Advertisement
ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಬದುಕು ಹೀಗೇ ಒಮ್ಮೊಮ್ಮೆ….

ಕಡು ಬೇಸಿಗೆಯಲು ಮಳೆ ಸರಿಯುತ್ತಿದೆ
ಅಚ್ಚರಿಯಿಲ್ಲದೆ ಬದುಕು ಸ್ಥಗಿತ
ವಾಗಿ ಬಿಟ್ಟಿತೋ ಎಂಬಂತೆ
ಇಳೆಯ ಹದ ಆರದಂತೆ
ಮನಸು ಬರಿದಾಗದಂತೆ

ಬದುಕು ಹೀಗೇ ಒಮ್ಮೊಮ್ಮೆ
ತಲೆಕೆಳಗಾಗಿಸಿ ಲೆಕ್ಕಾಚಾರಗಳ
ನಿಲ್ಲಲು ಕಾದಷ್ಟೂ ಬಿರುಸಾದಂತೆ ವರ್ಷ
ಹನಿಗಳ ಎಣಿಸಿದಷ್ಟೂ ಹೆಚ್ಚಾಗುವಂತೆ ಹರ್ಷ
ಎಣೆಗೆ ಸಿಗದೆ ಜಾರುವ ಕೌತುಕ

ಗುಡುಗು- ಮಿಂಚುಗಳ ಜೊತೆ
ಮೊಗೆದು-ಮೀಟುವ ಬಿಳಿ ಹನಿಯ ಚಾದರ
ಬಾನು-ಭುವಿಯ ನಡುವೆ
ಅಲಂಕರಿಸಿ ಹಾಸಿ ಹಿಡಿದ ಕ್ಷಣ
ಮಿಲಿಯನ್ನು ವೋಲ್ಟ್‌ ಗಳ ವಿದ್ಯುತ್ಸಂಚಾರ

ಬೀಳುವುದರಲ್ಲೂ ಇರುವ ಸುಖ
ಶುರುವಾಗುವುದೇ ಹೀಗೆ
ಮಾತು ಮೌನವಾದಂತೆ
ಪ್ರತಿಬಾರಿ ಪುಟಿದೇಳುವ
ವಿಜಯಕೆ ನಾಂದಿ ಹಾಡಿದಂತೆ

ತಪ್ಪೇನಿಲ್ಲ ಹನಿ ಬೀಳುವುದೇ ಕೆಳಗೆ
ಮೇಲೇಳುವ ಗರಿಕೆ ಚಿಗುರಿಗೆ
ಶಕ್ತಿ ಹರಿಸಿ ಬೇರಿಗೆ
ಇಲ್ಲಗಳ ಮಿತಿಯ ಕುಗ್ಗಿಸಿ,
ಏಳದಿದ್ದರೆ ಬಿದ್ದಷ್ಟೂ ಬೀಳಿಸಿ ಕೆಳಕ್ಕೆ

ಕಡು ಬೇಸಿಗೆಯ ಬೇಗೆ
ಸುಟ್ಟುಬಿಡುವಂತಹ ಮಳೆ
ಹೆಚ್ಚೇನೂ ಇಲ್ಲ ಕಲಿಯುವುದು
ಯಶಸ್ಸುಗಳಲಿ ಅಥವಾ ವಿಫಲತೆಯ
ಹಾದಿ ಸಾಗಿ ಸೇರುವಲ್ಲಿ
ಸಂಭವಿಸುವುದಷ್ಟರಲ್ಲೇ ಸುಖ
ಎಲ್ಲ ನಿಲ್ಲುವ ತನಕ

About The Author

ಡಾ.ಪ್ರೇಮಲತ

ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್‌ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.

2 Comments

  1. Sunanda kadame

    ಒಳ್ಳೆಯ ಕವಿತೆ ಪ್ರೇಮಲತಾ, ಕೀಪ್ ಇಟ್ ಅಪ್.

    Reply
  2. premalatha B

    ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಬಹಳ ಧನ್ಯವಾದಗಳು.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ