Advertisement

Tag: Kannada Literature

ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ

ಎಲ್ಲ ಧರ್ಮಗಳಾಚೆ ಮನುಷ್ಯರ ಮನಸ್ಸುಗಳು ಒಂದೇ ಆಗಿರುತ್ತವೆ! ಒಡವೆಗಳು ಸಂಕೋಲೆಗಳಾಗುವ ಹೊತ್ತಿಗೆ ಇಷ್ಟಪಟ್ಟು ಜೀಕಿದ ಜೋಕಾಲಿಯೇ ಎತ್ತಿ ದೂರ ಚಲ್ಲಿಬಿಡುತ್ತದೆ. ಇಷ್ಟೆಲ್ಲದರಾಚೆ ಹೊಂದಿಕೊಂಡು ಅವನೊಂದಿಗೆ ಸುಖವಾಗಿ ಎರಡು ಹೊತ್ತು ಉಂಡು ಆಕಾರವನ್ನೇ ಕಳೆದುಕೊಂಡು ನೆರಳಿನಂತೆ ಇದ್ದುಬಿಡುವುದು ನನಗೆ ಅಸಹ್ಯವೆನ್ನಿಸಲು ಶುರುವಾಗಿ ಎದ್ದು ತೌರುಮನೆಗೆ ತೌರು ಮನೆಯ ದಾರಿ ತುಳಿದಿದ್ದೆ. ನನ್ನ ಮಕ್ಕಳನ್ನು ತನ್ನ ಮಕ್ಕಳಂತೆ ಅವಳು ನೋಡಿಕೊಳ್ಳುತ್ತಾಳೆಂಬ ನಂಬುಗೆ ನನಗೆ.
ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ “ಬಿಡುಗಡೆ”

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಯತಿರಾಜ್ ವೀರಾಂಬುಧಿ ಕತೆ

‘ಈ ಮಹಾರಾಯನ ಕೊರೆತದಿಂದ, ನಾನು ಬೇರೆಯವರಿಗೆ ಎಷ್ಟು ಕೊರೆಯುತ್ತಿದ್ದೆ ಎಂಬ ಅರಿವಾಗಿದೆ. ಪಾಪ! ನನ್ನ ಸೊಸೆ ಚಿನ್ನದಂಥಾ ಹುಡುಗಿ. ಎಲ್ಲವನ್ನೂ ಸಹಿಸಿದ್ದಾಳೆ. ಈತನ ಕೊರೆತ ತಪ್ಪಿಸಿಕೊಳ್ಳಲು ಸೊಸೆಯನ್ನೇ ಮೊರೆ ಹೋಗಬೇಕು’ ಎಂದು ಮನದಲ್ಲೇ ನಿರ್ಧರಿಸಿದರು. ಮರುದಿನ ಬೆಳಿಗ್ಗೆ ನಂದಿನಿ ನಿತಿನ್‌ನನ್ನು ಶಾಲೆಗೆ ಒಯ್ಯಲು ಸಿದ್ಧಳಾದಾಗ ರಾಯರು ಅವಳಲ್ಲಿಗೆ ಬಂದರು. ಶಾಸ್ತ್ರಿಗಳು ಎಲ್ಲೂ ಕಾಣಿಸಲಿಲ್ಲ.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಯತಿರಾಜ್ ವೀರಾಂಬುಧಿ ಕತೆ “ಉಭಯ ಸಂಕಟ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಅದರೊಳಗೇನಿದೆ ಎನ್ನುವುದು ಒಳಹೋದವರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಒಳಗೆ ಹೋದವರು ಎಬ್ಬಿಸುತ್ತಿದ್ದ ನಗು ಹೊರಗೆ ಕೂತ ಹೊಸಬರಲ್ಲಿ ಮೂಡಿಸುತ್ತಿದ್ದದ್ದು ವಿಸ್ಮಯವನ್ನು, ಕುತೂಹಲವನ್ನು. ನಟರಾಜ ಕೊಟ್ಟಿದ್ದ ಐಡಿಯಾ ಫಲ ಕೊಡುವುದಕ್ಕೆ ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಮಹಾನಗರದ ಮರಿಮೊಮ್ಮಗನಂತಿತ್ತು ಭರತಪುರ. ಅಂಥ ಪುಟ್ಟ ಪಟ್ಟಣದ ಜನರನ್ನಷ್ಟೇ ನಗಿಸಿ, ಇದ್ದ ಸಾಲವನ್ನು ಏಳೆಂಟು ತಿಂಗಳುಗಳಲ್ಲಿಯೇ ತೀರಿಸಿ, ಸ್ಮೈಲು ಬೀರಿದ್ದ ಇಸ್ಮಾಯಿಲ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಇಸ್ಮಾಯಿಲನ ಸ್ಮೈಲಿಂಗು ಮಹಲು”

Read More

ಮಧು ವೈ.ಎನ್.‌ ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಕೆಲವು ಪುಟಗಳು

ಆ ಪದ ಕಿವಿಗೆ ಬೀಳುತ್ತಿದ್ದಂತೆ ಸೈಫೈ ಸಿನಿಮಾಗಳಲ್ಲಿ ರೋಬೋಗಳು ಬ್ಯಾಟರಿ ಡೌನಾಗಿ ತಾನಾಗೆ ಕುಸಿದಂತೆ ಶರತ್ ಕುಸಿದ. ಅವಳು ಹಂಗೇ, ಹಿಂದೆ ಮುಂದೆ ನೋಡದೇ ಅಂದುಬಿಡ್ತಿದ್ದಳು. ಜ್ಯಾಮಿಟ್ರಿ ಬಾಕ್ಸ್‌ ಮುಚ್ಚಳವನ್ನು ಹಲ್ಲುಗಳನ್ನೆಟ್ಟಿ ತೆಗೆಯುತ್ತಿದ್ದಳು. ಅಸೆಂಬ್ಲಿನಲ್ಲಿ ಆಕಳಿಸುವಾಗ ತುಟಿ ಹರಿಯುವಷ್ಟು ಅಗಲ ಬಾಯಿ ತೆರೆಯುತ್ತಿದ್ದಳು. ಕಿರುನಾಲಗೆಯಿಂದ ಎಂಜಲನ್ನು ಮೋಟಾರಿನಂತೆ ಹಾರಿಸುತ್ತಿದ್ದಳು. ಇಡೀ ಕ್ಲಾಸಿಗೆ ರಾಣಿ, ರೌಡಿ ಎರಡೂ ಆಗಿದ್ದಳು. ಶರತ್‌ಗೆ ಆಳದಲ್ಲಿ ಅವಳೆಂದರೆ ಭಯ. ತಾನು ಸುಮ್ಮನಿದ್ದರೂ ಆಗಿತ್ತು; ಇಂಥಾ ಬಜಾರ್‌ಗಿತ್ತಿಯನ್ನು ಕೆಣಕಿ ʼಕಳ್ಳʼ ಅನ್ನಿಸ್ಕೊಳಂಗಾಯ್ತಲ್ಲ ಎಂದು ಕೈಹಿಸುಕಿಕೊಂಡ.
ಮಧು ವೈ.ಎನ್.‌ ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಬಾನು ಮುಷ್ತಾಕ್ ಕತೆಗಳ ಅನುವಾದದ ಬಗ್ಗೆ ಕೆಲವು ಟಿಪ್ಪಣಿಗಳು: ಬಿ.ವಿ.ರಾಮಪ್ರಸಾದ್ ಬರಹ

ದೀಪಾ ಅವರ ರೀತಿಯಲ್ಲೇ ಬಾನುರವರು ಕೆಲವು ಉರ್ದು ಪದಗಳನ್ನು ಯಾವುದೇ ವಿವರಣೆ ಇಲ್ಲದೇ ಅನುವಾದ ಮಾಡದೇ ಬಳಸುತ್ತಾರೆ. ಉದಾಹರಣೆಗೆ ಸಂಬಂಧ ಸೂಚಕ ಪದಗಳಾದ ಭಾಬಿ, ಅಮ್ಮಿ, ಆಪ, ಬೇಟಾ, ಅಮ್ಮಿಜಾನ್, ದಾದಿಮಾ. ಆದರೆ ಸಾಕಷ್ಟು ಬಾರಿ ಇವುಗಳ ಬದಲು ಅತ್ತಿಗೆ, ಅಮ್ಮ, ತಂದೆ, ಅನ್ನುವ ಕನ್ನಡ ಪದಗಳನ್ನೇ ಬಳಸಿದ್ದಾರೆ. ಇಸ್ಲಾಮ್‌ಗೆ ಸಂಬಂಧಿಸಿದ ಆಜಾನ್, ಮುತವಲ್ಲಿ, ಕಫನ್, ಗುಸುರ್, ದಫನ್, ಖಬರ್‌ಸ್ತಾನ್, ಇವುಗಳೂ ಕೂಡ ವಿವರಣೆಯಿಲ್ಲದೆ ಕೆಲವೊಮ್ಮೆ ಉರ್ದು ಮೂಲ ರೂಪದಲ್ಲಿ, ಕೆಲವೊಮ್ಮೆ ಉರ್ದು ಮೂಲರೂಪದ ಜೊತೆಗೆ ಕನ್ನಡದ ವಿವರಣೆಯೊಂದಿಗೆ ಬರುತ್ತವೆ.
ಬಾನು ಮುಷ್ತಾಕ್ ಕತೆಗಳ ಅನುವಾದದ ಕುರಿತು ಬಿ.ವಿ.ರಾಮಪ್ರಸಾದ್ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ