Advertisement
ಲಿಂಗರಾಜ ಸೊಟ್ಟಪ್ಪನವರ ಬರೆದ ಈ ದಿನದ ಕವಿತೆ

ಲಿಂಗರಾಜ ಸೊಟ್ಟಪ್ಪನವರ ಬರೆದ ಈ ದಿನದ ಕವಿತೆ

ಅಮೃತದ ಖಾಲಿ ಬಟ್ಟಲು ಹಿಡಿದು

ಓ ದೇವರೆ
ಇವಳ ಮೊಲೆಗೊಂದಿಷ್ಟು ಭವ್ಯತೆಯ ತುಂಬು
ಕಣ್ಣ ಹಸಿವಿಗೆ ಒಡ್ಡಿಕೊಂಡಿವೆ ಅವು
ಕ್ರೂರ ದಾಹವ ಸಂತೈಸುತ್ತಿವೆ

ಯಾವ ನೆರಳು ತಾಕದ ಆ ಮೊಲೆಗಳ ಮೇಲಿನ ನಿನ್ನ ಕರುಣೆ
ಸಾಕು ಬಿಡು
ಕಂಚುಕ ಅದರ ಮೇಲಿನ ಹಾಸು
ಗಾಳಿ ಮಳೆ ಬಿರುಬಿಸಿಲಿಗೆ
ತೆರೆದಿದ್ದನು
ಎಂದಾದರೂ ಕಂಡಿದ್ದಿಯಾ

ಆ ಹಾಲು ಹಸುಳೆಯ ವಂಚಿಸಿದೆ
ಹೆಪ್ಪಿಟ್ಟರೂ ಮೊಸರಾಗುವದಿಲ್ಲವದು
ಇಲ್ನೋಡು
ಪಾಪಿ ಆತ್ಮಗಳಿಗೆ ಅಮೃತವ ಸುರಿಸುರಿದು ಸೋತು ಹೋಗಿವೆ
ಈ ಜೋತು ಬಿದ್ದ ಪಡಿಪಾಟಲಿಗೆ
ಒಂದಿಷ್ಟು ಕರುಣೆ ಸುರಿ ಮಾರಾಯ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ