ಸಾವಕಾಶವಾಗಿ ಎಲ್ಲವನ್ನೂ ಹತ್ತಿರದಿಂದ ನೋಡುವ ಕವಿ: ಎಸ್. ಜಯಶ್ರೀನಿವಾಸ ರಾವ್ ಸರಣಿ
ವರ್ತಮಾನದ ಕಾಲದೊಳಗೆ ಇಣುಕಿ ನೋಡುವ, ಜೀವನದ ಜಾಲದಲ್ಲಿ ತನ್ನ ಸ್ಥಾನವನ್ನು ನಿರ್ಧರಿಸಿಕೊಳ್ಳುವಂತಹ ತನ್ನ ಸರಳ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಆತುರಪಡದೆ ಸಾವಕಾಶವಾಗಿ ಎಲ್ಲವನ್ನೂ ಹತ್ತಿರದಿಂದ ನೋಡುತ್ತಾರೆ, ವಸ್ತುಗಳು, ಪರಿಕಲ್ಪನೆಗಳು, ಘಟನೆಗಳನ್ನು ಸೂಕ್ಷ್ಮವಾಗಿ ಆಲಿಸುತ್ತಾರೆ ಮತ್ತು ಪ್ರತಿಯೊಂದೂ ತನ್ನ ಜ್ಞಾನವನ್ನು ತನಗೆ ಬಹಿರಂಗಪಡಿಸಲು ಅವಕಾಶ ಮಾಡಿಕೊಡುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಬಲ್ಗೇರಿಯಾ ದೇಶದ ಕವಿ ಎಕ್ಯಾಟರೀನಾ ಯೊಸಿಫೋವಾ-ರವರ
(Ekaterina Yosifova) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಬದುಕಿಗೆ ಪರಿಧಿಯ ಬರೆವ ಕರ್ಮಫಲವೆಂಬ ಕೈವಾರ: ರಾಮ್ ಪ್ರಕಾಶ್ ರೈ ಕೆ ಸರಣಿ
ಸುಜಿಗೆ ಒಳ್ಳೆಯ ಬದುಕಿತ್ತು. ಮಧುವಿನ ಪತ್ನಿಗೂ. ಆದರೆ, ಅವಳಲ್ಲಿನ ಖಾಲಿತನವನ್ನು ತುಂಬಲು ಆಕೆ ಹೊರಟಳು. ಸುಜಿ ಆ ಅವಕಾಶವನ್ನು ಬಳಸಿ ಆಕೆಯ ನಂಬಿಕೆ, ಆತ್ಮಾಭಿಮಾನದ ಜೊತೆಗೆ ಆಟವಾಡಿಬಿಟ್ಟ. ಇವೆಲ್ಲವೂ ನಡೆದಾಗ ಮಧು ಮೂಕ ಪ್ರೇಕ್ಷನಾಗಿದ್ದ. ಆದರೆ ಪತ್ನಿಯ ಮೇಲಿನ ಆತನ ಅಸ್ಖಲಿತ ಪ್ರೇಮ, ಗೌರವಕ್ಕೆ ಧಕ್ಕೆಯಾದಾಗ ಆತ ಹಿಂಸೆಯ ದಾರಿಯ ಹಿಡಿದ. ಸರಿ ತಪ್ಪುಗಳಾಚೆ ಇಂತಹ ಅದೆಷ್ಟೋ ಕ್ರಿಮಿಗಳಿಗೆ ‘ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೇ, ಗೊತ್ತಾಗೋದು ಎದ್ದಾಗಲೇ’ ಎಂದು ಪಾಠವಾಯಿತು ಆತನ ನಡೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಮಲಯಾಳಂನ ‘ಇಲಾ ವಿಳಾ ಪೂಂಚಿರಾ’ ಸಿನಿಮಾದ ವಿಶ್ಲೇಷಣೆ
ಮದುವೆಮನೇನೋ ಸಂತೆಕಟ್ಟೇನೋ: ಸುಮಾ ಸತೀಶ್ ಸರಣಿ
ಇಂತಾ ಜೋರಿನ ಅತ್ತೇ ಒಂದು ಪುಂಡ ಹಸಾನ ಪಳಗಿಸಿದ್ಲು. ಆ ಹಸು ಎಷ್ಟು ಜೋರು ಅಂದ್ರೇ ಯಾರಿಗೂ ಹಾಲು ಕರೆಯೋಕೇ ಬಿಡ್ತಿರಲಿಲ್ಲ. ನಮ್ಮತ್ತೇನೂ ಜೋರಲ್ವಾ. ಅದೂ ಜೋರು. ಇಬ್ರಲ್ಲೂ ಬಲು ಸ್ನೇಹ. ನಮ್ಮತ್ತೆ ಹಾಲು ಕರೆದರೆ ಕಮಕ್ ಕಿಮಕ್ ಅಂತಿರಲಿಲ್ಲ ತುಡುಗು ಮುಂಡೇದು. ಕೊನೇಗೆ ಮದುವೇ ದಿನ ಹಸೆಮಣೇ ಮೇಲಿದ್ದಾರೆ. ಈ ಹಸಾ ಹಾಲು ಕೊಡಲಿಲ್ಲ ಅಂತಾ ಹೇಳಿದ್ದಾರೆ. ನಮ್ಮತ್ತೆ ಹಸೇಮಣೇ ಮೇಲಿಂದ ಎದ್ದು ಹೋಗಿ ಹಾಲು ಕರೆದುಕೊಟ್ಟು ಬಂದಿದ್ದಾರೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಮದುವೆ ಮನೆಯ ಮತ್ತಷ್ಟು ವಿಷಯಗಳ ಕುರಿತ ಬರಹ ನಿಮ್ಮ ಓದಿಗೆ
ಹೋಳಿಗೆ ಕೊಡಿಸಿದ ಯುಗಾದಿ ಚಂದಿರ..: ಪೂರ್ಣೇಶ್ ಮತ್ತಾವರ ಸರಣಿ
ಹಬ್ಬದ ಹಿಂದಿನ ಸಂಜೆ “ನಾಳೆ ರಜಾ, ಕೋಳಿ ಮಜಾ..” ಎನ್ನುತ್ತಾ ರಜೆಯ ಸಡಗರವನ್ನು ಅನುಭವಿಸಿ, ಹಗಲಿಡೀ ಆಟವಾಡಿ, ಮಧ್ಯಾಹ್ನ ಸಿಹಿ ತಿಂದು ಖುಷಿಪಟ್ಟವರು ಸಂಜೆಯಾಗುತ್ತಲೇ ನಮಗೆ ತಿಳಿಯದಲೇ ಬೇಸರಿಸಿಕೊಂಡು ಬಿಡುತ್ತಿದ್ದೆವು. “ಹೋಂ ಸಿಕ್ ನೆಸ್” ಎಂಬುದು ನಮಗರಿವಿಲ್ಲದಲೇ ಹಬ್ಬದ ದಿನಗಳಲ್ಲೇ ಹೆಚ್ಚಾಗಿ ನಮ್ಮನ್ನು ಆವರಿಸಿಕೊಂಡು ಬಿಡುತ್ತಿತ್ತು. ಕೊಟ್ಟ ಹೋಂ ವರ್ಕ್ “ನಾಳೆ ಮಾಡಿದರಾಯ್ತು” ಎಂದು ಮುಂದೂಡಿ ಈಗ ಮಾಡಬೇಕಿರುವುದೂ ನಮ್ಮ ದುಃಖವನ್ನು ಮತ್ತಷ್ಟು ಹೆಚ್ಚಿಸಿ ಬಿಡುತ್ತಿತ್ತು.
ಪೂರ್ಣೇಶ್ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಹನ್ನೆರಡನೆಯ ಬರಹ
ಒಳಗೊಂದು ಪರಿಸ್ಥಿತಿ.. ಹೊರಗೊಂದು ಪರಿಸ್ಥಿತಿ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಮಣಿ, “ಸೆಲ್ವಿ ನನ್ನ ಮಾತು ಕೇಳು. ಅಬಾರ್ಶನ್ ಮಾಡಿಕೊಂಡರೆ ಎಲ್ಲವೂ ಸರಿಯೋಗುತ್ತದೆ. ಮುಂದೆ ಅಂತಹ ತಪ್ಪು ನಡೆಯದಂತೆ ನೋಡಿಕೊಳ್ಳೋಣ. ನೀನು ಮುಂದಕ್ಕೆ ಓದಬಹುದು. ನಾನೂ ಹೇಗಾದರು ಮಾಡಿ ರಾತ್ರಿ ತರಗತಿಗಳಿಗೆ ಹೋಗಿ ಡಿಗ್ರಿ ಮುಗಿಸಬಹುದು. ಕಾಲೇಜಿನಲ್ಲಿ ಹೇಗೊ ರಾತ್ರಿಯೊತ್ತು ಆರ್ಟ್ ತರಗತಿಗಳಿಗೆ ಪಾಠ ಮಾಡ್ತಾರೆ” ಎಂದ. ಸೆಲ್ವಿ, “ಇಲ್ಲ ನಾನು ಅಬಾರ್ಶನ್ ಮಾತ್ರ ಮಾಡಿಕೊಳ್ಳುವುದಿಲ್ಲ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹದಿಮೂರನೆಯ ಕಂತು ನಿಮ್ಮ ಓದಿಗೆ
ಮಲ್ಲಯ್ಯನ ಮರಳು ತಕರಾರು: ಎಚ್.ಗೋಪಾಲಕೃಷ್ಣ ಸರಣಿ
ಒಂದು ಕಾಲದಲ್ಲಿ ತಮ್ಮ ಜೀವನ ನಿರ್ವಹಣೆಗೆ ಇಲ್ಲಿನ ಕ್ವಾರಿಗಳನ್ನು ನಂಬಿದ್ದ ಹಲವಾರು ಕುಟುಂಬಗಳು ಈಗ ಬೇರೆ ಬೇರೆ ವೃತ್ತಿ ಹಿಡಿದಿದ್ದಾರೆ. ಅದರ ಜತೆಗೆ ದೇವನಹಳ್ಳಿಯಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಆದ ನಂತರ ಅಲ್ಲಿಗೆ ಹಲವು ಸಂಪರ್ಕ ರಸ್ತೆಗಳ ನಿರ್ಮಾಣ ಶುರು ಆಯಿತು. ಬೆಟ್ಟಹಳ್ಳಿ ಮೂಲಕ ಒಂದು ರಸ್ತೆ ಅಗಲ ಮಾಡುವ ಯೋಜನೆ ಹಮ್ಮಿಕೊಳ್ಳಲಾಯಿತು. BEL ವೃತ್ತದಿಂದ ಈ ರಸ್ತೆ ಬೆಟ್ಟಹಳ್ಳಿ ಹಾದು ಯಲಹಂಕದ ಬಳಿ ದೇವನಹಳ್ಳಿ ರಸ್ತೆ ಸೇರುವಂತೆ ಯೋಜನೆ ರೂಪಿಸಿದ್ದು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೈದನೆಯ ಕಂತು
ಮದುವೆ ಮನೆ: ಸುಮಾ ಸತೀಶ್ ಸರಣಿ
ನಮ್ಮ ಮನೆಗ್ಳಲ್ಲಿ ಮದ್ವೇ ಗೊತ್ತಾಗಿದ್ ತಕ್ಷಣ ಮಾಡ್ತಿದ್ದ ಏರ್ಪಾಟು ಅಂದ್ರೆ ಹಂಚು ಇಟ್ಟುಕೊಳ್ಳುವುದು. ಒಂದು ತಿಂಗಳ ಮುಂಚೇನೆ ತಯ್ಯಾರಿ ಇರ್ತಿತ್ತು. ದೊಡ್ಡತ್ತೆ, ಸಾವಿತ್ರಮ್ಮತ್ತೆ ಬಂದು ಸೇರುತ್ತಿದ್ದರು. ಅಕ್ಕ ತಂಗೀರ ಮಕ್ಳು ಸಹಾಯುಕ್ಕೆ ಬರ್ತಿದ್ರು. ಸೇರುಗಟ್ಟಲೆ ಅಕ್ಕಿ ತೊಳೆದು ಹಾಕಿ, ರಾಶಿ ರಾಶಿ ಚಕ್ಲಿ ಮಾಡುತ್ತಿದ್ದರು. ಅಕ್ಕಪಕ್ಕದ ಮನೆ ಹೆಣ್ಣುಮಕ್ಕಳೂ ಬಂದು ಸಹಾಯ ಮಾಡುತ್ತಿದ್ದರು. ನಿಪ್ಪಟ್ಟು, ಕೋಡುಬಳೆ, ಗುಂಡು ಅದೂ ಇದೂ ಮಾಡಿಡುತ್ತಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮೂರಿನ ಮದುವೆ ಮನೆಯ ಸಡಗರಗಳ ಕುರಿತ ಬರಹ ನಿಮ್ಮ ಓದಿಗೆ
ದೊಡ್ಡ ದ್ವೀಪ ಅಕ್ಷರ ದೀಪ ಕ್ಯೂಬಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
1903ರಿಂದ ಕ್ಯೂಬಾ ದೇಶವು ಗ್ವಾಂಟನಾಮೊ ಹೆಸರಿನ ಕೊಲ್ಲಿಯನ್ನು ಅಮೇರಿಕಾಕ್ಕೆ ಗುತ್ತಿಗೆ ನೀಡಿತ್ತು. ಇದಕ್ಕೆ ಸಂಬಂಧಪಟ್ಟ ಒಪ್ಪಂದವನ್ನು ಮಾಡಿಕೊಂಡಿತ್ತು. ಇದರ ಹೊರತಾಗಿಯೂ ಕೆರಿಬಿಯನ್ ಸಮುದ್ರದಲ್ಲಿ ಸೈನಿಕ ನೆಲೆಯಾಗಿ ಈ ಕೊಲ್ಲಿಯನ್ನು ಬಳಸಲು ಅಮೇರಿಕಾ ಪ್ರಯತ್ನಿಸಿತ್ತು. ಶಸ್ತ್ರಾಸ್ತ್ರಗಳ ಬಳಕೆಯ ಮೂಲಕ ಕ್ಯೂಬಾವನ್ನು ಮೆತ್ತಗಾಗಿಸುವ ಪ್ರಯತ್ನವನ್ನೂ ನಡೆಸಿತ್ತು. ಅಮೇರಿಕಾದ ಈ ಬಗೆಯ ನಡತೆಯಿಂದಾಗಿ ಅದರ ಜೊತೆಗಿನ ಒಪ್ಪಂದ ಅನ್ಯಾಯಕರವಾದದ್ದು ಎನ್ನುವುದು ಕ್ಯೂಬಾದ ಜನರ ಅರಿವಿಗೆ ಬಂತು.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಕ್ಯೂಬಾ ದೇಶದ ಕುರಿತ ಬರಹ ನಿಮ್ಮ ಓದಿಗೆ
ಎಲೆ ಮರೆಯ ಮಧುರ ಫಲ: ರಂಜಾನ್ ದರ್ಗಾ ಸರಣಿ
ಮೃದುಭಾಷಿ ಮಹಾದೇವಪ್ಪನವರ ವ್ಯಕ್ತಿತ್ವದ ಒಂದು ಮಹತ್ವದ ಅಂಶ ಎಂದರೆ, ಅವರು ಯಾವ ಕಾಲಕ್ಕೂ ಹೊಸದನ್ನು ಬಯಸುವವರು. ತಮ್ಮದೇ ಆದ ವಿಚಾರಕ್ಕೆ ಅಂಟಿಕೊಂಡವರಲ್ಲ. ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ತಮಗಿಂತಲೂ ಬೇರೆಯವರು ಚೆನ್ನಾಗಿ ತಿಳಿಸಿದರೆ ಅದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವಂಥ ಸುಸಂಸ್ಕೃತರು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 97ನೇ ಕಂತು ನಿಮ್ಮ ಓದಿಗೆ









