Advertisement

Tag: kumar bendre

ಭಾವವಿರೇಚನಗೊಳಿಸುವ ದೃಶ್ಯಕಾವ್ಯ ‘ಬಂಧಮುಕ್ತ’: ಡಾ. ಪ್ರಭು ಗಂಜಿಹಾಳ ಬರಹ

`ಬಂಧಮುಕ್ತ’ ಚಿತ್ರ ಇಂದಿನ ಕಾಲಘಟ್ಟದಲ್ಲಿ ಯಾಕೆ ವಿಶೇಷವಾದದ್ದು ಎಂಬುದರ ಕುರಿತು ವಿವರಿಸುವುದಾದರೆ; ಮೊದಲನೇಯದಾಗಿ ಈ ಚಿತ್ರದ ಶೀರ್ಷಿಕೆಯೇ ಒಂದು ಸಕಾರಾತ್ಮಕ ಸಂದೇಶ ನೀಡುವಂತಹದು. ಮನುಷ್ಯ ಹುಟ್ಟಿನಿಂದ ಸಾವಿನವರೆಗೆ ಯಾವುದಾದರೊಂದು ಹಿಡಿತಕ್ಕೆ ಸಿಲುಕಿ ಅದರಿಂದ ಹೊರ ಬರಲು ಹೆಣಗಾಡುತ್ತಿರುತ್ತಾನೆ. ಸಾವು ಮಾತ್ರ ಮನುಷ್ಯನ ನಿಜವಾದ ಬಿಡುಗಡೆ ಎಂದು ಹೇಳಬಹುದಾದರೂ ಸಾವಿಗೂ ಮುನ್ನವೇ ಬಂಧನಗಳಿಂದ ಮುಕ್ತವಾಗುವ ಮನಸ್ಥಿತಿಯೇ ಬಿಡುಗಡೆಯ ಮಾರ್ಗ ಎಂದು ವಾಖ್ಯಾನಿಸಬಹುದು. ಇದು ಮನೋವಿಜ್ಞಾನ ಮತ್ತು ಆಧ್ಯಾತ್ಮಿಕ ತತ್ವವನ್ನು ತಿಳಿಸುವ ವಿಚಾರ.
ಕುಮಾರ ಬೇಂದ್ರೆ ನಿರ್ದೇಶನದ “ಬಂಧಮುಕ್ತ” ಸಿನಿಮಾದ ಕುರಿತು ಡಾ. ಪ್ರಭು ಗಂಜಿಹಾಳ ಬರಹ

Read More

ಹಲವು ಹೃದಯಗಳ ಮುಟ್ಟಿದ ಚಲನಚಿತ್ರೋತ್ಸವ..

ಮೂರನೇ ಅತ್ತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುವ ʻಫೋಟೋʼ ಚಿತ್ರದ್ದು ಬೇರೆಯದೇ ರೀತಿಯ ಛಾಪು. ಚಿತ್ರೋತ್ಸವದ ಎರಡನೇ ದಿನ 4ನೇ ಪರದೆಯಲ್ಲಿ ಮೊದಲ ಪ್ರದರ್ಶನ ಕಂಡ ಈ ಚಿತ್ರ ನೋಡಲು ಪ್ರೇಕ್ಷಕರು ಕಿಕ್ಕಿದು ತುಂಬಿದ್ದರು. ಆಸನಗಳು ಸಾಲದಕ್ಕೆ ಚಿತ್ರಮಂದಿರದ ನಿಯಮವನ್ನೂ ಮುರಿದು ಮೆಟ್ಟಿಲುಗಳ ಮೇಲೆ ಕುಳಿತು ಸಹ ಹಲವರು ಚಿತ್ತ ಬದಲಿಸದೇ ನೆಟ್ಟ ದೃಷ್ಟಿಯಲ್ಲೇ ಚಿತ್ರವನ್ನು ವೀಕ್ಷಿಸಿದರು.
‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ನೋಡಿದ ಸಿನಿಮಾಗಳ ಕುರಿತು ಕುಮಾರ ಬೇಂದ್ರೆ ಬರಹ

Read More

ಕನ್ನಡಕ್ಕೆ ಮತ್ತೊಂದು ಗರಿ ʻಹದಿನೇಳೆಂಟುʼ

ಹರಿ ಒಬ್ಬ ಸದ್ಗುಣ ಯುವಕನೇ ಆಗಿದ್ದರೂ ಅರಿವಿನ ಕೊರತೆಯಿಂದ ಆ ವಿಡಿಯೋವನ್ನು ತನ್ನ ಸ್ನೇಹಿತರಿಗೆ ತೋರಿಸಿ ಅದು ತನ್ನ ಸಾಧನೆ ಎಂಬಂತೆ ಬಿಂಬಿಸಿಕೊಂಡ. ಅಲ್ಲಿಗೆ ಸುಮ್ಮನಾಗದೇ, ತನ್ನ ಮೇಲೆ ನಂಬಿಕೆ ವಿಶ್ವಾಸವಿಟ್ಟು ತನ್ನ ದೇಹವನ್ನೇ ಹಂಚಿಕೊಂಡ ದೀಪಾಳಿಗೆ ಅದರಿಂದ ಏನಾದೀತು ಎನ್ನುವ ಸಾಮಾನ್ಯ ವಿವೇಚನೆಯನ್ನೂ ಮಾಡದೇ ಆ ವಿಡಿಯೋವನ್ನು ಒಬ್ಬ ಫೇಸ್‌ಬುಕ್‌ಸ್ನೇಹಿತನೊಂದಿಗೆ ಹಂಚಿಕೊಂಡ!
ಈ ವರ್ಷದ ಪನೋರಮಕ್ಕೆ ಆಯ್ಕೆಯಾದ ಮತ್ತೊಂದು ಚಲನಚಿತ್ರ ʻಹದಿನೇಳೆಂಟುʼ ಕುರಿತು ಕುಮಾರ ಬೇಂದ್ರೆ ಬರಹ

Read More

ಬಣ್ಣಗಳಿಗೆ ನಿಲುಕದ ಸೌಂದರ್ಯ!: ಕುಮಾರ ಬೇಂದ್ರೆ ಬರೆದ ಕಥೆ

“ತಲೆಯಿಂದ ಕಾಲವರೆಗೆ ಗಮನಿಸಿದ. ಅದೇ ರಶ್ಮಿ! ಗಾಢ ಹಳದಿ ವರ್ಣದ ಸೆಲ್ವಾರ್ ಕಮಿಜ್ ಧರಿಸಿದ್ದಾಳೆ. ತಲೆಯಿಂದ ನೀಳವಾಗಿ ಚಾಚಿ ಹೆಗಲು ಆವರಿಸಿರುವ ರೇಷ್ಮೆಯಂತಹ ಕೇಶ. ಅದೇ ಆಗ ತೀಡಿರುವ ಹುಬ್ಬು, ತುಟಿಯ ಕೆಂಪು ವರ್ಣ ಬೆಳಗಿನ ತಂಪಿಗೆ ನಳನಳಿಸುತ್ತಿದ್ದವು. ಗುಲಾಬಿ ಪಕಳೆಯಷ್ಟೇ ನಾಜೂಕಾದ ಅವಳ ಕೆನ್ನೆಯ ತ್ವಚೆಯಲ್ಲಿ ಮಂಜಿನ ಹನಿಗಳು ನಿಂತು ಮುತ್ತಿನಂತೆ ಮಿಂಚುತ್ತಿವೆ. ವಿಶಾಲವಾದ ಕಣ್ಣುಗಳಲ್ಲಿ ಆಪ್ತಭಾವ, ಅಂತಃಕರಣ ತುಂಬಿದೆ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ