Advertisement

ಸರಣಿ

ಹಿಂಸೆಯನ್ನು ಹತೋಟಿಯಲ್ಲಿಡಲು ಮಾನವೀಯತೆಯೇ ಬೇಕು

ಹಿಂಸೆಯನ್ನು ಹತೋಟಿಯಲ್ಲಿಡಲು ಮಾನವೀಯತೆಯೇ ಬೇಕು

ಹುಲಿಗೆ ಆಕ್ರಮಣದ ನಖಗಳಿವೆ. ಆದರೆ ಹುಲ್ಲೆಗೆ ಸಂರಕ್ಷಣೆಯ ಕೊಂಬು ಮತ್ತು ವೇಗಶಕ್ತಿ ಇವೆ. ಇದೆಲ್ಲ ಇರುವಂಥದ್ದೆ. ಏಕೆಂದರೆ ಪ್ರಕೃತಿಯಲ್ಲಿನ ಹುಲಿ ಹುಲ್ಲೆಗಳು ಜೀವಜಾಲದಲ್ಲಿನ ಆಹಾರ ಸರಪಳಿಯ ನಿಯಮದಂತೆಯೆ ಬದುಕುತ್ತಿವೆ. ಆದರೆ ಆಂತರ್ಯದಲ್ಲಿ ಹುಲಿ, ಹುಲ್ಲೆಗಳಂತಿರುವ ಮಾನವರೂ ಇದ್ದಾರೆ. ಅವರಿಗೆ ಈ ಪ್ರಕೃತಿಯ ನಿಯಮ ಅನ್ವಯಿಸುವುದಿಲ್ಲ. ಆದ್ದರಿಂದ ಅವರು ಬದಲಾಗುಂಥ ವ್ಯವಸ್ಥೆ ರೂಪುಗೊಳ್ಳಬೇಕಿದೆ.

read more
ಅಂದಿನ ಬೆಂಗಳೂರು ಮತ್ತು ಬಸವನಗುಡಿಯ ಚಿತ್ರಣ

ಅಂದಿನ ಬೆಂಗಳೂರು ಮತ್ತು ಬಸವನಗುಡಿಯ ಚಿತ್ರಣ

ಬಸವನಗುಡಿಯ ಎರಡು ಹೆಗ್ಗುರುತಗಳು ಬಸವನ ದೇವಸ್ಥಾನ ಮತ್ತು ಪೊಲೀಸ್ ಸ್ಟೇಷನ್. ಬಸವನಗುಡಿ ಯನ್ನು ಬೆಳೆಸಿದವರು ಹಲವಾರು ಜನರಿದ್ದಿರಬೇಕು. ಅವರಲ್ಲಿ ಬೆಳ್ಳಾವೆ ವೆಂಕಟನಾರಾಯಣಪ್ಪನವರು ಮುಖ್ಯರು. ಅನೇಕ ಆಸಕ್ತಿಗಳಿದ್ದ ವೆಂಕಟನಾರಾಯಣಪ್ಪನವರು ಭೌತ ವಿಜ್ಞಾನದ ಪ್ರಾಧ್ಯಾಪಕರಾಗಿದ್ದರು. ವಿಜ್ಞಾನ ಸಂವಹನೆಯ ಕಾರ್ಯದಲ್ಲೂ ಪ್ರಾತಃಸ್ಮರಣೀಯರು; ಕನ್ನಡದಲ್ಲಿ ಎರಡು ವರ್ಷ ಕಾಲ ವೈಜ್ಞಾನಿಕ ಮಾಸಿಕ ಪತ್ರಿಕೆಯನ್ನು ನಡೆಸಿಕೊಂಡು ಬ೦ದರು.

read more
ದೊರೆ ಆರನೇ ಜಾರ್ಜ್ ಜೀವನದ ಒಂದು ಕತೆ  ʻದ ಕಿಂಗ್ಸ್ ಸ್ಪೀಚ್ʼ

ದೊರೆ ಆರನೇ ಜಾರ್ಜ್ ಜೀವನದ ಒಂದು ಕತೆ ʻದ ಕಿಂಗ್ಸ್ ಸ್ಪೀಚ್ʼ

ದೊರೆಯ ಉಗ್ಗು ನಿವಾರಣೆ ಕುರಿತ ಪ್ರಯತ್ನಗಳು ಮುಂದುವರಿದ ಹಾಗೆ ಚಿತ್ರದಲ್ಲಿ ದೃಶ್ಯಗಳ ಒಟ್ಟಾರೆ ಭಾವದಲ್ಲಿ ತೀವ್ರತೆ ಹೆಚ್ಚಾಗುತ್ತದೆ. ಅವುಗಳಲ್ಲಿ ದೊರೆಯ ತಲ್ಲಣ, ತಳಮಳಗಳಿರುತ್ತವೆ, ತನ್ನ ಸಾಮರ್ಥ್ಯದ ಬಗ್ಗೆಯೇ ಅನುಮಾನ ಮತ್ತು ಹಿಂಜರಿಕೆಗಳಿರುತ್ತವೆ. ಅಷ್ಟೇ ಅನುಮಾನ ಹಾಗೂ ರೋಷ ಉಗ್ಗಿನ ದೋಷ ನಿವಾರಣೆಗೆ ಪ್ರಯತ್ನಿಸುವ ಡಾಕ್ಟರ್ ಜೆಫ್ರಿ ರಶ್ಲಿ ಬಗ್ಗೆ ಇರುತ್ತದೆ. ಈ ಜೆಫ್ರಿಯಾದರೋ ಸಾಂಪ್ರದಾಯಿಕ ವಿದ್ಯೆ ಹೊಂದಿದ ಡಾಕ್ಟರಲ್ಲ. ಅವನ ಹಿನ್ನೆಲೆಯೇ ಬೇರೆ.

read more
ದೌರ್ಬಲ್ಯಗಳಿಲ್ಲದ ಸ್ವಾಭಿಮಾನಿ ನನ್ನಪ್ಪನೇ ನನಗೆ ಮಾದರಿ

ದೌರ್ಬಲ್ಯಗಳಿಲ್ಲದ ಸ್ವಾಭಿಮಾನಿ ನನ್ನಪ್ಪನೇ ನನಗೆ ಮಾದರಿ

ಅಂದು ನನ್ನ ತಂದೆ ಸಂಭ್ರಮಿಸಿದ್ದು ಒಂದು ರೂಪಕವಾಗಿ ಮನದಲ್ಲಿ ಉಳಿದಿದೆ. ಅವರೆಲ್ಲ ಚೂಡಾ ತಿಂದ ಮೇಲೆ ಲಿಂಗಾಯತರಾದ ಶಿವಪ್ಪನವರಿಗೆ ಸಮೀಪದ ಲಿಂಗಾಯತರ ಮನೆಯಿಂದ ನೀರು ತಂದು ಕೊಟ್ಟ ನಂತರ ಅವರು ನೀರು ಕುಡಿದರು! ಆದರೆ ತಾಯಿ ಮಾಡಿಕೊಟ್ಟ ಚಹಾವನ್ನು ಎಲ್ಲರ ಜೊತೆ ಶಿವಪ್ಪ ಅವರೂ ಕುಡಿದರು. ಇದೆಲ್ಲ ನನಗೆ ವಿಚಿತ್ರ ಎನಿಸಿತು. ಅದೇ ನಳದ ನೀರು. ಲಿಂಗಾಯತರ ಮನೆಗೆ ಹೊಕ್ಕಾಗ ಅದು ಹೇಗೆ ಶುದ್ಧವಾಗುವುದು? ಆ ‘ಶುದ್ಧ’ ನೀರನ್ನು ನನ್ನ ತಂದೆ ತರುವಾಗ ಅಶುದ್ಧವಾಗುವುದಿಲ್ಲವೆ?

read more
ಬೆನ್ನುಬಿದ್ದ ಭೂತ ಇವನು!

ಬೆನ್ನುಬಿದ್ದ ಭೂತ ಇವನು!

ಈ ಕೊನೆಯ ಅಂಶದ ಕಾರಣದಿಂದ ಮಾರ್ಫಾ ಮನಸ್ಸಿಗೆ ಬಹಳ ಸಮಾಧಾನ ಆದಹಾಗಿತ್ತು. ಅವಳು ಜಾಣೆ. ನಾನು ಬರಿಯ ಹೆಣ್ಣು ಹುಚ್ಚಿನವನು, ಲಂಗದ ಅಂಚು ಕಂಡರೆ ಆಸೆ ಪಡುವವನು, ಗಂಭೀರವಾದ ಪ್ರೀತಿ ನನ್ನ ಮಟ್ಟಿಗೆ ಸಾಧ್ಯವೇ ಇಲ್ಲ ಅಂದುಕೊಂಡಿದ್ದಳು. ಜಾಣೆ ಹೆಂಗಸು, ಹೊಟ್ಟೆಯ ಕಿಚ್ಚಿನ ಹೆಂಗಸು ಇಬ್ಬರೂ ಬೇರೆ ಬೇರೆ. ಅದೇ ದೊಡ್ಡ ತಾಪತ್ರಯ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

read more
‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಮೊಗಳ್ಳಿ ಆತ್ಮ ಕಥಾನಕದ ಮೊದಲ ಕಂತು

‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಮೊಗಳ್ಳಿ ಆತ್ಮ ಕಥಾನಕದ ಮೊದಲ ಕಂತು

ನನ್ನ ಅಪ್ಪ ಕ್ರೂರವಾಗಿದ್ದರು. ಬರ್ಬರತೆಯ ಪ್ರಚಂಡ ವ್ಯಕ್ತಿಯಾಗಿದ್ದರು.  ಅವರ ಹಂಗಿನಲ್ಲಿದ್ದರು ಕೇರಿಯ ಜನರೆಲ್ಲ. ಬಹಳವೇ ಪಾಳೇಗಾರಿಕೆ ಮಾಡುತ್ತಿದ್ದರಿಂದ, ಅವರನ್ನು ನೋಡಿದಾಗ ಒಂದು ರೀತಿಯ ಭಯವೂ ಆವರಿಸಿದಂತೆ ಅನಿಸುತ್ತಿತ್ತು. ಅವರ ಕುರಿತು ಬರೆಯುವ ನೆಪದಲ್ಲಿ ನಾನು ನನ್ನ ಪೂರ್ವಿಕರನ್ನೆಲ್ಲ ತುಂಬಿಕೊಂಡು ಹೀಗೊಂದು ಆತ್ಮಕತೆಯನ್ನು ಬರೆಯಲು ಹೊರಟಿದ್ದೇನೆ.

read more
ಎದೆಯಲ್ಲಿ ಅವಲಕ್ಕಿ ಕುಟ್ಟಿದ ಎಸ್‌ಎಸ್‌ಎಲ್‌ಸಿ ಫಲಿತಾಂಶ…

ಎದೆಯಲ್ಲಿ ಅವಲಕ್ಕಿ ಕುಟ್ಟಿದ ಎಸ್‌ಎಸ್‌ಎಲ್‌ಸಿ ಫಲಿತಾಂಶ…

ವಾರವೆಲ್ಲ ಕೆಲಸವಿಲ್ಲದೆ ಬಿಟ್ಟಿ ಊಟ ತಿಂದುಕೊಂಡು ವಾಹನ ದಟ್ಟಣೆಯ ತುಮಕೂರಿನಲ್ಲಿ ಓಡಾಡಿದ್ದು ಮನಸ್ಸಿಗೆ ಹಿಡಿಸದಾಗಿ ಮಂಕು ಕವಿಯತೊಡಗಿತು. ಆ ಮಂಕಿನೊಳಗೆ ಊರಿನ ನೆನಪುಗಳು ಬಾದಿಸತೊಡಗಿದವು. ಪರಿಣಾಮವಾಗಿ ದುಡಿಯದಿದ್ದರೂ ಸರಿಯೆ ಊರು ಹೋಗೆನ್ನುವಂತೆಯೂ ಕಾಡು ಬಾ ಎನ್ನುವಂತೆಯೂ ಕರೆದಂತಾಯಿತು. ಇದಕ್ಕೆ ಒತ್ತುಕೊಡುವಂತೆ ಎಸ್‌ಎಸ್‌ಎಲ್‌ಸಿ ಫಲಿತಾಂಶದ…

read more
ಐಬಿಲ್ಲದ ಕೊಲೆ ಯಾವುದೂ ಇಲ್ಲಾ..

ಐಬಿಲ್ಲದ ಕೊಲೆ ಯಾವುದೂ ಇಲ್ಲಾ..

 ರೈಲು ಹಳಿಯ ಮೇಲಿದ್ದ ಗೋಣಿ ಚೀಲದಲ್ಲಿನ ಶವ ಮಮ್ಮಿಫೈಡ್ ಸ್ಥಿತಿಯಲ್ಲಿತ್ತು. ತೆರೆದು ನೋಡುವಾಗ ಶರೀರದಲ್ಲಿ ಯಾವ ವಾಸನೆಯು ಕೂಡ ಇರಲಿಲ್ಲ. ಶರೀರದಲ್ಲಿ ಅಲ್ಲಲ್ಲಿ ಒಣಗಿದ ಮರಳು ಸಿಕ್ಕಿಕೊಂಡಿದ್ದು, ಶರೀರವನ್ನು ಕೆಲವು ದಿನಪತ್ರಿಕೆಗಳಿಂದ ಸುತ್ತಲಾಗಿತ್ತು. ಎಲ್ಲಾ ಬಿಡಿಸಿ ನೋಡುವಾಗ ಶವವು ಸಾಧಾರಣ ನಲವತ್ತರಿಂದ ಐವತ್ತು ವರ್ಷದ ಒಳಗಿನ ಒಬ್ಬ ಗಂಡಸಿನ ಶರೀರವಾಗಿತ್ತು. ಮೈಯ ಮೇಲೆ ಪೈಜಾಮ ಮತ್ತು ಕಮರಿ ಆಂಗ್ರಖಾ ಎನ್ನುವ ಬಟ್ಟೆಗಳು ಇದ್ದವು.

read more
ಟೀನ್ ಏಜ್ ಹುಡುಗ ಕಂಡ ಬೊಂಬಾಯಿ

ಟೀನ್ ಏಜ್ ಹುಡುಗ ಕಂಡ ಬೊಂಬಾಯಿ

ನಮ್ಮ ತಂದೆ ರಾಮಯ್ಯನವರು ತಮ್ಮ 19ನೆಯ ವಯಸ್ಸಿನಲ್ಲಿ ಕಾಶಿಗೆ ಬೊಂಬಾಯಿಯ ಮೂಲಕ ಹೋಗಬೇಕಿತ್ತು; ಅಲ್ಲಿ ಅವರು ಮೊದಲು ಹೋಗಿ ಸಮುದ್ರವನ್ನೇ ನೋಡಿದ್ದು! ಆದ್ದರಿಂದ ಹತ್ತಿರ ಯಾವ ಹೇಳಿಕೊಳ್ಳುವ ನದಿಯೂ ಇಲ್ಲದ ಬೆಂಗಳೂರಿನವರಿಗೆ ಸಮುದ್ರದ ಆಕರ್ಷಣೆ ಸಹಜ! ನಮ್ಮ ವಯಸ್ಸಿನವರಿಗೆ ಬೊಂಬಾಯಿನ ಇನ್ನೊಂದು ಆಕರ್ಷಣೆ ಇದ್ದದ್ದು  ಅಲ್ಲಿನ ಕ್ರಿಕೆಟ್  ಆಟಗಾರರಲ್ಲಿ!
ಪಾಲಹಳ್ಳಿ ವಿಶ್ವನಾಥ್ ಬರೆದ ಹೀಗೊಂದು ಕುಟುಂಬದ ಕಥೆ ಪುಸ್ತಕ ಒಂದು ಅಧ್ಯಾಯ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ