Advertisement

Tag: ಸುಮಾ ಸತೀಶ್

ಚಿಕ್ಕರಾಮಪ್ಪ: ಸುಮಾ ಸತೀಶ್ ಸರಣಿ

ನಮ್ಮ ರಾಮಪ್ಪ ಊರ್ ಮಂದೀಗೆಲ್ಲಾ ಬೋ ಒಳ್ಳೆವ್ನೂಂತ ಹೆಸ್ರು ತಕಂಡಿದ್ದ. ಯಾರೂ ಶತ್ರುಗ್ಳೆ ಇರ್ಲಿಲ್ಲ. ಯಾರಿಗಾನಾ ಮನ್ಯಾಗೆ ಮದ್ವಿ ಮುಂಜೀ ಅಂದ್ರೆ ವಸಿ ಸ್ಯಾನೆ ನೀರು ಬಿಡೋದು, ನಲ್ಲಿ ತಾವ ಹೆಂಗುಸ್ರು, ನಾನ್ ಬಿಂದಿಗೆ ಮಡಗಿದ್ದೆ, ನಾನು ಮೊದ್ಲು ಅಂತ ಜಗ್ಳ ಪಗ್ಳ ತೆಗುದ್ರೋ ನಾಜೂಕಾಗಿ ಬಿಡುಸ್ತಿದ್ದ. ಯಾರ್ನೂ ರೇಗ್ದೇ, ಕ್ವಾಪಾ ಮಾಡ್ ಕಣ್ದೆ ಸಲೀಸಾಗಿ ತಮಾಸಿ ಮಾಡ್ಕಂಡು, ರೇಗುಸ್ಕಂಡು ಜೀವ ತಣ್ಣಗೆ ಮಾಡ್ತಿದ್ದ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಚಿಕ್ಕರಾಮಪ್ಪ ಎಂಬುವವರ ಕುರಿತು ಬರಹ ನಿಮ್ಮ ಓದಿಗೆ

Read More

ದೀಪಾವಳಿ ನೋಪಿ ಮತ್ತು ಹಬ್ಬದ ಹೂರಣ: ಸುಮಾ ಸತೀಶ್ ಸರಣಿ

ದೀಪಾವಳಿ ಟೇಮ್ನಾಗೆ ಉಚ್ಚೆಳ್ಳು ಗಿಡಗಳಲ್ಲಿ ಅಚ್ಚ ಅರಿಶಿನ ಬಣ್ಣ ಹುಯ್ದಂಗೆ ಹುವ್ವ ತುಂಬಕಂತಿತ್ತು. ಅವು ದೀಪಾವಳಿ ಹಬ್ಬದಾಗೆ ಶ್ರೇಷ್ಠವಂತೆ. ಅವುನ್ನ ತಂದು ಹೊಸಿಲಿಗೆ ಇಟ್ಟು ದೀಪ ಮುಟ್ಟಿಸ್ತಿದ್ರು. ಎಲ್ಲಾ ಹೊಸಿಲಿಗೂ ದೀಪ ಮುಟ್ಟಿಸ್ಬೇಕು.‌ ತುಳಸಿ ಗಿಡದ ಹತ್ರ, ದೀಪದ ಸಾಲು ಇಡ್ತಿದ್ರು.‌ ಉಚ್ಚೆಳ್ಳು ಗಿಡ ಸಿಗ್ದೇ ಇದ್ದೋರು ತಂಗಡಿ ಗಿಡದ ಹುವ್ವ ತಂದು ಇಡ್ತಿದ್ರು. ಅದೂ ಹಳದೀ ಬಣ್ವೇಯಾ. ಸಣ್ಣ ಸಣ್ಣ ಹುವ್ವ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹಳ್ಳಿ ಹಬ್ಬಗಳ ಸಂಭ್ರಮಗಳ ವಿವರಗಳು ಇಲ್ಲಿದೆ

Read More

ಊರ ಅಭಿವೃದ್ಧಿಯಲ್ಲಿ ಅಪ್ಪನ ಶ್ರಮ…: ಸುಮಾ ಸತೀಶ್ ಸರಣಿ

ಇಲ್ಲೂ ಒಂದು ವಿಸೇಸ ಐತೆ. ಇಡೀ ಮಧುಗಿರಿ ತಾಲೂಕಿನಾಗೆ ಮಧುಗಿರಿ ಟೌನ್ ನಾಗೆ ಮಾತ್ರವೇ ಸರ್ಕಾರಿ ಹೈಸ್ಕೂಲು ಇದ್ದಿದ್ದು. ಪ್ರವೀಟು ಇಸ್ಕೂಲ್‌ಗಳು ಹೋಬಳಿ ಕೇಂದ್ರ ಕೊಡಿಗೇನಹಳ್ಳೀನಾಗೂ ಸೇರಿ ಐದಾರು ಇದ್ವು ಆಟೇಯಾ. ಅಂಗಾಗಿ ಚಿಕ್ಕಮಾಲೂರು ಹೈಸ್ಕೂಲು ವಿಶೇಷವಾಗಿತ್ತು. ಅದ್ರಾಗೂ ಆ ವರ್ಸ ಇಡೀ ತುಮಕೂರು ಜಿಲ್ಲೇನಾಗೆ ಅದೊಂದೇ ಹೈಸ್ಕೂಲು ಮಂಜೂರಾಗಿದ್ದು ಅನ್ನೋದು ಇನ್ನೊಂದು ಕೋಡು ಸಿಗಿಸಿತ್ತು. ಇನ್ನಾ ಏಸೊಂದು ಕೆಲ್ಸಾ ಮಾಡವ್ರೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯ ಬರಹ ಇಲ್ಲಿದೆ

Read More

ರಾಜಕೀಯದಾಗೆ ಅಪ್ಪನ ಕಸರತ್ತು: ಸುಮಾ ಸತೀಶ್ ಸರಣಿ

ಊರಿನ ಜನರಿಗೆಲ್ಲ ಸರಕಾರ ಉಚಿತವಾಗಿ ಕೊಡೋ ಎಲ್ಲಾ ಸವಲತ್ತುಗಳು ತಲುಪೋ ತರ ಮಾಡಿದ್ರು. ಯಾವ್ಯಾವ್ದು ಫ್ರೀಯಾಗಿ ಸಿಕ್ತೈತೆ ಅಂತ ಅಧಿಕಾರಿಗಳ ತಾವ್ಕೆ ಹೋಗಿ ತಿಳ್ಕಂಬರಾರು. ಅದ್ರ ಬಗ್ಗೆ ಓದ್ಕಣಾರು. ಕಾನೂನು ತಿಳ್ಕಂಬಾದ್ರಾಗೆ ಸೈ ಅನ್ನುಸ್ಕೊಂಡಿದ್ರು. ಎಲ್ಲಾ ಓದ್ಕಂಡು ಮುಂದ್ಕೆ ಹೋಗೋರು. ಅಧಿಕಾರಿಗುಳ ಪ್ರೀತಿ, ವಿಶ್ವಾಸ ಗಳಿಸಾಕೆ ಅವುರ್ಗೆ ಊಟ, ತಿಂಡಿ ಕೊಡ್ಸೋದು, ಹೊಲದಾಗೆ ಬೆಳೆದ ಫಸಲು, ತರಕಾರಿ, ಕಾಯಿ, ಎಳನೀರು ಉಡುಗೊರೆ ಕೊಡೋರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ಬೇಸಾಯ ಬದಲಾದದ್ದು: ಸುಮಾ ಸತೀಶ್ ಸರಣಿ

ಇದೊಂದು ಕಾರು ಎಲ್ಲಾರ ಕಣ್ಗೂ ಬಿತ್ತು. ಪುಸುಕ್ ಅಂತ ಕಾರು ಕೇಳೋಕೆ ಶುರು ಆತು. ದಾಕ್ಷಿಣ್ಯ ಬ್ಯಾರೆ.‌ ಕೊಡದಿದ್ರೆ ಕೆಲ್ಸ‌ ಮಾಡದೆ ಸತಾಯಿಸ್ತಾರೆ. ಒಳ್ಳೆ ಪೀಕಲಾಟ ಆಯ್ತು. ಥತ್ ತೇರಿಕೆ ಯಾಕಾನಾ ಕಾರು ಅಂತ ಆಸೆ ಬಿದ್ನೋ… ಯಾಕೆ ಬೇಕಿತ್ತು ಈ ಉಸಾಬರಿ ಅಂತ ಬ್ಯಾಸ್ರ ಬಂದೋತು ಅಪ್ಪಂಗೆ. ಕಾರೂ ಪುಗ್ಸಟ್ಟೆ ಕೊಡಾದಲ್ದೆ, ಪೆಟ್ರೋಲ್ ಹಾಕ್ಸಿ, ಡ್ರೈವರ್ ಇಕ್ಕಿ ಕಳ್ಸೋದು ಬ್ಯಾರೆ. ಅದೋ ಬಿಳೇ ಆನೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹೊಸ ಬರಹ ಇಲ್ಲಿದೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ