Advertisement
ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ

ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ

ಪ್ರೀತಿಯ ಕುರಿತು
ಬರೆಯಲು ರೂಪಕ
ಹುಡುಕುವುದು
ಪ್ರೀತಿ ಮಾಡುವಷ್ಟೇ ಕಷ್ಟ

ಹೂವ ಚುಂಬಿಸಹೋಗಿ
ಮುಳ್ಳು ಚುಚ್ಚಿಸಿಕೊಂಡಂತೆ
ಜೇನ ಸವಿಯಲು ಹೋಗಿ
ಹುಳ ಕಚ್ಚಿಸಿಕೊಂಡಂತೆ

ಪ್ರೀತಿ ಸಮುದ್ರವೆಂದರೆ
ಅದರಲ್ಲೇ ಟೈಟಾನಿಕ್ ಮುಳುಗಿದ್ದು ನೆನಪಾಗುತ್ತದೆ
ಪ್ರೀತಿ ಚಂದಿರನೆಂದರೆ
ಅಮವಾಸ್ಯೆಯ ಕರಿನೆರಳು ನೆನಪಾಗುತ್ತದೆ

ಪ್ರೀತಿ ಬೆಂಕಿಯೆಂದರೆ
ಅಮ್ಮನ ಅಡುಗೆ ನೆನಪಾಗುತ್ತದೆ
ಪ್ರೀತಿ ಬಂಧನವೆಂದರೆ
ಗೆಳತಿಯ ಕಾಳಜಿ ನೆನಪಾಗುತ್ತದೆ

ಬಂಧಿಸಲಾಗದು ಪ್ರೀತಿಯ
ರೂಪಕಗಳ ಬಂಧೀಖಾನೆಯಲ್ಲಿ,
ಹಾರುತ್ತದೆ ಪ್ರೀತಿಯ ಹಕ್ಕಿ
ಬಿಗುಮಾನದಲ್ಲಿ,
ಕಟ್ಟುತ್ತದೆ ಗೂಡು
ನೊಂದ ಹೃದಯದಲ್ಲಿ

ನೆನಪಿಡಿ
ಪ್ರೀತಿಯ ಹಕ್ಕಿಗೆ ಬೇಕಿರುವುದು
ಪಂಜರವಲ್ಲ, ಗೂಡು ಕಟ್ಟಲು ಜಾಗ
ಅದೃಷ್ಟವಿದ್ದಲ್ಲಿ ಅನುರಾಗ
ಮೂಡುವುದು ಆಗ

ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ