Advertisement
ಮಾಲತಿ ಶಶಿಧರ್ ಬರೆದ ಯುಗಾದಿ ಕವಿತೆ

ಮಾಲತಿ ಶಶಿಧರ್ ಬರೆದ ಯುಗಾದಿ ಕವಿತೆ

ಬೇವು ಮತ್ತು ಬೆಲ್ಲ

ತಿನ್ನಲೇಬೇಕೆಂದು ಅಪ್ಪ
ಹಠ ಹಿಡಿದು ಕುಳಿತಿದ್ದ

ಬೇವು ಎಂದರೆ ನನಗಾಗದು
ಕಹಿಯೊಡನೆ ರುಚಿ ಸರಿತಾಳದು
ನನ್ನನ್ನು ನನ್ನ ಪಾಡಿಗೆ ಬಿಡು
ಬೆಲ್ಲದ ರುಚಿಯ ನಾಲಿಗೇಕೆ
ನೀನು ಹೀಗೆ ಹಿಂಸೆ ಕೊಡುವೆ
ಎನ್ನುವಾಗಲೆಲ್ಲಾ
ಅಪ್ಪ ಬೇವಿನ ಮರ ನೋಡುತ್ತಾ ಕುಳಿತುಬಿಡುತ್ತಿದ್ದ

ನಾನು ಈ ಕಾಲದ ಹುಡುಗಿ
ಎಲ್ಲವೂ ಒಳ್ಳೆಯದೇ ಇರಲಿ
ಕನಸುಗಳು ಕೂಡ ಸಕ್ಕರೆಯಂತೆ
ಸವಿಯಾಗೆ ಇರಲಿ ಎಂದುಕೊಳ್ಳುವವಳು
ಆದರೆ ಅಪ್ಪ ಇನ್ನೂ
ಬೇವಿನೊಡನೆ ಬೆಲ್ಲ
ಬೆಲ್ಲದೊಡನೆ ಬೇವು
ಎರಡೂ ಕೂಡೆ ನೋಡು
ಜೀವನ ಹೂವು ಎನ್ನುವವ

ಆಹಾ ಏನೆಲ್ಲಾ ಹೇಳುತ್ತಾನೆ ಅಪ್ಪ
ಅವನು ಕಾಲ ಗತಿಸಿದ ಹಾದಿಗೆ
ಇನ್ನು ಮರಳಲಿಲ್ಲ ಎನಿಸುವಾಗಲೆಲ್ಲಾ
ನನ್ನ ಕಾಲಮಾನದ ವೇಗದಲಿ
ಅಪ್ಪನ ಚಕ್ರ ಗಾಳಿ ಕಳೆದುಕೊಂಡಿರುವ ಚಿತ್ರ
ಕಣ್ಣಿಗೆ ಬೀಳುತ್ತದೆ

ಯಾಕಾದರೂ ಬರುತ್ತದೋ ಈ ಯುಗಾದಿ
ಎಂದು ನಿಧಾನಕ್ಕೆ ಹಾಸಿಗೆ ಬಿಡಿಸಿಕೊಂಡು
ಈಚೆಗೆ ಬಂದರೆ
ಅರೆದ ಬೇವಿಗೆ ಬೆಲ್ಲ ಬೆರೆಸಿ
ಎದುರಿಗೆ ಬಂದು ಹೇಳುತ್ತಾಳೆ
ಅಮ್ಮನೂ ಕೂಡ
ಹ್ಯಾಪಿ ಯುಗಾದಿ

ಆದರೆ ನಾನು
ಈ ಶತಮಾನದ ರಸ ಹೀರಿಕೊಂಡವಳು
ನನಗೆ ಕಹಿಯ ಅನುಭವವೆಂದರೆ
ಆಗಿಬರುವುದಿಲ್ಲ
ಹಾಗಾಗಿ ಪ್ರತೀ ಯುಗಾದಿಗೂ ಅಪ್ಪನಿಗೆ
ತಿಳಿಯದ ಹಾಗೆ ಬೇವು ವಿಂಗಡಿಸಿ
ಬೆಲ್ಲವನಷ್ಟೇ ಮೆಲ್ಲುತ್ತೇನೆ

ಮಾಲತಿ ಶಶಿಧರ್ ಚಾಮರಾಜನಗರದವರು
ಗಣಿತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ
ಬರೆಯುವುದು ಮತ್ತು ಓದುವುದು ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ