Advertisement
ಅಂಜನಾ ಗಾಂವ್ಕರ್ ಬರೆದ ಈ ದಿನದ ಕವಿತೆ

ಅಂಜನಾ ಗಾಂವ್ಕರ್ ಬರೆದ ಈ ದಿನದ ಕವಿತೆ

ಒಂಟಿ ಓಲೆ
ಬೇಡಿಕೊಂಡಿತು ದೇವರಲ್ಲಿ,
ಮುಂದೆ ಬರುವುದು
ತನ್ನ ತದ್ರೂಪಿಯಾಗಲೆಂದು,
ಅತ್ತ ಕಿವಿಯು
ತುಂಡಾದ ಓಲೆಯ
ನೆನೆದು ನಕ್ಕಿತ್ತು,
ಊರ ಜಾತ್ರೆಯಲಿ ಕಂಡ
ಝುಮುಕಿ, ಲೋಲಾಕು,
ಹರಳಿನ ಕುಡುಕು,
ಬೆಳ್ಳಿಯದೋ, ಚಿನ್ನದ್ದೋ,
ಗ್ಯಾರಂಟಿದಾ ಅಥವಾ ಗಿಲಿಟ್ಟಾ,
ತೇರಿಕೋಟಾ, ಯಾವುದಿರಲಿ,
ಮೊದಲಿನಂತೆ ರಿಂಗ್
ಕಿವಿಗೆ ಫಿಕ್ಸಾಗಿರದಿರಲಿ,
ಯಾರೋ ಒಂಟಿ ಓಲೆ ಎಳೆದರು,
ಕಿವಿಯು ಹರಿಯಿತು,
ಒಂಟಿಯೋಲೆಯ ಜಂಟಿ
ಬರಲೇ ಇಲ್ಲ,
ಇತ್ತ ಕಿವಿಯು ಹರಿದು,
ಇತ್ತ ಕಿವಿಯ ಕನಸು
ನನಸಾಗದೇ ಕಮರಿತು…

About The Author

ಅಂಜನಾ ಗಾಂವ್ಕರ್

ಅಂಜನಾ ಗಾಂವ್ಕರ್ ಕುಮಟಾದಲ್ಲಿ ಶಿಕ್ಷಕ ತರಬೇತಿ ಮುಗಿಸಿ ಏಳು ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಹಿಂದಿ ಭಾಷೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ಈಗ ಯಲ್ಲಾಪುರದ ದಟ್ಟ ಅರಣ್ಯದ ನಡುವೆ ಪುಟ್ಟ ಮನೆ ಮಾಡಿದ ರೈತ ಮಹಿಳೆ. ಕತೆ ಬರೆಯೋದು ಇವರ ಹವ್ಯಾಸ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ