Advertisement

ಅಂಕಣ

ನವಿಲುಗಣ್ಣಿನ ಕಾವ್ಯದ ಆದರ್ಶ ಹಾಗೂ ದುರಂತ

ನವಿಲುಗಣ್ಣಿನ ಕಾವ್ಯದ ಆದರ್ಶ ಹಾಗೂ ದುರಂತ

“ಆಕ್ರೋಶದ ತೀವ್ರತೆಯಿದ್ದರೂ ಹಿಂಸೆ-ಪ್ರತೀಕಾರದ ಸೋಂಕಿಲ್ಲದ, ಸ್ವಮರುಕ ಪೂರ್ವಾಗ್ರಹಗಳ ಭಾರವಿಲ್ಲದ ಹದವಾದ ಮನಸ್ಥಿಯನ್ನು ತೋರುವುದರಿಂದ ಅದು ನಿಜವಾದ ಅರ್ಥದಲ್ಲಿ ‘ನೆಲದ ಕರುಣೆಯ ಕಾವ್ಯ’ವಾಗಿದೆ. ಇದನ್ನು ವಿಸ್ತರಿಸಿ ಹೇಳುವುದಾದರೆ, ಬದುಕು ಎಷ್ಟೇ ನಿರ್ದಯವಾಗಿದ್ದರೂ, ವ್ಯವಸ್ಥೆ ಎಷ್ಟು ಬರ್ಬರವಾಗಿದ್ದರೂ ವಸಂತನನ್ನು ಹಡೆದು ಮನುಷ್ಯ ಸಮಾಜಕ್ಕೆ ತಾಯ್ತನದ ಪ್ರೀತಿ ವಾತ್ಸಲ್ಯಗಳನ್ನು ಊಡಿಸುವ ಹಂಬಲವಿರುವ…”

read more
ಕಂದಗಳು, ಪರಮಶಿವನ್ ಭೇಟಿ ಮತ್ತು ಕುರುಕ್ಷೇತ್ರ ನಾಟಕದ ಹಾಡು

ಕಂದಗಳು, ಪರಮಶಿವನ್ ಭೇಟಿ ಮತ್ತು ಕುರುಕ್ಷೇತ್ರ ನಾಟಕದ ಹಾಡು

“ಪೌರಾಣಿಕ ರಂಗಗೀತೆಗಳಲ್ಲಿನ ಕಂದಗಳಿಗೆ ಕಿವಿಗೊಡುವುದೆಂದರೆ ಅದರ ಸೊಗಸೇ ಬೇರೆ. ತುಂಬ ಶೃತಿಬದ್ಧವಾಗಿ ಅದರ ಶಾಸ್ತ್ರೀಯ ಶೈಲಿಯಲ್ಲಿ ಕಂದಗಳನ್ನ ಯಾರಾದರೂ ಚೆಂದವಾಗಿ ಹಾಡಿದರೆ ಇಂದಿಗೂ ನಾನು ರೋಮಾಂಚಿತನಾಗುತ್ತೇನೆ. ಯಾಕೆಂದರೆ ಕಂದದ ಫಾರ್ಮ್ಯಾಟ್ ನನಗೆ ಕಂಡಿರುವುದು ಒಂದು ದೊಡ್ಡ ಅಲೆಯ ಏರಿಳಿತದ ಹಾಗೆ. ಅದು ಮೇಲೆದ್ದು ಕೆಳಗಿಳಿಯುವ ರೀತಿಯಲ್ಲಿ ಕಂದಗಳು ಇರುತ್ತವೆ. ತಾರಕದ ಆ ನಿರ್ದಿಷ್ಟ ಪಾಯಿಂಟ್ ವರೆಗೆ ಹಾಡುಗಾರ ‘ಅ’ಕಾರಗಳನ್ನ ತೆಗೆದುಕೊಂಡು ಹೋಗಿ ಮತ್ತೆ …”

read more
ನ್ಯೂಟನ್‌ ನ ನಿಯಮಗಳು ಮತ್ತು ಪ್ರಶ್ನೆಗಳು: ಶೇಷಾದ್ರಿ ಗಂಜೂರು ಅಂಕಣ

ನ್ಯೂಟನ್‌ ನ ನಿಯಮಗಳು ಮತ್ತು ಪ್ರಶ್ನೆಗಳು: ಶೇಷಾದ್ರಿ ಗಂಜೂರು ಅಂಕಣ

“ಲಾಪ್ಲಾಸ್, ತನ್ನ ಪುಸ್ತಕವನ್ನು ಅಂದಿನ ಫ್ರೆಂಚ್ ಸಾಮ್ರಾಟ ನೆಪೊಲಿಯನ್‌ ಗೆ ನೀಡಿ, ಸೌರ ಮಂಡಲದ ಸೃಷ್ಟಿ ಮತ್ತು ಚಲನ-ವಲನದ ಬಗೆಗೆ ವಿವರಣೆ ನೀಡಿದನಂತೆ. ಅದನ್ನು ಕೇಳಿದ ನೆಪೊಲಿಯನ್, ಲಾಪ್ಲಾಸ್‌ ನನ್ನು “ನಿನ್ನ ಥಿಯರಿಯಲ್ಲಿ ದೇವರಿಗೆ ಜಾಗವಿಲ್ಲವಂತೆ, ಹೌದೇ?” ಎಂದು ಪ್ರಶ್ನಿಸಿದನಂತೆ. ಅದಕ್ಕೆ ಲಾಪ್ಲಾಸ್ “ಸ್ವಾಮಿ, ನನಗೆ ಆ ಕಲ್ಪಿತ ಸಿದ್ಧಾಂತದ ಅವಶ್ಯಕತೆ ಇಲ್ಲ” ಎಂದನಂತೆ. ಆದರೆ, ನಾವು ಲಾಪ್ಲಾಸ್‌ ನನ್ನು ಒಪ್ಪಿ ನ್ಯೂಟನ್‌ ನನ್ನು ಪಕ್ಕಕ್ಕೆ…”

read more
“ಇನ್ ಆನ್ ಆಂಟೀಕ್ ಲ್ಯಾಂಡ್”: ಪುರಾತನ ಪ್ರಯಾಣಗಳ ಅನನ್ಯ ಅನ್ವೇಷಣೆ

“ಇನ್ ಆನ್ ಆಂಟೀಕ್ ಲ್ಯಾಂಡ್”: ಪುರಾತನ ಪ್ರಯಾಣಗಳ ಅನನ್ಯ ಅನ್ವೇಷಣೆ

“ಈ ಕೃತಿಯ ಇತಿಹಾಸಕ್ಕೆ ಸಂಬಂಧಿಸಿದ ವಸ್ತುವಾದರೆ, ಘೋಷ್ ಕ್ಷೇತ್ರಕಾರ್ಯಕ್ಕಾಗಿ ಇಜಿಪ್ಟಿನಲ್ಲಿ ಬಾಳ್ವೆ ನಡೆಸಿದ ದಿನಗಳ ಅನುಭವಗಳ ಕತೆ ಪ್ರವಾಸಕಥನಕ್ಕೆ ಸಂಬಂಧಿಸಿದ ವಸ್ತು. ಯಹೂದಿ-ಅರೇಬಿಕ್ ಭಾಷೆ ಕಲಿಯುವ ಸಲುವಾಗಿ ಘೋಷ್ ಲತಾಯಿಫಾ ಮತ್ತು ನಶಾವೀ ಎಂಬ ಹಳ್ಳಿಗಳಲ್ಲಿ ವಾಸ ಮಾಡುತ್ತಾರೆ. ಅದು ಯಾಕೆ ಈ ಹಳ್ಳಿಗಳಲ್ಲಿ ವಾಸ ಮಾಡಬೇಕಾಗಿ ಬರುತ್ತದೆ ಎನ್ನುವುದೂ ಕೂಡ ಮುಖ್ಯವೇ. ಕೈರೋದ ಜೆನಿಜಾದಲ್ಲಿ ಸಂಶೋಧಕರಿಗೆ ಬೆನ್..”

read more
ಎನ್‌.ಸಿ. ಮಹೇಶ್‌ ಬರೆಯುವ ʼರಂಗ ವಠಾರʼ ಇನ್ನು ಪ್ರತಿ ಗುರುವಾರ

ಎನ್‌.ಸಿ. ಮಹೇಶ್‌ ಬರೆಯುವ ʼರಂಗ ವಠಾರʼ ಇನ್ನು ಪ್ರತಿ ಗುರುವಾರ

“ಯಾವುದೇ ಒಂದು ಪ್ರಕಾರದ ಬಗ್ಗೆ ತಿಳಿಯಬೇಕಿದ್ದರೆ ಅದರ ಹಿನ್ನೆಲೆ ಕೊಂಚವಾದರೂ ಅರಿವಿರಬೇಕಲ್ಲ..? ಈ ರಂಗದ ಕಾನ್ಸೆಪ್ಟ್ ಹುಟ್ಟಿಕೊಂಡದ್ದು ಹೇಗೆ ಮತ್ತು ಎಲ್ಲಿಂದ? ಗ್ರೀಕ್ ಮತ್ತು ರೋಮನ್ ಪರಿಕಲ್ಪನೆಗಳ ಬಗ್ಗೆ ಅಕ್ಷರ ಸರ್ ಅಧ್ಯಯನ ಮಾಡಿ ಬರೆದಿದ್ದದ್ದು ಗೊತ್ತಿತ್ತು. ಅಷ್ಟು ಡೀಟೆಲ್ಸ್ ಹೇಳಿದರೆ ಸ್ಟೂಡೆಂಟ್ಸ್ ಏನು ಮಾಡಬಹುದು ಎಂಬ ಅಂದಾಜು ನನ್ನಲ್ಲಿ ಇದ್ದಿತಾದ್ದರಿಂದ ನಾನು ನೇರವಾಗಿ ಭಾರತೀಯ ಸಂದರ್ಭಕ್ಕೆ ಶಿಪ್ಟ್ ಆಗಿ ನಾಟ್ಯಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಕಥೆಯಿಂದ..”

read more
ನ್ಯೂಟನ್‌ ನ ಬದುಕು ಮತ್ತು ಪ್ರಯೋಗಗಳು: ಶೇಷಾದ್ರಿ ಗಂಜೂರು ಅಂಕಣ

ನ್ಯೂಟನ್‌ ನ ಬದುಕು ಮತ್ತು ಪ್ರಯೋಗಗಳು: ಶೇಷಾದ್ರಿ ಗಂಜೂರು ಅಂಕಣ

“ನ್ಯೂಟನ್, ಪಾರ್ಲಿಮೆಂಟಿನಿಂದ ಹೊರಬಿದ್ದ ನಂತರ, ಬ್ರಿಟನ್ನಿನ ರಾಣಿ ಅವನನ್ನು ರಾಯಲ್ ಮಿಂಟ್‌ ನ ಮುಖ್ಯಸ್ಥನನ್ನಾಗಿ ನೇಮಿಸಿದಳು. ತನ್ನ ಸ್ಥಾನವನ್ನು ಗಂಭೀರವಾಗಿ ಪರಿಗಣಿಸಿದ ನ್ಯೂಟನ್, ಫೇಕ್ ಕರೆನ್ಸಿಯನ್ನು ತಡೆಗಟ್ಟಲು ಹಲವಾರು ವಿಧಾನಗಳನ್ನು ರೂಪಿಸಿದ. ಅಷ್ಟೇ ಅಲ್ಲ, ಫೇಕ್ ಕರೆನ್ಸಿಯನ್ನು ನಿರ್ಮಿಸಿ ಹಂಚುವವರನ್ನು ಹಿಡಿಯಲೆಂದು ವೇಷ ಮರೆಸಿಕೊಂಡು ಬಾರ್-ಪಬ್‌ ಗಳಿಗೆ ಹೋಗುತ್ತಿದ್ದ. ನ್ಯೂಟನ್‌ ನ ಕ್ರಮಗಳಿಂದ…”

read more
ಖಾಲಿ ಕುರ್ಚಿಗಳ ಕ್ರಿಸ್ಮಸ್!: ಯೋಗೀಂದ್ರ ಮರವಂತೆ ಅಂಕಣ

ಖಾಲಿ ಕುರ್ಚಿಗಳ ಕ್ರಿಸ್ಮಸ್!: ಯೋಗೀಂದ್ರ ಮರವಂತೆ ಅಂಕಣ

“ಹಿಂದಿನ ಕ್ರಿಸ್ಮಸ್ ನಲ್ಲಿ ಭಾಗವಹಿಸಿದ್ದ ಅರವತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಈ ಸಲ ಪಾಲ್ಗೊಳ್ಳುತ್ತಿಲ್ಲ ಎನ್ನುವುದು ಯು.ಕೆ. ಕೋವಿಡ್ ಡೈರಿಯೊಳಗಿನ ಸರ್ವವಿಧಿತ ಕಠೋರ ಲೋಕಸತ್ಯ. ಈ ಇವರೆಲ್ಲರೂ ಕೊರೊನ ಕಾರಣಕ್ಕೆ ಇಲ್ಲವಾದವರು, ಇನ್ನೂ ಇಲ್ಲೇ ವ್ಯಾಪಕವಾಗಿ ಹಾಯಾಗಿ ಹಬ್ಬಿ ಹರಿದಾಡಿ ಹಾರಾಡಿಕೊಂಡಿರುವ ಅಸಾಧಾರಣ ವಿನಾಶ ಶಕ್ತಿಯ ಕ್ರಿಮಿ ಜಂತುವಿನ ಹಾವಳಿಯೊಂದಿಲ್ಲದಿದ್ದಿದ್ದರೆ ಬಹುಷಃ ಇನ್ನೂ ಕೆಲವು ಹಲವು ಕ್ರಿಸ್ಮಸ್ ಗಳನ್ನು…”

read more
“ಕಾಬೂಲಿವಾಲ” ಎಂಬ ಕಳೆದುಹೋದ ನಂದನದ ಕತೆ: ಎಸ್.‌ ಸಿರಾಜ್‌ ಅಹಮದ್‌ ಅಂಕಣ

“ಕಾಬೂಲಿವಾಲ” ಎಂಬ ಕಳೆದುಹೋದ ನಂದನದ ಕತೆ: ಎಸ್.‌ ಸಿರಾಜ್‌ ಅಹಮದ್‌ ಅಂಕಣ

“ಕತೆಯ ಒಳವಿವರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆರಂಭದಲ್ಲಿ ಅವನ ಆಕಾರ ಭಾಷೆ ವೇಷ ಭೂಷಣಗಳ ಕಾರಣದಿಂದ ಕೇವಲ ಕಾಬೂಲಿವಾಲನಾಗಿದ್ದ ವ್ಯಕ್ತಿ ನಿಧಾನವಾಗಿ ರಹಮತಖಾನನಾಗಿದ್ದಾನೆ. ಕಾಬೂಲಿವಾಲ ಹಾಗೂ ಮಿನಿಯ ನಡುವೆ ನಿಧಾನವಾಗಿ ಗಟ್ಟಿಗೊಳ್ಳುತ್ತಿರುವ ಸ್ನೇಹಕ್ಕೆ ಅವಳ ತಂದೆಯ ಸಮ್ಮತಿ ಇಲ್ಲದಿದ್ದರೂ ಮಿನಿಯ ತಾಯಿಯಂತೆ ಬಲವಾದ ವಿರೋಧವಿಲ್ಲ. ನಿತ್ಯವೂ ಕಾಬೂಲಿವಾಲ ಬಂದು ಮಿನಿಯ ಜೊತೆ ಆಟವಾಡುತ್ತ ಅವಳಿಗೆ..”

read more
ಪ್ರಿಂಟಿಂಗ್‌ ಪ್ರೆಸ್ಸಿನಲ್ಲಿ ರೂಪುಗೊಂಡ ವಿಜ್ಞಾನಿ!: ಶೇಷಾದ್ರಿ ಗಂಜೂರು ಅಂಕಣ

ಪ್ರಿಂಟಿಂಗ್‌ ಪ್ರೆಸ್ಸಿನಲ್ಲಿ ರೂಪುಗೊಂಡ ವಿಜ್ಞಾನಿ!: ಶೇಷಾದ್ರಿ ಗಂಜೂರು ಅಂಕಣ

“ಓದು ಬರಹ ಬಲ್ಲವನಾದರೂ ಕ್ರಮ ಶಿಕ್ಷಣ ಪಡೆಯದಿದ್ದ ಫ್ಯಾರಡೆಗೆ ಆ ಪುಸ್ತಕ ಒಂದು ವರದಾನವಾಯಿತು. ರಾಸಾಯನಿಕ ಶಾಸ್ತ್ರದ ಪ್ರಥಮ ಪಾಠಗಳನ್ನು ಅವನು ಕಲಿತದ್ದು ಆ ಪುಸ್ತಕದ ಮೂಲಕವೇ. ಆ ಪುಸ್ತಕವನ್ನು ಬರೆದವಳು ಜೇನ್ ಮಾರ್ಸೆಟ್ ಎಂಬ ಲೇಖಕಿ. ವೈಜ್ಞಾನಿಕ ರಂಗದಲ್ಲಿ ತನ್ನ ಬೆಳವಣಿಗೆಗೆ ಕಾರಣೀಭೂತವಾದ ಆ ಪುಸ್ತಕ ಮತ್ತು ಆ ಲೇಖಕಿಯನ್ನು ಫ್ಯಾರಡೆ ಮರೆಯಲ್ಲಿಲ್ಲ. ವಿಜ್ಞಾನಿಯಾಗಿ ಹೆಸರು ಮಾಡಿದ ನಂತರವೂ ತನ್ನೆಷ್ಟೋ ಲೇಖನ….”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ