Advertisement
ವಸಂತಕುಮಾರ್‌ ಕಲ್ಯಾಣಿ

ವಸಂತಕುಮಾರ್‌ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ 'ಬಾಲರಾಜನೂ ಕ್ರಿಕೆಟ್ಟಾಟವೂ' ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. 'ಕಾಂಚನ ಮಿಣಮಿಣ ' ಪ್ರಕಟಿತ ಸಣ್ಣಕಥಾ ಸಂಕಲನ. ‘ಪರ್ಯಾಪ್ತ’ ಕಥಾ ಸಂಕಲನ ಅಚ್ಚಿನಲ್ಲಿದೆ.

ಅಡಿಕೆ ಹೊತ್ತ ತಲೆಯ ಮೇಲೆ ಆನೆ ಕುಳಿತಾಗ

ದ್ವಿಚಕ್ರ ವಾಹನದಿಂದ ಬಿದ್ದು ಬಂದ ಒಬ್ಬರ ಹರಿದ ಗಾಯಕ್ಕೆ ಹೊಲಿಗೆ ಹಾಕಿ, ಮುರಿದ ಮೂಳೆಗೆ ತಾತ್ಕಾಲಿಕ ಪಟ್ಟಿ ಕಟ್ಟಿ ಆಗುವಷ್ಟರಲ್ಲಿ, ನಿದ್ರಾದೇವಿ ನಿನ್ನ ಸಹವಾಸ ನನಗೆ ಬೇಡ ಎಂದು ಬೇರೆಯವರನ್ನು ಅಪ್ಪಿಕೊಳ್ಳಲು ಹೋಗಿದ್ದಳು. ಅಷ್ಟರಲ್ಲೇ ಇನ್ನೊಂದು ಹುಡುಗಿ. ಆಗಷ್ಟೇ ಹೈಸ್ಕೂಲು ಮುಗಿಸಿದ ಆಕೆ, ತಾನು ಲವ್ ಮಾಡಿದ ಹುಡುಗನನ್ನು ಮದುವೆಯಾಗಲು ತಂದೆ ತಾಯಿ ಒಪ್ಪಲಿಲ್ಲ ಎಂಬ ಕಾರಣಕ್ಕಾಗಿ ಮೇಟಾಸಿಡ್ ಕುಡಿದು ಬಂದಿದ್ದಳು. ಅವಳಿಗೆ ಚಿಕಿತ್ಸೆ ನೀಡಿದ ಬಳಿಕ ಇಬ್ರಾಹಿಂ ಎಂಬ ಮತ್ತೊಬ್ಬ ಪೇಷೆಂಟು ಬಂದಿದ್ದ. ಅವನ  ಸ್ಥಿತಿ ನೋಡಿ, ಯಾಕೋ  ಸಂಶಯ ಮೂಡಿತು. ಡಾ. ಕೆ.ಬಿ. ಸೂರ್ಯಕುಮಾರ್ ಬರಹ 

Read More

ಸಮಾಧಾನದ ನಾಲ್ಕು ಮಾತು ಬಯಸುವ ರೋಗಿಗಳು

ರೋಗಿ ಹೇಳುವುದನ್ನು ಗಮನವಿಟ್ಟು ಕೇಳಿದಾಗ ಅವರ ಕಾಯಿಲೆಯ ಜೊತೆಗೆ ಮನಸ್ಸಿನ ತೊಂದರೆಗಳು ಇದ್ದರೆ ಅದು ನಮಗೆ ಗೋಚರಿಸುತ್ತದೆ. ಹಾಗಾಗಿ ನಾನಂತೂ ಹೆಚ್ಚಿನ ಸಮಯ ನನ್ನಲ್ಲಿಗೆ ಬರುವ ವ್ಯಕ್ತಿಗಳ ರೋಗ ಲಕ್ಷಣದ ಜೊತೆಯಲ್ಲಿ ಅವರು ಹೇಳುವ ಇನ್ನಿತರ ವಿಷಯದ ಬಗ್ಗೆ ಕೂಡಾ ಕಿವಿ ಕೊಡುತ್ತೇನೆ. ಕೆಲವೊಮ್ಮೆ ಇದು ತೊಂದರೆಯೂ ಕೂಡಾ ಆಗಬಹುದು. ಯಾಕೆಂದರೆ
ಬೇರೆ ರೋಗಿಗಳು ಕಾಯುತ್ತಾ ಇದ್ದಾಗಲೂ ಹಲವರು ಅವರ ಕಷ್ಟ-ಸುಖಗಳನ್ನು ಹೇಳುತ್ತಾ ಹೋಗುತ್ತಿರುತ್ತಾರೆ. ನನ್ನ ಊಟದ ಸಮಯ ಆಗಿ, ಹೊಟ್ಟೆ ಹಸಿಯುತ್ತಾ ಇದ್ದರೂ ಅವರಿಗೆ ಪರಿವೆ ಇರುವುದಿಲ್ಲ. ಡಾ.ಕೆ.ಬಿ. ಸೂರ್ಯಕುಮಾರ್ ಬರಹ

Read More

ಕಣ್ಣು ಕಾಣದ ಗಾವಿಲರು

ಅಂದು ಚೆಲುವಾಂಬ ಆಸ್ಪತ್ರೆಯ ಹೆರಿಗೆಯ ಕೋಣೆಯಲ್ಲಿ ಸಾಲು ಸಾಲು ಹೆರಿಗೆಗಳಾದವು. ಅಂದು ಇದ್ದದ್ದು ಮೂರು ಜನ ದಾದಿಯರು ಮತ್ತು ತರಬೇತಿ ವೈದ್ಯನಾಗಿ ನಾನು ಮಾತ್ರ. ಹಿರಿಯ ವೈದ್ಯರು ಅಗತ್ಯಬಿದ್ದರೆ ಮಾತ್ರ ಕರೆಸಿಕೊಳ್ಳುವ ಹಾಗೆ ಅಲ್ಲಿಯೇ ಪಕ್ಕದಲ್ಲಿದ್ದ ಕೊಠಡಿಯಲ್ಲಿ ಇದ್ದರು. ಕೋಣೆಯಲ್ಲಿದ್ದ ಆರೂ ಹೆರಿಗೆಯ ಮಂಚಗಳ ಮೇಲೆ ವಿವಿಧ ರೀತಿಯ ಆಕ್ರಂದನಗಳು ನನಗಂತೂ ಹೊಸ ಅನುಭವ. ಆದರೆ, ತನ್ನ ಮಗುವಿನ ಮೊದಲ ಅಳುವನ್ನು ಕೇಳಿದಾಗ ಒಬ್ಬ ತಾಯಿಯರ ಮುಖಾರವಿಂದದಲ್ಲಿ ಮೂಡಿ ಬರುವ ಮಂದಹಾಸವನ್ನು ಮಾತ್ರ…

Read More

ಹಾರಿ ಹೋದ ಗುಂಡು, ಜಾರಿ ಹೋದ ನ್ಯಾಯ

ಅದೊಂದು ದಿನ ಅಲ್ಲಿಗೆ ಗುಂಡೇಟಿನಿಂದ ಗಾಯಗೊಂಡ ಓರ್ವ ವ್ಯಕ್ತಿಯನ್ನು ಕೆಲವರು ಕರೆದುಕೊಂಡು ಬಂದಿದ್ದರು. ಕರ್ತವ್ಯದಲ್ಲಿ ಇದ್ದ ವೈದ್ಯರು ಆಗಷ್ಟೇ ಸರಕಾರೀ  ಕೆಲಸಕ್ಕೆ ಸೇರಿಕೊಂಡಿದ್ದರು. ತಮ್ಮ ಶಿಕ್ಷಣದ ದಿನಗಳಲ್ಲಿ ಕೆಲವು ಅಪಘಾತದ ಕೇಸುಗಳನ್ನು ನೋಡಿದ್ದರೂ, ಗುಂಡೇಟಿನ ಗಾಯಾಳುವನ್ನು ಅವರು ಎಂದೂ ನೋಡಿರಲಿಲ್ಲ.  ರೋಗಿಯನ್ನು ಪರೀಕ್ಷಿಸಿದಾಗ, ಆತನ ಎದೆಯ ಎರಡೂ ಭಾಗದ ಮೇಲೆ ಒಂದೊಂದು ಗಾಯದ ಗುರುತುಗಳು ಕಂಡು ಬಂದು ಅವುಗಳಿಂದ ರಕ್ತಸ್ರಾವವಾಗುತ್ತಿತ್ತು. ಡಾ.ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’ ಸರಣಿಯ ಬರಹ:

Read More

ಒಂದು ನೊಣದ ಕಥೆ….

ಅಂದು ಬೆಳಿಗ್ಗೆ ಕೋರ್ಟಿಗೆ ಹೋದ ನನಗೆ ಕಟ ಕಟೆಯಲ್ಲಿ ಮುಖಾಮುಖಿಯಾಗಿದ್ದು ಆಗ ಬೆಂಗಳೂರಿನಲ್ಲಿ ಇದ್ದಂತಹ ಇಬ್ಬರು ಪ್ರಸಿದ್ಧ, ಘಟಾನುಘಟಿ ಕ್ರಿಮಿನಲ್ ವಕೀಲರುಗಳಲ್ಲಿ ಒಬ್ಬರು. ಶವಪರೀಕ್ಷೆಗೆ ಸಂಬಂಧಿಸಿದ ಮಾಹಿತಿಗಳನ್ನು ನಾನು ನೀಡುತ್ತ ಹೋದಂತೆ ಅವರು ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಕೆಲವು ದಿವಸಗಳ ಹಿಂದೆಯಷ್ಟೇ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಬಂದಿದ್ದ ನಾನು ಪರೀಕ್ಷೆಗೆಂದು ಬಹಳಷ್ಟು ಓದಿದ್ದೆ. ಆದ್ದರಿಂದ ಪಾಟೀ ಸವಾಲು ಎದುರಿಸುತ್ತ, ಸಾವು ಸಂಭವಿಸಿ ಅಂದಾಜು ಎಷ್ಟು ದಿನಗಳಾಗಿರಬಹುದು ಎಂಬುದನ್ನು ಹೇಳಿದೆ. ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’ ಸರಣಿಯಲ್ಲಿ ಹೊಸ ಬರಹ. 

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬೆರಳಿಗಂಟಿದ ರಕ್ತ ಹಾಗೇ ಇತ್ತು..: “ಕಲ್ಯಾಣ ಕೆಡುವ ಹಾದಿ”ಯ ಕೆಲವು ಪುಟಗಳು

ತಹಸಿಲ್ದಾರರು ಹೊರಟ ನಂತರ ದಲಿತರ ಮೇಲೆ ಹಲ್ಲೆ ಮಾಡಿದ ಮುನಿಪಾಪಣ್ಣನ ಕಡೆಯವರು, ಅವನಿಗೆದುರಾಗಿ ಯಾರ್ಯಾರು ಅರ್ಜಿಯಲ್ಲಿ ಎಡ ಹೆಬ್ಬೆಟ್ಟು ಒತ್ತಿದ್ದಾರೆ ಎಂದು ಖಾತ್ರಿ ಪಡಿಸಿಕೊಂಡಿದ್ದಾರೆ. ನಂತರ ಆತ…

Read More

ಬರಹ ಭಂಡಾರ