Advertisement
ಕೆ.ಎಂ ವಸುಂಧರಾ  ಬರೆದ ಈ ದಿನದ ಕವಿತೆ

ಕೆ.ಎಂ ವಸುಂಧರಾ ಬರೆದ ಈ ದಿನದ ಕವಿತೆ

ಹುಡುಕಾಟಗಳು ನಿಂತಿಲ್ಲ

ತುಮುಲದ ಅಲೆ ದಡ ಮುಟ್ಟಿ
ತಣಿದು, ಹಿಂದೆ ಸರಿವ
ಅಲೆಯೊಡನೆ ಬೆರೆತು ನಾ
ಹುಡುಕಾಟದ ಸುಳಿಯಲಿ
ಸುತ್ತುತ್ತಾ ಆಳಕ್ಕಿಳಿದಿರುತ್ತೇನೆ.

ಆ ಸ್ವಚ್ಛ ನೀಲಿ ಆಗಸ ದಟ್ಟಮಳೆ
ಸುರಿದು, ಬೆಟ್ಟಸಾಲು ತಣಿಸಿ,
ಇಳೆ ಎದೆಯಲಿ ಹಸಿಯೊಲವು
ಬಿತ್ತಿದ ನೆನಪುಗಳಿಗಾಗಿ ಹುಡುಕುತ್ತಾ..

ಕುಡಿಯೊಡೆದ ಬೀಜ; ಹಸಿರಾಗಿ
ನಳನಳಿಸಿ, ಮೊಗ್ಗು – ಹೂವಾಗಿ-
ಕಾಯಾಗಿ; ಬಿಳಿ-ಹಳದಿ- ಕೆಂಪು..
ರೂಪಾಂತರಿಸುವ ಸೋಜಿಗವ
ಹುಡುಕುತ್ತಾ…

ನಮ್ಮಾಸೆ ಒಂದಾಗಿ, ನಲುಮೆ
ಮಗುವಾಗಿ ನಗುವಾಗಿ ನಲಿದಾಟದ
ಸಂಭ್ರಮದ ಹೊತ್ತಿನಲಿ ‘ಅರೆ
ಎಲ್ಲಿತ್ತಿದೆಲ್ಲಾ!’ ಎಂದು ಹುಡುಕುತ್ತಾ..

ನಿರಂತರದ ದುಡಿಮೆ ನಡುವೆ
ವಿಶ್ರಾಂತಿ ಬಯಸಿ ಜೀವ;
ಥಟ್ಟನೆದ್ದು ಮರೆಯಾದಾಗ, ಎತ್ತ
ಸಾಗಿತೆಂಬ ದಿಗ್ಭ್ರಮೆಯ ಅನಂತದಲಿ
ಜೀವ ಚೈತನ್ಯವನು ಅರಸುತ್ತಾ…

ಈ ಯಾವ ಹುಡುಕಾಟಗಳೂ
ಇನ್ನೂ ನಿಂತಿಲ್ಲ…

ಮಂಡ್ಯ ಮೂಲದ ಕೆ.ಎಂ ವಸುಂಧರಾ ಬೆಂಗಳೂರು ವಾಸಿ.
ಕರ್ನಾಟಕ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ಮರೆತು ಬಿಟ್ಟದ್ದು’ ಇವರ ಪ್ರಕಟಿತ ಕವನ ಸಂಕಲನ.
ಬರವಣಿಗೆ,ಓದು, ಪ್ರವಾಸ, ಚಾರಣ ಇವರ ಹವ್ಯಾಸಗಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. VASUNDHARA

    ಧನ್ಯವಾದಗಳು ಕೆಂಡಸಂಪಿಗೆ

    Reply
  2. RaJANI g C

    ಭಾವದಲೆಗಳ ಹುಡುಕಾಟ ತೀರದ ಭಾವಯಾನ…ಸುಂದರ ಕವನ ವಸುಂಧರ

    Reply

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ