Advertisement

ಅಂಕಣ

ರೂಪಾತೀತ, ಗಾತ್ರಾತೀತ, ಕಾಲಾತೀತ ಶಿವ….

ರೂಪಾತೀತ, ಗಾತ್ರಾತೀತ, ಕಾಲಾತೀತ ಶಿವ….

ಮಧ್ಯಪ್ರದೇಶದ ಭೋಜಪುರದಲ್ಲಿರುವ ಭೋಜೇಶ್ವರ, ತಮಿಳುನಾಡಿನ ತಂಜಾವೂರಿನ ಬೃಹದೇಶ್ವರ ಲಿಂಗ ನೆನಪಾಗುತ್ತದೆ. ಕೆಲವು ಮನೆತನಗಳ ಸಂಪ್ರದಾಯದಲ್ಲಿ ನದಿ ಮತ್ತು ಸಮುದ್ರ ತೀರದಲ್ಲಿ ವಾಸಿಸುವ ಜನರು ಪ್ರತಿದಿವಸ ಅದೇ ನೀರಿನಲ್ಲಿ ಸ್ನಾನ ಮಾಡಿ ಅಲ್ಲಿ ಸಿಗುವ ಮರಳಿನಲ್ಲಿ ಒಂದು ಲಿಂಗವನ್ನು ರಚಿಸಿ ಪೂಜಿಸಿ ಮತ್ತೆ ಅದನ್ನು ನೀರಿನಲ್ಲಿ ಅಂದೇ ವಿಸರ್ಜಿಸಿ ಮನೆಗೆ ಬರುವುದೂ ಉಂಟು. ಇದನ್ನು ವಿದ್ಯಾನಿವಾಸ್‌ ಮಿಶ್ರಾ ಒಂದು ಕಡೆ ಬರೆಯುತ್ತಾರೆ. ಮನುಷ್ಯ ಕಟ್ಟಿರುವ ಲಿಂಗಗಳಲ್ಲದೆ ಅನೇಕ ಕಡೆಗಳಲ್ಲಿ ಉದ್ಭವ ಲಿಂಗಗಳು ಸಿಗುತ್ತವೆ.
‘ದೇವಸನ್ನಿಧಿ’ ಅಂಕಣದಲ್ಲಿ ಶಿವನ ಹಲವು ರೂಪ, ರೂಪಕಗಳ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

read more
ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕೊರೊನಾ ಕವಿತೆಗಳು

ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕೊರೊನಾ ಕವಿತೆಗಳು

ದಾರಿ ತಪ್ಪಬಾರದೆಂದು ರೈಲು ಹಳಿಯ ಹಿಡಿದು ಹೊರಟ ಮುಗ್ಧ ಜನಗಳು ದೇಶದೆಲ್ಲೆಡೆ ಸಾರ್ವಜನಿಕ ಸಮಚಾರ ನಿರ್ಬಂಧವಾಗಿರುವಾಗ ಈ ಹಳಿಯಮೇಲೆ ಒಂದಿಷ್ಟು ಹೊತ್ತು ವಿರಮಿಸೋಣವೆಂದು ಮಲಗಿರುತ್ತಾರೆ. ದುರಾದೃಷ್ಟವಶಾತ್ ಗೂಡ್ಸ್ ರೈಲು ಹರಿದು ಹಳಿಯ ಮೇಲೆ ಮಲಗಿದ್ದವರು ಶವಗಳಾಗುತ್ತಾರೆ. ಅವರ ಪಕ್ಕವೇ ಬಿದ್ದಿದ್ದ ರೊಟ್ಟಿ ಚೂರುಗಳು, ರಕ್ತಸಿಕ್ತ ಮಾಂಸದ ತುಂಡುಗಳಾದ ಅಮಾಯಕ ಹೆಂಗಸರು ಮಕ್ಕಳು ಇಡೀ ದೇಶವನ್ನು ಮರುಗುವಂತೆ ಮಾಡುತ್ತವೆ.
ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿಯವರ “ಕೊರೊನಾ” ಕವನ ಸಂಕಲನದ ಕುರಿತ ಬರಹ ಇಲ್ಲಿದೆ

read more
ಆಸ್ಟ್ರೇಲಿಯಾದ ‘ಬಿಗ್ ಥಿಂಗ್ಸ್’ ಆಕರ್ಷಣೆಗಳು

ಆಸ್ಟ್ರೇಲಿಯಾದ ‘ಬಿಗ್ ಥಿಂಗ್ಸ್’ ಆಕರ್ಷಣೆಗಳು

ಏನಿದು ‘ಬಿಗ್ ಥಿಂಗ್ಸ್’ ಎಂದು ಮೊದಲ ಬಾರಿ ಕೇಳಿದಾಗ ನನ್ನ ಆಸ್ಟ್ರೇಲಿಯನ್ ಸ್ನೇಹಿತೆಯ ಗಂಡ ಬಲು ಸೊಗಸಾಗಿ ವಿವರಿಸಿದ್ದರು. ಒಂದೂರಿನ ಜನರು ಸೇರಿ ತಮಗೆ ಆಪ್ತವೆನಿಸಿದ ಹಣ್ಣು, ಆಹಾರ, ಪ್ರಾಣಿ, ಪಕ್ಷಿ, ಮರ ಇತ್ಯಾದಿಗಳಲ್ಲಿ ಒಂದನ್ನು ಆರಿಸಿಕೊಂಡು ಅದನ್ನು ದೊಡ್ಡ ಗಾತ್ರದ ಶಿಲ್ಪ ಕೃತಿಯಾಗೋ, ಲೋಹ ಕಲಾ ಕೃತಿಯಾಗಿಯೋ ನಿರ್ಮಿಸಿ ಹೆಮ್ಮೆಯಿಂದ ಆ ಪ್ರತಿಮೆಯನ್ನು ತಮ್ಮೂರಲ್ಲಿ ಸ್ಥಾಪಿಸುವುದು. ಕ್ರಮೇಣ ಅದಕ್ಕೆ ಪ್ರಚಾರ ಕೊಟ್ಟು ಅದನ್ನು ದೇಶದ ‘ಬಿಗ್ ಥಿಂಗ್ಸ್’ ಪಟ್ಟಿಗೆ ಸೇರುವಂತೆ ಮಾಡುವುದು. ಇದರಿಂದ ಆ ಊರಿಗೆ ಅದೇನೋ ವಿಶೇಷ ಗುರುತು ಸಿಕ್ಕಿದಂತಾಗುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

read more
ಇದ್ದ ಮೂವರಲ್ಲಿ ಕದ್ದವರು ಯಾರು?

ಇದ್ದ ಮೂವರಲ್ಲಿ ಕದ್ದವರು ಯಾರು?

ಹಿಂದೊಮ್ಮೆ ಹುಸೇನ್ ಸಾಬ್‌ಗೆ ಹೊಲ ಮಾಡಲು ಕೊಟ್ಟಾಗ ಸುತ್ತಲೂ ಒಂದೈವತ್ತು ಅಪ್ಪೆ ಮಿಡಿ ಗಿಡಗಳನ್ನು ನೆಟ್ಟಿದ್ದೆ. ಸ್ವಲ್ಪ ಬೆಳೆದಾದ ಮೇಲೆ ಪೂರ್ತಿ ಗಿಡಗಳನ್ನು ಬೆಂಕಿ ಹಚ್ಚಿ ಇಲ್ಲದಂತೆ ಮಾಡಿದ್ದರು. ಬೆಂಕಿ ಹಚ್ಚಿದ್ದು ಯಾರು ಅಂತ ಕೊನೆಗೂ ಗೊತ್ತಾಗಲಿಲ್ಲ. ಒಬ್ಬರ ಮೇಲೆ ಒಬ್ಬರು ಹಾಕಿ ನನ್ನನ್ನು ಮಂಗ ಮಾಡಿದ್ದರು! ಇಲ್ಲಿನವರೆ ಕಳ್ಳರು, ಆ ಜಾತಿಯವರನ್ನು ನಂಬಬಾರದು ಅಂತೆಲ್ಲ ಹೇಳೋದೆಲ್ಲ ತಪ್ಪು. ಕಳ್ಳರದೇ ಒಂದು ಪ್ರತ್ಯೇಕ ಜಾತಿ! ಏನಾಗುತ್ತೋ ನೋಡೋಣ ಅಂತ ಸುಮ್ಮನಾದೆ. ಆದರೂ ಮುಂದೊಮ್ಮೆ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬೇಕು ಅಂತ ನಿರ್ಧರಿಸಿದೆ.
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣದ 17ನೇ ಕಂತು

read more
ಕಪಿಲ್ ದೇವ್ ಮತ್ತು ಧೋಣಿ ಎಂಬ ಅಮೂಲ್ಯ ರತ್ನಗಳು

ಕಪಿಲ್ ದೇವ್ ಮತ್ತು ಧೋಣಿ ಎಂಬ ಅಮೂಲ್ಯ ರತ್ನಗಳು

ಧೋಣಿ ಗೆದ್ದ ಕಪ್ಪನ್ನು ಚಿಕ್ಕವರಾದ ಜೊಗಿಂದರ್ ಮತ್ತು ಶ್ರೀಶಾಂತರಿಗೆ ಕೊಟ್ಟು ಕೊನೆಯಲ್ಲಿ ಹೋಗಿ ನಿಂತರು. ಅಂದಿನಿಂದ ಅದೇ ಅವರು ತಂದ ಹೊಸ ಪದ್ಧತಿ. ಅವರು ಕಪ್ಪನ್ನು, ಟ್ರೋಫಿಯನ್ನು ತಂಡದ ಹೊಚ್ಚ ಹೊಸಬರಿಗೆ ಕೊಟ್ಟು ಕೊನೆಯಲ್ಲಿ ಮಿಕ್ಕವರ ಜೊತೆ ನಿಲ್ಲುತ್ತಿದ್ದರು. ಗೆದ್ದಾಗಲೂ ಗದ್ದಲ ಮಾಡದೆ, ಸೋತಾಗಲೂ ಬಹಳ ಕುಗ್ಗದೆ, ಮುಂದೆ ಏನು ಮಾಡಬೇಕೂಂತ ಯೋಚಿಸುತ್ತಿದ್ದರು. ಒಬ್ಬ ಸ್ಥಿತಪ್ರಜ್ಞ ಹೇಗಿರುತ್ತಾನೆ, ಹೇಗೆ ವರ್ತಿಸುತ್ತಾನೆ ಎಂಬ ದರ್ಶನ ಪ್ರೇಕ್ಷಕರಿಗೆ ಮತ್ತು ಟಿವಿಯಲ್ಲಿ ನೋಡುತ್ತಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಅವರನ್ನು ನೋಡಿದಾಗ ಸಿಗುತ್ತಿತ್ತು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ನಿಮ್ಮ ಓದಿಗೆ

read more
ಹಂಚಿ ಹಗೂರಾಗಿ, ಬೇಗುದಿಗಳನೆಲ್ಲ…

ಹಂಚಿ ಹಗೂರಾಗಿ, ಬೇಗುದಿಗಳನೆಲ್ಲ…

ಎಲ್ಲದರಲ್ಲೂ ಹುಳುಕು ಹುಡುಕುತ್ತಾ, ಗೋಳುಗುಟ್ಟುತ್ತಾ, ಆಪಾದಿಸುತ್ತಾ, ಕೊಂಕು ತೆಗೆಯುತ್ತಾ ಕೂರುವುದು ಸರಿಯಲ್ಲ. ಆದರೆ ಬದುಕೆಂದರೆ ಸಿಹಿ-ಕಹಿಗಳೆರಡೂ ಇರುವಾಗ, ಸಿಹಿಯ ಮಾತನ್ನೇ ಹಂಚುತ್ತಾ, ಕಹಿಯನ್ನೆಲ್ಲಾ ಒಳಗೇ ನುಂಗಿ ನುಂಗಿ ನಂಜುಂಡರಾಗುವುದು ನಮ್ಮ ಮೇಲೆ ನಾವೇ ಹೊರೆಸಿಕೊಳ್ಳುವ ಭಾರ. ಹತ್ತರಲ್ಲಿ ಒಂದು ಸಲವಾದರೂ ನೋವನ್ನು ನೋವಾಗಿ, ಅಳುವನ್ನು ಅಳುವಾಗಿ, ಸೋಲನ್ನು ಸೋಲಾಗಿ ತೋರಿಸಿಕೊಳ್ಳುವ ಸ್ವಾತಂತ್ರ್ಯ ನಾವು ರೂಢಿಸಿಕೊಳ್ಳಬೇಕಿದೆ.
ಎಸ್ ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ

read more
‘ಕಟ್ಟುತ್ತಿರುವೆ ಕವಿತೆ ನೋಡಾ…..’

‘ಕಟ್ಟುತ್ತಿರುವೆ ಕವಿತೆ ನೋಡಾ…..’

‘ತಲೆಮಾರು’ ಕವಿತೆಯಲ್ಲಿನ ‘ಮೂಕಹಕ್ಕಿ’ ಪೂರ್ವಜರನ್ನು ಕುರಿತ ಕವಿತೆಯೆನ್ನಲು ಅನೇಕ ಪುರಾವೆಗಳು ಸಿಗುತ್ತವೆ. ಆಧುನಿಕತೆ ಮತ್ತು ಗತಕಾಲದ ಪಳೆಯುಳಿಕೆಗಳ ನಡುವೆ ತಣ್ಣನೆಯ ಪ್ರತಿರೋಧವನ್ನು ಇಲ್ಲಿ ಗಮನಿಸಬಹುದಾಗಿದೆ. ಅವ್ವನ ತಾಯ್ತನದ ಕುರಿತು ‘ಮೀಯುವುದೆಂದರೆ ಚೈತನ್ಯಗಳ ಹುಟ್ಟು’ ಕವಿತೆಯಲ್ಲಿ ಆಪ್ತ ದಾಟಿಯಲ್ಲಿ ಬರೆಯುವ ಕವಯತ್ರಿಗೆ ಇಲ್ಲಿ ಬಾಲ್ಯದ ನೆನಪು ಮರುಕಳಿಸಿದೆ. ‘ಮಿಂದಾಗಲೆಲ್ಲ ಅವ್ವನದು ಶೀತದ ಚಡಪಡಿಕೆ’ ಎನ್ನುವಲ್ಲಿ ಅವ್ವನ ಕಾಳಜಿಯೊಂದಿಗೆ ಆಕೆಯ ಜವಾಬ್ದಾರಿಯನ್ನು ಕಂಡು ಮರುಗಲೇಬೇಕಾಗುತ್ತದೆ.
ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣ

read more
ಅನ್ ರಿಯಲ್ ಲೋಕದಲ್ಲಿ ಶಾಂತಿ ಮಂತ್ರ ಜಪ

ಅನ್ ರಿಯಲ್ ಲೋಕದಲ್ಲಿ ಶಾಂತಿ ಮಂತ್ರ ಜಪ

ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದಾಗ ಈ ಬಲು ದೀರ್ಘ ಪ್ರೋಸ್/ ಪೊಯೆಟ್ರಿ, ನವ್ಯ ಕಾವ್ಯ ಬಹಳ ದಿನಗಳ ಕಾಲ ನನ್ನನ್ನು ಕಾಡಿತ್ತು. ಅದನ್ನು ಕೈಲಿ ಹಿಡಿದುಕೊಂಡು ಎಲ್ಲವನ್ನೂ ಬಿಟ್ಟು ಯಾವುದೊಂದೂ ವ್ಯವಸ್ಥೆಗೆ ಸಿಲುಕದೆ ಪ್ರಪಂಚ ಸುತ್ತುವ ಇರಾದೆ ಹುಟ್ಟಿತ್ತು. ಆ ಕಾಲದಲ್ಲಿ ಅವು ನಾನು ಮನೆಬಿಟ್ಟು ಹೋಗುವ, ಹುಟ್ಟಿ ಬೆಳೆದ ಕುಟುಂಬವನ್ನು ತ್ಯಜಿಸುವ ನಿರ್ಧಾರ ತೆಗೆದುಕೊಂಡಿದ್ದ ದಿನಗಳು. ಕಾಲೇಜು ಹುಡುಗಿ ಮನೆಬಿಟ್ಟು ಹೋದಮೇಲೆ ಹೇಗೆ ಬದುಕುವುದು ಎನ್ನುವ ಚಿಂತನೆಯಲ್ಲಿದ್ದ ದಿನಗಳು. ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

read more
ಕಳೆ ಕತ್ತರಿಸುವ ಯಂತ್ರ ಎಂಬ ಅದ್ಭುತ ಸಾಧನ

ಕಳೆ ಕತ್ತರಿಸುವ ಯಂತ್ರ ಎಂಬ ಅದ್ಭುತ ಸಾಧನ

ನನ್ನ ಕಾರ್‌ನಲ್ಲಿ ಹಿಂದಿನ ಸೀಟು ಖಾಲಿ ಇತ್ತು. ಹಾಗೆಯೇ ಹೋಗುತ್ತಾ ನಾಲ್ಕು ಹುಡುಗರಿಗೆ ಶಾಲೆಯವರೆಗೆ ಲಿಫ್ಟ್ ಕೊಡೋಣ ಅನಿಸಿತು. ಒಂದು ಹುಡುಗರ ಗುಂಪಿನ ಪಕ್ಕ ಗಕ್ಕಂತ ನಿಲ್ಲಿಸಿದೆ. ನಾನು ಏನೋ ಹೇಳುವಷ್ಟರಲ್ಲಿ ಒಬ್ಬ ಹುಡುಗ ಹಿಂದೆ ಓಡಲು ಶುರು ಮಾಡಿದ. ಅವನ ಜೊತೆಗೆ ಉಳಿದ ಹುಡುಗರೂ ಓಡತೊಡಗಿದರು! ಅಯ್ಯೊ ದೇವ್ರೆ ನನ್ನನ್ನ ಕಿಡ್ನ್ಯಾಪರ್‌ ಅಂದುಕೊಂಡರೋ ಏನೋ!? ಉಪಕಾರ ಮಾಡೋದು ಬೇಡವೇ ಬೇಡ ಅಂತ ನಾನು ಮುಂದೆ ಹೊರಟೆ. ನನ್ನ ಮುಖವನ್ನು ಕಾರಿನ ಕನ್ನಡಿಯಲ್ಲಿ ನೋಡಿಕೊಂಡೆ.
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ