“ಹಸಿವು” ಸಹಸ್ರಾವತಾರದ ಮೂಲ: ಕೃಷ್ಣ ದೇವಾಂಗಮಠ ಅಂಕಣ
“ಪ್ರಾಣಿ, ಪಕ್ಷಿಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರಿಡಬೇಕು ಅನ್ನುವ ಮೆಸೇಜುಗಳನ್ನಾ ಫಾರ್ವರ್ಡ್ ಮಾಡುವುದರಲ್ಲೇ ಕಾಲ ಕಳೆವ ನಮ್ಮಗಳ ಎಷ್ಟು ಮನೆಗಳಲ್ಲಿ ಇಂದು ಹಿತ್ತಲಗಳು ಉಳಿದುಕೊಂಡಿವೆ? ಯೋಚಿಸಬೇಕಾದ ವಿಷಯ. ಹಸಿವು ತಾಳದೆ ಮಣ್ಣು ತಿಣ್ಣುವ ಮಕ್ಕಳು, ಹಸಿವು ತಾಳದೆ ಹೋದ ಜೀವಗಳು, ಸಾವುಗಳು ಪ್ರತಿಕ್ಷಣ ತಲ್ಲಣಗೊಳಿಸುತ್ತವೆ.”
ಅವಳು ಮತ್ತು ಅವಳ ಅಸ್ಮಿತೆ: ಆಶಾ ಜಗದೀಶ್ ಅಂಕಣ
“ನಮ್ಮ ಸಮಾಜದ ಮೂಲ ಘಟಕಗಳಾದ ಹೆಣ್ಣು ಮತ್ತು ಗಂಡು, ಮತ್ತವರ ನಡುವಿನ ಆರೋಪ ಪ್ರತ್ಯಾರೋಪ ಇಂದಿಗೂ ಹೊಸತಲ್ಲ. ಈ ಎರೆಡು ಅನನ್ಯ ಭಿನ್ನ ಎಂಟಿಟಿಗಳ ನಡುವೆ ಹೋಲಿಕೆ ವ್ಯತ್ಯಾಸವೇ ಅಸಂಗತ. ಅದಾಗ್ಯೂ ಅದು ನಡೆಯುತ್ತಲೇ ಹೋಗುತ್ತದೆ. ಹೆಣ್ಣು ಹೆಣ್ಣಿನ ನಡುವಿನ ಹೋಲಿಕೆಯೂ ಕೆಲವೊಮ್ಮೆ ಸಮಂಜಸವೆನಿಸುವುದಿಲ್ಲ.”
ಶೃಂಗಾರ ಸಾರ ವರ್ಣನ-3 : ಆರ್. ದಿಲೀಪ್ ಕುಮಾರ್ ಅಂಕಣ
“ಪಂಪ ತನ್ನ ಕಾವ್ಯದ ವಸ್ತುವನ್ನು ಸಂಸಾರದಿಂದಲೇ ಪ್ರಾರಂಭ ಮಾಡಿ ಅದರಿಂದ ವಿಮುಕ್ತಿ ಹೊಂದುವುದಕ್ಕೆ ಸಹಜವಾಗಿಯೇ ಕಾಲಾನಂತರದಲ್ಲಿ ಆಗುವ ಅಪಾರ ಬದಲಾವಣೆಯನ್ನು ಹೇಳುತ್ತಾನೆ. ಈ ಬದಲಾವಣೆಯೇ ಆದಿಪುರಾಣದ ಸಾರವಾಗಿಯೂ ನಿಲ್ಲುತ್ತದೆ. ಇಲ್ಲಿನ ಎಲ್ಲಾ ಭವಾವಳಿಯಲ್ಲಿಯೂ ಸಂಸಾರದ, ಸಾಮ್ರಾಜ್ಯದ…”
ದೇವರೇ.. ಬಡವರಿಗೆ ಸಾವ ಕೊಡಬ್ಯಾಡ: ಡಾ. ಲಕ್ಷ್ಮಣ ವಿ.ಎ ಅಂಕಣ
“ಮುನ್ಷಿ ಪ್ರೇಮಚಂದ ಮೇಲಿನ ಕತೆ ಬರೆದು ಸುಮಾರು ಐವತ್ತು ವರ್ಷ ಕಳೆದಿರಬಹುದು. ಟಾಟಾಗಳು ಬಂದರು, ಬಿರ್ಲಾಗಳು ಬಂದರು, ನೆಹರೂವಿನಿಂದ ಹಿಡಿದು ಇಂದಿನ ಮೋದಿಯವರೆಗೆ ಎಷ್ಟು ಗದ್ದುಗೆಗಳು ಏರಿದವು, ಎಷ್ಟು ಗದ್ದುಗೆಗಳಿದವು? ಈ ದೇಶದಲ್ಲಿ ಉಳ್ಳವರ ಆಸ್ಪತ್ರೆಗಳೆಂದರೆ ಖಾಸಗೀ ಆಸ್ಪತ್ರೆಗಳು. ಕೆಲವೊಂದು ಬಾರಿ ಅಲ್ಲಿಯ ಬಿಲ್ಲು ಕಟ್ಟಲಾಗದೇ ಮನೆಗೆ ಶವ ಕೂಡ ತರಲಾರದ ನತದೃಷ್ಟರಿದ್ದಾರೆ.”
ಸಾಫ್ಟವೇರ್ ಜಗತ್ತಿನಲ್ಲೊಂದು ಗಾಂಧಿ ಚಳುವಳಿ!: ಮಧುಸೂದನ್ ವೈ ಎನ್ ಅಂಕಣ
“ಪ್ರತಿ ಸಾರಿ ಜಗತ್ತಿನಲ್ಲಿ ಬುದ್ದಿವಂತ ಮನುಷ್ಯ ಹುಟ್ಟಿಕೊಂಡಾಗ ಆತನ ಎದುರು ಎಷ್ಟೊಂದು ಆಯ್ಕೆಗಳಿರುತ್ತವೆ. ತನ್ನ ಬುದ್ದಿಮತ್ತೆಯನ್ನು ಬಳಸಿಕೊಂಡು ಆತ ಹಿಟ್ಲರನಂತಹ ಅಧಿಕಾರಿಯಾಗಬಹುದು, ಕಂಪನಿ ಶುರು ಮಾಡಿ ಹೆಚ್ಚೆಚ್ಚು ಲಾಭ ಮಾಡಿ ಶ್ರೀಮಂತರ ಪಟ್ಟಿ ಸೇರಿಕೊಳ್ಳಬಹುದು, ಸ್ವಂತಕ್ಕೆ ದ್ವೀಪಗಳನ್ನು ಕೊಂಡುಕೊಂಡು ಮೋಜು ಮಸ್ತಿ ಮಾಡಬಹುದು.”
ಮೊಸಳೆ ಮಾಯಾವಿ ‘ಸ್ಟೀವ್ ಇರ್ವಿನ್’: ವಿನತೆ ಶರ್ಮಾ ಅಂಕಣ
“ಸ್ಟೀವ್ ತನ್ನ ವ್ಯಕ್ತಿತ್ವದಲ್ಲೇ ಇದ್ದ ಗುಣಗಳಿಂದ ಸರೀಸೃಪಗಳ ಪ್ರಪಂಚದಲ್ಲಿ ಸಂಪೂರ್ಣವಾಗಿ ಮುಳುಗಿದ. ಅವನಪ್ಪ ಬಾಬ್ ಮೊಸಳೆ ಹಿಡಿಯುವ ಕಲೆಯನ್ನು ಹೇಳಿಕೊಟ್ಟ ಮೇಲಂತೂ ಅದನ್ನೇ ಕರಗತ ಮಾಡಿಕೊಂಡು ಮುಂದೆ ಅವನ ಮೊಸಳೆ ಹಿಡಿಯುವ ಪ್ರವೀಣತೆ ಹೆಸರುವಾಸಿಯಾಯ್ತು. ಅವನ ಅಪ್ಪಅಮ್ಮಂದಿರು ಮತ್ತು ಸ್ಟೀವ್ ತಮ್ಮ ಕುಟುಂಬದ ಮೃಗಾಲಯವನ್ನು ಸ್ವಲ್ಪಸ್ವಲ್ಪವೇ ಬೆಳೆಸುತ್ತಾ ಅದನ್ನು ಸ್ಥಳೀಯ ಜನರಿಗೆ ಪರಿಚಯಿಸಿ… “
ದಾರಿ ಮರೆತ ಇರುವೆಗಳು: ಮುನವ್ವರ್ ಜೋಗಿಬೆಟ್ಟು ಅಂಕಣ
“ಪೇರಳೆಯ ಹುಚ್ಚಿಗೆ ನಾವು ಅನೇಕ ಬಾರಿ ಚಿಗಳಿ ಇರುವೆಗಳಿಂದ ಕಚ್ಚಿಸಿಕೊಂಡದ್ದಿದೆ. ಅದರ ಕಡಿತದ ವಿಪರೀತ ಉರಿಯನ್ನು ಸಹಿಸಿಕೊಳ್ಳುವುದೇ ಅಧ್ವಾನ. ಒಮ್ಮೆ ಮನೆಯ ಹಿತ್ತಲಲ್ಲಿದ್ದ ಪೇರಳೆ ಮರಕ್ಕೆ ಹತ್ತಿದವನು ಹಣ್ಣಾದ ಪೇರಳೆ ಕಂಡು ಬಾಗಿದ್ದ ರೆಂಬೆಯೊಂದರ ಮೇಲೆ ಹೋಗಿದ್ದೆ. ಇನ್ನೇನು ಹಣ್ಣೆಟಕುತ್ತದೆ ಎನ್ನುವಷ್ಟರಲ್ಲಿ ತಲೆಯ ಸ್ವಲ್ಪವೇ ಮೇಲಿದ್ದ ಚಿಗುಳಿ ಇರುವೆಗಳ ಗೂಡಿಗೆ ಕೈ ತಾಗಿತು.”
ಕವಿತೆಯೊಂದರ ಸಾಲಿನಿಂದ ಕಳಚಿಕೊಂಡ ಅಕ್ಷರ: ಡಾ. ಲಕ್ಷ್ಮಣ ವಿ.ಎ ಅಂಕಣ
“ಇವರ ವೈಯಕ್ತಿಕ ಪರಿಚಯ ಈಗಷ್ಟೇ, ಇತ್ತೀಚೆಗೆ ಆದದ್ದು. ನೀನಾಸಮ್ ನ ಶಿಬಿರವೊಂದರಲ್ಲಿ ಮೊಟ್ಟ ಮೊದಲಬಾರಿಗೆ ಮುಖತಃ ಭೇಟಿಯಾಗಿದ್ದು. ಅಲ್ಲಿ ಅವರು ಬಂದಿದ್ದು ಒಬ್ಬ ಕಿರಿಯ ಲೇಖಕರನ್ನು ಮಾತನಾಡಿಸಿಕೊಂಡು ಹೋಗಲು. ಅಷ್ಟೊಂದು ಸಾಹಿತ್ಯ ಕಲೆ ಕವಿತೆಯ ಮೇಲೆ ಪ್ರೀತಿಯಿರುವ ಮನುಷ್ಯನೊಬ್ಬ ಮಾತ್ರ ತನಗಿಂತ ಕಿರಿಯರನ್ನು ಹೀಗೆ ಹುಡುಕಿಕೊಂಡು ಬರಲು ಸಾಧ್ಯ.”
ಏನೊಂದೂ ಅರಿವಾಗದ ಅಯೋಮಯತೆಯಲ್ಲಿ: ಆಶಾ ಜಗದೀಶ್ ಅಂಕಣ
“ಹೆಣ್ಣು ತನ್ನ ಮನೆಯ, ಇರುವ ಪರಿಸರದ ಸೌಂದರ್ಯವನ್ನು ಹೆಚ್ಚಿಸುವ ರೀತಿಯಲ್ಲೇ ತನ್ನಿರುವಿಕೆಯಿಂದಲೇ ಆ ಪರಿಸರಕ್ಕೊಂದು ಸೌಂದರ್ಯ ದಕ್ಕುವಂತೆ ಮಾಡಬಲ್ಲವಳು. ಅದೇ ವೇಳೆ ತನ್ನ ಒಳಗಿನಲ್ಲೂ ಸೌಂದರ್ಯದ ಚಿಲುಮೆ ಬತ್ತದಿರುವಂತೆ ಕಾಪಿಟ್ಟುಕೊಳ್ಳಬಲ್ಲವಳು. ಇದೊಂದು ಮಾತು, ಯಾರಿಗಾದರೂ ಗೊತ್ತಿರಬಹುದು… ಗಂಡು ಕಟ್ಟಡವನ್ನು ಕಟ್ಟುತ್ತಾನೆ, ಹೆಣ್ಣು ಅದನ್ನು ಮನೆಯನ್ನಾಗಿ ಮಾಡುತ್ತಾಳೆ ಎಂದು.”








