Advertisement
ಅನಿಲ್ ಕುಮಾರ್ ಗುನ್ನಾಪೂರ ಬರೆದ ಈ ದಿನದ ಕವಿತೆ

ಅನಿಲ್ ಕುಮಾರ್ ಗುನ್ನಾಪೂರ ಬರೆದ ಈ ದಿನದ ಕವಿತೆ

ದಾರಿಗಳು ಹೀಗೆಯೇ ಇರುವುದಿಲ್ಲ

ದಾರಿಗಳು
ಹೀಗೆಯೇ ಇರುವುದಿಲ್ಲ
ಅನಿರೀಕ್ಷಿತ ತಿರುವುಗಳ ನಡುವೆ
ಯಾರೋ ಕಟ್ಟಿದ ಗೋಡೆ, ಇನ್ಯಾರೋ ತೋಡಿದ ಕಂದಕ
ತೂರಿ ಬಂದ ಮುಳ್ಳುಗಳು
ನಡೆಯುವುದನ್ನು ಕಲಿಸುತ್ತವೆ

ಸಂಬಂಧಗಳು
ಹೀಗೆಯೇ ಇರುವುದಿಲ್ಲ
ನಂಬಿಕೆಯ ಮಹಲುಗಳ ನಡುವೆ
ಯಾರದೋ ಅನುಮಾನ, ಇನ್ಯಾರದೋ ಬಿಗುಮಾನ
ಸ್ವಾರ್ಥ ತುಂಬಿದ ಮನಸ್ಸುಗಳು
ಬದುಕುವುದನ್ನು ಕಲಿಸುತ್ತವೆ

ಬಯಕೆಗಳು
ಹೀಗೆಯೇ ಇರುವುದಿಲ್ಲ
ಭರವಸೆಯ ನಾಳೆಗಳ ನಡುವೆ
ಅನಿಶ್ಚಿತತೆಯ ಆಟ, ಅನಿವಾರ್ಯತೆಯ ಪಾಠ
ಹೊಸ ಆಶಾವಾದಗಳು
ತೃಪ್ತವಾಗಿರುವುದನ್ನು ಕಲಿಸುತ್ತವೆ

ಇಲ್ಲಿ ಎಲ್ಲವೂ ಬದಲಾಗುತ್ತದೆ
ಕಾಲಕಾಲಕ್ಕೆ
ಕಾಲ ಕಲಿಸುವ ಪಾಠಕ್ಕೆ
ಮುಕ್ತವಾಗಿ ತೆರೆದುಕೊಂಡಿರಬೇಕು
ಕಾಲ ಎಲ್ಲವನ್ನೂ ಕಲಿಸುತ್ತದೆ
ಮತ್ತು
ಎಲ್ಲವನ್ನೂ ಮರೆಸುತ್ತದೆ

 

ಅನಿಲ್ ಗುನ್ನಾಪೂರ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹಿರೇಮಸಳಿಯವರು
ಸದ್ಯ ಬಾಗಲಕೋಟೆಯಲ್ಲಿ ಸರ್ಕಾರಿ ಭೂಮಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ
ಗುಬ್ಬಚ್ಚಿ ಗೂಡಿನಲ್ಲಿ…” ಇವರ ಪ್ರಕಟಿತ ಮೊದಲ ಕವನ ಸಂಕಲನ

 

(ಕಲಾಕೃತಿ: ಪ್ಯಾಬ್ಲೋ ಪಿಕಾಸೋ)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. JAGADEESH CHALAWADI

    ಹೌದು ನಿಜ…

    Reply

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ