ಅಲ್ಲಿಯ ಇಲ್ಲಿಯ ಬೆಲೆಯೇರಿಕೆ ಕಥೆಗಳು
ಉದ್ಯೋಗ ಬೇಟೆಯಲ್ಲಿರುವ ಜನರಿಗೆ ಕೊಡುವ ಧನಸಹಾಯ ಆ ಒಬ್ಬ ವ್ಯಕ್ತಿಯ ಜೀವನಕ್ಕೇ ಸಾಲದಾಗಿದೆ. ಬೇಸತ್ತು ಯಾವುದಾದರೂ ಸರಿಯೇ ಹೇಗಾದರೂ ಸರಿಯೇ ಕೆಲಸವನ್ನು ಹಿಡಿಯೋಣವೆಂದು ಹೊರಟರೆ ಆ ಉದ್ಯೋಗದಿಂದ ಬರುವ ಆದಾಯ ಏತಕ್ಕೂ ಸಾಲುವುದಿಲ್ಲ. ತಮಗೆ ಒಗ್ಗದ ಉದ್ಯೋಗವನ್ನು ಮಾಡುವ ಅನಿವಾರ್ಯತೆ ಹಲವರಲ್ಲಿ ಮಾನಸಿಕ ಕ್ಷೋಭೆಯನ್ನುಂಟು ಮಾಡುತ್ತದೆ. ಮಾನಸಿಕ ರೋಗಗಳು ಕಾಣಿಸುತ್ತವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ
ನಮ್ಮನ್ನು ದೇವರೇ ಕಾಪಾಡಬೇಕು!
ನಾವಿಲ್ಲದಾಗ ನಮ್ಮ ಬೆಳೆಯನ್ನು ಕಾಪಾಡುವುದು ಹೇಗೆ ಎಂಬ ಪ್ರಶ್ನೆಗೆ ನನಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ. ಅಲ್ಲಿಯೇ ಮನೆ ಮಾಡಿಕೊಂಡು ಇರುವುದು ನನಗೆ ಇನ್ನೂ ಸಾಧ್ಯವಿರಲಿಲ್ಲ. ಹೊಲದಲ್ಲಿ ಕ್ಯಾಮೆರಾ ಹಾಕೋಣ ಅಂತಲೂ ಯೋಚಿಸಿದೆ. ಆದರೆ ಹಾಗೆ ಮಾಡಲು ಅಲ್ಲೊಂದು ತೋಟದ ಮನೆಯಾದರೂ ಬೇಕಲ್ಲ.
ಗುರುಪ್ರಸಾದ್ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣದ 19ನೇ ಕಂತು
10 ಫಾರ್ 74 ಮತ್ತು ‘ಮೈಸೂರ್ ಎಕ್ಸ್ಪ್ರೆಸ್’
ಆದರೆ ಆ ಮ್ಯಾಚಿನಲ್ಲಿ ವೆಸ್ಟ್ ಇಂಡೀಸ್ನ ಬೋಲರ್ ಮೆರ್ವಿನ್ ಡಿಲ್ಲನ್ರ ಒಂದು ಬೌನ್ಸರ್ ಎಷ್ಟು ರಭಸದಿಂದ ಬಂತೆಂದರೆ ಕುಂಬ್ಳೆಯ ದವಡೆಗೆ ತಾಕಿ, ದವಡೆ ಮುರಿದುಹೋಯಿತು. ಕುಂಬ್ಳೆ ಆಸ್ಪತ್ರೆಗೆ ಹೋಗಿ ಶಸ್ತ್ರಚಿಕಿತ್ಸೆಗೆ ತಯಾರಾಗಿ ಯಾವಾಗ ಅದು ನಡೆಯುತ್ತೋ ಎಂದು ಎಲ್ಲರೂ ಕಾಳಜಿಯಿಂದ ಇದ್ದಾಗ, ವೆಸ್ಟ್ ಇಂಡೀಸ್ ಆಡುವಾಗ ಕುಂಬ್ಳೆ ಬ್ಯಾಂಡೇಜ್ ಹಾಕಿಕೊಂಡು ಮೈದಾನಕ್ಕೆ ಇಳಿದರು!
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಆಟದ ಕುರಿತ ಬರಹ ನಿಮ್ಮ ಓದಿಗೆ
ಅವರಿಬ್ಬರೂ ಆ ಸ್ಥಿತಿ ತಲುಪಿ ಬಂದಿದ್ದರು…
ಅಲ್ಲಾಸಾಬರು ಹಾಗೂ ಶಿವಣ್ಣನವರು ಇಬ್ಬರೂ ವಿಭಿನ್ನ ನೆಲೆ, ಪರಿಸರದಿಂದ ಬಂದವರು. ಇಬ್ಬರ ಜಾತಿ ಧರ್ಮಗಳು ಬೇರೆ. ಶಿಕ್ಷಣ, ಆರ್ಥಿಕ ಸ್ಥಿತಿ ವಿಭಿನ್ನ. ಒಬ್ಬರು ದೇವರ ಜಪತಪ ಮಾಡುತ್ತಾ ಸ್ವರ್ಗ ನರಕಗಳ ಬಗ್ಗೆ ಹೇಳುತ್ತಾ ಸತ್ತ ನಂತರದ ಜೀವನ ವಿವರಿಸುತ್ತಾ ಸಂಪೂರ್ಣವಾಗಿ ಧಾರ್ಮಿಕ ವಿಚಾರಗಳನ್ನು ನಂಬುತ್ತಾ ಜಗತ್ತಿನ ಪ್ರತಿಯೊಂದರ ಸೃಷ್ಟಿಯೂ ಆ ದೇವನಿಂದಾದ್ದು ಎಂದು ನಂಬಿ ಸಂಪ್ರದಾಯಬದ್ಧವಾಗಿ ಬದುಕುತ್ತಿರುವ ವ್ಯಕ್ತಿ.
ಇಸ್ಮಾಯಿಲ್ ತಳಕಲ್ ಬರೆಯುವ “ತಳಕಲ್ ಡೈರಿ”
ಬನ್ಯಾ ಮರ ಹಬ್ಬ ಮತ್ತು ಬನ್ಯಾ ಡ್ರೀಮಿಂಗ್
ಅಬೊರಿಜಿನಲ್ ಜನರ ಜೀವನದಲ್ಲಿ ಡ್ರೀಮಿಂಗ್ ಸ್ಟೋರೀಸ್ ಎನ್ನುವುದು ಅವಿಭಾಜ್ಯ ಅಂಗವಾಗಿದೆ. ಭಾರತೀಯ ಹಿಂದೂ ಧರ್ಮದಲ್ಲಿ ದೇವರುಗಳು ಮತ್ತು ಅನೇಕಾನೇಕ ಪುರಾಣಗಳು ಹಾಸುಹೊಕ್ಕಾಗಿರುವಂತೆ. ಅಬೊರಿಜಿನಲ್ ಜೀವನದಲ್ಲಿ ಪ್ರತಿಯೊಂದನ್ನೂ ಸ್ಪಿರಿಟ್ಗಳು, ಅವುಗಳು ಎಲ್ಲ ಬಗೆಯ ಜೀವಜಾಲದೊಂದಿಗೆ ಹೊಂದಿರುವ ಸಂಬಂಧವು ಎಲ್ಲರ ಜೀವನದ ಆಗುಹೋಗುಗಳನ್ನು ನಿರ್ದೇಶಿಸುತ್ತವೆ.
ಡಾ. ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’
ಹಳ್ಳಿಯ ಸಹವಾಸವೇ ಬೇಡ…!
ಕಾರ್ಪೊರೇಟ್ ಜಗತ್ತಿನಲ್ಲಿ ನಡೆಯುವ ರಾಜಕೀಯಗಳಿಂದ ರೋಸಿ ಹೋಗಿ ಕೆಲಸ ಬಿಟ್ಟು ಬಂದು ಹಳ್ಳಿಯಲ್ಲಿ ನೆಮ್ಮದಿ ಕಾಣಬೇಕು ಅಂದರೆ ಇಲ್ಲಿ ಇನ್ನೂ ಹದಗೆಟ್ಟ ಪರಿಸ್ಥಿತಿ ಇದೆ ಅನಿಸಿತು. ಸುಳ್ಳುಗಳು, ಜಾತಿ, ಕಳುವು ಇನ್ನೂ ಏನೇನು ನೋಡೋದು ಇದೆಯೋ ಇಲ್ಲಿ ಅನಿಸಿತು. ಅತ್ತೆ ಮಾವ ನಮ್ಮ ಸಂಬಂಧಿಯೇ ಆಗಿದ್ದರೂ ಅವರು ನಮ್ಮ ಪರವಾಗಿ ನಿಲ್ಲಲಾರರು ಎಂಬ ಕಟು ಸತ್ಯದ ಅರಿವು ಆಗಿತ್ತು. ಎಷ್ಟೇ ಅಂದರೂ ಅಲ್ಲಿನ ಜನರ ಜೊತೆಗೆ ಬದುಕುವ ಅವರು, ಎಲ್ಲಿಂದಲೋ ಬಂದ ಯಾವಾಗಲೋ ಒಮ್ಮೆ ಬಂದು ಹೋಗುವ ನನ್ನ ಪರವಾಗಿ ಹೇಗೆ ತಾನೇ ನಿಂತಾರು?
ಗುರುಪ್ರಸಾದ್ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣದ 18ನೇ ಕಂತು
ದ್ರಾವಿಡ್ ಮತ್ತು ಗಂಗೂಲಿ: ಒಂದು ಅಪೂರ್ವ ಜೋಡಿ
ಅವರ ಕ್ರಿಕೆಟ್ಟನ್ನು ಸದಾಕಾಲ ಸ್ಮರಿಸಲು ಕರ್ನಾಟಕದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ‘ದ ವಾಲ್ʼಗೆ ಒಂದು ಗೋಡೆ ಮೀಸಲಿಟ್ಟು ಅವರ ಚಿತ್ರವನ್ನು ಮಾಡಿಸಿದ್ದಾರೆ. ಇದು ಒಂದು ರೀತಿ ಜನಗಳು, ಕ್ರೀಡಾಭಿಮಾನಿಗಳು, ಮುಂದಿನ ಪೀಳಿಗೆಯವರು ರಾಹುಲ್ ದ್ರಾವಿಡ್ರ ಆಟವನ್ನು ಇಲ್ಲಿ ಬಂದು ನೋಡಿ ಅವರ ಆಟವನ್ನು ಸ್ಮರಿಸುವುದಕ್ಕೆ ಅವಕಾಶ. ಅದರ ಮೇಲೆ ಕನ್ಸಿಸ್ಟೆನ್ಸಿ, ಕಮಿಟ್ಮೆಂಟ್, ಕ್ಲಾಸ್ ಎಂದು ಬರೆಸಿದ್ದಾರೆ. ಅರ್ಥಾತ್ ಸ್ಥಿರತೆ, ಭದ್ಧತೆ ಮತ್ತು ಆಡುವ ಶಿಸ್ತು ಅನ್ನುವ ಅರ್ಥ ಕೊಡುತ್ತೆ. ಇದೆಲ್ಲವೂ ಅವರ ಆಟಗಾರಿಕೆಯಲ್ಲಿ ನೋಡಬಹುದು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ
ಆಡಿಕೊಳ್ಳುವ ಬಾಯಿಗೊಂದು ಬೀಗ…
ಯಾವ ಯಾವ ಕಾರಣಕ್ಕೆ ದಾಂಪತ್ಯಗಳು ಮುರಿದು ಬೀಳ್ತಿವೆ ಎಂಬುದು ಚರ್ಚೆಗೆ ನಿಲುಕುವ ವಿಷಯವೇ ಅಲ್ಲ. ಈಗ ಪ್ರತಿಮನೆಯಲ್ಲೂ ವಿಚ್ಚೇದನದ ಕೇಸ್ಗಳು, ಹೆಣ್ಣು-ಗಂಡಿನ ವರ್ತನೆ, ಮನಃಸ್ಥಿತಿಯ ಕುರಿತಾದ ದೂರುಗಳು, ಸ್ತ್ರೀವಾದ, ನೊಂದಗಂಡಂದಿರ ಸಂಘದ ಅಳಲುಗಳು ಯಥೇಚ್ಛವಾಗಿವೆ. ಯಾರ ಪರವೂ, ವಿರುದ್ಧವೂ ನಿಲ್ಲಲಾಗದ, ನಿಂತು ಸಾಧಿಸಲಾಗದ ಸಿಕ್ಕಾಗಿ ಉಳಿದಿವೆ. ಆದರೆ ಮಕ್ಕಳು ಬೇಕು ಅಥವಾ ಬೇಡ ಎಂಬ ಕಾರಣಕ್ಕಾಗಿ ನಡೆಯುತ್ತಿರುವ ದಾಂಪತ್ಯ ಸಮರಗಳ ಬಗ್ಗೆ ಸ್ವಲ್ಪ ಗಮನಹರಿಸಬಹುದು.
ಎಸ್. ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ ನಿಮ್ಮ ಓದಿಗೆ
ಸಿಹಿ ಕೊಟ್ಟರೆ ಅಳುತ್ತಿದ್ದ ಮಂದಿ…
ಸುತ್ತ ಎತ್ತ ನೋಡಿದರೂ ರಾಕ್ಷಸಾಕಾರದ ಗುಡ್ಡಗಳು, ತುಂಬಿ ಹರಿಯುತ್ತಿದ್ದ ನದಿಗಳು. ಅಲ್ಲಿ ನಮ್ಮಂತೆ ಗುಂಪು ಗುಂಪು ಮನೆಗಳಾಗಲಿ ಹಳ್ಳಿಗಳಾಗಲಿ ಇಲ್ಲ. ಗುಡ್ಡಗಳಲ್ಲಿಯೇ ಹಳ್ಳಿಗಳು. ಅರ್ಧ ಕಿಲೋಮೀಟರ್ ಒಂದು, ಕಿಲೋಮೀಟರ್ ಅಂತರದಲ್ಲಿ ಒಂದೊಂದು ಮನೆಗಳು. ವಾಹನಗಳಿಗಿಂತ ಕುದುರೆಗಳೆ ಸಂಚಾರಕ್ಕೆ ಆಸರೆಗಳು. ನಮ್ಮ ತಂಡ ಮೊದಲೆ ತಯಾರಿಸಿ ಇಟ್ಟ ಅಡುಗೆ ಸಾಮಗ್ರಿಗಳ, ಬಟ್ಟೆ, ಹಾಸಿಗೆ ಹೊದಿಕೆಗಳ ಕಿಟ್ಟನ್ನು ಪ್ರತಿ ಮನೆಗೂ ತಲುಪಿಸಿ ಅವರಿಗೊಂದಿಷ್ಟು ಸಾಂತ್ವಾನ ಹೇಳಿ ಬರುತ್ತಿತ್ತು. ಶಾಲೆಗೆ, ದುಡಿಯಲು, ಕೊಂಡಕೊಳ್ಳಲು ಹೊರಗೆ ಹೋದವರು ಮರಳಿ ಹೆಣವಾಗಿ ಸಿಗುತ್ತಿದ್ದರು.
ಇಸ್ಮಾಯಿಲ್ ತಳಕಲ್ ಬರೆಯುವ ‘ತಳಕಲ್ ಡೈರಿ’ಯಲ್ಲಿ ಹೊಸ ಬರಹ ನಿಮ್ಮ ಓದಿಗೆ










