ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ಅಪರಾಧ ಮತ್ತು ಶಿಕ್ಷೆ: ಕನ್ನಡಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ
“ಎದೆ ಕುಸಿಯುತ್ತಿರಲು, ಮೈಯ ನರಗಳಲೆಲ್ಲ ನಡುಕ ಹುಟ್ಟಿರಲು ಆ ಯುವಕ ದೊಡ್ಡ ಇಮಾರತಿನ ಹತ್ತಿರ ಬಂದಿದ್ದ. ಇಮಾರತಿನ ಎದುರಿನಲ್ಲಿ ಕಾಲುವೆ, ಹಿಂಬದಿಯಲ್ಲಿ ಸದೋವಯ ರಸ್ತೆ ಇದ್ದವು. ಇಮಾರತಿನೊಳಗೆ ಪುಟ್ಟ ಪುಟ್ಟ ಮನೆಗಳಿದ್ದವು. ದರ್ಜಿಗಳು, ಬೀಗರಿಪೇರಿ ಮಾಡುವವರು, ಅಡುಗೆಯವರು, ಥರಾವರಿ ಜರ್ಮನರು, ಸೂಳೆಯರು, ಕಾರಕೂನರು ಇಂಥವರೆಲ್ಲ ವಾಸವಾಗಿದ್ದರು. ಬರುವವರು ಹೋಗುವವರು ಎಲ್ಲರೂ….
ಕೆ.ವಿ. ತಿರುಮಲೇಶ್ ಅನುವಾದಿಸಿದ ಜಾರ್ಜ್ ಲೂಯಿಸ್ ಬೋರ್ಹೆಸ್ ನ ಆತ್ಮಕಥಾ ರೂಪದ ಪ್ರಬಂಧದ ಕೊನೆಯ ಕಂತು
” ಈ ಕಳೆದೊಂದು ದಶಕದ ಕಡೆಗೆ ಹಿಂತಿರುಗಿ ನೋಡಿದಾಗ. ನಾನೊಬ್ಬ ಅಲೆಮಾರಿಯೇ ಆಗಿಬಿಟ್ಟಿದ್ದೆನೆಂದು ಕಾಣುತ್ತದೆ. 1963ರಲ್ಲಿ, ನೀಲ್ ಮೆಕ್ ಕೇ ಮತ್ತು ಬ್ಯೂನೋಸ್ ಏರಿಸ್ ನ ಬ್ರಿಟಿಷ್ ಕೌನ್ಸಲ್ ಕಾರಣ, ನನಗೆ ಇಂಗ್ಲೆಂಡ್ ಮತ್ತು ಸ್ಕಾಟ್ಳೆಂಡನ್ನು ಭೇಟಿ ಮಾಡುವುದು ಸಾಧ್ಯವಾಯಿತು. ಅಲ್ಲಿಯೂ ಪುನಃ ನನ್ನ ಅಮ್ಮನ..”
ಕೆ.ವಿ. ತಿರುಮಲೇಶ್ ಅನುವಾದಿಸಿದ ಜಾರ್ಜ್ ಲೂಯಿಸ್ ಬೋರ್ಹೆಸ್ ನ ಆತ್ಮಕಥಾ ರೂಪದ ಪ್ರಬಂಧ- ಭಾಗ 4
“ನನ್ನ ಕುರುಡುತನದ ಒಂದು ಮುಖ್ಯ ಪರಿಣಾಮವೆಂದರೆ, ನಾನು ಕ್ರಮೇಣ ಮುಕ್ತಛಂದವನ್ನು ತೊರೆದು ಕ್ಲಾಸಿಕಲ್ ಛಂದೋಬದ್ಧತೆಯನ್ನು ಸ್ವೀಕರಿಸಿದುದು. ನಿಜ ಎಂದರೆ ಕುರುಡುತನ ನನ್ನನ್ನು ಮತ್ತೆ ಕವಿತೆ ಬರೆಯುವ ಹಾಗೆ ಮಾಡಿತು. ಕರಡು ಆವೃತ್ತಿಗಳು…”
ಕೆ.ವಿ. ತಿರುಮಲೇಶ್ ಅನುವಾದಿಸಿದ ಜಾರ್ಜ್ ಲೂಯಿಸ್ ಬೋರ್ಹೆಸ್ ನ ಆತ್ಮಕಥಾ ರೂಪದ ಪ್ರಬಂಧ- ಭಾಗ 3
“ಮೆಸಿಡೋನಿಯೋ ಪರಿಚಯವಾಗುವ ಮೊದಲು ನಾನು ಯಾವತ್ತೂ ಒಬ್ಬ ಅಮಾಯಕ ಓದುಗನಾಗಿದ್ದೆ. ಅವನು ನನಗೆ ನೀಡಿದ ಮುಖ್ಯ ಉಡುಗೊರೆಯೆಂದರೆ ನನ್ನನ್ನು ಸಂಶಯಾತ್ಮಕವಾಗಿ ಓದುವಂತೆ ಮಾಡಿದುದು. ಆರಂಭದಲ್ಲಿ ನಾನವನನ್ನು ಭಕ್ತಿಭಾವದಲ್ಲಿ ನಕಲು ಮಾಡುತ್ತ ಇದ್ದೆ – ನಾನು ನಂತರ ಪಶ್ಚಾತ್ತಪಿಸಿದಂಥ..”
ಕೆ.ವಿ. ತಿರುಮಲೇಶ್ ಅನುವಾದಿಸಿದ ಜಾರ್ಜ್ ಲೂಯಿಸ್ ಬೋರ್ಹೆಸ್ ನ ಆತ್ಮಕಥಾ ರೂಪದ ಪ್ರಬಂಧ- ಭಾಗ 2
“ಸ್ವಿಟ್ಝರ್ಲೆಂಡಿನಲ್ಲಿ ಯಾವುದೋ ಒಂದು ಘಟ್ಟದಲ್ಲಿ ನಾನು ಶಾಪೆನ್ ಹಾವರನ್ನ ಓದಲು ಸುರುಮಾಡಿದೆ. ಈವತ್ತು ನಾನು ಒಬ್ಬ ತತ್ವಜ್ಞಾನಿಯನ್ನು ಆರಿಸಬೇಕಾದರೆ ಅವನನ್ನು ಆರಿಸುವೆ. ಜಗತ್ತಿನ ಒಗಟನ್ನು ಶಬ್ದಗಳಲ್ಲಿ ಹೇಳಬಹುದಾದರೆ, ನನಗನಿಸುತ್ತದೆ ಅಂಥ ಶಬ್ದಗಳು ಅವನ ಬರಹಗಳಲ್ಲಿ ಇರುತ್ತವೆ ಎಂದು. ನಾನವನನ್ನು ಹಲವು ಬಾರಿ ಓದಿದ್ದೇನೆ…”
ಕೆ.ವಿ. ತಿರುಮಲೇಶ್ ಅನುವಾದಿಸಿದ ಜಾರ್ಜ್ ಲೂಯಿಸ್ ಬೋರ್ಹೆಸ್ ನ ಆತ್ಮಕಥಾ ರೂಪದ ಒಂದು ಪ್ರಬಂಧ
“ಈಗ ನಾನು ಇಂಗ್ಲಿಷ್ ಕವಿತೆಯನ್ನು ವಾಚಿಸುವಾಗ, ನನ್ನ ಅಮ್ಮ ಅನ್ನುತ್ತಾಳೆ ನನ್ನ ಧ್ವನಿ ತಂದೆಯ ಧ್ವನಿಯಂತೆಯೇ ಇರುತ್ತದೆ ಎಂದು. ತಂದೆಯೇ ನನಗೆ ನನ್ನ ಅರಿವಿಲ್ಲದೆಯೇ ತತ್ವಜ್ಞಾನದ ಮೊದಲ ಪಾಠಗಳನ್ನು ಕಲಿಸಿದುದು ಕೂಡ. ನಾನಿನ್ನೂ ಚಿಕ್ಕವನಿದ್ದಾಗ, ಝೀನೋನ ವಿರೋಧಾಭಾಸಗಳನ್ನು ಚದುರಂಗದ ಮಣೆಯ ಸಹಾಯದಿಂದ ತೋರಿಸಿಕೊಟ್ಟುದು – ಎಖಿಲಸ್ ಮತ್ತು ಆಮೆ, ಬಾಣದ ನಿಶ್ಚಲ ಹಾರಾಟ, ಚಲನೆಯ ಅಸಾಧ್ಯತೆ.”
ಕೊನೆಯೇ ಇಲ್ಲದ ಉಪಸಂಹಾರವು…
“ನಾನಾದರೋ ಹುಣ್ಣಿಮೆ ಇರುಳಿನ ತಿಯದಿಯಂದು ಮಂಗಳೂರಿಗೆ ಹೊರಡುವ ಹಡಗಲ್ಲಿ ಪ್ರಯಾಣದ ಟಿಕೇಟು ಕೊಂಡುಕೊಂಡು ಹಡಗಿನ ದಕ್ಕೆಯಲ್ಲಿ ಆಕಾಶನೋಡುತ್ತಾ ಅಂಗಾತ ಮಲಗಿದ್ದೆ. ಬೆಳದಿಂಗಳಿನ ಸಣ್ಣಗಿನ ಬೆಳಕು ದುಪ್ಪಟ ಹೊದ್ದ ಈತನ ಮುಖದ ಮೇಲೂ ಬೀಳುತ್ತಿತ್ತು. ಮಧ್ಯಾಹ್ನದಿಂದಲೂ ಈತನನ್ನು ನೋಡುತ್ತಲೇ ಇದ್ದೆ. ಹಡಗಿನ ಓಟಕ್ಕೆ ಸಣ್ಣಗೆ ಅಲುಗುತ್ತಿದ್ದರೂ, ಒಳಗೊಳಗೆ ಸಣ್ಣಗೆ ಕೆಮ್ಮುತ್ತಿದ್ದರೂ…”
ಕನಸಲ್ಲಿ ತಿವಿದೆಬ್ಬಿಸಿದ ಚೇರಮಾನ್ ಮಹಾರಾಜ
“ಊಹಿಸಲೂ ಆಗದ ಬೃಹತ್ ನೀಲಪರದೆಯೊಂದರ ನಡುವೆ ಒಂದು ಪುಟ್ಟ ಚುಕ್ಕಿಯಂತೆ ಉಸಿರಾಡುತ್ತಿರುವ ನಾವು. ನಮ್ಮ ನಿಲುಕಿಗೂ ಸಿಗದೆ ಕಣ್ಣ ಮುಂದೆಯೇ ಸಂಭವಿಸುತ್ತಿರುವ ವ್ಯೋಮ ವರ್ಣ ವ್ಯಾಪಾರಗಳು. ಸೂರ್ಯ, ಚಂದ್ರ, ನಕ್ಷತ್ರಗಳು, ಹಗಲು ಮತ್ತು ರಾತ್ರಿಗಳು ಮಾತ್ರ ದಿಕ್ಕುಗಳನ್ನೂ ಕಾಲವನ್ನೂ ಹೇಳುವುದು. ಬಹಳ ಆಧುನಿಕ ಎಂದು ಹೇಳುವ ಈ ಕಾಲದಲ್ಲಿ ಕಡಲೊಳಗೆ ಚಲಿಸುತ್ತಿರುವ ನನ್ನಂತಹ ಅವಿಶ್ವಾಸಿಗೇ ಹೀಗೆ ಅನಿಸುವುದಾದರೆ…”
ಸಣ್ಣದೊಂದು ವಿರಾಮದಲ್ಲಿ ಕೆಲವು ಅರೆಬರೆ ಖಾಸಗಿ ಸಂಗತಿಗಳು: ಅಬ್ದುಲ್ ರಶೀದ್ ಬರೆಯುವ ಲಕ್ಷದ್ವೀಪ ಡೈರಿ
“ಸ್ತ್ರೀ ಶೋಷಣೆಯ ಕುರಿತು ಬಹಳ ಶಕ್ತವಾಗಿ ಬರೆದರೂ ನಿಜ ಜೀವನದಲ್ಲಿ ದೈವಿಕವಾದ ಪುರುಷ ಪ್ರೇಮಕ್ಕೆ ಮೀರಾಳಂತೆ, ರಾಧೆಯಂತೆ ಹಾತೊರೆದು ಹಲವು ಜೇಮ್ಸುಬಾಂಡುಗಳಿಂದ ಸತತವಾಗಿ ಯಾಮಾರಿಸಿಕೊಳ್ಳುತ್ತಲೇ ಇರುತ್ತಾಳೆ. ನಾನು ಅವಳಿ ನೀನು ಜವಳಿ ಎಂದು ನಾವಿಬ್ಬರೂ ನಮ್ಮ ನಮ್ಮ ಭಗ್ನ ಪ್ರೇಮಗಳ ಕುರಿತು..”









