ತಾಳ್ಮೆಯೆಂಬ ಕಾವ್ಯಶಕ್ತಿಯ ಧ್ಯಾನದಲ್ಲಿ
ಇತ್ತೀಚೆಗೆ ಟೊಟೊ ಪ್ರಶಸ್ತಿ ಪಡೆದ ಶ್ರೀಕೃಷ್ಣ ದೇವಾಂಗಮಠ, ಬರವಣಿಗೆಯನ್ನೂ ಪೋಟೋಗ್ರಫಿಯನ್ನೂ ಬಹುವಾಗಿ ಇಷ್ಟಪಡುವವರು. ಗದ್ಯ ಓದಲು ಭಾರೀ ತಾಳ್ಮೆ ಬೇಕಾಗುತ್ತದೆ ಎಂದು ಹೇಳುತ್ತಾ, ಬಯಲಿನಲ್ಲಿ ಕೀಟವೊಂದರ ಚಲನೆಯನ್ನು ಸೆರೆ ಹಿಡಿಯಲು ಗಂಟೆಗಟ್ಟಲೆ ‘ಕಮಕ್ ಕಿಮಕ್’ ಎನ್ನದೇ ಕಾಯುವವರು. ವೃತ್ತಿ, ತಿಂಗಳ ಸಂಬಳ, ಬದುಕು ಎಂಬ ಸಾಮಾನ್ಯ ಚೌಕಟ್ಟನ್ನು ದಾಟಿ ಕವಿತೆಗಳನ್ನೂ ಕೀಟಗಳನ್ನೂ ಹುಡುಕುತ್ತ ಅಲೆಯುವುದನ್ನು ಇಷ್ಟಪಡುವವರು.
ಹೊಂಗಿರಣದ ಕವಿಯ ಒಡನಾಟದ ನೆನಪುಗಳು
ನವ್ಯ ಮತ್ತು ನವೋದಯವನ್ನು ಹದವಾಗಿ ಬೆರೆಸಿದ ಪಾಕದಂತಹ ಸಾಹಿತ್ಯ ಸೃಷ್ಟಿಸಿದ ಚೆನ್ನವೀರ ಕಣವಿಯವರದು ಕರುಳಿನ ಪ್ರೀತಿಗೆ ಓಗೊಡುವ ಸ್ವಭಾವ. ಮೃದುಮನಸ್ಸಿನವರು ಎಂದು ಹೇಳಿದರೂ, ಅಗತ್ಯವೆನಿಸಿದಾಗ ಹೋರಾಟದ ಹಾದಿಯನ್ನು ಹಿಡಿದವರು. ಸಂಪ್ರದಾಯವನ್ನು ಮುರಿದವರು. ಆರೋಗ್ಯಪೂರ್ಣ ಸಂಘಟನೆಗೆ ಒತ್ತಾಸೆಯಾಗಿ ನಿಂತವರು. ಸಂಬಂಧಗಳನ್ನು ಪೋಷಿಸುತ್ತ, ಮಾನವಪ್ರೀತಿಗೆ ಮಾನ್ಯತೆ ನೀಡಿ ಜೀವನ ನಡೆಸಿದವರು. ಕಾವ್ಯವು ಅವರಿಗೆ ಒಲಿದು ಬಂದ ಪ್ರಕಾರ.ಇತರ ಪ್ರಕಾರಗಳಲ್ಲಿ ಅವರು ಬರೆದರೂ, ಕಾವ್ಯವೇ ಅವರ ಸಾಹಿತ್ಯದ ಸ್ಥಾಯೀ ಭಾವ..
ಅಬೊರಿಜಿನಲ್ ಗಳ ಭರವಸೆ, ಟೆನಿಸ್ ಮಿನುಗು ತಾರೆ ಆಶ್ ಬಾರ್ಟಿ
ಆಶ್ ಬಾರ್ಟಿ ಮೆಲ್ಬೋರ್ನ್ ನಗರದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಪಂದ್ಯವನ್ನು ಗೆದ್ದಾಗ ಅಪ್ಪಅಮ್ಮಂದಿರು, ಆಪ್ತ ಗೆಳತಿಯರು ಅಲ್ಲದೆ ಇವೊನ್ ಗೂಲಗೊಂಗ್ ಕಾಲಿ ಕೂಡ ಹಾಜರಿದ್ದರು. ಜೊತೆಗೆ ಹೆಸರಾಂತ ಆಸ್ಟ್ರೇಲಿಯನ್ ಅಬೊರಿಜಿನಲ್ ಅಥ್ಲೀಟ್ ಕ್ಯಾಥಿ ಫ್ರೀಮನ್ ಪ್ರೇಕ್ಷಕ ವೃಂದದಲ್ಲಿ ಕೂತು ಪಂದ್ಯವನ್ನು ವೀಕ್ಷಿಸಿದ್ದರು. ತಾನು ಆಟವಾಡಿದ ಸ್ಥಳದಲ್ಲೇ ಇವರೆಲ್ಲರನ್ನು ಕಂಡು ಅವರೆಲ್ಲನ್ನು ಅಪ್ಪಿಕೊಂಡದ್ದೇ ಒಂದು ಮಹಾನ್ ಸಂತೋಷದ ಕ್ಷಣವೆಂದು ಆಶ್ ಹೇಳಿದಳು. ಅಬೊರಿಜಿನಲ್ ಮನೆಮನೆಗಳಲ್ಲಿ ಎದ್ದ ಹರ್ಷೋದ್ಗಾರ ಇನ್ನೂ ಕೇಳುತ್ತಿದೆ. ಡಾ. ವಿನತೆ ಶರ್ಮಾ ಬರೆದ ಆಸ್ಟ್ರೇಲಿಯ ಪತ್ರ
‘ಶಿಲಾಲತೆ’ಯಲ್ಲಿ ಪದುಮಳ ಬಳೆಗಳ ದನಿಯಿಲ್ಲವಲ್ಲ
ಕೆ.ಎಸ್. ನರಸಿಂಹ ಸ್ವಾಮಿ ಅವರು ಪ್ರೇಮಕವಿಯಾಗಿ ಸುಪ್ರಸಿದ್ಧರಾದರೂ ಅವರು ಬದುಕಿನ ಜಿಜ್ಞಾಸೆಗಳ ಬಗ್ಗೆ, ಅಧ್ಯಾತ್ಮದ ಕುರಿತು, ಇತರ ಸಂದಿಗ್ಧಗಳ ಕುರಿತು ಎಷ್ಟೊಂದು ಕವಿತೆಗಳನ್ನು ಬರೆದಿದ್ದಾರೆ. ಅವರ ಕಾವ್ಯ ಸರಳವಾಗಿತ್ತು, ರಮ್ಯವಾಗಿತ್ತು, ಕನಸುವಂತಿತ್ತು… ಎಲ್ಲಿಯವರೆಗೆ? ಶಿಲಾಲತೆಯವರೆಗೆ. ಅಲ್ಲಿಂದ ನರಸಿಂಹಸ್ವಾಮಿ ಕಠಿಣರಾಗುತ್ತಾ ಹೋದರು, ಪ್ರತಿಮೆಗಳಲ್ಲಿ ಮಾತನಾಡಲಾರಂಭಿಸಿದರು. ಅವರ ಜನ್ಮದಿನವಾದ ಇಂದು, ಅವರ ಬಹು ಪ್ರಸ್ತಾಪಿತ ಕವನಗಳನ್ನು ಬಿಟ್ಟು ‘ಶಿಲಾಲತೆ’ಯ ನಲವತ್ತರ ಚೆಲುವೆಯ ಬಗ್ಗೆ ವಿಶ್ಲೇಷಣಾ ಬರಹ ಬರೆದಿದ್ದಾರೆ ಲೇಖಕಿ ಮಾಲಿನಿ ಗುರುಪ್ರಸನ್ನ.
ಅಂತಿಮ ನ್ಯಾಯಾಧೀಶರು ಜನರೇ ಅಲ್ವೇ..
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕಿ ಮಹಾಶ್ವೇತಾ ದೇವಿ ಅವರು ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು. ದೇಶದ ವಿವಿಧೆಡೆಗಳಲ್ಲಿ ಬುಡಕಟ್ಟು ಮತ್ತು ಆದಿವಾಸಿ ಸಮುದಾಯಗಳ ಜೊತೆಗೆ ದೀರ್ಘಕಾಲ ಉಳಿದುಕೊಂಡು ಅವರ ಹಾಡುಕಥೆಗಳನ್ನು ಗ್ರಹಿಸಲು ಪ್ರಯತ್ನಿಸುತ್ತ, ಅವರ ಜೀವನಮೌಲ್ಯಗಳ ಕುರಿತು ಕಾದಂಬರಿ, ಕತೆಗಳನ್ನು ಬರೆದವರು. ಅಷ್ಟು ಮಾತ್ರವಲ್ಲ, ಅವರ ಹಕ್ಕುಗಳ ಪರವಾಗಿ ಹೋರಾಡಿದರು. ಜನವರಿ ೧೪ ಅವರು ಹುಟ್ಟಿದ ದಿನ. ಅವರನ್ನು ಕೇರಳದಲ್ಲಿ ಭೇಟಿ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ
ತನಗನಿಸಿದ ಹಾಗೆ ಬದುಕಿದ ಸ್ನೇಹಿತ ಅವನು..
ಬಂಡಾಯ ಸಾಹಿತಿ, ನೇರ ನಡೆ ನುಡಿಯ ನಿಷ್ಠುರಿ ಎಂದು ಗುರುತಿಸಿಕೊಂಡಿದ್ದ ಚಂದ್ರಶೇಖರ ಪಾಟೀಲರು ಸೋಮವಾರ ಬೆಳಿಗ್ಗೆ ತೀರಿಕೊಂಡರು. ಹಾವೇರಿಯಲ್ಲಿ ಹುಟ್ಟಿದ್ದರೂ ಧಾರವಾಡವೇ ಅವರ ಕಾರ್ಯಕ್ಷೇತ್ರವಾಗಿತ್ತು. ಸಾಹಿತ್ಯ, ಹೋರಾಟ, ಬಂಡಾಯ, ನಾಟಕ ಎಂಬುದಾಗಿ ಬಹುಮುಖೀ ವ್ಯಕ್ತಿತ್ವ ಅವರದಾಗಿತ್ತು. ಧಾರವಾಡದಲ್ಲಿ ಚಂದ್ರಶೇಖರ ಪಾಟೀಲರು, ಗಿರಡ್ಡಿ ಗೋವಿಂದ ರಾಜು ಮತ್ತು ಸಿದ್ಧಲಿಂಗಪಟ್ಟಣ ಶೆಟ್ಟಿಯವರದ್ದು ನಿಡುಗಾಲದ ಸ್ನೇಹ. ಮೂವರೂ ಸಾಹಿತ್ಯ ಕ್ಷೇತ್ರದ ಅನೇಕ ಚಟುವಟಿಕೆಗಳಲ್ಲಿ ಜೊತೆಯಾಗಿ ಇದ್ದವರು. ತಮ್ಮ ಆಪ್ತ ಸ್ನೇಹಿತನ ಅಗಲಿಕೆಯ…
ಕಿಕ್ಕಿರಿದ ಭಾಷೆಗಳ ಕಾಡಿನಲ್ಲಿ ಓಡಾಡಿದ ಜಿ.ಎನ್.ದೇವಿ ಅವರೊಡನೆ ಮಾತುಕತೆ
ಪ್ರೊ. ಜಿ. ಎನ್. ದೇವಿ ಅಂತರರಾಷ್ಟ್ರೀಯ ಖ್ಯಾತಿಯ ಭಾಷಾ ವಿದ್ವಾಂಸರು. ಬರೋಡಾದ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ದೇವಿಯವರು ಮೂಲತಃ ಸಾಹಿತ್ಯ ವಿಮರ್ಶಕರು. ತಮ್ಮ ವೃತ್ತಿಗೆ ರಾಜೀನಾಮೆ ನೀಡಿ, ಆದಿವಾಸಿಗಳ ಭಾಷೆಗಳ ಅಧ್ಯಯನವನ್ನು ಕೈಗೆತ್ತಿಕೊಂಡವರು. ಪ್ರಪಂಚದ ಎಲ್ಲಾ ಬುಡಕಟ್ಟು ಭಾಷೆಗಳ ಗಣತಿ ಮಾಡುವ ಬೃಹತ್ ಕಾರ್ಯಯೋಜನೆಯ ಜವಾಬ್ದಾರಿಯನ್ನು ದೇವಿಯವರಿಗೆ ಯುನೆಸ್ಕೋ ವಹಿಸಿದೆ. ಭಾಷೆಗಳ ಕುರಿತು…
ಸಾತ್ವಿಕ ಆತ್ಮವಿಶ್ವಾಸದ ಪ್ರತೀಕ
ರಾಜೇಶ್ವರಿ ತೇಜಸ್ವಿ ಜೀವನೋತ್ಸಾಹದ, ಲವಲವಿಕೆಯ ಮಹಿಳೆ. ಒಬ್ಬರೇ ಇದ್ದಾಗಲೂ ಅಡಿಗೆ ಮಾಡಲು ಅವರಿಗೆ ಎಂದಿನ ಉತ್ಸಾಹವೇ ಇರುತ್ತಿತ್ತು. ಸಾಮಾನ್ಯ ವಾಗಿ ಅವರ ಮೆನು ವಿನಲ್ಲಿ ಮೂರು ತರಕಾರಿ ಐಟಂಗಳು. ಪಲ್ಯ ಚಟ್ನಿ , ಸಾರು ಅಥವಾ ಸಾಂಬಾರು. ಕೆಸುವಿನ ಸೊಪ್ಪನ್ನು ಗಂಟು ಕಟ್ಟಿ ಮಾಡುವ ಸಾಂಬಾರು, ಹೀರೆ ಸಿಪ್ಪೆಯ ಚಟ್ನಿ, ಪತ್ರೊಡೆ, ಪಕೋಡಗಳು ಹೀಗೆ. ಮಲೆನಾಡಿನ ವಿಶೇಷಗಳು. ಎಂಬತ್ನಾಲ್ಕರ ಪ್ರಾಯದಲ್ಲಿ ಸದೃಢವಾದ ಹಲ್ಲುಗಳನ್ನು ಹೊಂದಿದ್ದ ಅವರು ಎಂದೂ ಯಾರ ಬಗ್ಗೆಯೂ ಕಟಕಿಯಾಡಿದ್ದಿಲ್ಲ. ತುಂಬು ಬದುಕನ್ನು ಸವಿದು ಅವರೀಗ ಹೊರಟು ಹೋಗಿದ್ದಾರೆ.
ಮಾಯವಾದ ಬೆಟ್ಟದಹೂವಿನ ಪರಿಮಳ
ಪವರ್ ಸ್ಟಾರ್ ಎಂಬ ಬಿರುದಿದ್ದರೂ ವಿನಯ ಮತ್ತು ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿಸಿದ್ದ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಹೋಗಿದ್ದಾರೆ. ತಮ್ಮ ಹಾರ್ದಿಕ ನಗುವಿನಿಂದಲೇ ಎಲ್ಲರ ಮನಗೆಲ್ಲುತ್ತಿದ್ದ ಅವರು ಮಕ್ಕಳ ಪಾಲಿಗೆ ಪ್ರೀತಿಯ ಅಪ್ಪು. ಹಾಗೆ ನೋಡಿದರೆ ಮಕ್ಕಳಿಗೆ ಮಾದರಿಯಾಗಿದ್ದ ಹೀರೋ ಅವರಾಗಿದ್ದರು. ರಿಯಾಲಿಟಿ ಶೋಗಳಲ್ಲಿ ಅವರು ಆಗೀಗ ಹೇಳುತ್ತಿದ್ದ ಮಾತುಗಳ ಹಿಂದೆ ಒಳ್ಳೆಯತನ, ಪ್ರಾಮಾಣಿಕತೆ….
						








