Advertisement

Tag: Munavvar Jogibettu

ಮುನವ್ವರ್ ಜೋಗಿಬೆಟ್ಟು ಬರೆದ ಸಣ್ಣ ಕತೆ “ಎರಡನೇ ತಿರುವು”

“ಏನೋ ತೀರ್ಮಾನಿಸಿದವಳಂತೆ, ಮೆಟ್ಟಿಲಿಳಿದು ರಸ್ತೆಗೆ ಬಂದಳು. ನಿಡು ದೂರದಲ್ಲಿ ಕುತೂಹಲ ಹುಟ್ಟಿಸುವ ಆ ಎರಡನೇ ಅಡ್ಡ ರಸ್ತೆ. ಒಮ್ಮೆ ಉರಿದು ಮತ್ತೆ ನಂದುತ್ತಿರುವ ದಾರಿದೀಪ. ಸಾಲದ್ದಕ್ಕೆ ಲೈಟು ಕಂಬದಿಂದ “ಟ್ರೀ” ಎಂಬ ಶಾರ್ಟ್ ಸರ್ಕ್ಯೂಟಿನ ಸದ್ದು. ಬೆಳಕು ನಂದಿ ಹೊತ್ತುವಷ್ಟರಲ್ಲೇ ಕತ್ತಲ ಮಧ್ಯೆ ರಪ್ಪನೆ ಯಾರೋ ನುಗ್ಗಿದಂತಾಗಿ ಇವಳೆದೆಯ ತುಂಬಾ ಹಾಲಿನವನ ಪ್ರೇತ. ಮತ್ತೆ ಮತ್ತೆ ನಡೆದಳು.”

Read More

ಜೇಡ ಕಡಿಸಿಕೊಂಡವ ನೀನು, ಸ್ಪೈಡರ್ ಮ್ಯಾನ್ ಆಗ್ತೀಯ! : ಮುನವ್ವರ್ ಜೋಗಿಬೆಟ್ಟು ಅಂಕಣ

“ನಮ್ಮ ಹೆಂಚಿನ ಮನೆಯಲ್ಲಿ ಜೇಡರ ಬಲೆ ತೆಗೆಯುವುದೇ ಕಡು ಕಷ್ಟದ ಕೆಲಸ. ತೆಗೆದ ಒಂದೇ ವಾರಕ್ಕೆ ಇಲ್ಲಿ ಒಕ್ಕಲೇ ಇಲ್ಲ ಎನ್ನುವಷ್ಟು ಜೇಡರಬಲೆ ತುಂಬಿ ಬಿಡುತ್ತಿದ್ದವು. ಆಗೆಲ್ಲಾ ಒಂದು ಮಾತಿತ್ತು. “ಗಂಡಸರು ಜೇಡರ ಬಲೆ ತೆಗೆದರೆ ಜೇಡ ಬಲೆ ಕಟ್ಟುವುದು ನಿಲ್ಲಿಸುವುದಂತೆ” ಅಂತ. ಆದರೆ ಇದೆಷ್ಟು ಸುಳ್ಳು ಅಂದರೆ ನಾನು ಬಲೆ ತೆಗೆದ ಮೂರನೇ ದಿನಕ್ಕೆ ಮತ್ತೆ ಜೇಡಗಳು ಬಲೆ ಕಟ್ಟಲು ತೊಡಗುತ್ತಿದ್ದವು….”

Read More

ಜೋಗಿಬೆಟ್ಟುವಿನಲ್ಲಿ ಚಿರತೆ: ಮುನವ್ವರ್ ಜೋಗಿಬೆಟ್ಟು ಅಂಕಣ

“ಒಮ್ಮೆ ನಮ್ಮಜ್ಜಿ ಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನವೊಂದು ಕಳವಾಯಿತಂತೆ. ಎಲ್ಲಿ ಹುಡುಕಿದರೂ ಪತ್ತೆ ಇಲ್ಲ. ಮುತ್ತಜ್ಜಿಯ ಧ್ವನಿ ಗುರುತಿಸಿ ಬರುತ್ತಿದ್ದ ದನ ಎಷ್ಟು ಕರೆದರೂ ಬಾರಲೇ ಇಲ್ಲವಂತೆ. ಕೊನೆಗೆ ಆಗ ಸಣ್ಣವರಿದ್ದ ನನ್ನಜ್ಜಿಯನ್ನು ಕೈಲಿ ಹಿಡಿದುಕೊಂಡು ಮುತ್ತಜ್ಜಿ ಹುಡುಕಲೆಂದು ಹೊರಟರಂತೆ. ಅದು ಸಂಜೆಯ ಹೊತ್ತು, ಮುತ್ತಜ್ಜಿ ಮೊದಲಡಿ ಬಳಿಗೆ “ದಾ ದಾ” ಎಂದು ಕರೆಯಬೇಕಾದರೆ..”

Read More

ದಾರಿ ಮರೆತ ಇರುವೆಗಳು: ಮುನವ್ವರ್ ಜೋಗಿಬೆಟ್ಟು ಅಂಕಣ

“ಪೇರಳೆಯ ಹುಚ್ಚಿಗೆ ನಾವು ಅನೇಕ ಬಾರಿ ಚಿಗಳಿ ಇರುವೆಗಳಿಂದ ಕಚ್ಚಿಸಿಕೊಂಡದ್ದಿದೆ. ಅದರ ಕಡಿತದ ವಿಪರೀತ ಉರಿಯನ್ನು ಸಹಿಸಿಕೊಳ್ಳುವುದೇ ಅಧ್ವಾನ. ಒಮ್ಮೆ ಮನೆಯ ಹಿತ್ತಲಲ್ಲಿದ್ದ ಪೇರಳೆ ಮರಕ್ಕೆ ಹತ್ತಿದವನು ಹಣ್ಣಾದ ಪೇರಳೆ ಕಂಡು ಬಾಗಿದ್ದ ರೆಂಬೆಯೊಂದರ ಮೇಲೆ ಹೋಗಿದ್ದೆ. ಇನ್ನೇನು ಹಣ್ಣೆಟಕುತ್ತದೆ ಎನ್ನುವಷ್ಟರಲ್ಲಿ ತಲೆಯ ಸ್ವಲ್ಪವೇ ಮೇಲಿದ್ದ ಚಿಗುಳಿ ಇರುವೆಗಳ ಗೂಡಿಗೆ ಕೈ ತಾಗಿತು.”

Read More

ಶಾಂತಿ ಮರದ ಬಳಿ ಜಂಗಮ ಮುಳ್ಳು ಪೊದೆ: ಮುನವ್ವರ್ ಜೋಗಿಬೆಟ್ಟು ಅಂಕಣ

“ನಾನು ಅಗರಿನ ಕಡೆಗೆ ತಿರುಗಿದ್ದೆ. ಇನ್ನೇನು ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ಎದುರಿಗೆ ಚಲಿಸುವ ಮುಳ್ಳು ಪೊದೆ. ಹೆದರಿ ನಾನು ಹಿಂದೆ ಹೆಜ್ಜೆ ಇಡುವ ತುರಾತುರಿಯಲ್ಲಿ ಒಣ ಕಟ್ಟಿಗೆ ತುಂಡೊಂದು ಕಾಲಿಗೆ ಸಿಕ್ಕಿ ಲಟ್ಟೆಂದು ಮುರಿಯಿತು. ಸದ್ದು ಕೇಳಿದೊಡನೆ ಆ ಮುಳ್ಳು ಪೊದೆಯತ್ತ ಓಡುತ್ತಾ ಕಾಡಿನೊಳಗೆ ಅಂತರ್ಧಾನವಾಯಿತು. ಸುಮಾರು ಹೊತ್ತು ಹಾಗೆಯೇ ಕಲ್ಲಾಗಿ ನಿಂತೆ. ಮುಂದೆ ಹೋಗಲೂ ಹೆದರಿಕೆ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ