Advertisement
ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ

ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ

ರಾಹುಲ ಮತ್ತು ರೈಲು

ಕವಿತೆ ವ್ಯಕ್ತದಿಂದ ಅವ್ಯಕ್ತ
ತಲುಪಿತೆನುವಾಗ
ಮತ್ತೆಮತ್ತೆ ಓದಿ ತೃಪ್ತಿಯಲ್ಲಿ
ಅಪ್ಡೇಟಿಸಿ ಮೂರೇ ನಿಮಿಷಕ್ಕೆ
ನೂರಾದ ವ್ಯೂಸಿಗೆ
ನೆತ್ತಿ ಕತ್ತಿನ ಮೇಲೆ ನಿಲ್ಲದೆ
ಬೀಗಿ
ಡೇರೆಗಳ ನಡುವೆ
ನಾನೊಬ್ಬಳೇ ಗುಲಾಬಿ
ಎಂದು ಬೆರಗಾಗಿ
ರುವಾಗ

ಕೆಸುವಿನೆಲೆ ಮೇಲೊಂದು
ಕಂಬನಿಯ ಬಿಂದುವಿನಂತ ಪದ್ಯ
ಅಕಸ್ಮಾತ್ ಕಣ್ಣಿಗೆ ಬಿತ್ತು
ನಾಲ್ಕೇ ಪದ..
‘ಬುದ್ದ..ವೃದ್ಧಿ.. ಅನ್ನ ಮತ್ತು ನಿನ್ನೆ..’

ಕವಿತೆ ಹೇಳಿಲ್ಲ
ಅವರ ನಾಳೆಗಳ ಕುರಿತು
ಸಿಕ್ಕಿದ್ದ ಹಿಡಿ ಬೆಳಕ
ಹೊದ್ದು ಮಲಗಿದ್ದರು..

ಅದು
ಕೊನೆಯ ಮಾತು
ಕೊನೆಯ ತುತ್ತು
ಕೊನೆಯ ಮುತ್ತು
ಕೊನೆಯ ಆಕಾಶ
ಕೊನೆಯ ನಿದ್ದೆ
ಕೊನೆಯ ಬೆಳದಿಂಗಳು

ಕಾಲು ಬಳಲಿದ ಕೂಸು
ಕನವರಿಕೆಯಲಿ ಕೇಳುತಿದೆ
‘ಇನ್ನೆಷ್ಟು ದೂರವಮ್ಮಾ..?’

ಸುಖದ ಊರಿಗೆ ಸೀಟಿ ಊದಿ
ಬಂದ ರೈಲು
ಕೂಸಿನೆದೆಯಲ್ಲಿ ಉಸುರಿತು
ಉಂಡು ಮಲಗು ಕಂದಾ
ಇನ್ನು ಬರೀ ಸೊನ್ನೆ ಮೈಲು..

ತೃಪ್ತ ಸಿದ್ದಾರ್ಥ ಎದ್ದ ಮಗ್ಗುಲಿಂದ
ವಲ್ಲಿ ಸರಿಮಾಡಿಕೊಂಡಳು ಯಶೋಧರೆ
ಗೆ ಗಾಬರಿ..
ಎಲ್ಲಿ ರಾಹುಲ…
ರಾಹುಲ…ರಾಹುಲ..?
ರೈಲು ಬಂತೇ..ಹೋಯ್ತೇ…ರಾಹುಲ..??

About The Author

ನಂದಿನಿ ಹೆದ್ದುರ್ಗ

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿ ಬೆಳೆಗಾರ್ತಿ ಮತ್ತು ಕೃಷಿ ಮಹಿಳೆ. ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ