Advertisement
ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ದ್ವೈತ

ಭ್ರಮೆಗಳು ಮನುಷ್ಯನನ್ನು ಪೊರೆಯುತ್ತವೆ
ಹಲವು
ಷರತ್ತುಗಳೊಂದಿಗೆ,
ಒಂದಿಷ್ಟು
ಗಡುವುಗಳೊಂದಿಗೆ,
ಇನ್ನು ಕೆಲವು-
ಬೇಷರತ್ತಾಗಿ, ನಿರವಧಿಯವರಗೆ..

ಮತ್ತದು ನಿರಸನಗೊಳ್ಳುವತನಕ
ಮನುಷ್ಯನಿಗೆ ಅವನ್ನು
ತಾನೇ ಪೊರೆಯುತ್ತಿರುವೆ-
ನೆಂಬ ನಿರಾತಂಕ

ಭ್ರಮೆ- ಎಂಬ ಪೊಳ್ಳು
ಕಳಚಿ ಹಾರಿ ಹೋದಾಗ
ಆಹಾ! ತಾನು ವಿವೇಕಿಯಾದೆ-
ಎಂದುಕೊಳ್ಳುತ್ತಾನೆ- ಇನ್ನೊಂದು ಭ್ರಮೆ-
ಯ ಪ್ರವೇಶವಾಗುವವರೆಗೆ!

ತೀರ ಯೋಚನೆ ಮಾಡಬೇಡಿ;
ಬದುಕೇ ಒಂದು ಭ್ರಮೆ-
ಎಂದು!
ಮುಕ್ತಿಯೂ ಒಂದು ಭ್ರಮೆ-
ಇರಬಹುದಲ್ಲವೇ?

ಮುಕ್ತನೆಂಬ ಅರಿವು
ತನ್ನೊಳಗ
ಬಯಲು
ಮಾಡುವವರೆಗೆ!

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. ಲಕ್ಷ್ಮಣ ಶರೆಗಾರ

    ಇಷ್ಟವಾಯಿತು

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ