ಖಂಡಕಾವ್ಯಕ್ಕೊಂದು ಪ್ರವೇಶ: ಯು.ಆರ್.ಅನಂತಮೂರ್ತಿ ಮುನ್ನುಡಿ
ಆತ್ಮ ಸಫಲತೆಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಹೆಣ್ಣು ಪ್ರಣಯಿನಿಯಾಗಿಯೂ, ಹೆಂಡತಿಯಾಗಿಯೂ, ಮಗಳಾಗಿಯೂ, ತಾಯಿಯಾಗಿಯೂ, ‘ಬಜಾರಿ’ಯಾಗಿಯೂ ಅವನಿಗೆ ಒದಗುತ್ತಾಳೆ. ಇದನ್ನು ನಟಿಸಿ ತೋರಲು ತೇಜಶ್ರೀ ಕವನದಲ್ಲಿ ಒಂದು ಅಪರೂಪದ ಕಾವ್ಯ ಪ್ರಯೋಗವಿದೆ. ಇಲ್ಲಿ ಬರುವ ಅವನು ಪುರಾಣದ ಕೃಷ್ಣನೂ ಹೌದು, ನಿಜದ ಅವನೂ ಹೌದು. ಹಾಗೆಯೇ ರಾಧೆ ಪುರಾಣದ ರಾಧೆಯೂ ಹೌದು, ನಿಜದ ಅವಳೂ ಹೌದು. ಈ ಎರಡು ಸತ್ಯಗಳೂ ಒಟ್ಟಾಗಿ ನಮಗೆ ಭಾಸವಾಗುವುದರಿಂದ ಸಾಮಾಜಿಕ ಸಾಂಸಾರಿಕ ನೀತಿ ಅನೀತಿಗಳನ್ನು ಈ ಕವನ ಮೀರುತ್ತದೆ.
ಜ.ನಾ. ತೇಜಶ್ರೀ ಖಂಡಕಾವ್ಯ “ಅವನರಿವಲ್ಲಿ” ಕೃತಿಗೆ ಯು.ಆರ್. ಅನಂತಮೂರ್ತಿ ಮುನ್ನುಡಿ
ದುಃಖಾಂತ ಪಾತ್ರಗಳ ಬಿಕ್ಕುಗಳ ಸಂಕಲನ: ಶುಭಶ್ರೀ ಕಥಾಸಂಕಲನಕ್ಕೆ ವಿಕಾಸ ನೇಗಿಲೋಣಿ ಮುನ್ನುಡಿ
ಶುಭಶ್ರೀ ಬಳಸುವ ಭಾಷೆ ಬಹುತೇಕ ಉತ್ತರ ಕನ್ನಡದ ಕೆಳ ಸಮುದಾಯದ್ದು. ಜೊತೆಗೆ ಮಕ್ಕಳಾಗದವರ ಬಿಕ್ಕು, ಗಂಡನ ದೌರ್ಬಲ್ಯದ ನೆರಳಲ್ಲಿ ನರಳುವ ಹೆಣ್ಮಕ್ಕಳ ಬಿಕ್ಕು, ಮನೆ ತೊರೆದು ಹೋದವರ ನರಳುಗಳನ್ನೆಲ್ಲಾ ಗದ್ಗದಿತ ಕೊರಳಿನಿಂದ ಹೇಳುತ್ತಾ ಹೋಗುತ್ತಾರೆ. ಸಂಕಲನದ ಅತ್ಯಂತ ಗಾಢ ಕತೆಯೆಂದರೆ ‘ಹಗಲು ವೇಷ’. ಮನೆ ತೊರೆದು, ಅನ್ಯ ಕೋಮಿನ ಹುಡುಗನನ್ನು ಮದುವೆಯಾಗಿ, ನರಳುವ ಹೆಣ್ಮಗಳೊಬ್ಬಳ ಚಿತ್ರಣ ಇರುವ ಆ ಕತೆಯಲ್ಲಿ ಧರ್ಮ ಅಥವಾ ದ್ವೇಷದ ಸೋಂಕು ಇಲ್ಲದೇ, ಜಡ್ಜ್ ಮೆಂಟಲ್ ಕೂಡ ಆಗದಂತೆ ಹೆಣ್ಣೊಬ್ಬಳ ಅಂತಃಕರಣದಿಂದ ಆಯೇಷಾ ಅನ್ನುವ ಪಾತ್ರವನ್ನು ಕತೆಗಾರ್ತಿ ನಿರ್ವಹಿಸಿದ ಮೆಚ್ಚುವಂತಿದೆ.
ಶುಭಶ್ರೀ ಭಟ್ಟ ಹೊಸ ಕಥಾಸಂಕಲನ “ಬಿದಿಗೆ ಚಂದ್ರಮನ ಬಿಕ್ಕು” ಕೃತಿಗೆ ವಿಕಾಸ್ ನೇಗಿಲೋಣಿ ಬರೆದ ಮುನ್ನುಡಿ
ಕಾಣುತ್ತಿಲ್ಲವೇ ಅಲ್ಲಿ ಗೋದಿನಾಗರ…: ಡಾ. ಕೆ.ಬಿ. ಶ್ರೀಧರ್ ಕಾದಂಬರಿಯ ಪುಟಗಳು
ಪಲ್ಲವಿಯು ಮುಟ್ಟಿದಲ್ಲೆಲ್ಲಾ ರೋಹಿಣಿಯು ಸಡಿಲಗೊಂಡಳು. ಗಟ್ಟಿಯಾದ ಮೇಣವು ಬೆಂಕಿಯ ಕಾವಿಗೆ ಮೆತ್ತಗಾಗುವಂತೆ… ಗೌತಮನಿಗೆ ನಂಬಲಾಗಲಿಲ್ಲ, ಅರ್ಥವೂ ಆಗಲಿಲ್ಲ. ತನಗರಿಯದ ಯಾವುದೋ ಭಾಷೆಯಲ್ಲಿ ಇವರಿಬ್ಬರು ಸಂವಹಿಸುತ್ತಿದ್ದಾರೆ ಎಂದೆನಿಸಿತು. ಬಗೆಹರಿದಂತೆ ಕಂಡಿದ್ದ ಅನುಮಾನವು ಬುಗ್ಗೆಂದು ಹೊತ್ತಿಕೊಂಡಿತು. ಮೂತ್ರಕ್ಕೆ ಅವಸರವಾದಂತಾಗಿ ಬಚ್ಚಲ ಮನೆಗೆ ಓಡಿದ. ಪಲ್ಲವಿಯು ಮೆಲ್ಲಮೆಲ್ಲನೆ ರೋಹಿಣಿಯನ್ನು ನಡೆಸುತ್ತಾ ಮನೆಯೊಳಗೆ ಕರೆದುಕೊಂಡು ಬಂದು, ಸೋಫಾ ಮೇಲೆ ಕೂರಿಸಿದಳು.
ಡಾ. ಕೆ.ಬಿ. ಶ್ರೀಧರ್ ಹೊಸ ಕಾದಂಬರಿ “ಅನೂಹ್ಯ”ದ ಕೆಲವು ಪುಟಗಳು ನಿಮ್ಮ ಓದಿಗೆ
ಕಾವ್ಯ ಸಂಚಾರಿಣಿ ಮಮತಾ ಸಾಗರ: ಬಾನು ಮುಷ್ತಾಕ್ ಮುನ್ನುಡಿ
ಮಮತಾ ಸಾಗರ್ ಭಾಷೆಯಲ್ಲಿ ಹೇಳುವುದಾದರೆ ಆಕೆಯ ಪದಸಂಚಾರದ ಲಯ, ಗತಿ, ಭಾವ, ಅರ್ಥ ವ್ಯಾಪ್ತಿ ಮತ್ತು ಭಾಷೆಯ ನಿಲ್ಲದ ಪಯಣ ಕವಿಯತ್ರಿಯಂತೆಯೆ ಆಕೆಯ ಪದಗಳು ಕೂಡ ನಿರಂತರ ಸಂಚಾರದಲ್ಲಿರುತ್ತವೆ. ಹೀಗಾಗಿ ಆಕೆಯ ಭಾವನೆ ಮತ್ತು ಭಾವತೀವ್ರತೆಗಳಿಗೆ ಜಡ್ಡು ಮತ್ತು ಜಿಡ್ಡು ಹಬ್ಬಿಲ್ಲ. ಕೆಲವೆಡೆ ಪ್ರಖರವಾಗಿ ಇಡೀ ಆಸ್ತಿತ್ವವನೆ ಕಲಕುವ ಸಾಲುಗಳು ಯರ್ರಾ ಬಿರ್ರಿ ಕಲ್ಲು ಮಳೆಗರೆದಂತೆ ಮತ್ತೊಮ್ಮೆ ಪುಷ್ಪ ವೃಷ್ಟಿಯಂತೆ ಮತ್ತೊಮೆ ತಣ್ಣಗೆ ಕರಗುವ ಮಂಜಿನ ಕಠಾರಿ ಆಳವಾಗಿ ಎದೆಗಿಳಿದಂತೆ ಕಾಡುತ್ತಲೇ ಹೋಗುತ್ತವೆ.
ಮಮತಾ ಜಿ. ಸಾಗರ ಇಲ್ಲಿಯವರೆಗಿನ ಕವಿತೆಗಳ ಸಂಕಲನ “ಪದಸಂಚಾರ”ಕ್ಕೆ ಬಾನು ಮುಷ್ತಾಕ್ ಬರೆದ ಮುನ್ನುಡಿ
ಸೇವೆಯಲ್ಲಿ ಜೀವ ಸವೆಸುವ ಜೀವಗಳು…: ದೇವಿಕಾ ನಾಗೇಶ್ ಬರಹ
ಪ್ರತಿಯೊಂದು ಜೀವಿ ತನ್ನ ಅಸ್ತಿತ್ವದಿಂದ ವಿಶೇಷ ಅನ್ನಿಸಿಕೊಳ್ಳುವುದು ತಾನು ಮಾಡುವ ಸೇವೆಯಿಂದ ಎಂದು ನಂಬಿ ನಡೆಯುವ ಈ ಸನ್ಯಾಸಿನಿಯರು ಜಗತ್ತಿನ ಪಾಪ ತುಳಿಯುವ ಕಾಯಕ ತಮ್ಮದು ಎಂದು ನಂಬಿದವರು. ಹಾಗೆ ನೋಡಿದರೆ ಲಲ್ಲೇಶ್ವರಿ, ಅಕ್ಕಮಹಾದೇವಿ, ಮೀರಾ, ಸೂಫಿ ಸಂತ ಮಹಿಳೆಯರಾದ ಉಲೇಮ ರಬಿಯ ನಫೀಜಾ ತಮ್ಮ ಬದುಕಿನಲ್ಲಿ ಎದುರಾದ ಸಂಕಷ್ಟಗಳಿಗೆ ಮುಖಾಮುಖಿಯಾಗುತ್ತಲೇ ಜನ ಜೀವನದ ಸಂಕಷ್ಟಗಳಿಗೆ ಸ್ಪಂದಿಸುತ್ತ ಸಾಧನೆಯ ಪಥದಲ್ಲಿ ಮುನ್ನಡೆದವರು.
ಬಿ.ಎಂ. ರೋಹಿಣಿ ಹಾಗೂ ಮೋಲಿ ಮಿರಾಂದ ಬರೆದ “ಧರ್ಮ ಭಗಿನಿಯರು” ಕೃತಿಯ ಕುರಿತು ದೇವಿಕಾ ನಾಗೇಶ್ ಬರಹ
ಪ್ರಯಾಣ-ಪ್ರವಾಸದಲ್ಲಿ ಓದಬೇಕೆ?: ಕೆ. ಸತ್ಯನಾರಾಯಣ ಹೊಸ ಕೃತಿಯ ಒಂದು ಬರಹ
ಪ್ರವಾಸ-ಪ್ರಯಾಣದಲ್ಲಿ ಸಹಪ್ರಯಾಣಿಕರು ನಮ್ಮ ಓದಿನ ರೀತಿಯನ್ನು ಪ್ರಭಾವಿಸುತ್ತಾರೆ. ಅಲ್ಲದೆ, ಪ್ರವಾಸ-ಪ್ರಯಾಣದ ಉದ್ದೇಶ, ಓದುವುದೇನಲ್ಲ. ರೈಲಿನಲ್ಲಾಗಲಿ, ವಿಮಾನದಲ್ಲಾಗಲಿ ನಿಮಗೆ ಊಟಕ್ಕೆ, ನಿದ್ದೆಗೆ, ಶೌಚಕ್ಕೆ ವ್ಯವಸ್ಥೆ, ಅನುಕೂಲ ಮಾಡಿಕೊಡಬಹುದೇ ಹೊರತು ಓದಿಗಲ್ಲ. ನೀವು ಓದುವುದರಿಂದ ಎಷ್ಟೋ ಸಲ ಸಹಪ್ರಯಾಣಿಕರಿಗೆ ತೊಂದರೆಯೂ ಆಗಬಹುದು. ನಿಮ್ಮನ್ನು ಒಬ್ಬ ವಿಚಿತ್ರ ಪ್ರಾಣಿಯೆಂದು ಕೂಡ ಪರಿಗಣಿಸಬಹುದು.
ಕತೆಗಾರ ಕೆ. ಸತ್ಯನಾರಾಯಣ ಬರೆದ “ಓದುವವರೆಲ್ಲ ಓದುಗರೆಲ್ಲ-ಹಾಗಾದರೆ?” ಹೊಸ ಕೃತಿಯ ಒಂದು ಬರಹ ನಿಮ್ಮ ಓದಿಗೆ
ಬೇರಿನಿಂದ ಬೆಳಕಿಗೆ: ಮಿತ್ರಾ ವೆಂಕಟ್ರಾಜ ಅನುವಾದಿತ ಕಾದಂಬರಿಯ ಕುರಿತು ದೇವಿಕಾ ನಾಗೇಶ್ ಬರಹ
‘ಒಂದು ಪುರಾತನ ನೆಲದಲ್ಲಿʼ ಕೃತಿ ಭಾರತ ಮತ್ತು ಈಜಿಪ್ಟ್ನಂತಹ ಎರಡು ಪುರಾತನ ನೆಲದ ಸಂಸ್ಕೃತಿಯ ತಾಯಿ ಬೇರುಗಳ ಸಂಶೋಧನೆಯ ಅತ್ಯುನ್ನತ ದಾಖಲೆಯಾಗಿದೆ. ಕಳೆದ ಆರು ಶತಮಾನಗಳಿಂದ ವಿಸ್ಮೃತಿಯೆಡೆಗೆ ದಾಪುಗಾಲಿಡುತ್ತಿರುವ ಕಡಲ ತೀರದ ಕೆಲವು ಮುಖ್ಯ ವ್ಯಾಪಾರ ಕೇಂದ್ರಗಳಲ್ಲಿನ, ಜನಜೀವನದ, ಸಾಂಸ್ಕೃತಿಕ ಸಾಮಾಜಿಕ ಬದುಕಿನ ಚಿತ್ರಣವನ್ನು ಪಾತ್ರಗಳ ಮೂಲಕ ಕಟ್ಟಿಕೊಡುವ ಇಲ್ಲಿನ ಕ್ರಮ ವಿನೂತನವಾಗಿದೆ.
ಹಿರಿಯ ಕಾದಂಬರಿಕಾರ್ತಿ ಮಿತ್ರಾ ವೆಂಕಟರಾಜ್ ಅನುವಾದಿಸಿರುವ ‘ಒಂದು ಪುರಾತನ ನೆಲದಲ್ಲಿʼ ಕಾದಂಬರಿಯ ಕುರಿತು ದೇವಿಕಾ ನಾಗೇಶ್ ಬರಹ
ವೈದ್ಯರ ಬದುಕಿನ ಪಡಿಪಾಟಲ ಕನ್ನಡಿ: ಕೊಟ್ರೇಶ್ ಅರಸೀಕೆರೆ ಬರಹ
ಇಡೀ ಕಾದಂಬರಿ, ಒಬ್ಬ ಪ್ರಾಮಾಣಿಕ ವೈದ್ಯ ದೇಶ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿದ್ದಾಗಲೂ ಹೇಗೆ ಭ್ರಷ್ಟ ವ್ಯವಸ್ಥೆಗೆ ಬಲಿಯಾಗುತ್ತಾನೆ ಎನ್ನುವ ಕರಾಳ ಕಥನ. ಕೋವಿಡ್ ಕಾಲದಲ್ಲಿ ಸರ್ಕಾರದ ವ್ಯವಸ್ಥೆ ಮೇಲೆ ಆ ಸಮಯದಲ್ಲಿ ಚಾಲ್ತಿಯಲ್ಲಿದ್ದ ಶ್ರೀ ಸಾಮಾನ್ಯನ ಎಲ್ಲ ಆರೋಪಗಳೂ ಸತ್ಯವೆಂದು ಬಿಂಬಿಸುತ್ತದೆ. ವೈದ್ಯಕೀಯ ವ್ಯವಸ್ಥೆಯ ಭ್ರಷ್ಟತೆ ಹೇಗೆ ಲಕ್ಷಾಂತರ ಜನರ ಜೀವನ, ಜೀವದ ಜತೆ ಆಟವಾಡಿದ ಕರಾಳ ಕಥೆಯೇ ಈ ಕಾದಂಬರಿ.
ಡಾ. ಲಕ್ಷ್ಮಣ ವಿ.ಎ. ಕಾದಂಬರಿ ‘ಪಿ. ಎಚ್. ಸಿ ಕವಲುಗುಡ್ಡ’ ಕುರಿತು ಕೊಟ್ರೇಶ್ ಅರಸೀಕೆರೆ ಬರಹ
ಆವರಣ ಭಂಗ ಮಾಡಿಸುವ “ಪರಿಸರದ ಒಡನಾಟ”: ನಾರಾಯಣ ಯಾಜಿ ಬರಹ
ಯಾವುದೋ ಕಾಲದಲ್ಲಿ ‘ಮುದ್ದಳ’ ಎನ್ನುವ ಸಾಮಂತನಾಳಿದ ಈ ಊರಿನಲ್ಲಿ ಆತನ ನೆನಪು ಮರೆಯಾಗಿದೆ. ಆತನ ಅರಮನೆ ಇದೆ ಎನ್ನುವ ಜಾಗ ಅಸ್ಪಷ್ಟವಾಗಿ ಇದೆ. ಹಳ್ಳಿಗರ ಭಿತ್ತಿಯಲ್ಲಿ ಮಾಸಲು ತೊಡಗಿರುವ ಆ ಗುತ್ತುಗಳ ವಿಚಾರವನ್ನು ಹೇಳುತ್ತಲೇ, ತನ್ನ ಬಾಲ್ಯದ ಪರಿಸರದಲ್ಲಿ ಇದೀಗ ಮರೆಯಾಗುತ್ತಿರುವ ಹಳೆಯ ಕಾಡು, ಕರಡ ಹುಲ್ಲಿನ ಬೇಣ, ಒಳ್ಳೆ ಹಾವು, ವಿಷದ ಹಾವುಗಳೊಡನೆಯ ಬದುಕೆಲ್ಲವನ್ನೂ ಆಧುನಿಕ ಬದುಕು, ನಿಧಾನಕ್ಕೆ ಕಸಿಯತೊಡಗಿವೆ ಎನ್ನುವ ನೋವನ್ನು ಪರೋಕ್ಷವಾಗಿ ಲೇಖಕರು ತೋಡಿಕೊಳ್ಳುತ್ತಿದ್ದಾರೆ.
ಶಶಿಧರ ಹಾಲಾಡಿಯವರ “ಪರಿಸರದ ಒಡನಾಟ”ಕೃತಿಯ ಕುರಿತು ನಾರಾಯಣ ಯಾಜಿ ಬರಹ









