Advertisement
ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ

ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ

ರಾಹುಲ ಮತ್ತು ರೈಲು

ಕವಿತೆ ವ್ಯಕ್ತದಿಂದ ಅವ್ಯಕ್ತ
ತಲುಪಿತೆನುವಾಗ
ಮತ್ತೆಮತ್ತೆ ಓದಿ ತೃಪ್ತಿಯಲ್ಲಿ
ಅಪ್ಡೇಟಿಸಿ ಮೂರೇ ನಿಮಿಷಕ್ಕೆ
ನೂರಾದ ವ್ಯೂಸಿಗೆ
ನೆತ್ತಿ ಕತ್ತಿನ ಮೇಲೆ ನಿಲ್ಲದೆ
ಬೀಗಿ
ಡೇರೆಗಳ ನಡುವೆ
ನಾನೊಬ್ಬಳೇ ಗುಲಾಬಿ
ಎಂದು ಬೆರಗಾಗಿ
ರುವಾಗ

ಕೆಸುವಿನೆಲೆ ಮೇಲೊಂದು
ಕಂಬನಿಯ ಬಿಂದುವಿನಂತ ಪದ್ಯ
ಅಕಸ್ಮಾತ್ ಕಣ್ಣಿಗೆ ಬಿತ್ತು
ನಾಲ್ಕೇ ಪದ..
‘ಬುದ್ದ..ವೃದ್ಧಿ.. ಅನ್ನ ಮತ್ತು ನಿನ್ನೆ..’

ಕವಿತೆ ಹೇಳಿಲ್ಲ
ಅವರ ನಾಳೆಗಳ ಕುರಿತು
ಸಿಕ್ಕಿದ್ದ ಹಿಡಿ ಬೆಳಕ
ಹೊದ್ದು ಮಲಗಿದ್ದರು..

ಅದು
ಕೊನೆಯ ಮಾತು
ಕೊನೆಯ ತುತ್ತು
ಕೊನೆಯ ಮುತ್ತು
ಕೊನೆಯ ಆಕಾಶ
ಕೊನೆಯ ನಿದ್ದೆ
ಕೊನೆಯ ಬೆಳದಿಂಗಳು

ಕಾಲು ಬಳಲಿದ ಕೂಸು
ಕನವರಿಕೆಯಲಿ ಕೇಳುತಿದೆ
‘ಇನ್ನೆಷ್ಟು ದೂರವಮ್ಮಾ..?’

ಸುಖದ ಊರಿಗೆ ಸೀಟಿ ಊದಿ
ಬಂದ ರೈಲು
ಕೂಸಿನೆದೆಯಲ್ಲಿ ಉಸುರಿತು
ಉಂಡು ಮಲಗು ಕಂದಾ
ಇನ್ನು ಬರೀ ಸೊನ್ನೆ ಮೈಲು..

ತೃಪ್ತ ಸಿದ್ದಾರ್ಥ ಎದ್ದ ಮಗ್ಗುಲಿಂದ
ವಲ್ಲಿ ಸರಿಮಾಡಿಕೊಂಡಳು ಯಶೋಧರೆ
ಗೆ ಗಾಬರಿ..
ಎಲ್ಲಿ ರಾಹುಲ…
ರಾಹುಲ…ರಾಹುಲ..?
ರೈಲು ಬಂತೇ..ಹೋಯ್ತೇ…ರಾಹುಲ..??

About The Author

ನಂದಿನಿ ಹೆದ್ದುರ್ಗ

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿ ಬೆಳೆಗಾರ್ತಿ ಮತ್ತು ಕೃಷಿ ಮಹಿಳೆ. ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ