ಅಪ್ಪಿಕೋ ಭೂತಾಯಿ ಗೌರಾದೇವಿ!: ಸುಕನ್ಯಾ ಕನಾರಳ್ಳಿ ಅಂಕಣ
ಅಧಿಕಾರಿಗಳಿಗೆ ಈಗ ಪೇಚಿಗಿಟ್ಟುಕೊಂಡಿತು. ಸದ್ಯಕ್ಕೆ ಅಲ್ಲಿಂದ ತೊಲಗಿ ನಂತರ ಬಂದರೆ ಹೇಗೆ? ಆದಿವಾಸಿ ಹೆಂಗಸರಿಗೆ ಸರಕಾರದ ಕುತಂತ್ರಗಳೇನೂ ಅಪರಿಚಿತವಲ್ಲ. ಅವರ ಆಯುಧಗಳನ್ನು ಹೊತ್ತೊಯ್ದು ಕೊಡುವ ನೆಪದಲ್ಲಿ ತಾತ್ಕಾಲಿಕವಾಗಿ ಕಟ್ಟಿದ್ದ ಸೇತುವೆಯನ್ನು ಅದೇ ಅಸ್ತ್ರಗಳಿಂದ ಉರುಳಿಸಿದಾಗ ಸರಕಾರ ಇತ್ತ ಕಡೆಯಲ್ಲಿ, ಇವರೆಲ್ಲ ಅತ್ತ ಕಡೆಯಲ್ಲಿ. ಇಡೀ ರಾತ್ರಿ ಸರಕಾರದ ಮಂದಿ ಮತ್ತೆ ಕಾಡೊಳಗೆ ನುಸುಳದಂತೆ ಹೆಂಗಸರು ಕಾವಲಿದ್ದರು. ಮಾರನೆಯ ದಿನ ಹಳ್ಳಿಗೆ ಹಿಂತಿರುಗಿದ ಗಂಡಸರಿಗೆ ಆಶ್ಚರ್ಯ ಕಾದಿತ್ತು. ಮಾರ್ಚ್ ೩೧, ೧೯೭೪ ರಂದು ಕಣಿವೆಯಲ್ಲಿ ತಮಟೆ ಕಹಳೆಗಳ ಸಮೇತ ಬೃಹತ್ ಪ್ರದರ್ಶನ ನಡೆಯಿತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹನ್ನೆರಡನೆಯ ಬರಹ
