Advertisement
ಅಭಿಷೇಕ ಬಳೆ ಮಸರಕಲ್ ಬರೆದ ಗಝಲ್

ಅಭಿಷೇಕ ಬಳೆ ಮಸರಕಲ್ ಬರೆದ ಗಝಲ್

ಒಂದೊಮ್ಮೆ ಬಂದು ಮುಖ ತೋರಿಸು ಕನ್ನಡಿ ನಕ್ಕು ಬಿಡುತ್ತದೆ
ಜೊತೆಯಿರು ಸದಾ ಬದುಕು ತಾನೇ ಮುನ್ನುಡಿ ಬರೆದುಕೊಳ್ಳುತ್ತದೆ

ರಾತ್ರಿಯಲಿ ಕನಸಿಗೆ ಬಾರದಿದ್ದರೆ ಮುಂಜಾವು ಸತ್ತು ಹೋಗುತ್ತದೆ
ವಿಸ್ತಾರ ಬದಲಿಸದಿರು ವಿರಹ ಒಂಟಿಯಾಗಿ ಬಿಕ್ಕುತ್ತದೆ

ಆಗಾಗ್ಗೆ ಎದುರು ಬರುತಿರು ಹೃದಯ ಹಿಗ್ಗಿ ಕುಣಿಯುತ್ತದೆ
ಮಾತು ಮಾತಿಗೆ ಬಿಂಕ ತೋರದಿರು ಮೌನ ಹೆಪ್ಪುಗಟ್ಟುತ್ತದೆ

ಬಣ್ಣ ಬಣ್ಣದ ನೋಟ ಬದುಕಿನ ಸುತ್ತ ಸದಾ ಸುಳಿಯುತ್ತದೆ
ನೋಟ ನೋಟಕ್ಕು ರೆಪ್ಪೆ ತಾಕಿಸು ಮನದ ಏಕತಾರಿ ಮೀಟುತ್ತದೆ

ಎದೆಯಾಳಕ್ಕೆ ಇಳಿ ಅಭಿಯ ಹೃದಯದ ನೋವು ಅರಿವಾಗುತ್ತದೆ
ನೋವುಂಡ ಹೃದಯದಲ್ಲಿ ಅಲ್ಲವೆ ಸದಾ ಪ್ರೀತಿ ಹುಟ್ಟುತ್ತದೆ

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ