ಅಂತಿಮ ನ್ಯಾಯಾಧೀಶರು ಜನರೇ ಅಲ್ವೇ..
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕಿ ಮಹಾಶ್ವೇತಾ ದೇವಿ ಅವರು ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು. ದೇಶದ ವಿವಿಧೆಡೆಗಳಲ್ಲಿ ಬುಡಕಟ್ಟು ಮತ್ತು ಆದಿವಾಸಿ ಸಮುದಾಯಗಳ ಜೊತೆಗೆ ದೀರ್ಘಕಾಲ ಉಳಿದುಕೊಂಡು ಅವರ ಹಾಡುಕಥೆಗಳನ್ನು ಗ್ರಹಿಸಲು ಪ್ರಯತ್ನಿಸುತ್ತ, ಅವರ ಜೀವನಮೌಲ್ಯಗಳ ಕುರಿತು ಕಾದಂಬರಿ, ಕತೆಗಳನ್ನು ಬರೆದವರು. ಅಷ್ಟು ಮಾತ್ರವಲ್ಲ, ಅವರ ಹಕ್ಕುಗಳ ಪರವಾಗಿ ಹೋರಾಡಿದರು. ಜನವರಿ ೧೪ ಅವರು ಹುಟ್ಟಿದ ದಿನ. ಅವರನ್ನು ಕೇರಳದಲ್ಲಿ ಭೇಟಿ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ
ತನಗನಿಸಿದ ಹಾಗೆ ಬದುಕಿದ ಸ್ನೇಹಿತ ಅವನು..
ಬಂಡಾಯ ಸಾಹಿತಿ, ನೇರ ನಡೆ ನುಡಿಯ ನಿಷ್ಠುರಿ ಎಂದು ಗುರುತಿಸಿಕೊಂಡಿದ್ದ ಚಂದ್ರಶೇಖರ ಪಾಟೀಲರು ಸೋಮವಾರ ಬೆಳಿಗ್ಗೆ ತೀರಿಕೊಂಡರು. ಹಾವೇರಿಯಲ್ಲಿ ಹುಟ್ಟಿದ್ದರೂ ಧಾರವಾಡವೇ ಅವರ ಕಾರ್ಯಕ್ಷೇತ್ರವಾಗಿತ್ತು. ಸಾಹಿತ್ಯ, ಹೋರಾಟ, ಬಂಡಾಯ, ನಾಟಕ ಎಂಬುದಾಗಿ ಬಹುಮುಖೀ ವ್ಯಕ್ತಿತ್ವ ಅವರದಾಗಿತ್ತು. ಧಾರವಾಡದಲ್ಲಿ ಚಂದ್ರಶೇಖರ ಪಾಟೀಲರು, ಗಿರಡ್ಡಿ ಗೋವಿಂದ ರಾಜು ಮತ್ತು ಸಿದ್ಧಲಿಂಗಪಟ್ಟಣ ಶೆಟ್ಟಿಯವರದ್ದು ನಿಡುಗಾಲದ ಸ್ನೇಹ. ಮೂವರೂ ಸಾಹಿತ್ಯ ಕ್ಷೇತ್ರದ ಅನೇಕ ಚಟುವಟಿಕೆಗಳಲ್ಲಿ ಜೊತೆಯಾಗಿ ಇದ್ದವರು. ತಮ್ಮ ಆಪ್ತ ಸ್ನೇಹಿತನ ಅಗಲಿಕೆಯ…
ಕಿಕ್ಕಿರಿದ ಭಾಷೆಗಳ ಕಾಡಿನಲ್ಲಿ ಓಡಾಡಿದ ಜಿ.ಎನ್.ದೇವಿ ಅವರೊಡನೆ ಮಾತುಕತೆ
ಪ್ರೊ. ಜಿ. ಎನ್. ದೇವಿ ಅಂತರರಾಷ್ಟ್ರೀಯ ಖ್ಯಾತಿಯ ಭಾಷಾ ವಿದ್ವಾಂಸರು. ಬರೋಡಾದ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ದೇವಿಯವರು ಮೂಲತಃ ಸಾಹಿತ್ಯ ವಿಮರ್ಶಕರು. ತಮ್ಮ ವೃತ್ತಿಗೆ ರಾಜೀನಾಮೆ ನೀಡಿ, ಆದಿವಾಸಿಗಳ ಭಾಷೆಗಳ ಅಧ್ಯಯನವನ್ನು ಕೈಗೆತ್ತಿಕೊಂಡವರು. ಪ್ರಪಂಚದ ಎಲ್ಲಾ ಬುಡಕಟ್ಟು ಭಾಷೆಗಳ ಗಣತಿ ಮಾಡುವ ಬೃಹತ್ ಕಾರ್ಯಯೋಜನೆಯ ಜವಾಬ್ದಾರಿಯನ್ನು ದೇವಿಯವರಿಗೆ ಯುನೆಸ್ಕೋ ವಹಿಸಿದೆ. ಭಾಷೆಗಳ ಕುರಿತು…
ಸಾತ್ವಿಕ ಆತ್ಮವಿಶ್ವಾಸದ ಪ್ರತೀಕ
ರಾಜೇಶ್ವರಿ ತೇಜಸ್ವಿ ಜೀವನೋತ್ಸಾಹದ, ಲವಲವಿಕೆಯ ಮಹಿಳೆ. ಒಬ್ಬರೇ ಇದ್ದಾಗಲೂ ಅಡಿಗೆ ಮಾಡಲು ಅವರಿಗೆ ಎಂದಿನ ಉತ್ಸಾಹವೇ ಇರುತ್ತಿತ್ತು. ಸಾಮಾನ್ಯ ವಾಗಿ ಅವರ ಮೆನು ವಿನಲ್ಲಿ ಮೂರು ತರಕಾರಿ ಐಟಂಗಳು. ಪಲ್ಯ ಚಟ್ನಿ , ಸಾರು ಅಥವಾ ಸಾಂಬಾರು. ಕೆಸುವಿನ ಸೊಪ್ಪನ್ನು ಗಂಟು ಕಟ್ಟಿ ಮಾಡುವ ಸಾಂಬಾರು, ಹೀರೆ ಸಿಪ್ಪೆಯ ಚಟ್ನಿ, ಪತ್ರೊಡೆ, ಪಕೋಡಗಳು ಹೀಗೆ. ಮಲೆನಾಡಿನ ವಿಶೇಷಗಳು. ಎಂಬತ್ನಾಲ್ಕರ ಪ್ರಾಯದಲ್ಲಿ ಸದೃಢವಾದ ಹಲ್ಲುಗಳನ್ನು ಹೊಂದಿದ್ದ ಅವರು ಎಂದೂ ಯಾರ ಬಗ್ಗೆಯೂ ಕಟಕಿಯಾಡಿದ್ದಿಲ್ಲ. ತುಂಬು ಬದುಕನ್ನು ಸವಿದು ಅವರೀಗ ಹೊರಟು ಹೋಗಿದ್ದಾರೆ.
ಮಾಯವಾದ ಬೆಟ್ಟದಹೂವಿನ ಪರಿಮಳ
ಪವರ್ ಸ್ಟಾರ್ ಎಂಬ ಬಿರುದಿದ್ದರೂ ವಿನಯ ಮತ್ತು ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿಸಿದ್ದ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಹೋಗಿದ್ದಾರೆ. ತಮ್ಮ ಹಾರ್ದಿಕ ನಗುವಿನಿಂದಲೇ ಎಲ್ಲರ ಮನಗೆಲ್ಲುತ್ತಿದ್ದ ಅವರು ಮಕ್ಕಳ ಪಾಲಿಗೆ ಪ್ರೀತಿಯ ಅಪ್ಪು. ಹಾಗೆ ನೋಡಿದರೆ ಮಕ್ಕಳಿಗೆ ಮಾದರಿಯಾಗಿದ್ದ ಹೀರೋ ಅವರಾಗಿದ್ದರು. ರಿಯಾಲಿಟಿ ಶೋಗಳಲ್ಲಿ ಅವರು ಆಗೀಗ ಹೇಳುತ್ತಿದ್ದ ಮಾತುಗಳ ಹಿಂದೆ ಒಳ್ಳೆಯತನ, ಪ್ರಾಮಾಣಿಕತೆ….
‘ಕಾವ್ಯದ ಕನ್ನಡಿಯಲ್ಲಿ ಕಂಡ ಜೀವನಪಥ’
ಅನುಭವಕ್ಕೆ ಸ್ವತಃ ಯಾವುದೇ ರೀತಿಯ ಆಕೃತಿ ಇಲ್ಲ. ಆದರೆ ನಾವು ಮಾತ್ರ ಇದು ಸುಖದ ಅನುಭವ, ಇದು ದುಃಖದ ಅನುಭವ, ಇದು ವಿಹ್ವಲತೆ, ತಲ್ಲಣ, ಇದು ವಿಷಾದದ ಅನುಭವ ಎಂದೆಲ್ಲ ಹೆಸರಿಡುತ್ತೇವೆ ಎಂದು ಹೇಳುವ ಆನಂದ ಝುಂಜರವಾಡ ಮೂಲತಃ ಕಾವ್ಯಶಕ್ತಿಯನ್ನು ಒಲಿಸಿಕೊಂಡ ಕವಿ. ಇತ್ತೀಚೆಗೆ ಅವರ ಹೊಸ ಕವನ ಸಂಕಲನ ಶಬ್ದ ಸುಪಾರಿ ಬಿಡುಗಡೆಯಾಯಿತು.
ತೀರಿಹೋದ ಗೋವಿಂದ ರಾವ್ ಕುರಿತು…
ಸಾಮಾಜಿಕ ವ್ಯವಸ್ಥೆಯ ಕಡೆಗೆ ಚಿಕಿತ್ಸಕ ನೋಟ ಹೊಂದಿದ್ದ, ತಪ್ಪುಗಳ ಕಂಡರೆ ಮನೆಯ ಹಿರಿಯರಂತೆ ಗದರುತ್ತಿದ್ದ ಜಿ.ಕೆ. ಗೋವಿಂದ ರಾವ್ ಇಂದು ತೀರಿಕೊಂಡರು. ಇಂಗ್ಲಿಷ್ ಪ್ರಾಧ್ಯಾಪಕರಾದ ಅವರು ನಾಟಕ, ಸಿನಿಮಾ, ಬರಹಗಳ ಜೊತೆ ಒಡನಾಟ ಹೊಂದಿದ್ದವರು. ಅದಕ್ಕೂ ಮಿಗಿಲಾಗಿ ಯುವಜನತೆಯ ಜೊತೆಗೆ ಸದಾ ಬೆರೆಯುತ್ತಿದ್ದವರು. ಚಿಂತಕ ಡಾ. ರಾಜೇಂದ್ರ ಚೆನ್ನಿ ತಮ್ಮ ಗೆಳೆಯನ ಕುರಿತ ನೆನಪುಗಳನ್ನು ಬರೆದಿದ್ದಾರೆ.
ಸಾರಾ ಉಮ್ಮಾಗೆ ಈಗ ಎಂಭತ್ತೈದು
‘ಚಂದ್ರಗಿರಿಯ ತೀರದಲ್ಲಿ’ ಕೃತಿಯ ಮೂಲಕ ಸಾಹಿತ್ಯ ಪಯಣ ಆರಂಭಿಸಿದ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ತಮ್ಮ ಎಂಭತ್ತೈದರ ಹರೆಯಲ್ಲಿದ್ದಾರೆ. ಕತೆ, ಕಾದಂಬರಿ, ಅನುವಾದ, ಪ್ರಬಂಧ ಮುಂತಾಗಿ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ ಅವರು ತಮ್ಮ ನಿಲುವಿಗೆ ಎದುರಾದ ಹಲವು ಪ್ರತಿರೋಧಗಳ ನಡುವೆ ಜೀವನ್ಮುಖಿ ಚಿಂತನೆಗಳನ್ನು ಉಳಿಸಿಕೊಂಡವರು. ಈಗ ಸೊಸೆಯ ಆರೈಕೆಯಲ್ಲಿ ಸಮುದ್ರವನ್ನು ನೆನಪಿಸಿಕೊಳ್ಳುತ್ತಾ ಇರುವ ಸಾರಾ ಅವರ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ ಇಲ್ಲಿದೆ.
ಸಜ್ಜನ ಸವ್ಯಸಾಚಿ ಯಕ್ಷಗುರು ಕೃಷ್ಣ ಭಂಡಾರಿಯ ನೆನಪುಗಳು
ಸಂಗೀತದ ತಿಳುವಳಿಕೆ ಇರುವರೆಲ್ಲಾ ಉತ್ತಮ ಭಾಗವತರಾಗಬಹುದು, ಆದರೆ ಅವರು ರಂಗದಲ್ಲಿ ಯಶಸ್ವೀ ಭಾಗವತರಾಗುವುದಿಲ್ಲ. ಯಕ್ಷಗುರು ಕೃಷ್ಣ ಭಂಡಾರಿಯವರಿಗೆ ಸ್ವತಃ ವೇಷದ ನಡೆಯ ಅನುಭವವಿರುವ ಕಾರಣ ಮುಮ್ಮೇಳದ ಕಲಾವಿದನಿಗೆ ಯಾವ ಯಾವ ಭಾಗದಲ್ಲಿ ಪದ್ಯದ ಮೂಲಕ ಕುಣಿಸಬೇಕೆನ್ನುವದು ಚೆನ್ನಾಗಿ ಗೊತ್ತಿತ್ತು. ಭಾಗವತಿಕೆಯಲ್ಲಿ ಯಾವ ಕಸರತ್ತುಗಳನ್ನು ಮಾಡದೇ ಕಲಾವಿದನನ್ನು ಹುರಿದುಂಬಿಸುತ್ತಿದ್ದರು.”









