Advertisement

ಪ್ರವಾಸ

ಬ್ರಸೆಲ್ಸ್‌ನಲ್ಲಿ ಸುತ್ತಾಟ (೨): ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಬ್ರಸೆಲ್ಸ್‌ನಲ್ಲಿ ಸುತ್ತಾಟ (೨): ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಎರಡನೇ ವಿಶ್ವ ಮಹಾಯುದ್ಧದ ಕಾಲದಲ್ಲಿ ಮತ್ತು ನಂತರದ ಕಾಲದಲ್ಲಿ ಕ್ಯಾಥೆಡ್ರಲ್ ಮೇಲೆ 14 ವೈಮಾನಿಕ ದಾಳಿಗಳನ್ನು ಅಂದರೆ 14 ಬಾಂಬ್‌ಗಳನ್ನು ಎಸೆಯಲಾಯಿತು ಎನ್ನಲಾಗಿದೆ. ಇಡೀ ನಗರ ಧ್ವಂಸವಾದರೂ ಕ್ಯಾಥೆಡ್ರಲ್ ಒಂದಷ್ಟು ಹಾನಿಗೆ ಒಳಗಾದರೂ ಅದರ ಸಂಪೂರ್ಣ ರಚನೆ ಮತ್ತು ಎರಡು ಸ್ಪೈರ್ಡ್ ಈಗಲೂ ಹಾಗೆಯೇ ಉಳಿದುಕೊಂಡಿವೆ ಎಂದು ನಮ್ಮ ಗೈಡ್ ಹೇಳಿದ. ಅದರ ಬಗ್ಗೆ ವಿವರಗಳನ್ನು ಅಂತರಜಾಲದಲ್ಲಿ ನೋಡಿದಾಗಲೂ ಅದೇ ರೀತಿ ಬರೆಯಲಾಗಿತ್ತು.
ಬ್ರಸೆಲ್ಸ್‌ನಲ್ಲಿ ಓಡಾಡಿದ ಮತ್ತಷ್ಟು ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ

read more
ಕೋಟಿ ಸೈಕಲ್, ಎರಡು ರೈಲ್ವೆ ನಿಲ್ದಾಣ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಕೋಟಿ ಸೈಕಲ್, ಎರಡು ರೈಲ್ವೆ ನಿಲ್ದಾಣ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಇದೇ ರೀತಿ ಸೈಕಲ್ ಉಪಯೋಗಿಸಲು ಕೂಡ ಮಗುವಿಗೆ ಒಂದೂವರೆ ವರ್ಷವಾಗಿರುವಾಗಲೇ ತರಬೇತಿ ಪ್ರಾರಂಭವಾಗುತ್ತದೆ. ನೀವು ಒಂದು ಸೈಕಲನ್ನು ಮಗುವಿಗೆ ಒಂದೂವರೆ-ಎರಡು ವರ್ಷವಾಗಿದ್ದಾಗ ಖರೀದಿಸಿದರೆ, ಅದರಲ್ಲಿರುವ ಬೇರೆ ಬೇರೆ ಭಾಗಗಳನ್ನು ಕ್ರಮೇಣವಾಗಿ ಉಪಯೋಗಿಸುತ್ತಾ ತುಂಬಾ ವರ್ಷ ಬಳಸಬಹುದು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಎಂಟನೆಯ ಬರಹ

read more
ಬ್ರಸೆಲ್ಸ್‌ನಲ್ಲಿ ಸುತ್ತಾಟ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಬ್ರಸೆಲ್ಸ್‌ನಲ್ಲಿ ಸುತ್ತಾಟ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ನಮ್ಮ ಜೊತೆಗಿದ್ದ ಬೆಂಗಳೂರಿನ ಕೆಲವರು ಬಿಯರ್ ಕುಡಿಯೋಣ ಎಂದುಕೊಂಡು ಗುಂಪಿನ ಸುತ್ತಲು ಒಂದೆರಡು ಚಕ್ಕರ್ ಹೊಡೆದರು. ಆದರೆ ಅವರಿಗೆ ಮಗ್‌ಗಳು ದೊರಕಲಿಲ್ಲ ಮತ್ತು ಸ್ಥಳೀಯರು ಜಾಗವೂ ಬಿಡಲಿಲ್ಲ. ಕೊನೆಗೆ ಚಳಿಯಲ್ಲಿ ಬಿಯರ್ ಬೇಡ ನಡಿಯಿರಪ್ಪ ಎಂದು ಅಲ್ಲಿಂದ ಮುಂದಕ್ಕೆ ಹೊರಟೆವು. ನಮ್ಮ ಗೈಡ್ ಆ ಬೆತ್ತಲೆ ಹುಡುಗ ಮನ್ನೆಕನ್ ಹಿನ್ನೆಲೆಯನ್ನು ಹೇಳಿದರು.
ಯೂರೋಪ್‌ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ

read more
ಎರಡು ತಪ್ಪೊಪ್ಪಿಗೆ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಎರಡು ತಪ್ಪೊಪ್ಪಿಗೆ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

“ನೋಡು, ಡ್ಯಾಡಿ, ಬದಲಾವಣೆ ಅಂದರೆ, ಪ್ರಧಾನ ಮಂತ್ರಿಗಳ, ಸರ್ಕಾರಗಳ, ರಾಜಕೀಯ ಪಕ್ಷಗಳ ಬದಲಾವಣೆ ಅಲ್ಲ. ನಮ್ಮ, ನಮ್ಮ ಮನೆ, ಮನಸ್ಸುಗಳಲ್ಲಿ ಆಗುತ್ತಿರುವ ಬದಲಾವಣೆಗಳು. ಅದಕ್ಕೆ ನಮ್ಮ ಪ್ರತಿರೋಧ, ಹೊಂದಾಣಿಕೆ ಇವುಗಳನ್ನು ಅರ್ಥ ಮಾಡಿಕೊಳ್ಳುವುದು ಕೂಡ ಮುಖ್ಯ. ಮಕ್ಕಳ ಲಾಲನೆ, ಪಾಲನೆ ಹೆಂಗಸರ ಕರ್ತವ್ಯ ಮಾತ್ರ ಎಂಬ ಧೋರಣೆಯೇ ಬದಲಾಗಬೇಕು, ಬದಲಾಗುತ್ತಿದೆ.”
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿ

read more
ಆಮ್‌ಸ್ಟರ್‌ಡ್ಯಾಮ್‌ನ ಕಾಲುವೆಗಳಲ್ಲಿ ವಿಹಾರ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಆಮ್‌ಸ್ಟರ್‌ಡ್ಯಾಮ್‌ನ ಕಾಲುವೆಗಳಲ್ಲಿ ವಿಹಾರ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ನಮ್ಮ ಗೈಡ್, `ಇಲ್ಲಿಗೆ ಬರುವ ಕೆಲವು ಉತ್ಸಾಹಿ ಪ್ರವಾಸಿಗರು ರಾತ್ರಿ ನಗರದಲ್ಲಿ ಕಳೆದುಹೋಗುತ್ತಾರೆ. ಒಂದೆರಡು ದಿನಗಳಾದ ಮೇಲೆ ತಮ್ಮ ಇರುವಿಕೆಯ ಸ್ಮೃತಿಗೆ ಹಿಂದಿರುಗಿದಾಗ ತಾವಿರುವ ಹೋಟಲಿಗೆ ಹಿಂದಿರುಗಿಬರುತ್ತಾರೆ. ನೀವ್ಯಾರಾದರೂ ಕಳೆದುಹೋಗುವುದಾದರೆ, ರಾತ್ರಿ ನಿಮ್ಮ ಹೋಟಲ್‌ನಿಂದ ಹೊರಕ್ಕೆ ಬಂದರೆ ಸಾಕು, ಉಳಿದ ಕೆಲಸಗಳು ತನಗೆತಾನೇ ನಡೆಯುತ್ತವೆ. ನೀವ್ಯಾರಾದರೂ ತಯಾರಿದ್ದರೆ ನಾನು ಕರೆದುಕೊಂಡು ಹೋಗುತ್ತೇನೆ, ಆದರೆ ಹಿಂದಕ್ಕೆ ಕರೆದುತರುವ ಗ್ಯಾರಂಟಿ ಕೊಡಲಾರೆ.
ಆಮ್‌ಸ್ಟರ್‌ಡ್ಯಾಮ್‌ನ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ ನಿಮ್ಮ ಓದಿಗೆ

read more
ಸ್ವಿಟ್ಜರ್ಲೆಂಡ್ ಮತ್ತು ಜಗತ್ತಿನ ಕಪ್ಪು ಹಣ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಸ್ವಿಟ್ಜರ್ಲೆಂಡ್ ಮತ್ತು ಜಗತ್ತಿನ ಕಪ್ಪು ಹಣ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ದೀರ್ಘ ಕಾಲದಿಂದಲೂ ಸ್ವಿಟ್ಜರ್ಲೆಂಡ್ ತಟಸ್ಥತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವತೆಯನ್ನು ಕಾಪಾಡಿಕೊಂಡು ಬಂದಿರುವುದರಿಂದ ಜಗತ್ತಿನ ಎಲ್ಲಾ ದೊಡ್ಡ ಬ್ಯಾಂಕ್‌ಗಳ ಮುಖ್ಯಕೇಂದ್ರಗಳು ಇಲ್ಲಿ ನೆಲೆಗೊಂಡಿದ್ದು ಸ್ವಿಸ್ ಬ್ಯಾಂಕಿಂಗ್ ಕ್ಷೇತ್ರವು ಸ್ಥಿರ ಅಭಿವೃದ್ಧಿಯನ್ನು ಹೊಂದಿದೆ.
ಸ್ವಿಟ್ಜರ್ಲೆಂಡ್ ದೇಶದ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹದ ಎರಡನೆಯ ಭಾಗ ಇಲ್ಲಿದೆ

read more
ಶಿಕ್ಷಣದ ರೀತಿ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಶಿಕ್ಷಣದ ರೀತಿ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಮಗುವಿನ ಸಾಮರ್ಥ್ಯ, ಒಲವು, ಮನೋಧರ್ಮಗಳನ್ನು ತಿಳಿಯುವ ಭಾಷೆ, ಗಣಿತಕ್ಕೆ ನಂತರದ ಸ್ಥಾನ, ಮೊದಲು ಮಗು ಭಾವನಾತ್ಮಕವಾಗಿ ಹೇಗಿದೆಯೆಂದು ತಿಳಿದು, ಅಂದಾಜು ಮಾಡಿ ಪೋಷಕರಿಗೆ ತಿಳಿಸುತ್ತಾರೆ. ತನ್ನ ವಯಸ್ಸಿನವರೊಡನೆ ಹೇಗೆ ಸಂವಹನ ಮಾಡುತ್ತದೆ, ಒಂದು ತಂಡದ ಸದಸ್ಯನಾಗಿ ಹೇಗೆ ಕೆಲಸ ಮಾಡುತ್ತದೆ, ನೆರವು ನೀಡಬಲ್ಲದೆ, ನೆರವು ಪಡೆಯಬಲ್ಲದೆ, ಇತರರ ಸಾಮರ್ಥ್ಯವನ್ನು ಗೌರವಿಸಬಲ್ಲದೆ, ತನ್ನ ನಿಲುವನ್ನು ಇತರರ ಮೇಲೆ ಹೇರದೆ ತರ್ಕಬದ್ಧವಾಗಿ ವಿವರಿಸಬಲ್ಲದೆ, ತಪ್ಪನ್ನು ತಿದ್ದಿಕೊಳ್ಳಬಲ್ಲದೆ, ನಿರಾಶೆ, ವೈಫಲ್ಯಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ, ಅನ್ಯ ಸಂಸ್ಕೃತಿ, ಹಿನ್ನೆಲೆಯಿಂದ ಬಂದ ಮಕ್ಕಳನ್ನು ಹೇಗೆ ಕಾಣುತ್ತದೆ…
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ”

read more
ಭೂಮಿಯ ಮೇಲಿನ ಸುಂದರ ಸಮೃದ್ಧ ದೇಶ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಭೂಮಿಯ ಮೇಲಿನ ಸುಂದರ ಸಮೃದ್ಧ ದೇಶ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಈಗ ನಾನೊಬ್ಬನೆ ಹೊರಗಿದ್ದು ನಮ್ಮ ಗುಂಪಿನ ಎಲ್ಲರೂ ಒಳಗಿದ್ದರು. ನಮ್ಮ ಗೈಡ್ ಎಲ್ಲರೂ ಹೋಗುವುದನ್ನು ದೃಢಪಡಿಸಿಕೊಂಡು ಹಿಂದೆಬರುತ್ತಿದ್ದನು. ನನ್ನ ಸಮಸ್ಯೆಯನ್ನು ನೋಡಿದ ಗೈಡ್, `ಕೆಳಗಡೆ ಬಗ್ಗಿಕೊಂಡು ಬಂದುಬಿಡಿ ಸರ್’ ಎಂದ. ಒಂದೆರಡು ಕ್ಷಣ ಸುತ್ತಲೂ ನೋಡಿ ಕೊನೆಗೆ ನೆಲದಲ್ಲಿ ಕುಳಿತುಕೊಂಡು ಮಗುವಿನಂತೆ ಕಾಲುಗಳನ್ನು ಬಿಟ್ಟು ದೇಖಿಕೊಂಡು ಒಳಕ್ಕೆ ಹೋಗಿಬಿಟ್ಟೆ. ಹಿಂದೆ ಇದ್ದ ಇಬ್ಬರು ಯುರೋಪಿಯನ್ ಮಹಿಳೆಯರು ಕಣ್ಣುಗಳನ್ನು ಸಣ್ಣದಾಗಿಸಿಕೊಂಡು ವಿಚಿತ್ರ ಪ್ರಾಣಿಯನ್ನು ನೋಡುವಂತೆ ನನ್ನ ಕಡೆಗೆ ನೋಡಿದರು. ಅಲ್ಲೆಲ್ಲ ಕ್ಯಾಮರಾಗಳಿದ್ದರೂ ಅವು ನನ್ನನ್ನು ಕ್ಷಮಿಸಿಬಿಟ್ಟಿದ್ದವು ಎನಿಸುತ್ತದೆ.
ಸ್ವಿಟ್ಜರ್ಲೆಂಡ್ ದೇಶದ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ

read more
ಇಂಗ್ಲಿಷ್ ಮತ್ತು ನೆದರ್‌ಲ್ಯಾಂಡ್ಸ್: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಇಂಗ್ಲಿಷ್ ಮತ್ತು ನೆದರ್‌ಲ್ಯಾಂಡ್ಸ್: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ನೆದರ್‌ಲ್ಯಾಂಡ್ಸ್ ಯುರೋಪಿನ ಭಾಗ. ಇಂಗ್ಲೆಂಡಿಗೆ ಹತ್ತಿರ. ರೈಲಿನಲ್ಲಿ ಕೂಡ ಕೇವಲ ನಾಲ್ಕು ಘಂಟೆಗಳ ಪ್ರಯಾಣ. ಯುರೋಪಿನಲ್ಲಿ ಬಹು ಭಾಷಾ ಸಂಸ್ಕೃತಿ ಇದೆ. ಬಹುಪಾಲು ಯುರೋಪಿಯನ್ನರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ತಮ್ಮ ನಿತ್ಯ ಜೀವನದಲ್ಲಿ ಬಳಸುತ್ತಾರೆ, ಅಥವಾ ಬಳಸಲು ಬಲ್ಲರು. ಆದರೂ ಕೆಲ ದೇಶಗಳಲ್ಲಿ ಪ್ರವಾಸಿಗಳ ಜೊತೆ, ಅದರಲ್ಲೂ ಶ್ವೇತವರ್ಣೀಯರಲ್ಲದವರ ಜೊತೆ ತಮ್ಮ ಮಾತೃ ಭಾಷೆಯಲ್ಲೇ ಮಾತನಾಡುವ ಹಠ ಹಿಡಿಯುತ್ತಾರೆ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ನಾಲ್ಕನೆಯ ಬರಹ

read more

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ