ಐಫೆಲ್ ಟವರ್ಗಿಂತ ತಿರುಪತಿಯೇ ವಾಸಿ!: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
1887 ಜನವರಿ, 28ರಂದು ಅಡಿಪಾಯ ಅಗೆಯಲು ಪ್ರಾರಂಭಿಸಿ 1889 ಮಾರ್ಚ್ 31ರಂದು ಗೋಪುರವನ್ನು ಕಟ್ಟಿ ಮುಗಿಸಲಾಯಿತು. ಇಪ್ಪತ್ತು ವರ್ಷಗಳಲ್ಲಿ ಗೋಪುರವನ್ನು ಕೆಡವಲು ಮೊದಲಿಗೆ ತೀರ್ಮಾನಿಸಲಾಗಿತ್ತು. ಜನರು ಮೊದಲಿಗೆ ಗೋಪುರ ತುಂಬಾ ಕೆಟ್ಟದಾಗಿ ಕಾಣಿಸುತ್ತಿದೆ, ಪ್ಯಾರಿಸ್ ನಗರದ ಅಂದವನ್ನು ಕೆಡಿಸಿಬಿಟ್ಟಿದೆ ಎಂದು ದೂರಿದರು. ಆದರೆ ಅದು ಮುಂದಿನ ದಿನಗಳಲ್ಲಿ ಪ್ಯಾರಿಸ್ಗೆ ದೊಡ್ಡ ಆಸ್ತಿಯಾಗಿ ಮಾರ್ಪಟ್ಟಿತು. ಮುಂದಿನ ದಿನಗಳಲ್ಲಿ ಗೋಪುರದ ಮೇಲೆ ಸಂವಹನ, ಗುರುತ್ವಾಕರ್ಷಣೆ, ವಿದ್ಯುಚ್ಛಕ್ತಿ ಮತ್ತು ಪವನಶಾಸ್ತ್ರ ಪ್ರಯೋಗಾಲಯವನ್ನು ಅದರ ಮೇಲೆ ಸ್ಥಾಪನೆ ಮಾಡಲಾಯಿತು.
ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ನೆದರ್ಲ್ಯಾಂಡ್ಸ್ ಬಾಣಂತನ: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ಆವತ್ತಿನ ಪರಿಸ್ಥಿತಿಯಲ್ಲಿ ಅದು ಕನಸಿನಲ್ಲೂ ಕೂಡ ಸಾಧ್ಯವಿರಲಿಲ್ಲ. ಮಗಳು ಉದ್ಯೋಗಿಯಾಗಿದ್ದರಿಂದ ಇಲ್ಲಿಗೆ ಬಂದು ಬಾಣಂತನ ಮುಗಿಸಿಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಮಗಳಿಗೆ ಕೂಡ ಪ್ರಾರಂಭದ ಸಂಭ್ರಮ ಮುಗಿದ ಮೇಲೆ, ನಾನಾ ರೀತಿಯ ಆತಂಕ, ಅನುಮಾನಗಳು. ಕೆಲಸ, ಸಂಸಾರ, ಸ್ಕೂಲಿಗೆ ಹೋಗುತ್ತಿರುವ ಏಳು ವರ್ಷದ ಮಗ, ತನ್ನ ಆರೋಗ್ಯ, ಹೆರಿಗೆಗೆ ತಯಾರಿ, ಹೀಗೆ. ಎಲ್ಲವನ್ನೂ ಹೇಗೆ ವ್ಯವಸ್ಥಿತಗೊಳಿಸಬೇಕೆಂಬ ಗೊಂದಲ, ಸವಾಲು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್ಲ್ಯಾಂಡ್ಸ್ ಬಾಣಂತನ” ಸರಣಿ
ಲೂವ ಗ್ಯಾಲರಿಯೊಳಗಿನ ಕಲಾಲೋಕ…: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ಮೊದಲ ನೋಟಕ್ಕೆ ಅತ್ಯಂತ ಮೃದುವಾದ ಮೆತ್ತನೆ ಹಾಸಿಗೆ ಮೇಲೆ ಮಲಗಿರುವ ಬೆತ್ತಲೆ ಮಹಿಳೆಯಂತೆ ಕಾಣಿಸುತ್ತದೆ. ಆದರೆ ಅದು ನಿಜವಾಗಿ ಪುರುಷನ ಆಕೃತಿ, ಇನ್ನಷ್ಟು ತೀವ್ರವಾಗಿ ಕಣ್ಣಾಡಿಸಿದಾಗ ವಾಸ್ತವವಾಗಿ ಅದು ಗಂಡು ಮತ್ತು ಹೆಣ್ಣಿನ ಲೈಂಗಿಕ ಅಂಗಗಳನ್ನು ಹೊಂದಿರುವ ಹರ್ಮಾಫ್ರೋಡಿಟಿಸ್ ದೇವ/ದೇವತೆಯ ಆಕೃತಿಯಾಗಿದೆ (ಹೆಲೆನಿಸ್ಟಿಕ್ ಕಂಚಿನ ರೋಮನ್ ನಕಲು).
ಪ್ಯಾರಿಸ್ನಲ್ಲಿ ಓಡಾಡಿದ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನದ ಮೂರನೆಯ ಭಾಗ ನಿಮ್ಮ ಓದಿಗೆ
ಇಷ್ಟೊಂದ್ ಜನಾ.. ಎಲ್ಲಿಂದ ಬಂದೋರು: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ವಿಪರೀತ ಜನ, ಸಮಯದ ಅಭಾವ. ಎರಡು ಮೂರು ದಿನಗಳಾದರೂ ಈ ಅರಮನೆಯನ್ನು ಸುತ್ತಿನೋಡಬೇಕು. ವಿಧಿಯಿಲ್ಲದೆ ಸಾಧ್ಯವಾದಷ್ಟು ನೋಡುತ್ತಾ ಹೊರಟೆವು. ಇದರಲ್ಲಿ ಪ್ರತಿಯೊಬ್ಬರೂ ಎಲ್ಲಾ ಕಡೆ ನಿಂತುಕೊಂಡು ಫೋಟೋಗಳನ್ನು ಹಿಡಿಯುವ ಹಿಂಸೆ ಬೇರೆ. ಜೊತೆಯಲ್ಲಿದ್ದ ನಮ್ಮ ಬೆಂಗಳೂರಿನ ಮಹಿಳೆಯೊಬ್ಬರನ್ನು `ಅಲ್ಲಮ್ಮ ತಮ್ಮ ತಮ್ಮ ಮುಖಗಳನ್ನ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಇಲ್ಲಿಗೆ ಬರಬೇಕೆ?’ ಎಂದಾಗ, `ಅಲ್ಲಣ್ಣ ನಾವು ಇಲ್ಲಿಗೆ ಬಂದಿದ್ದೀವಿ ಅಂತ ಗೊತ್ತಾಗಬೇಕಲ್ಲ, ಜನರಿಗೆ’ ಎಂದರು.
ಪ್ಯಾರಿಸ್ನಲ್ಲಿ ಓಡಾಡಿದ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನದ ಎರಡನೇ ಭಾಗ
ಕೆ. ಸತ್ಯನಾರಾಯಣ ಪ್ರವಾಸ ಪ್ರಬಂಧಗಳ ಹೊಸ ಸರಣಿ “ನೆದರ್ಲ್ಯಾಂಡ್ಸ್ ಬಾಣಂತನ” ಆರಂಭ
ವಿದೇಶಿ ಪ್ರವಾಸದ ಅನುಭವ ಅಂದರೇನು? ನಾವು ಅಲ್ಲಿ ಕಂಡ ಪ್ರಕೃತಿಯ ದೃಶ್ಯಗಳೇ? ಜನಜೀವನದ ರೀತಿಯೇ? ವಿಚಿತ್ರ, ಅಸಂಗತ ಅನುಭವಗಳೇ? ನಮ್ಮ ಒಡನಾಟಕ್ಕೆ ಸಿಗುವ ವಿದೇಶೀಯರ ವರ್ತನೆಯೇ? ಈ ಕುರಿತು ನಾನು ಯೋಚಿಸಿರಲಿಲ್ಲ. ಯೋಚಿಸುವ ಸಂದರ್ಭ ಕೂಡ ಬಂದಿರಲಿಲ್ಲ. ವಿಮಾನದಲ್ಲಿ ಹಾರಾಡುವುದು, ಅಮೆರಿಕ, ಯುರೋಪು ಸುತ್ತುವುದು, ಪ್ರವಾಸದ ಸಮಯದಲ್ಲಿ ಪಡೆದ ಅನುಭವಗಳನ್ನು ಕುರಿತು ಬರೆಯುವುದು, ಮಾತನಾಡುವುದು, ಇಷ್ಟೇ ವಿದೇಶಿ ಪ್ರವಾಸದ ಅನುಭವ ಎಂಬ ತಪ್ಪು ಕಲ್ಪನೆ ನನ್ನಲ್ಲಿತ್ತು.
ಹಿರಿಯ ಕತೆಗಾರ ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ ಸರಣಿ “ನೆದರ್ಲ್ಯಾಂಡ್ಸ್ ಬಾಣಂತನ”
ದೂರದ ಬೆಟ್ಟ “ಪ್ಯಾರಿಸ್”…: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ಊಟ ಮುಗಿದ ಮೇಲೆ ಬೆಳಿಗ್ಗೆ ನಿಂತು ವಾಪಸ್ ಬಂದಿದ್ದ ಸಫಾರಿ ಟ್ರೈನಿಗೆ ಹೋಗಲು ಸುಶೀಲ ನಾನು ಎದ್ದೋಗಿ ಸಾಲಿನಲ್ಲಿ ನಿಂತುಕೊಂಡೆವು. ಅದು ಒಂದು ರೀತಿಯಲ್ಲಿ ಹೈದರಾಬಾದ್ನ ರಾಮೋಜಿ ಸಿಟಿಯ ಟಾಯ್ ಟ್ರೇನ್ನಂತೆ ಕಾಣಿಸಿ ಅದರ ವಿವರಗಳನ್ನು ಹಾಕಿದ್ದರು. ಸಾಲಿನಲ್ಲಿ ಸುತ್ತಿಸುತ್ತಿ ಒಳಕ್ಕೆ ಹೋದಂತೆ ಅದೊಂದು ಹಾರರ್ ಟ್ರೇನ್ ಸುಳಿವು ನೀಡತೊಡಗಿತು. ಏನೋ ಎಡವಟ್ಟು ನಡೆಯಲಿದೆ ಎಂಬುದಾಗಿ ನನ್ನ ಆರನೇ ಇಂದ್ರಿಯ ಹೇಳತೊಡಗಿತು.
ಪ್ಯಾರಿಸ್ನಲ್ಲಿ ಓಡಾಡಿದ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ ನಿಮ್ಮ ಓದಿಗೆ
ಅಸ್ಥಿಪಂಜರಗಳ ಭಯಾನಕ ಸ್ಮಾರಕ!: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ಇದೇ ರೀತಿಯ ತಲೆಬುರುಡೆ ಮಾಲೆಗಳು ಚರ್ಚ್ನ ಬಲಿಪೀಠದ ಸುತ್ತಲು ಮತ್ತು ದೈತ್ಯಾಕಾರದ ಹೌಸ್ ಆಫ್ ಶ್ವಾರ್ಜೆನ್ಬರ್ಗ್ನ ರಾಜವಂಶದ ಲಾಂಛನವನ್ನು (ಜರ್ಮನ್ ಮತ್ತು ಜೆಕ್-ಬೊಹೆಮಿಯಾ) ಫ್ರಾಂಟಿಸೆಕ್ರಿಂಟ್ ಎಂಬ ಬಡಗಿ ಪ್ರವೇಶದ್ವಾರದ ಗೋಡೆಯ ಮೇಲೆ ಮೂಳೆಗಳಲ್ಲಿ ಬಿಡಿಸಿದ್ದಾನೆ.
ಡಾ. ಎಂ. ವೆಂಕಟಸ್ವಾಮಿ ಬರೆಯುವ ಚೆಕಿಯಾ ದೇಶದ ಪ್ರವಾಸ ಕಥನದ ಮೂರನೆಯ ಭಾಗ ಇಲ್ಲಿದೆ
ಗೋಡೆಯ ಮೇಲೆ ಪ್ರತಿಭಟನೆಯ ಚಿತ್ತಾರ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ಇದು 1980ರಲ್ಲಿ ಅಮೆರಿಕಾದಲ್ಲಿ ಜಾನ್ ಲೆನ್ನನ್ ಹತ್ಯೆಯಾದ ಮೇಲೆ ಪ್ರೇಗ್ನಲ್ಲಿ ಕಲಾವಿದರ ಗುಂಪೊಂದು ಈ ಗೋಡೆಯ ಮೇಲೆ ತಮ್ಮ ಸಹಿಗಳನ್ನು ಹಾಕಿ ವಿರೋಧ ವ್ಯಕ್ತಪಡಿಸಿದ್ದ ಕಲಾ ಗೋಡೆ. ಅದು ಇಂದಿನವರೆಗೂ ಮುಂದುವರಿದುಕೊಂಡು ಬಂದಿದೆ. ಅಲ್ಲಿಗೆ ತಲುಪಿದ ಯಾರಾದರೂ ಆ ಗೋಡೆಯ ಮೇಲೆ ಏನಾದರೂ ಗೀಚಬಹುದು.
ಡಾ. ಎಂ. ವೆಂಕಟಸ್ವಾಮಿ ಬರೆಯುವ ಚೆಕಿಯಾ ದೇಶದ ಪ್ರವಾಸ ಕಥನದ ಎರಡನೇ ಭಾಗ ಇಲ್ಲಿದೆ
ಚೆಕಿಯಾ ದೇಶದಲ್ಲಿ…(೧): ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ನಿಲ್ದಾಣದಲ್ಲಿ ಪೋರ್ಟರುಗಳು, ಬಾಡಿಗೆ ಕಾರುಗಳವರು ಹಿಂದೆ ಬೀಳಲಿಲ್ಲ. ಕ್ರಾಂತಿ `ಬೋಲ್ಟ್’ ಕಂಪನಿಯ ಕಾರು ಬುಕ್ ಮಾಡಿದ್ದೇ ಎರಡೇ ನಿಮಿಷಗಳಲ್ಲಿ ಕಾರು ಬಂದು ನಿಂತುಕೊಂಡಿತು. ಗಟ್ಟಿಮುಟ್ಟಾದ ಚೆಕ್ ಯುವಕ ಒಂದು ಸಣ್ಣ ನಗು ಬೀರಿ `ಹಲೋ’ ಎಂದು, ನಮ್ಮ ಲಗೇಜ್ಗಳನ್ನು ಡಿಕ್ಕಿಯಲ್ಲಿಟ್ಟು ನಾಲ್ವರು ಕುಳಿತುಕೊಂಡೆವು.
ಚೆಕಿಯಾ ದೇಶದಲ್ಲಿ ಸುತ್ತಾಡಿದ ಅನುಭವಗಳ ಕುರಿತ ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನದ ಮೊದಲ ಭಾಗ ಇಲ್ಲಿದೆ









