Advertisement
ನಾಗರಾಜ್ ಕಾಂಬಳೆ ಬರೆದ ಈ ದಿನದ ಕವಿತೆ

ನಾಗರಾಜ್ ಕಾಂಬಳೆ ಬರೆದ ಈ ದಿನದ ಕವಿತೆ

ಎದೆ ಒಡೆಯುತ್ತಿದೆ!

ಎದೆ ಒಡೆಯುವ ಶಬ್ದ ಕೇಳುತ್ತಿದೆ
ಸಣ್ಣಗೆ
ರಾತ್ರಿ ಬಿದ್ದ ಕೆಟ್ಟ ಕನಸಿನಲ್ಲಿ
ಅವಳದ್ದೇ ನೆರಳು

ಕಚ್ಚದೆಯೇ ವಿಷ ಉಗುಳಿದೆ
ಬುಸುಗುಡುವ ಹಾವೊಂದು
ಗಾಯವಾಗದೇ ವಿಷವೇರಿದೆ
ನೇರವಾಗಿ ಎದೆಗೆ

ಪ್ರೇಮ ಮತ್ತು ವಾತ್ಸಲ್ಯದ ಮರಕ್ಕೆ
ನೇಣು ಹಾಕಿಕೊಳ್ಳುವ ಬಯಕೆಗೆ
ಯಾರು ಹೊಣೆ?
ಈ ಅನಿರೀಕ್ಷಿತ ಸಾವಿಗೆ
ಹೃದಯವಿಲ್ಲ, ಕನಿಕರವಿಲ್ಲ

ಕ್ಷಮಿಸಿ ಬಿಡಿ
ಸಾವು ನನ್ನನ್ನಷ್ಟೇ ಆವರಿಸಲಿ
ಯಾವುದೇ ಊಹೆಗಳು
ಯಾವುದೇ ಗಾಸಿಪ್ಪುಗಳು ಬೇಡ
ಕಾರಣ ತಿಳಿಯುವ
ಗುಢಚಾರಿಕೆಯೂ ಬೇಡ..

ಹೌದು ಎದೆ ಒಡೆಯುತ್ತಿದೆ
ಸಣ್ಣಗೆ!

ನಾಗರಾಜ ಕಾಂಬಳೆ ಬೆಳಗಾವಿ ಜಿಲ್ಲೆಯವರು
ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಸಹಶಿಕ್ಷಕರು
ಓದುವುದು, ಕತೆ-ಕವಿತೆ ಬರೆಯುವುದು ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ