Advertisement

Tag: Munavvar Jogibettu

ಮಳೆ, ಮಂಜು ಮತ್ತು ಚಾರಣ: ಮುನವ್ವರ್, ಜೋಗಿಬೆಟ್ಟು ಬರಹ

ಒಂದು ಶಾಂತ ಬಯಲಿನಲ್ಲಿ ಮರಗಳ ನೆರಳಲ್ಲಿ ಪ್ರತಿಷ್ಠಾಪಿಸಿದಂತಿದ್ದ ಆ ಪ್ರದೇಶ ಸೂಫಿ ಅನುಭಾವಕ್ಕೆ ನಮ್ಮನ್ನು ಬರಮಾಡಿಕೊಳ್ಳತೊಡಗಿತು. ಅದು ಹಾಸನದ ಮುಸ್ಲಿಮರ ಪಾಲಿಗೆ ವಿಶೇಷ ಸ್ಥಳ. ಅದೇ‌ ಊರಿನವರಾಗಿದ್ದ ಹಝ್ರತ್ ಖಲಂದರ್ ಶಾ ವಲಿಯುಲ್ಲಾಹಿರವರು ಆಧ್ಯಾತ್ಮಿಕವಾಗಿ ಒಂದು ತಲೆಮಾರನ್ನೇ ಮುನ್ನಡೆಸಿದವರು. ಸೂಫಿ ನೆರಳಿನಂತೆ ಜನರ ಕಷ್ಟ ಕಾರ್ಪಣ್ಯಗಳಿಗೆ ಸಲಹೆ ಸೂಚನೆಗಳನ್ನು ಕೊಟ್ಟು ಅವರಿಗೆ ಮನಶ್ಶಾಂತಿಯನ್ನು ಕರುಣಿಸುತ್ತಿದ್ದವರು. ಅವರ ಶಾಂತ ಚಿತ್ತ ಮಾತುಗಳನ್ನು ಆಲಿಸಲು ಅವರ ಹರಸುವಿಕೆಯ ಅನುಗ್ರಹವನ್ನು ಸ್ವೀಕರಿಸಲು ದೇಶದ ನಾನಾ ಭಾಗಗಳಿಂದ ಜನರು ಬರುವುದುಂಟು. ನಾವು ಬಾಬರು ಕುಳಿತುಕೊಳ್ಳುತ್ತಿದ್ದ ಸ್ಥಳವನ್ನೂ ಅವರ ಬಳಸುತ್ತಿದ್ದ ಅನುಗ್ರಹೀತ ವಸ್ತುಗಳನ್ನು ನೋಡಿ‌ ಕಣ್ತುಂಬಿಕೊಂಡು- ಅಲ್ಲಿ ಯಾತ್ರಾರ್ಥಿಗಳಿಗಾಗಿ ನೀಡುವ ಚಹಾವನ್ನು ಸವಿದೆವು.
ಮುನವ್ವರ್, ಜೋಗಿಬೆಟ್ಟು ಬರೆದ ಪ್ರವಾಸ ಕಥನ ನಿಮ್ಮ ಓದಿಗೆ

Read More

ಗಣಿಗಾರಿಕೆ ಎಂಬ ಭೂಗತ ಜಗತ್ತಿನ ಅನಾವರಣ

ಮಿಂಚು ಹುಳುವಿನಂತೆ ಹೊಳೆಯುತ್ತಿದ್ದ ಆಫ್ರಿಕಾದ ‘ಡರ್ಬನ್’ ಕಡಲ ತೀರ ಸ್ವಲ್ಪ ಸ್ವಲ್ಪವೇ ಗೋಚರಿಸತೊಡಗಿತ್ತು. ಮತ್ತೂ ಮತ್ತೂ ಹತ್ತಿರವಾದಂತೆ ಕಡಲು ಮುಗಿಯಲೇ ಇಲ್ಲ. ಹಡಗಿನೊಳಗಿದ್ದ ಯಾರೂ ತೀರ ಕಂಡ ಬಳಿಕ ನಿದ್ರೆ ಮಾಡಿರಲಿಲ್ಲ. ಅಂತೂ ಬೆಳಗಿನ ಜಾವ ಸುಮಾರು ನಾಲಕ್ಕು ಗಂಟೆಯ ವೇಳೆಗೆ ಹಡಗು ಬಂದರು ತಲುಪಿತು. ಬರೋಬ್ಬರಿ ೭೨ ದಿನಗಳ ತರುವಾಯ ಹೊಸ ಮನುಷ್ಯರು, ಭೂಮಿ ಅವರ ಕಣ್ಣಿಗೆ ಬಿದ್ದಿತ್ತು.
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರು ಕಾದಂಬರಿಯ ಒಂಭತ್ತನೇ ಕಂತು.

Read More

ಬದುಕಿನ ಹಡಗು ಮತ್ತೊಂದು ತೀರದೆಡೆಗೆ..

ಇನ್ನೇನು ಸುರಂಗ ಕೊರೆಯುವ ಕೆಲಸ ಮುಕ್ತಾಯವಾಗುತ್ತ ಬಂದಿತ್ತು. ಕೆಲವೇ ಅಡಿಗಳಷ್ಟೇ ಕೊರೆಯುವ ಕೆಲಸ ಬಾಕಿ ಉಳಿದಿತ್ತು. ಸುರಂಗ ಮುಂದೆ ಸಾಗಿದಂತೆ ಮರದ ದೊಡ್ಡ ದಿಮ್ಮಿಗಳನ್ನಿಟ್ಟು ಆಧಾರದಂತೆ ಕೊಡುವುದು ಇದಿನಬ್ಬನಿಗೆ ಮರೆತು ಹೋಗಿತ್ತು. ಆ ವಿಷಯ ನೆನಪಾಗುತ್ತಲೇ, ಓಡಿ ಓಡಿ ಎಂದು ಕಿರುಚಿದ. ಎಲ್ಲರೂ ದಿಕ್ಕಾಪಾಲಾಗಿ ಓಡಿದರು. ಇದಿನಬ್ಬನಿಗೆ ಓಡಲಾಗಲಿಲ್ಲ‌. ಇದ್ದಕ್ಕಿದ್ದಂತೆ ಭಾರೀ ಸದ್ದಿನೊಂದಿಗೆ ಗುಡ್ಡದ ಒಂದು ಭಾಗ ಜರ್ರನೆ ಕುಳಿತೇ ಬಿಟ್ಟಿತು. ಇದಿನಬ್ಬನೂ ಸೇರಿ ನಾಲ್ಕೈದು ಜ‌ನರು ಆ ಮಣ್ಣಿನೊಳಗೆ ಸಿಕ್ಕಿಹಾಕಿಕೊಂಡರು.
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರುಕಾದಂಬರಿಯ ಎಂಟನೆಯ  ಕಂತು.

Read More

ನೀಲಕಡಲನು ಸೀಳಿ ತೇಲುತ ಸಾಗಿದ ಪಯಣ

ಹಡಗು ಮುಂದೆ ಹೋದಂತೆ ದೋಣಿಯ ಹಾಗೆ ಓಲಾಡಲು ಶುರುವಿಟ್ಟುಕೊಂಡಿತು. ಕಡಲಿನ ಅಲೆಗಳಿಗೆ ಲಯಬದ್ಧವಾಗಿ ಚಲಿಸಿದರೂ ಒಮ್ಮೊಮ್ಮೆ ಮುಗ್ಗರಿಸಿದಂತೆ ಅನಿಸುತ್ತಿತ್ತು. ಯಾರೋ ಒಂದಿಬ್ಬರು ಅಚ್ಚರಿಯಾಗಿ ಆ ದೃಶ್ಯ ನೋಡುತ್ತಿದ್ದರೂ ಅವರೊಂದಿಗೆ ಚರ್ಚಿಸಲು ಭಾಷೆ ಅರಿಯದೆ ಇದಿನಬ್ಬ ತನ್ನ ಗತ ಬದುಕನ್ನು ಮೆಲುಕು ಹಾಕತೊಡಗಿದ. ತಾನು ಬದುಕಿನ ಯಾವ ಹಂತದಲ್ಲಿ ಇದ್ದೇನೆ ಎಂದು ಅರಿವಾಗುತ್ತಲೇ ದುಃಖ ಉಮ್ಮಳಿಸಿ ಬಂತು. ದುಃಖದಲ್ಲಿ ಅವನು ತಲೆಯಲ್ಲಿ ಹಾದು ಹೋದ ಯೋಚನೆಗಳೇನು?”

Read More

ಬಿದಿರುಮೆಳೆಯಲ್ಲಿ ಹೂತ ಹೆಣ: ಮುನವ್ವರ್ ಜೋಗಿಬೆಟ್ಟು ಅಂಕಣ

“ಹೊಸ ಛತ್ರಿಯನ್ನು ತಲೆ ಕೆಳಗಾಗಿಸಿ ಅದರೊಳಗೆ ಕಲಕು ನೀರು ಹರಿಯಲು ಬಿಟ್ಟು ಪುಡಿ ಮೀನುಗಳನ್ನು ಹಿಡಿಯುತ್ತಿದ್ದ ಮಹಾ ಪೋಕಿರಿಗಳು ನಾವು. ‘ಮೀನು ಹಿಡಿಯಲಿಕ್ಕಾಗಿಯೇ ಶಾಲೆಗೆ ರಜಾ ಮಾಡುವ ನನ್ನಂತಹ ಮಕ್ಕಳ ಕಾಲವೆಲ್ಲಾ ಎಲ್ಲಿ ಹೋಯಿತು?’ ಅನಿಸತೊಡಗುವಾಗ ಸಮವಸ್ತ್ರ ಮತ್ತು ಬೂಟು ಹಾಕಿ ಬೆಳಗಿನ ಜಾವವೇ ಸ್ಕೂಲ್ ಬಸ್ಸು ಹತ್ತುವ ಮಕ್ಕಳ ಮುಖವೊಮ್ಮೆ ತೇಲಿ ಬಂತು…”

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ