Advertisement

Tag: Ramzan Darga

ದೌರ್ಬಲ್ಯಗಳಿಲ್ಲದ ಸ್ವಾಭಿಮಾನಿ ನನ್ನಪ್ಪನೇ ನನಗೆ ಮಾದರಿ

ಅಂದು ನನ್ನ ತಂದೆ ಸಂಭ್ರಮಿಸಿದ್ದು ಒಂದು ರೂಪಕವಾಗಿ ಮನದಲ್ಲಿ ಉಳಿದಿದೆ. ಅವರೆಲ್ಲ ಚೂಡಾ ತಿಂದ ಮೇಲೆ ಲಿಂಗಾಯತರಾದ ಶಿವಪ್ಪನವರಿಗೆ ಸಮೀಪದ ಲಿಂಗಾಯತರ ಮನೆಯಿಂದ ನೀರು ತಂದು ಕೊಟ್ಟ ನಂತರ ಅವರು ನೀರು ಕುಡಿದರು! ಆದರೆ ತಾಯಿ ಮಾಡಿಕೊಟ್ಟ ಚಹಾವನ್ನು ಎಲ್ಲರ ಜೊತೆ ಶಿವಪ್ಪ ಅವರೂ ಕುಡಿದರು. ಇದೆಲ್ಲ ನನಗೆ ವಿಚಿತ್ರ ಎನಿಸಿತು. ಅದೇ ನಳದ ನೀರು. ಲಿಂಗಾಯತರ ಮನೆಗೆ ಹೊಕ್ಕಾಗ ಅದು ಹೇಗೆ ಶುದ್ಧವಾಗುವುದು? ಆ ‘ಶುದ್ಧ’ ನೀರನ್ನು ನನ್ನ ತಂದೆ ತರುವಾಗ ಅಶುದ್ಧವಾಗುವುದಿಲ್ಲವೆ?

Read More

ನಾವು ಬೆಳಕಾಗಿರಬೇಕು ಇಲ್ಲವೆ ಶಾಂತವಾಗಿರಬೇಕು

ಮಾನವ ಸಹಜವಾಗಿ ಸೆಕ್ಯೂಲರ್ ಆಗಿರುತ್ತಾನೆ. ಆದರೆ ಅವನನ್ನು ಪ್ರಜ್ಞಾಪೂರ್ವಕವಾಗಿ ಕಮ್ಯೂನಲ್ ಮಾಡಿದರೂ ಅದು ಬಹಳದಿನ ಬಾಳಿಕೆ ಬರುವುದಿಲ್ಲ. ಮತ್ತೆ ಮತ್ತೆ ಜನ ಸಹಜತೆಯನ್ನು ಬಯಸುತ್ತಲೇ ಇರುತ್ತಾರೆ. ಹೀಗಾಗಿ ಕೋಮುವಾದಿಗಳು ಮತ್ತು ಮೂಲಭೂತವಾದಿಗಳ ಆಟ ನಿರಂತರವಾಗಿ ನಡೆಯುವುದಿಲ್ಲ. ಜನರು ವಿವಿಧ ಜಾತಿ ಮತ್ತು ಧರ್ಮಗಳ ಚೌಕಟ್ಟಿನಲ್ಲಿ ಸಿಲುಕಿದ್ದರೂ ದೈನಂದಿನ ಬದುಕಲ್ಲಿ ಇವೆಲ್ಲವುಗಳನ್ನು ಮೀರಿದವರೇ ಆಗಿರುತ್ತಾರೆ. ರಂಜಾನ್ ದರ್ಗಾ ‘ನೆನಪಾದಾಗಲೆಲ್ಲ ‘ ಸರಣಿಯ  20ನೇ ಕಂತಿನಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಅನಾವರಣಗೊಳಿಸಿದ್ದಾರೆ.

Read More

ಅಮ್ಮನ ನಂಬಿಕೆ, ಔಷಧಿಗಳ ಮಹಿಮೆಯಲ್ಲಿ ಕಳೆದ ಬಾಲ್ಯ

ಬಡ ಗಿರಾಕಿಗಳಿಂದ ಹಿಡಿದು ಶ್ರೀಮಂತ ಗಿರಾಕಿಗಳವರೆಗೆ ಅವರ ಶಕ್ತ್ಯನುಸಾರ ಹಣ್ಣುಗಳನ್ನು ಕೊಳ್ಳುತ್ತಿದ್ದರು. ಹಣ್ಣುಗಳನ್ನು ಕೊಳ್ಳುವಾಗ ರೇಟಿಗೆ ಸಂಬಂಧಿಸಿದ ಕೊಸರಾಟ ಮಜಾ ಅನಿಸುತ್ತಿತ್ತು. ಗಿರಾಕಿಗಳು ತಮ್ಮ ಎಲ್ಲ ತರ್ಕ ಉಪಯೋಗಿಸಿ ಕಡಿಮೆ ಬೆಲೆಗೆ ಕೇಳುತ್ತಿದ್ದರು. ಆ ಹಣ್ಣುಗಳನ್ನು ತರುವ ಕಷ್ಟ, ಅದಕ್ಕಾಗಿ ಮಾಡಿದ ಖರ್ಚು, ಗಿರಾಕಿಗಳು ಕೇಳುವ ಬೆಲೆಗಿಂತ ಹೆಚ್ಚಾಗಿದೆ ಎಂಬುದನ್ನು ಅಜ್ಜಿ ವಿವರಿಸುತ್ತಿದ್ದಳು. ಇಷ್ಟಕ್ಕಾದರೆ ಕೊಡು ಎಂದು ಹೇಳುತ್ತ ಗಿರಾಕಿಗಳು ಮುಂದೆ ಹೋದಂತೆ ಮಾಡುತ್ತಿದ್ದರು. ಅಜ್ಜಿ ಕರೆಯದೆ ಇದ್ದಾಗ ಮತ್ತೆ ವಾಪಸ್ ಬರುತ್ತಿದ್ದರು.

Read More

ಬಾಲ್ಯದ ಆಟ..ಆ ಹುಡುಗಾಟ ಇನ್ನೂ ಮರೆತಿಲ್ಲಾ..

“ಆಮೇಲೆ ನಾನು ಆ ಕೋಣೆಯ ಕಿಟಕಿಯ ಮುಂದೆ ಕುಳಿತು ಪಾಠ ಕೇಳುತ್ತಿದ್ದೆ. ಒಂದು ಸಲ ಕಪ್ಪು ಹಲಗೆಯ ಮೇಲೆ ಗಣಿತ ಸಮಸ್ಯೆಯೊಂದನ್ನು ಬರೆದು ಉತ್ತರ ಬರೆಯಲು ತಿಳಿಸಿದರು. ನಾನು ಮನದಲ್ಲೇ ಕೂಡಿಸಿ ಕಳೆದು ಭಾಗಿಸಿ ಥಟ್ಟನೆ ಉತ್ತರ ಹೇಳಿದೆ. ಹೀಗೆ ಹೇಳಲು ಕಾರಣವೂ ಇತ್ತು. ನನ್ನ ಬಳಿ ಕಚ್ಚಾ ನೋಟಬುಕ್ ಕೂಡ ಇರಲಿಲ್ಲ. ಹೀಗಾಗಿ ಮನದಲ್ಲೇ ಲೆಕ್ಕಾಚಾರ ಮಾಡುವುದು ಅನಿವಾರ್ಯವಾಗಿತ್ತು. ನನ್ನ ಉತ್ತರದಿಂದ ಮಾಸ್ತರರಿಗೆ ಖುಷಿಯಾಯಿತು. ನನಗೆ ಒಳಗೆ ಕರೆದರು.”
ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ ಹದಿನಾಲ್ಕನೇ ಕಂತು ಇಲ್ಲಿದೆ.

Read More

ಆಕೆ ಹಗಲ್ಹೊತ್ತು ಬಯಲಿಗೆ ಹೋದದ್ದೇ ತಪ್ಪಾಯ್ತು!

ಹೈನುಳ್ಳವರು ದೊಡ್ಡ ಪಾತ್ರೆಯಲ್ಲಿ ಮೊಸರು ಕಡೆಯುತ್ತ ಬೆಣ್ಣೆ ತೆಗೆಯುವುದನ್ನು ನೋಡುವುದೇ ನನಗೆ ಸೋಜಿಗವಾಗಿತ್ತು. ಮೊಸರು ಮಜ್ಜಿಗೆಯಾಗಿ ಅದರೊಳಗಿಂದ ಬೆಣ್ಣೆ ಬರುವುದನ್ನು ನೋಡಲಿಕ್ಕೆ ಮಜಾ ಅನಿಸುತ್ತಿತ್ತು. ದೊಡ್ಡ ಕಡೆಗೋಲನ್ನು ಕಂಬದ ಆಧಾರದ ಮೇಲೆ ದೊಡ್ಡ ಪಾತ್ರೆಯಲ್ಲಿ ಇಳಿಬಿಟ್ಟು ಅದಕ್ಕೆ ಸಣ್ಣ ಹಗ್ಗ ಸುತ್ತಿ ಎರಡೂ ಕೈಯಿಂದ ಮಥಿಸುತ್ತಿದ್ದರು. ಮಜ್ಜಿಗೆಯನ್ನು ಎಂದೂ ಮಾರುತ್ತಿರಲಿಲ್ಲ..”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ