ಮರುಭೂಮಿಯಲ್ಲಿ ಮರುಕಳಿಸುವ ಹುಂಬತನದ ಹಂಬಲಗಳು: ಅಚಲ ಸೇತು ಬರಹ
ಏರಿಯಾದ ಹತ್ತಿರದ ಹಳ್ಳಿಯಲ್ಲಿ ಮನೆ ಮಾಡಿಕೊಂಡು ಡ್ರೋನ್ ಹಾರಿಸಿ ಸೆರೆಹಿಡಿದ ದೃಶ್ಯಗಳನ್ನು ಅಂತರ್ಜಾಲದ ಪುಟಕ್ಕೆ ಮಿನ್ನೇರಿಸುತ್ತಿದ್ದ ನೆವಾಡಾ ನಿವಾಸಿಯ ಲ್ಯಾಪ್ಟಾಪ್, ಡ್ರೋನ್ ಮತ್ತಿತರ ಸಲಕರಣೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು. ಹೀಗೆ ಅದಮ್ಯ ಕುತೂಹಲ ತಡೆಯಲಾರದೆ ಎಲ್ಲೆ ಮೀರಿ ವರ್ತಿಸುವರಿಗೆ, ಡ್ರೋನ್ ಹಾರಿಸಿ, ಕ್ಯಾಮೆರಾ ಮೂತಿಯನ್ನು ಬೇಲಿಯ ತೂತಿಗೆ ತೂರಿಸಿ ಒಳಗೆ ಇಣುಕಿ ನೋಡುವ ಚಪಲ ಚನ್ನಿಗರಾಯರಿಗೆ ದೊಡ್ಡ ಮೊತ್ತದ ದಂಡ ಹಾಗು ದೀರ್ಘ ಕಾಲದ ಕಾರಾಗೃಹ ಸಜೆಯಾಗಿದೆ.
ಅಚಲ ಸೇತು ಬರಹ ನಿಮ್ಮ ಓದಿಗೆ
ಸರೋದ್ ಮಾಂತ್ರಿಕ ರಾಜೀವ ತಾರಾನಾಥ್ ಇನ್ನಿಲ್ಲ…
“ರಾಗ ಇದೆಯಲ್ಲ ಅದು ಹುಟ್ಟುವಾಗ ಒಂದು ಮಗು ಥರಾನೆ, ಹಂಗೇ ಬೆತ್ತಲೆಯಾಗಿ ಹುಟ್ಟುತ್ತೆ, ಆಮೆಲೆ ಅದಕ್ಕೆ ಅಲಂಕಾರ ಮಾಡೋದು… ಯಾವ ಸ್ವರವನ್ನು ಎಲ್ಲಿ ಅಲಂಕರಿಸಬೇಕು, ಎಷ್ಟು ತೊಡಿಸಬೇಕು ಅಂತ. ಸೊಂಟದ ಡಾಬನ್ನ ನೆತ್ತಿಗೆ ಹಾಕಕ್ಕಾಗಲ್ಲ. ಹಂಗೇ ಕಿರೀಟವನ್ನು ಸೊಂಟಕ್ಕೆ ತೊಡಿಸಕ್ಕೆ ಆಗಲ್ಲ.
ಹೆಸರಾಂತ ಸರೋದ್ ಮಾಂತ್ರಿಕ ರಾಜೀವ ತಾರಾನಾಥರು ಇಂದು ತೀರಿಕೊಂಡರು. ಅವರೊಡನೆ ಕಳೆದ ಘಟನೆಗಳ ಕುರಿತು ಕಥೆಗಾರ್ತಿ ಸುಮಂಗಲಾ ಬರೆದಿದ್ದ ಲೇಖನ ನಿಮ್ಮ ಓದಿಗೆ
ಮದುವೆ ಮದುವೆ ಆ ಸಿಹಿ ಪದವೆ: ಅಚಲ ಸೇತು ಬರಹ
ಅಡುಗೆಮನೆಯ ಸಿಹಿತಿಂಡಿಯ ಡಬ್ಬಕ್ಕೆ ಮುತ್ತಿಗೆ ಹಾಕುವ ಇರುವೆಗಳ ಹಾಗೆ ಮದುವೆಯಾಗಬಯಸುವ ಸಾಲು ಸಾಲು ಮದುಮಕ್ಕಳ ಸಂತೆ ನೆರೆಯಿತು. ರಾತ್ರಿ ಹನ್ನೆರಡು ಗಂಟೆಯೊಳಗೆ ತಮಗೆ ಮದುವೆ ಪರವಾನಗಿ ದೊರಕಬೇಕು ಎಂದು ಕೂಗುತ್ತ ಒಳ ನುಗ್ಗಲು ತಳ್ಳಾಡುತ್ತಿದ್ದ ವಧುವರರ ವರ್ತನೆ ವಿಚಿತ್ರವಾಗಿತ್ತು.
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
ಜೊತೆಗಿರುವನು ಚಂದಿರ….: ಮೀನಾ ಮೈಸೂರು ಬರಹ
ಹೊಟ್ಟೆ ತುಂಬುವಷ್ಟು ಅನ್ನ ಸಿಕ್ಕರದೆ ಐಭೋಗವೆಂದು ನಂಬಿದ್ದ ತಾಯಿ, ತನ್ನ ಮಗಳಿಗೆ ತನ್ನ ಗಂಡನಿಗಿಂತಲೂ ವಯಸ್ಸಾದ ಆ ಗ್ರಾಮದಲ್ಲೇ ಸಿರಿವಂತನೆನಿಸಿದ್ದ ಕಲಾಯಿ ವೃತ್ತಿ ಮಾಡುವ ಮುದುಕನಿಗೆ ಮಗಳನ್ನು ಮದುವೆ ಮಾಡಲು ಒಪ್ಪಿಕೊಳ್ಳುವಂತಹ ದೈನೇಸಿ ಸ್ಥಿತಿ. ಆದರೆ ಆ ಮಗಳು ನೆರೆಮನೆಯ ಅದೇ ಜನಾಂಗದ ಹುಡುಗನನ್ನು ಪ್ರೀತಿಸುವುದು ತಂದೆಗೆ ಗೊತ್ತಾಗುತ್ತದೆ.
“ಜೊತೆಗಿರುವನು ಚಂದಿರ” ನಾಟಕದ ಕುರಿತು ಮೀನಾ ಮೈಸೂರು ಬರಹ
ವರ್ಷ ಸಂಧ್ಯಾಕಾಲೇ ಚಹಾ ಸೇವನಂ ಸ್ವರ್ಗಾರೋಹಣ ಸಮಾನಂ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ
ಆಗತಾನೇ ನಾನು ಬರೆದಿದ್ದ ‘ಮ್ಯಾಚು’ ಎನ್ನುವ ಕಥೆಯನ್ನು ಅದೊಂದು ಸಂಜೆ ಚಹಾ ಕುಡಿಯುತ್ತಿದ್ದಾಗ ಅವನಿಗೆ ಓದಲು ಕೊಟ್ಟಿದ್ದೆ. ಎರಡು ದಿನ ಬಿಟ್ಟು ಅದನ್ನು ಓದಿ ಬಂದವನು ವಿಪರೀತ ಮೆಚ್ಚುಗೆಯಾಗಿದ್ದಾಗಿ ಹೇಳಿ, ಕಣ್ಣೀರು ಸುರಿಸಿದ್ದ. ಆ ಕಥೆಯಲ್ಲಿ ಭಿನ್ನ ಧರ್ಮಕ್ಕೆ ಸೇರಿದವರ ಗೆಳೆತನದ ಬಗೆಗಿನ ಚಿತ್ರಣವಿತ್ತು.
ಚಹಾದ ಕುರಿತು ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ
ಭೂಗತ ದೊರೆಗಳು ಬೆಳೆಸಿದ ಲಾಸ್ ವೇಗಸ್: ಅಚಲ ಸೇತು ಬರಹ
ಕ್ಯಾಲಿಫೋರ್ನಿಯಾದಲ್ಲಿ ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ, ಸುಪಾರಿ ಕೊಲೆ, ಸುಲಿಗೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾ ಮೇಲಿನವರ ಪ್ರಶಂಸೆಗೆ ಪಾತ್ರನಾದ. ಹಾಲಿವುಡ್ ತಾರೆಯರ ತೋಳಿನಲ್ಲಿ ತೋಳು ಬೆರೆಸಿ ಓಡಾಡಿದ. ಅಷ್ಟೊತ್ತಿಗಾಗಲೇ ನೆವಾಡಾ ತನ್ನ ರಾಜ್ಯಾದಾಯ ಹೆಚ್ಚಿಸಿಕೊಳ್ಳುವ ಸಲುವಾಗಿ ಜೂಜು ಅಡ್ಡೆಗಳನ್ನು ಸಂವಿಧಾನಾತ್ಮಕವಾಗಿ ಅಂಗೀಕರಿಸಿತ್ತು.
ಅಮೆರಿಕಾದ ಲಾಸ್ ವೇಗಸ್ ನಗರದ ಇತಿಹಾಸದ ಕುರಿತು ಅಚಲ ಸೇತು ಬರಹ ನಿಮ್ಮ ಓದಿಗೆ
ಸಂಶೋಧನೆ, ಸಾಹಿತ್ಯ ಜಗತ್ತು ಮತ್ತು ನಾನು: ಡಾ| ವಿಶ್ವನಾಥ ಎನ್ ನೇರಳಕಟ್ಟೆ
ಸಂಶೋಧನೆಯಲ್ಲಿ ತೊಡಗಿಸಿಕೊಂಡ ನಾನೀಗ ಎಲ್ಲವನ್ನೂ ಪ್ರಶ್ನಿಸುವ, ಕುತೂಹಲದಿಂದ ನೋಡುವ ಶಿಶುವಾಗಿ ಬದಲಾಗಿದ್ದೆ. ಪ್ರಾಯೋಗಿಕ ದೃಷ್ಟಿ ನನ್ನಲ್ಲಿ ಮೊಳಕೆಯೊಡೆಯಲಾರಂಭಿಸಿತ್ತು. ವೈಚಾರಿಕ ಪ್ರಜ್ಞೆ ಜಾಗೃತವಾಗಿತ್ತು. ಈ ಬಗೆಯ ಮನೋಧರ್ಮ ಸಂಶೋಧನಾ ಪ್ರಕ್ರಿಯೆಯ ನೆಲೆಯಲ್ಲಿ ಪ್ರಯೋಜನಕಾರಿಯಾಗಿತ್ತು. ಆದರೆ ಅನುದಿನದ ಬದುಕಿನಲ್ಲಿಯೂ ಇದು ಅನುರಣನವಾಗತೊಡಗಿದಾಗ ಒಂದಷ್ಟು ತೊಂದರೆ ಎದುರಾದದ್ದಂತೂ ಸತ್ಯ.
ಡಾ| ವಿಶ್ವನಾಥ ಎನ್ ನೇರಳಕಟ್ಟೆ ಬರಹ ನಿಮ್ಮ ಓದಿಗೆ
ಸ್ಯಾನಿಟರಿ ಇಂಜಿನಿಯರ್ಸ್..: ಪೂರ್ಣೇಶ್ ಮತ್ತಾವರ ಪ್ರಬಂಧ
ಹೀಗೆ ನೀರು ಹೊತ್ತುಕೊಂಡು ಹೋದರೂ ಯಾವಾಗಲೂ ಉದ್ದನೆಯ ಸಾಲು, ನೂಕು ನುಗ್ಗಲು! ಸರಿ, ಈ ಎಲ್ಲಾ ಕಿರಿಕಿರಿ, ಪಡಿಪಾಟಲುಗಳನ್ನು ಅನುಭವಿಸುತ್ತಲೇ ಹತ್ತಾರು ನಿಮಿಷ ಕಾದು ಒಳ ಹೋದರೂ, ಹೋದವರು ಬಾಗಿಲು ಹಾಕಿ, ಬಾಗಿಲಿನ ಚಿಲಕ ಸರಿ ಇಲ್ಲವೆಂದು ಬಕೆಟನ್ನೇ ಬಾಗಿಲಿಗೆ ಅಡ್ಡವಾಗಿ ಇಟ್ಟು, ಕುಕ್ಕರುಗಾಲು ಹಾಕಿ ಕೂತು ಒಂದು ಕೈಲಿ ಬಕೆಟ್, ಮತ್ತೊಂದು ಕೈಲಿ ಸಹಿಸಲಾರದ ವಾಸನೆಗೆ ಮೂಗು ಮುಚ್ಚಿ ಶೌಚ ನಡೆಸಬೇಕೆನ್ನುವಷ್ಟರಲ್ಲೇ ದಡಬಡ ಬಾಗಿಲು ಬಡಿತ, ಸ್ವಲ್ಪ ತಡವಾದರೂ ಬಾಗಿಲನ್ನೇ ಮುರಿಯುವ ಬೆದರಿಕೆ, ಇತ್ಯಾದಿ, ಇತ್ಯಾದಿ..
ಪೂರ್ಣೇಶ್ ಮತ್ತಾವರ ಬರೆದ ಪ್ರಬಂಧ ನಿಮ್ಮ ಓದಿಗೆ
ಒಡಹುಟ್ಟಿದವನ ಒಡಲಾಳದ ನೋವು!: ಶರಣಗೌಡ ಪಾಟೀಲ ತಿಳಗೂಳ ಪ್ರಬಂಧ
ಬಸ್ ಡಾಂಬರ್ ರಸ್ತೆ ಸೀಳಿಕೊಂಡು ಅರ್ಧ ದಾರಿ ಕ್ರಮಿಸಿತು. ಇದ್ದಕ್ಕಿದ್ದಂತೆ ಬಸ್ಸಿನಲ್ಲಿ ಜೋರಾಗಿ ಅಳುವ ಧನಿಯೊಂದು ಕೇಳಿ ಬಂದಿತು. ಎಲ್ಲರೂ ಗಾಬರಿಯಾಗಿ ಅತ್ತಕಡೆ ಗಮನ ಹರಿಸಿದರು. ನಾಗಚಂದ್ರನೂ ಆ ಕಡೆ ಹೊರಳಿ ನೋಡಿದ. ಇವನಿಗೆ ಆಶ್ಚರ್ಯದ ಜೊತೆಗೆ ಗಾಬರಿಯೂ ಆಯಿತು. ಅಳುವ ವ್ಯಕ್ತಿ ಸಾಮಾನ್ಯನಂತೆ ಕಾಣಿಸುತ್ತಿರಲಿಲ್ಲ. ಆತ ಬಟ್ಟೆ ಶಿಸ್ತಿನ ವ್ಯಕ್ತಿಯಾಗಿದ್ದ.
ಶರಣಗೌಡ ಬಿ. ಪಾಟೀಲ ತಿಳಗೂಳ ಪ್ರಬಂಧ ನಿಮ್ಮ ಓದಿಗೆ










