Advertisement
ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ದ್ವೈತ

ಭ್ರಮೆಗಳು ಮನುಷ್ಯನನ್ನು ಪೊರೆಯುತ್ತವೆ
ಹಲವು
ಷರತ್ತುಗಳೊಂದಿಗೆ,
ಒಂದಿಷ್ಟು
ಗಡುವುಗಳೊಂದಿಗೆ,
ಇನ್ನು ಕೆಲವು-
ಬೇಷರತ್ತಾಗಿ, ನಿರವಧಿಯವರಗೆ..

ಮತ್ತದು ನಿರಸನಗೊಳ್ಳುವತನಕ
ಮನುಷ್ಯನಿಗೆ ಅವನ್ನು
ತಾನೇ ಪೊರೆಯುತ್ತಿರುವೆ-
ನೆಂಬ ನಿರಾತಂಕ

ಭ್ರಮೆ- ಎಂಬ ಪೊಳ್ಳು
ಕಳಚಿ ಹಾರಿ ಹೋದಾಗ
ಆಹಾ! ತಾನು ವಿವೇಕಿಯಾದೆ-
ಎಂದುಕೊಳ್ಳುತ್ತಾನೆ- ಇನ್ನೊಂದು ಭ್ರಮೆ-
ಯ ಪ್ರವೇಶವಾಗುವವರೆಗೆ!

ತೀರ ಯೋಚನೆ ಮಾಡಬೇಡಿ;
ಬದುಕೇ ಒಂದು ಭ್ರಮೆ-
ಎಂದು!
ಮುಕ್ತಿಯೂ ಒಂದು ಭ್ರಮೆ-
ಇರಬಹುದಲ್ಲವೇ?

ಮುಕ್ತನೆಂಬ ಅರಿವು
ತನ್ನೊಳಗ
ಬಯಲು
ಮಾಡುವವರೆಗೆ!

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. ಲಕ್ಷ್ಮಣ ಶರೆಗಾರ

    ಇಷ್ಟವಾಯಿತು

    Reply

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ