ಗಾಲಿಬ್ : ದಿಲ್ಲಿಯ ವೈಭವ ಮತ್ತು ದುರಂತ
ಎಲ್ಲ ಬಗೆಯ ಅಧಿಕಾರ, ದರ್ಪವನ್ನು ಧಿಕ್ಕರಿಸುವ ಕಾರಣಕ್ಕಾಗಿಯೇ ಗಾಲಿಬ್ ಕುಡಿತ, ಜೂಜು ಮತ್ತು ಸಾಂಪ್ರದಾಯಿಕ ಇಸ್ಲಾಮಿಗೆ ಹೊರತಾದ ಪಾಷಂಡಿತನವನ್ನು ಬೆಳೆಸಿಕೊಂಡ. ದಿಲ್ಲಿಯಿಂದ ಕಲ್ಕತ್ತೆಗೆ ಹೋದರೂ ಪಿಂಚಣಿ ಸಿಗದೆ ಫಕೀರನಾಗಿದ್ದ ಗಾಲಿಬ್ ಪರ್ಶಿಯನ್ ಫ್ರೊಫೆಸರ್ ಹುದ್ದೆಗೆ ಅರ್ಜಿ ಹಾಕಿದ್ದ. ಆ ಹುದ್ದೆಯ ಸಂದರ್ಶನಕ್ಕೆ ಹೋದಾಗ ನಡೆದ ಘಟನೆ ಗಾಲಿಬ್ನ ಆತ್ಮಾಭಿಮಾನ-ಸ್ವಂತಿಕೆಗೆ ಸಂಕೇತದಂತಿದೆ.”
ಕಲಿಸು ಪ್ರಭು; ಕರಗುವುದನ್ನು, ಮುಳುಗದೇ ಇರುವುದನ್ನು
ಎ ಕೆ ರಾಮಾನುಜನ್ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿ ಕೊಂಡವರು. ಅವರ ದಿನಚರಿಯನ್ನು ಆಧರಿಸಿದ ಪುಸ್ತಕ ‘ಜರ್ನೀಸ್, ಅ ಪೋಯಟ್ಸ್ ಡೈರಿ’ ಎರಡು ವರ್ಷಗಳ ಹಿಂದೆ ಪ್ರಕಟವಾಯಿತು. ಈ ಜೀನಿಯಸ್ ಬರಹಗಾರ
ಐದು ದಶಕಗಳ ಕಾಲ ಬರೆದ ದಿನಚರಿ ಪುಟಗಳನ್ನು ತಮ್ಮ ಓದಿನಲ್ಲಿ ಕಾಣಿಸಿದ್ದಾರೆ, ಕಾವ್ಯಾ ಕಡಮೆ ಈ ಬಾರಿಯ ಅಂಕಣದಲ್ಲಿ.
ನಂಬುವುದಾದರೂ ಯಾರನ್ನು ಎಂಬ ಗೊಂದಲದ ಕಾಲವಿದು
ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮೊದಲನೆ ಲಸಿಕೆ ಯಾವುದಿರುತ್ತದೆಯೋ ಎರಡನೆ ಲಸಿಕೆ ಕೂಡ ಅದೇ ಆಗಿರಬೇಕು ಎನ್ನುವ ವರದಿ ಹೊರಬಂದಿದೆ. ಹಾಗೆಂದು ನಾವು ವಿಶ್ವ ಆರೋಗ್ಯ ಸಂಸ್ಥೆಯನ್ನಾದರೂ ಹೇಗೆ ನಂಬುವುದು? ಅವರೂ ಕೂಡ ಅವರೇ ಕೊಟ್ಟ ವರದಿಯನ್ನು ಅನೇಕ ಬಾರಿ ಬದಲಿಸಿದ್ದಾರೆ. ಲಸಿಕೆ ಬಹಳ ಮುಖ್ಯ, ಲಸಿಕೆಯಿಂದ ಮಾತ್ರ ಕೊರೋನ ತಡೆಯುವ ಮಾರ್ಗ ಸಧ್ಯಕ್ಕೆ ಇರುವುದು.”
ತಾರೆಗಳ ಹಿಡಿಯುವೆವು: ವೀರಣ್ಣ ಮಡಿವಾಳರ ಅಂಕಣ ಇಂದಿನಿಂದ
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಕೃತಿಗಳ ಮೂಲಕ ಗುರುತಿಸಿಕೊಂಡಿರುವ ವೀರಣ್ಣ ಮಡಿವಾಳರ ಅವರು ಪುಟ್ಟ ಮಕ್ಕಳಿಗೆ ಅಕ್ಕರೆದುಂಬಿ ಪಾಠ ಮಾಡುವ ಮೇಷ್ಟ್ರು. ಬೆಳಗಾವಿಯ ನಿಡಗುಂದಿ ಕನ್ನಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳು. ಅವರ ನೇತೃತ್ವದಲ್ಲಿ ಸರ್ಕಾರಿ ಶಾಲೆಯೊಂದು ಅತ್ಯಾಧುನಿಕ ಸೌಕರ್ಯಗಳನ್ನು ಮಕ್ಕಳಿಗೆ ಕಲ್ಪಿಸುವುದು ಸಾಧ್ಯವಾಗಿದೆ.
ಮಹಾಸಾಂಕ್ರಾಮಿಕದ ಕಾದಂಬರಿಗಳು ನಮಗೆ ಕಲಿಸುವ ಪಾಠ
ವಿಶ್ವದ ಶ್ರೇಷ್ಠ ಸಮಕಾಲೀನ ಬರಹಗಾರರಲ್ಲಿ ಒಬ್ಬರಾದ ಓರ್ಹಾನ್ ಪಾಮುಖ್ ಟರ್ಕಿಯ ಬಹುಮಾನ್ಯ ಕಾದಂಬರಿಕಾರ. 2006ರಲ್ಲಿ ನೋಬೆಲ್ ಪ್ರಶಸ್ತಿಗೆ ಪಾತ್ರರಾದ ಪಾಮುಖ್ ಅವರ ಕೃತಿಗಳು ವಿಶ್ವದ ಅನೇಕಾನೇಕ ಭಾಷೆಗಳಲ್ಲಿ ಅನುವಾದಗೊಂಡಿವೆ. ಪಾಮುಖ್ 2020ರ ಏಪ್ರಿಲ್ನಲ್ಲಿ ಕರೋನಾ ವೈರಸ್ ಸಾಂಕ್ರಾಮಿಕದ ಕುರಿತಾಗಿ ಬರೆದ ಬರಹ ಇದು. ಕಮಲಾಕರ ಕಡವೆ ಅವರು ಆ ಲೇಖನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಭದ್ರಾವತಿ ರಸ್ತೆಗಂಟಿದ ಕೆಮ್ಮಣ್ಣುಗುಂಡಿ ಕತೆಗಳು
ಒಂದೇ ಒಂದು ನಿಮಿಷದ ಹಿಂದಷ್ಟೇ, ಯಾವುದೋ ಆಶ್ರಮವೊಂದರ ಆರಾಮ ವಾತಾವರಣದಂತಿದ್ದ ತರೀಕೆರೆ ಆಸ್ಪತ್ರೆ, ಇದ್ದಕ್ಕಿದ್ದಂತೆ ಬದಲಾಗಿತ್ತು. ಎಮರ್ಜೆನ್ಸಿ ವಾರ್ಡಿನ ಉದ್ದಗಲಕ್ಕೂ ರಕ್ತ ಚೆಲ್ಲಿತ್ತು. ಎತ್ತ ತಿರುಗಿದರೂ ಡಾಕ್ಟರ್, ನರ್ಸ್ಗಳು. ಯಾರು ಏನು ಹೇಳುತ್ತಿದ್ದಾರೆ, ಯಾರಿಗೆ ಹೇಳುತ್ತಿದ್ದಾರೆ, ಯಾರು ಏನು ಮಾಡುತ್ತಿದ್ದಾರೆ ಎಂಬುದೊಂದೂ ಕಣ್ಣಿಗೆ ಅರಿವಾಗದ ಅಯೋಮಯ ಸನ್ನಿವೇಶ.
ಸಹ್ಯಾದ್ರಿ ನಾಗರಾಜ್ ಬರೆಯುವ ಅಂಕಣ ‘ಸೊಗದೆ’
ಡಾ.ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ ಮತ್ತೆ ಆರಂಭ
ಕೊರೊನಾ ಸೋಂಕನ್ನು ದೂರವಿರಿಸುವ ಪ್ರಯತ್ನಗಳಿಗೆ ಆದ್ಯತೆ ನೀಡುವಾಗ, ಹಬ್ಬ, ಸಂಭ್ರಮಗಳ ಆಚರಣೆ ಸಹಜವಾಗಿಯೇ ದೂರವಾಗಿಬಿಡುತ್ತದೆ. ಸಂವಹನಕ್ಕೆ ಆನ್ ಲೈನ್ ಅನಿವಾರ್ಯವಾಗಿದೆ. ಹೊರನಾಡಿನಲ್ಲಿಯೂ ಇಂತಹುದೇ ಪರಿಸ್ಥಿತಿ. ಆಸ್ಟ್ರೇಲಿಯಾ ನಿವಾಸಿ ಡಾ. ವಿನತೆ ಶರ್ಮಾ ಅಲ್ಲಿನ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸುವ ಲೇಖಕಿ. ಸಣ್ಣ ಬಿಡುವಿನ ನಂತರ ಇದೀಗ ಅವರ ಅಂಕಣ ಆಸ್ಟ್ರೇಲಿಯಾ…”
ಯುನೈಟೆಡ್ ಕಿಂಗ್ಡಮ್, ಗ್ರೇಟ್ ಬ್ರಿಟನ್ ಮತ್ತು ಇಂಗ್ಲೆಂಡ್
ಇದು ಕರ್ನಾಟಕ ಮಹಾರಾಷ್ಟ್ರದ ಗಡಿ ವಿವಾದದ ತರಹ, ಕರ್ನಾಟಕ ತಮಿಳುನಾಡಿನ ಕಾವೇರಿ ವಿವಾದದ ತರಹ ಇರಬಹುದೇ ಅನಿಸಬಹುದು; ಇದು ಅದಕ್ಕಿಂತ ಸ್ವಲ್ಪ ಹೆಚ್ಚೇ ಅನ್ನಿ. ಎಷ್ಟು ಹೆಚ್ಚು ಎಂದರೆ ಕೆಲವು ವರ್ಷಗಳ ಹಿಂದೆ ಯು.ಕೆ ಯಿಂದ ಹೊರಬಂದು ಸ್ವತಂತ್ರ ದೇಶವಾಗಲು ಸ್ಕಾಟ್ಲ್ಯಾಂಡ್ ಮತದಾನವನ್ನು ಮಾಡಿತ್ತು, ಕೂದಲೆಳೆಯಲ್ಲಿ ಸ್ಕಾಟ್ಲ್ಯಾಂಡ್ ಸ್ವತಂತ್ರ ದೇಶವಾಗುವ ಅವಕಾಶ ತಪ್ಪಿಹೋಯಿತು.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್ ಪತ್ರ’
ಯಾವುದೇ ರಂಗಪಠ್ಯ ಸಂಪ್ರದಾಯವಾಗುವುದು ಹೇಗೆ?
ಇತರ ಹಲವು ಪ್ರದರ್ಶನ ಕಲೆಗಳಂತೆ, ನಡೆ ಅಂದರೆ ನಿರ್ದಿಷ್ಟ ದಿನದ ‘ರಂಗಪಠ್ಯ’ ಸೃಷ್ಟಿಯಾಗುವುದು ಅದನ್ನು ಅಭ್ಯಸಿಸುವವರಿಂದ, ಅದರಲ್ಲಿ ತೊಡಗಿಸಿಕೊಂಡವರಿಂದ ಮತ್ತು ಅದರ ನಿರಂತರ ಅನುಕರಣೆಯಿಂದ ಸಂಪ್ರದಾಯವಾಗುತ್ತದೆ ಎಂದು ಇದು ಸೂಚಿಸುತ್ತದೆ. ತೊಡಗಿಕೊಂಡವರಲ್ಲಿ ಪ್ರೇಕ್ಷಕರೂ ಮುಖ್ಯವಾಗಿ ಸೇರುತ್ತಾರೆ. ಒಂದು ಕ್ರಿಯೆ ಕಲೆಯಾಗುವುದಕ್ಕೆ…”









