Advertisement

ಪ್ರವಾಸ

ಕೋಲಾರದ ಸೋಮೇಶ್ವರ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

ಕೋಲಾರದ ಸೋಮೇಶ್ವರ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ದೇವಾಲಯದೊಳಗೆ ಕಾಲಿರಿಸುತ್ತಿದ್ದಂತೆ ಕಟ್ಟಡದ ತುಂಬೆಲ್ಲ ನಿಂತ ಭವ್ಯವಾದ ಕಂಬಗಳು ಬೆರಗುಗೊಳಿಸುತ್ತವೆ. ಇಂಥ ಅರವತ್ನಾಲ್ಕು ಕಂಬಗಳನ್ನುಳ್ಳ ಮುಖಮಂಟಪವು ದೇಗುಲದ ಪ್ರಮುಖ ಆಕರ್ಷಣೆ. ಮಂಟಪದ ಸುತ್ತಲಿನ ಪ್ರತಿಯೊಂದು ಕಂಬದಲ್ಲೂ ನಿಂತ ಭಂಗಿಯಲ್ಲಿರುವ ಸಿಂಹವೊಂದನ್ನು ಕೆತ್ತಲಾಗಿದ್ದು ಇವೆಲ್ಲ ಸಿಂಹಗಳು ಕೂಡಿ ಇಡಿಯ ಮಂಟಪವನ್ನು ಹೊತ್ತಂತೆ ಭಾಸವಾಗುತ್ತದೆ. ಪ್ರತಿ ಕಂಬದ ಮೇಲೂ ಚಿತ್ರವಿಚಿತ್ರವಾದ ಪ್ರಾಣಿಪಕ್ಷಿಗಳು…”

read more
ಮೂಡಬಿದರೆಯ ಸಾವಿರಕಂಬದ ಬಸದಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

ಮೂಡಬಿದರೆಯ ಸಾವಿರಕಂಬದ ಬಸದಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಬಸದಿಯೊಳಕ್ಕೆ ಕಾಲಿರಿಸುತ್ತಿದ್ದಂತೆ ವಿಶಾಲವಾದ ಜಗತಿಯ ಮೇಲೆ ನಿರ್ಮಿತವಾದ ಮಾನಸ್ತಂಭವು ಕಣ್ಸೆಳೆಯುತ್ತದೆ. ಐವತ್ತು ಅಡಿಗಳಷ್ಟು ಎತ್ತರದ ಈ ಭವ್ಯಸ್ತಂಭವನ್ನು ಭೈರರಸನ ಪತ್ನಿ ನಾಗಲಾದೇವಿ ಎಂಬಾಕೆಯು ನಿರ್ಮಾಣ ಮಾಡಿಸಿದಳಂತೆ. ಕಂಬದ ಬುಡದ ಚೌಕದಲ್ಲಿ ಸುತ್ತ ನಾಲ್ಕೂ ಕಡೆಗಳಲ್ಲಿ ಆಕರ್ಷಕ ಕಲಾವಿನ್ಯಾಸಗಳಿವೆ. ಮೇಲೆ ಹೋದಂತೆ ಕಂಬದ ಹೊರಮೈ ಅನೇಕ ಕೋನಗಳನ್ನು ಪಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಿದೆ.”

read more
ಲಕ್ಕುಂಡಿಯ ಬ್ರಹ್ಮಜಿನಾಲಯ: ಟಿ.ಎಸ್. ಗೋಪಾಲ್  ಬರೆಯುವ ದೇಗುಲಗಳ ಸರಣಿ

ಲಕ್ಕುಂಡಿಯ ಬ್ರಹ್ಮಜಿನಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಕನ್ನಡ ನಾಡಿನ ಜೈನವಾಸ್ತುಶಿಲ್ಪದ ಉತ್ತಮ ಮಾದರಿಗಳಲ್ಲೊಂದೆಂದು ಪರಿಗಣಿತವಾಗಿರುವ ಲಕ್ಕುಂಡಿಯ ಬ್ರಹ್ಮಜಿನಾಲಯ ದೊಡ್ಡಆವರಣ, ವಿಶಾಲವಾದ ನಿರ್ಮಿತಿಗಳಿಂದ ಗಮನಸೆಳೆಯುತ್ತದೆ. ಅತ್ತಿಮಬ್ಬೆ ಕಟ್ಟಿಸಿದ ಗುಡಿಯ ಪೂಜಾನಿರ್ವಹಣೆಗೆ ಅನೇಕ ಭಕ್ತರು ದಾನದತ್ತಿಗಳನ್ನು ನೀಡಿದ ಶಾಸನಗಳು ಲಭ್ಯವಿವೆ. ಮುಖಮಂಟಪ, ಮಹಾಮಂಟಪ, ಅಂತರಾಳ, ಗರ್ಭಗುಡಿಗಳೆಲ್ಲವನ್ನೂ ಒಳಗೊಂಡಿರುವ ಈ ಆಲಯದ ಶಿಖರಭಾಗದಲ್ಲೂ ಶುಕನಾಸಿಗೆ… “

read more
ಕುಬಟೂರಿನ ಕೈಟಭೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

ಕುಬಟೂರಿನ ಕೈಟಭೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಪುರಾಣಕ್ಕಿಂತ ಐತಿಹಾಸಿಕವಾಗಿ ಹೆಚ್ಚಿನ ಮಹತ್ವ ಪಡೆದ ಈ ಕುಬಟೂರು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯ ಸಮೀಪವಿದೆ. ಕೈಟಭೇಶ್ವರ ದೇವಾಲಯವಿರುವ ಕುಬಟೂರಿಗೆ ಕುಪ್ಪತ್ತೂರು, ಕೋಟಿಪುರ ಮೊದಲಾದ ಹೆಸರುಗಳೂ ಇವೆ. ಕ್ರಿ.ಶ. ಮೂರನೆಯ ಶತಮಾನದ ಬನವಾಸಿಯ ಕದಂಬರಿಂದ ಮೊದಲುಗೊಂಡು ಬಾದಾಮಿಯ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು ಹಾಗೂ ಕೆಳದಿಯ ನಾಯಕರವರೆಗೆ…”

read more
ಭುವನಗಿರಿಯ ಭುವನೇಶ್ವರಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

ಭುವನಗಿರಿಯ ಭುವನೇಶ್ವರಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಪ್ರಕೃತಿ-ಪುರುಷರ ಪ್ರತೀಕವಾದ ಶಕ್ತಿ-ಶಿವರೂಪಿ ದೇವತೆಗಳನ್ನು ಪ್ರಾಚೀನ ಕಾಲದಿಂದಲೂ ಶಿಲಾರೂಪದಲ್ಲಿ ಗುರುತಿಸಿಕೊಂಡು ಆ ದೇವದೇವಿಯರ ಆರಾಧನೆಯನ್ನು ರೂಢಿಯಲ್ಲಿ ಆಚರಿಸುತ್ತ ಬರಲಾಗಿದೆ. ಶಿವನು ಆಲಯಗಳಲ್ಲಿ ಲಿಂಗರೂಪಿಯಾಗಿಯೇ ಗೋಚರಿಸಿದರೆ, ದೇವಿಯ ಶಿಲಾರೂಪವನ್ನು ಲೋಹಮುಖ, ಪುಷ್ಪಾದಿ ಅಲಂಕಾರಗಳಿಂದ ಸಿಂಗರಿಸಲಾಗಿರುತ್ತದೆ. ಭುವನಗಿರಿಯಲ್ಲೂ ಭುವನೇಶ್ವರಿಯರೂಪವು ವ್ಯಕ್ತವಾಗಿರುವುದು ಹೀಗೆಯೇ.”

read more
ಐಹೊಳೆಯ ದುರ್ಗದ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

ಐಹೊಳೆಯ ದುರ್ಗದ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಐಹೊಳೆಯಲ್ಲಿರುವ ಅಪಾರಸಂಖ್ಯೆಯ ಗುಡಿಗಳಿಗೆ ಯಾವುದಾದರೊಂದು ಹೆಸರಿಡುವ ಸಮಸ್ಯೆ ಬ್ರಿಟಿಷರ ಆಳ್ವಿಕೆಯ ಕಾಲಕ್ಕೆ ಎದುರಾಯಿತು. ಬಹುತೇಕ ಗುಡಿಗಳಲ್ಲಿ ದೇವತಾಮೂರ್ತಿಗಳಿರಲಿಲ್ಲ. ಹಳ್ಳಿಯ ಜನರು ತಮತಮಗೆ ಸಿಕ್ಕ ಗುಡಿಯಂಗಳಗಳನ್ನು ಆಕ್ರಮಿಸಿಕೊಂಡು ವಾಸಸ್ಥಳವಾಗಿ ಮಾರ್ಪಡಿಸಿಕೊಂಡಿದ್ದರು. ಆಯಾ ಗುಡಿಯಲ್ಲಿ ವಾಸವಿದ್ದ ಜನರ ಹೆಸರೇ ಗುಡಿಗೂ ಅಂಕಿತನಾಮವಾಯಿತು.”

read more
ರಾಮನಾಥಪುರದ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

ರಾಮನಾಥಪುರದ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ರಾಮನಾಥಪುರದ ದೇಗುಲಗಳನ್ನು ಕಾಲಕಾಲಕ್ಕೆ ಜೀರ್ಣೋದ್ಧಾರಮಾಡಿ ನವೀಕರಿಸಿರುವುದರಿಂದ ಈ ನಿರ್ಮಿತಿಗಳು ಯಾವ ಯಾವ ಕಾಲದ್ದೆಂದು ನಿರ್ಣಯಿಸುವುದು ಕಷ್ಟ. ರಾಮೇಶ್ವರ ದೇವಾಲಯವೊಂದು ಹೊಯ್ಸಳಕಾಲದ್ದಾಗಿದ್ದು ಇದನ್ನೂ ಉಳಿದ ದೇಗುಲಗಳನ್ನೂ ವಿಜಯನಗರದ ಆಳ್ವಿಕೆಯ ಕಾಲದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಎಲ್ಲ ದೇಗುಲಗಳಿಗೂ ಪೌರಾಣಿಕ ಹಿನ್ನೆಲೆ ತಳುಕುಹಾಕಿಕೊಂಡಿದೆ.”

read more
ಮೂಗೂರಿನ ದೇಶೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

ಮೂಗೂರಿನ ದೇಶೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ತ್ರಿಭಂಗಿಯಲ್ಲಿ ನಿಂತ ಭೈರವನ ಕೊರಳಿಗೆ ಸರ್ಪದ ಆಭರಣ. ಸುತ್ತಲಿನ ಪ್ರಭಾವಳಿಯಲ್ಲಿ ಮಕರಗಳೂ ಗಣದೇವತೆಗಳೂ ಕಂಡುಬರುತ್ತವೆ. ಸಪ್ತಮಾತೃಕೆಯರನ್ನು ಅವರವರ ವಾಹನಗಳೊಡನೆ ಚಿತ್ರಿಸಿರುವುದು ಗಮನಾರ್ಹ. ದ್ವಿಭುಜಗಳಿಂದ ಕೂಡಿದ ಸೂರ್ಯನ ವಿಗ್ರಹವು ಚಿಕ್ಕದಾಗಿದ್ದರೂ ಗಮನಸೆಳೆಯುತ್ತದೆ. ಎರಡೂ ಕೈಗಳಲ್ಲಿ ಕಮಲವನ್ನು ಧರಿಸಿದ ಸೂರ್ಯನ ಕಿರೀಟವು ಕೊಳಗದ ಆಕಾರದಲ್ಲಿದೆ.”

read more
ಸುಗತ ಸಂಶಿರೋ ಚಿತ್ರೀಕರಣ: ಕುರಸೋವಾನ ಆತ್ಮಕತೆಯ ಮತ್ತೊಂದು ಪುಟ

ಸುಗತ ಸಂಶಿರೋ ಚಿತ್ರೀಕರಣ: ಕುರಸೋವಾನ ಆತ್ಮಕತೆಯ ಮತ್ತೊಂದು ಪುಟ

“ಆಂತರಿಕ ಸಚಿವಾಲಯವು ಸಿನಿಮಾದ ಕುರಿತು ಏನು ಹೇಳಿದರು ಅನ್ನುವುದನ್ನು ಹೇಳುತ್ತೇನೆ. ಅದು ನೆನಪಾದರೇನೆ ಸಿಟ್ಟು ಉಕ್ಕುತ್ತದೆ. ಸಿಟ್ಟು ಮಾಡಿಕೊಳ್ಳುವುದು ನನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ ಆದರೂ ಅದನ್ನು ಹೇಳುತ್ತೇನೆ. ಆ ಸಮಯದಲ್ಲಿ ಸಚಿವಾಲಯವು ನಿರ್ದೇಶಕನ ಮೊದಲ ಚಿತ್ರವನ್ನು ಅವನ ನಿರ್ದೇಶನ ಪರೀಕ್ಷೆಯಂತೆ ಪರಿಗಣಿಸುತ್ತಿದ್ದರು. ಸುಗತ ಸಂಶಿರೊ ಮುಗಿಯುತ್ತಿದ್ದಂತೆ…”

read more

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ