ್ದುಪಡಿ ತರಲು ಕೇಳಬೇಕಿದ್ದ ಅತ್ಯಂತ ಮುಖ್ಯವಾದ ಪ್ರಶ್ನೆಯನ್ನು ಅವರು ಅಧಿಕೃತವಾಗಿ ಬಿಡುಗಡೆ ಮಾಡುವವರಿದ್ದರು. ತಮ್ಮ ಬಿಳಿಯ ಜನರಿಗೆ ಸಾರಾಸಾಗಾಟಾಗಿ, ಯಾವುದೇ ಅಡ್ಡಿಗಳಿಲ್ಲದೆ ‘ಸ್ವಾಭಾವಿಕವಾಗಿ’ ಲಭ್ಯವಿರುವ ಸ್ವಯಂ-ನಿರ್ಣಯದ ಹಕ್ಕು ಇದೇ ದೇಶದ ಮೂಲಜನರಿಗೆ ಇಲ್ಲವಾಗಿರುವುದನ್ನು ಅವರು ಎತ್ತಿ ಹಿಡಿದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ